ಯಶ್ ‘ಟಾಕ್ಸಿಕ್‌’‌‌ನಲ್ಲಿ ನಾನಿಲ್ಲ..ಟೊವಿನೋ ಪಕ್ಕಾ ಕ್ಲ್ಯಾರಿಟಿ..!

ಅಪ್ಪು ಜೊತೆ ಸಿನಿಮಾ.. ಕನ್ನಡ ಸ್ಟಾರ್ಸ್ ಯಾರೆಲ್ಲಾ ಕ್ಲೋಸ್..?

Untitled design 2026 04 08T174940.790

ಮಲಯಾಳಂ ಸಿನಿಮಾಗಳಿಗೆ ಬಿಗ್ ಮಾರ್ಕೆಟ್ ಅಂದ್ರೆ ಅದು ನಮ್ಮ ಬೆಂಗಳೂರು. ಸದ್ಯ ರಿಲೀಸ್‌‌ ಆಗ್ತಿರೋ ಪಳ್ಳಿ ಚಟ್ಟಂಬಿ ಸಿನಿಮಾದ ಪ್ರಮೋಷನ್ಸ್‌‌ಗಾಗಿ ಸಿಲಿಕಾನ್ ಸಿಟಿಗೆ ಬಂದಿದ್ದ ಟೊವಿನೋ ಥಾಮಸ್, ಕನ್ನಡದ ಮೇಲಿನ ಪ್ರೀತಿ, ಅಭಿಮಾನ ಹೊರಹಾಕಿದ್ದಾರೆ. ಇದೇ ವೇಳೆ ಯಶ್ ಟಾಕ್ಸಿಕ್ ಅಪ್ಡೇಟ್ ಕೂಡ ನೀಡಿದ್ದಾರೆ. ಹಾಗಾದ್ರೆ ಕನ್ನಡದಲ್ಲಿ ಟೊವಿನೋಗೆ ಯಾವೆಲ್ಲಾ ಸ್ಟಾರ್ಸ್ ಕ್ಲೋಸ್..? ಅಪ್ಪು ಜೊತೆ ಸಿನಿಮಾ ಮಾಡೋಕೆ ಆಗಿದ್ದ ಮಾತುಕತೆ ಏನಾಯ್ತು ಅನ್ನೋದ್ರ ಕಂಪ್ಲೀಟ್ ಕಥೆ ಇಲ್ಲಿದೆ.

ಮಲಯಾಳಂ ಸ್ಟಾರ್ ಟೊವಿನೋ ಥಾಮಸ್ ನಟನೆಯ ಪಳ್ಳಿ ಚಟ್ಟಂಬಿ ಸಿನಿಮಾ ಇದೇ ಏಪ್ರಿಲ್ 15ಕ್ಕೆ ವರ್ಲ್ಡ್‌ ವೈಡ್ ಬಹುಭಾಷೆಯಲ್ಲಿ ರಿಲೀಸ್ ಆಗ್ತಿದೆ. ಕೊರೋನಾ ಬಳಿಕ ಮಲಯಾಳಂ ಮೂವೀಸ್‌ಗೆ ಕರ್ನಾಟಕ ಅದ್ರಲ್ಲೂ ಬೆಂಗಳೂರು ಬಹುದೊಡ್ಡ ಮಾರ್ಕೆಟ್ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಷಯ. ಹಾಗಾಗಿಯೇ ಟೊವಿನೋ ತಮ್ಮ ನಾಯಕಿ ಕಯಾದು ಲೋಹರ್ ಹಾಗೂ ಡೈರೆಕ್ಟರ್ ಸಮೇತ ನಮ್ಮ ಸಿಲಿಕಾನ್ ಸಿಟಿ ಬೆಂಗಳೂರಿಗೆ ಬಂದು ಸಿನಿಮಾದ ಪ್ರಮೋಷನ್ಸ್ ಮಾಡಿದ್ದು ವಿಶೇಷ.

ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ಈ ಸಿನಿಮಾನ ವಿಶಾಲ ಕರ್ನಾಟಕಕ್ಕೆ ಡಿಸ್ಟ್ರಿಬ್ಯೂಟ್ ಮಾಡ್ತಿದ್ದು, 1950-60ರ ಕಾಲಘಟ್ಟದ ಕಥಾನಕ ಸಖತ್ ಇಂಪ್ರೆಸ್ಸೀವ್ ಅನಿಸಿದೆ. ಈ ಹಿಂದೆ ಜನಗಣಮನ ಅನ್ನೋ ಅದ್ಭುತ ಹಿಟ್ ಮೂವಿಗೆ ಆ್ಯಕ್ಷನ್ ಕಟ್ ಹೇಳಿದ್ದ ಡಿಜೋ ಜೋಸ್ ಆಂಟನಿ ಇದಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಟೀಸರ್, ಟ್ರೈಲರ್ ಹಾಗೂ ಸಾಂಗ್ಸ್‌‌ನಿಂದ ಸಂಥಿಂಗ್ ಡಿಫರೆಂಟ್ ಅನಿಸಿಕೊಂಡಿದೆ ಪಳ್ಳಿ ಚಟ್ಟಂಬಿ.

ಕನ್ನಡದಲ್ಲೇ ಮಾತು ಶುರು ಮಾಡಿದ ಟೊವಿನೋ, ನಾವು ಬರೀ ನೆರೆಹೊರೆಯ ರಾಜ್ಯದವರಲ್ಲ. ಬ್ಲಡ್ ಬ್ರದರ್ಸ್ ಎಂದರು. ಅಲ್ಲದೆ, ಗ್ಯಾರಂಟಿ ನ್ಯೂಸ್ ಜೊತೆಗೂ ಎಕ್ಸ್‌ಕ್ಲೂಸಿವ್ ಆಗಿ ಮಾತನಾಡಿದ ಟೊವಿನೋ, ನನಗೆ ಬೆಂಗಳೂರಿನ ಜನ, ವೆದರ್, ಫುಡ್ ತುಂಬಾ ಇಷ್ಟ. ಒಂದು ಸಿನಿಮಾದ ಶೂಟಿಂಗ್‌ಗಾಗಿ ಬರೋಬ್ಬರಿ 1 ತಿಂಗಳ ಕಾಲ ಬೆಂಗಳೂರಲ್ಲೇ ಉಳಿದುಕೊಂಡಿದ್ದೆ. ನನ್ನ ಫ್ರೆಂಡ್ಸ್ ಕೂಡ ಇಲ್ಲಿ ತುಂಬಾ ಜನ ಇದ್ದಾರೆ ಎಂದರು.

ಇನ್ನೂ ಯಶ್ ಟಾಕ್ಸಿಕ್ ಚಿತ್ರದಲ್ಲಿ ನಾನು ನಟಿಸ್ತಿಲ್ಲ. ವಿಕಿಪೀಡಿಯಾನ ಯಾರು ಬೇಕಾದ್ರೂ ಎಡಿಟ್ ಮಾಡಬಹುದು. ಇನ್ ಫ್ಯಾಕ್ಟ್ ನನಗೆ ಗೀತು ಮೋಹನ್‌ದಾಸ್ ಹಾಗೂ ಆಕೆಯ ಪತಿ ತುಂಬಾ ಆಪ್ತರು. ಸೋ ನಾನು ನಟಿಸೇ ಇಲ್ಲ. ಯಾರೋ ಈ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಅಂತ ಸ್ಪಷ್ಟನೆ ಕೂಡ ನೀಡಿದ್ರು.

ಕನ್ನಡದಲ್ಲಿ ಯಶ್, ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ರಾಜ್ ಬಿ ಶೆಟ್ಟಿ ಒಳ್ಳೆಯ ಸ್ನೇಹಿತರು ಎಂದ ಟೊವಿನೋ, ಶಿವಣ್ಣ ತಮ್ಮ ಎಆರ್‌ಎಂ ಸಿನಿಮಾಗೆ ವಾಯ್ಸ್ ಓವರ್ ನೀಡಿದ್ದನ್ನ ನೆನೆದರು. ಅಲ್ಲದೆ, ರಾಜರತ್ನ ಪುನೀತ್ ರಾಜ್‌ಕುಮಾರ್ ಜೊತೆ ಸಿನಿಮಾ ಮಾಡಬೇಕಿತ್ತು. ಅದರ ಮಾತುಕತೆ ಕೂಡ ಆಗಿತ್ತು. ಅಷ್ಟರಲ್ಲೇ ಅಪ್ಪು ಇಲ್ಲವಾದರು ಅಂತ ಭಾವನಾತ್ಮಕವಾಗಿ ಮಾತನಾಡಿದ್ರು ಟೊವಿನೋ.

ಪಳ್ಳಿಚಟ್ಟಂಬಿ ಚಿತ್ರದಲ್ಲಿ ನಮ್ಮ ಕರಾವಳಿಯ ಯಕ್ಷಗಾನದ ಝಲಕ್ ಕೂಡ ಇರಲಿದ್ದು, ಅದ್ರ ಎಕ್ಸ್‌ಕ್ಲೂಸಿವ್ ಡೈಲಾಗ್‌ವೊಂದನ್ನ ಕನ್ನಡದಲ್ಲೇ ಹೇಳಿದ್ರು ನಟ ಟೊವಿನೋ. ಯೆಸ್.. ಪ್ರಚಂಡ ರಾವಣನ ಡೈಲಾಗ್‌‌ ಹಿಂಟ್ ಬಿಟ್ಟುಕೊಟ್ಟಿದ್ದು ಕನ್ನಡಿಗರಿಗೆ ಖುಷಿ ಕೊಟ್ಟಿತು. ಅಲ್ಲದೆ, ನಿರ್ದೇಶಕ ಡಿಜೋ ಜೋಸ್ ಆಂಟನಿ ಮಾತನಾಡ್ತಾ ನಾನು ಈ ಸಿನಿಮಾನ ಕರ್ನಾಟಕದಲ್ಲಿ ಕೂಡ ಚಿತ್ರಿಸಿದ್ದೇನೆ ಎಂದರು.

ನಾಯಕಿ ಕಯಾದು ಲೋಹರ್ ಕೂಡ ನಮ್ಮ ಗ್ಯಾರಂಟಿ ನ್ಯೂಸ್ ಜೊತೆ ಎಕ್ಸ್‌ಕ್ಲೂಸಿವ್ ಆಗಿ ಮಾತನಾಡಿ ಸಾಕಷ್ಟು ವಿಷಯಗಳನ್ನ ಹಂಚಿಕೊಂಡರು. ಕನ್ನಡದಲ್ಲೇ ಕರಿಯರ್ ಆರಂಭಿಸಿ ಬ್ಯುಸಿ ಆಗಿರೋ ಈಕೆ, ಕನ್ನಡದಲ್ಲಿ ಮತ್ತೆ ಮಾಡಬೇಕು ಅಂದ್ರೆ ಅಂತಹ ಒಳ್ಳೆಯ ಸ್ಕ್ರಿಪ್ಟ್‌‌ಗಳು ಸಿಗಬೇಕು ಎಂದರು.

ಯೆಸ್.. ಮಲಯಾಳಂ ಸಿನಿಮಾಗಳಲ್ಲಿ ಇತ್ತೀಚೆಗೆ ಕನ್ನಡದ ಡೈಲಾಗ್ ಅಥ್ವಾ ಕನ್ನಡದ ಪದಗಳ ಹೆಚ್ಚಾಗಿ ಬಳಕೆ ಮಾಡಲಾಗ್ತಿದೆ. ಇದು ಮಾರ್ಕೆಟಿಂಗ್ ಸ್ಟ್ರ್ಯಾಟಜಿನಾ ಅಥ್ವಾ ಸ್ಕ್ರಿಪ್ಟ್ ಡಿಮ್ಯಾಂಡ್ ಮಾಡುತ್ತಾ ಎಂದು ಕೇಳಿದ ಗ್ಯಾರಂಟಿ ನ್ಯೂಸ್ ರಿಪೋರ್ಟರ್ ಪ್ರಶ್ನೆಗೆ ಡೈರೆಕ್ಟರ್ ಹಾಗೂ ಹೀರೋ ಇಬ್ಬರೂ ಉತ್ತರಿಸಿದ್ರು.

ಅಲ್ಲದೆ, ಮಿನ್ನಲ್ ಮುರಳು, 2018, ಲೂಸಿಫರ್ ಸಿನಿಮಾಗಳ ಬಗ್ಗೆಯೂ ಮಾತನಾಡಿದ ಟೊವಿನೋ ಕೇರಳ ಫ್ಲಡ್ ಕುರಿತ 2018 ಚಿತ್ರದ ಮೇಕಿಂಗ್ ಎಷ್ಟು ರೋಚಕವಾಗಿತ್ತು ಅನ್ನೋದನ್ನ ವಿವರಿಸಿದ್ರು.

ಒಟ್ಟಾರೆ ಕೊಲ್ಯಾಬೊರೇಷನ್ಸ್ ಮೂಲಕ ಬೇರೆ ಬೇರೆ ಚಿತ್ರರಂಗಗಳು ಇಂದು ಭಾರತೀಯ ಚಿತ್ರರಂಗ ನಾವೆಲ್ಲಾ ಒಂದೇ ಅನ್ನೋದನ್ನ ಸಾರುತ್ತಿವೆ. ಜೊತೆಗೆ ವರ್ಲ್ಡ್ ಸಿನಿದುನಿಯಾಗೆ ಸ್ಪರ್ಧೆ ಒಡ್ಡುತ್ತಿರೋದು ಇಂಟರೆಸ್ಟಿಂಗ್.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version