ರಜನೀಕಾಂತ್ ಬಿಟ್ರೆ ತಮಿಳುನಾಡಿಗೆ ತಲೈವಾ ವಿಜಯ್..!

34 ವರ್ಷ.. 68 ಸಿನಿಮಾ.. ಅಸಂಖ್ಯಾತ ಅಭಿಮಾನಿ ಬಳಗ

Untitled design (96)

ಟಿವಿಕೆ ಪಕ್ಷ ಪಟ್ಟಿ ತಮಿಳುನಾಡು ಸಿಎಂ ಆಗುವ ಕನಸು ಕಂಡಿರೋ ನಟ ದಳಪತಿ ವಿಜಯ್‌‌ಗೆ ಸಂಕಷ್ಟದ ಮೇಲೆ ಸಂಕಷ್ಟ ಎದುರಾಗ್ತಿದೆ. ಇದು ವಿಧಿ ಲಿಖಿತವೋ ಅಥ್ವಾ ಕರ್ಮದ ಫಲವೋ ಒಂದೂ ಗೊತ್ತಿಲ್ಲ. ಒಂದ್ಕಡೆ ರಾಜಕೀಯ ಷಡ್ಯಂತ್ರಗಳು. ಮತ್ತೊಂದ್ಕಡೆ ಪತ್ನಿ ಡಿವೋರ್ಸ್ ಶಾಕ್. ಆಡಿಕೊಳ್ಳೋರ ಬಾಯಿಗೆ ಆಹಾರವಾಗಿರೋ ಸೂಪರ್ ಸ್ಟಾರ್, ಮಾನಸಿಕವಾಗಿ ಅರ್ಧ ಕುಗ್ಗಿ ಹೋಗಿದ್ದಾರೆ. ಪತ್ನಿ ಸಂಗೀತಾ ಮತ್ತೊಂದು ಪಿಟಿಷನ್ ದಾಖಲಿಸಿದ್ದು, ಏನೇ ಆಗಲಿ ನಿಮ್ಮೊಂದಿಗೆ ನಾವಿದ್ದೇವೆ ಅಂತಿದ್ದಾರೆ ಫ್ಯಾನ್ಸ್.

ರಜನೀಕಾಂತ್ ಬಿಟ್ರೆ ತಮಿಳುನಾಡಿಗೆ ತಲೈವಾ ವಿಜಯ್..!

34 ವರ್ಷ.. 68 ಸಿನಿಮಾ.. ಅಸಂಖ್ಯಾತ ಅಭಿಮಾನಿ ಬಳಗ

ಅಪ್ಪು ರೀತಿ ಬಾಲನಟನಾಗಿ ಚಿತ್ರಪ್ರೇಮಿಗಳ ದಿಲ್ ದೋಚಿದ್ರು

ತಂದೆ ಡೈರೆಕ್ಟರ್.. ತಾಯಿ ಸಿಂಗರ್.. ತಾನು ಸೂಪರ್ ಸ್ಟಾರ್

ವಿಜಯ್.. ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ಆಗಿ ರಾರಾಜಿಸ್ತಿರೋ ಮಾಸ್ ಹೀರೋ. ದಳಪತಿ ವಿಜಯ್ ಅಂತಲೇ ಫೇಮಸ್ ಆಗಿರೋ ವಿಜಯ್, ತಲೈವಾ ರಜನೀಕಾಂತ್ ಬಿಟ್ರೆ ಅತಿಹೆಚ್ಚು ಫ್ಯಾನ್ಸ್ ಫಾಯೋಯಿಂಗ್ ಇರುವ ಹಾಗೂ ಕಾಲಿವುಡ್ ಪಾಲಿನ ನೆಕ್ಸ್ಟ್ ತಲೈವಾ ಇವರೇ. ಅಷ್ಟರ ಮಟ್ಟಿಗೆ ಜನರಲ್ಲಿ ಕ್ರೇಜ್ ಹುಟ್ಟಿಸಿದ್ದಾರೆ ದಳಪತಿ. ತನ್ನ ಡಿಫರೆಂಟ್ ಸ್ಟೈಲು, ಮ್ಯಾನರಿಸಂನಿಂದ ಜನ ತಾವು ಆರಾಧಿಸೋ ದೈವದ ರೀತಿ ವಿಜಯ್ ನ ಕೂಡ ಪೂಜಿಸ್ತಾರೆ. ಅದೊಂಥರಾ ಬಣ್ಣಿಸಲಾಗದ ಅಭಿಮಾನವೇ ಸರಿ.

ಸತತ 34 ವರ್ಷಗಳಿಂದ ಪ್ರೇಕ್ಷಕರನ್ನ ರಂಜಿಸುತ್ತಾ ಬರ್ತಿರೋ ವಿಜಯ್, ಮೂರೂವರೆ ದಶಕದಲ್ಲಿ 68ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. 1992ರಲ್ಲಿ ನ್ಯಾಯಾಲಯ ತೀರ್ಪು ಚಿತ್ರದ ಮೂಲಕ ಹೀರೋ ಆದರಾದ್ರೂ, ಅದಕ್ಕೂ ಮೊದಲೇ ಬಾಲನಟನಾಗಿ ನಮ್ಮ ಅಪ್ಪು ರೀತಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದ್ರು ವಿಜಯ್. 1984ರಿಂದ 1988ರ ತನಕ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದ ಮಾಸ್ಟರ್ ವಿಜಯ್, ಆಗಲೇ ಪ್ರೇಕ್ಷಕರ ದಿಲ್ ದೋಚಿದ್ದರು.

ವಿಜಯ್ ಅವರ ತಂದೆ ಎಸ್ ಎ ಚಂದ್ರಶೇಖತ್ ಫಿಲ್ಮ್ ಡೈರೆಕ್ಟರ್. ತಾಯಿ ಶೋಭಾ ಚಂದ್ರಶೇಖರ್ ಗಾಯಕಿ. ಕ್ರಿಶ್ಚಿಯನ್ ಸಮುದಾಯದ ತಂದೆ, ಹಿಂದೂ ಸಮುದಾಯದ ತಾಯಿಗೆ ಜನಿಸಿದ ವಿಜಯ್, ಕ್ರಿಶ್ಚಿಯಾನಿಟಿಯನ್ನೇ ಪಾಲಿಸ್ತಿದ್ದಾರೆ. ವಿಜಯ್ ಪೂರ್ತಿ ಹೆಸರು ಜೋಸೆಫ್ ವಿಜಯ್ ಚಂದ್ರಶೇಖರ್. 51 ವರ್ಷದ ವಿಜಯ್ ಸದ್ಯ ತಮ್ಮ 69ನೇ ಸಿನಿಮಾದಲ್ಲಿ ನಟಿಸಿದ್ದಾರೆ. ಅದೇ ಜನ ನಾಯಗನ್.

ಜನ ನಾಯಗನ್‌‌ಗೆ ಸೆನ್ಸಾರ್ ಸಂಕಷ್ಟ.. ವ್ಯಾಜ್ಯ ಮುಗಿದ್ರೆ ತೆರೆಗೆ

TVK ಪಕ್ಷ ಕಟ್ಟಿ ನಿಜ ಜೀವನದಲ್ಲಿ ಜನ ನಾಯಕನಾಗಲು ಸಜ್ಜು

ಜನ ನಾಯಗನ್ ಸಿನಿಮಾದ ಹೀರೋ ಆಗಿ ಮಾತ್ರ ನಟಿಸಿಲ್ಲ. ನಿಜ ಜೀವನದಲ್ಲಿ ಕೂಡ ಪ್ರಜಾ ಸೇವೆ ಮಾಡೋ ಮೂಲಕ ಜನ ನಾಯಕನಾಗಲು ಮುಂದಾಗಿದ್ದಾರೆ ವಿಜಯ್. ಅದೇ ಕಾರಣದಿಂದ ಟಿವಿಕೆ ಅನ್ನೋ ಸ್ವತಂತ್ರ ಪಕ್ಷ ಕಟ್ಟಿ, ಆ ಮೂಲಕ ತಮಿಳುನಾಡು ಸಿಎಂ ಆಗುವ ಕನಸು ಕಂಡಿದ್ದಾರೆ. ಬಹುಶಃ ಈ ಜನ ನಾಯಗನ್ ಚಿತ್ರವೇ ವಿಜಯ್ ನಟನೆಯ ಕಟ್ಟ ಕಡೆಯ ಸಿನಿಮಾ ಆಗಲಿದೆ.

ಜನ ನಾಯಗನ್ ಚಿತ್ರಕ್ಕೆ ಸೆನ್ಸಾರ್ ಸಮಸ್ಯೆ ಎದುರಾಗಿದ್ದು, ಪ್ರಕರಣ ಕೋರ್ಟ್ ಮೆಟ್ಟಿಲೇರಿದೆ. ಅದೇ ಕಾರಣದಿಂದ ಸಿನಿಮಾದ ಬಿಡುಗಡೆ ತಡವಾಗಿದೆ. ತಾನು ರಾಜಕಾರಣದಲ್ಲಿ ಸಕ್ರಿಯಗೊಂಡು, ಮಗ ಜೇಸನ್‌ ಸಂಜಯ್‌‌ನ ಬಣ್ಣದ ಲೋಕಕ್ಕೆ ಕರೆತರುವ ಯೋಜನೆಯಲ್ಲಿದ್ರು ದಳಪತಿ ವಿಜಯ್. ಆದ್ರೆ ವಿಜಯ್ ಲೆಕ್ಕಾಚಾರಗಳೆಲ್ಲಾ ಉಲ್ಟಾ ಪಲ್ಟಾ ಆಗ್ತಿವೆ. ಅಂದುಕೊಂಡಿದ್ದೇ ಒಂದು.. ಆಗ್ತಿರೋದು ಮತ್ತೊಂದು.

ವಿಜಯ್ ಸಿನಿ, ಪೊಲಿಟಿಕಲ್ ಲೈಫ್ ವಿರುದ್ಧ ರಾಜಕೀಯ ಷಡ್ಯಂತ್ರ

ಕರೂರು ಕಾಲ್ತುಳಿತ ಪ್ರಕರಣ, ಜನ ನಾಯಗನ್‌ಗೆ ಸೆನ್ಸಾರ್ ತಿಕ್ಕಾಟ..!

ಒಂದ್ಕಡೆ ತಮ್ಮ ಕಟ್ಟ ಕಡೆಯ ಸಿನಿಮಾಗೆ ಸೆನ್ಸಾರ್ ಪತ್ರ ನೀಡದೆ ಸಮಸ್ಯೆ ಎದುರಾಗಿದೆ. ಮತ್ತೊಂದೆಡೆ ಟಿವಿಕೆ ಪಕ್ಷ ಸಂಘಟನೆ ವೇಳೆ ಕರೂರಿನಲ್ಲಿ ನಡೆದ ಕಾಲ್ತುಳಿತ ಪ್ರಕರಣ. ಅದರಲ್ಲಿ ಆದಂತಹ ಸಾವು ನೋವುಗಳಿಂದ ವಿಜಯ್ ಅಕ್ಷರಶಃ ಬೇಸತ್ತು ಹೋಗಿದ್ದಾರೆ. ಅನ್ಯಾಯವಾಗಿ ಜೀವ ತೆತ್ತ ಕುಟುಂಬಗಳಿಗೆ ಆರ್ಥಿಕ ನೆರವು ನೀಡಿದರಾದ್ರೂ, ಅದರ ಹಿಂದೆ ರಾಜಕೀಯ ಷಡ್ಯಂತ್ರವಿದೆ ಅನ್ನೋದು ಸ್ಪಷ್ಟವಾಗಿ ಆತನಿಗೆ ಗೋಚರಿಸಿದೆ. ಸದ್ಯ ಆ ಪ್ರಕರಣ ಕಾನೂನು ಸಂಕಷ್ಟ ಕೂಡ ಎದುರಿಸುತ್ತಿದ್ದಾರೆ ವಿಜಯ್.

ದಳಪತಿ ವಿಜಯ್-ಸಂಗೀತಾ ದಾಂಪತ್ಯ ಜೀವನದಲ್ಲಿ ಬಿರುಗಾಳಿ

ವಿಚ್ಚೇದನ ಕೋರಿ ಕೋರ್ಟ್ ಮೆಟ್ಟಿಲೇರಿದ ಪತ್ನಿ.. 2 ಪಿಟಿಷನ್..!

ತ್ರಿಶಾ ಜೊತೆ ಅಕ್ರಮ ಸಂಬಂಧ..? 27 ವರ್ಷದ ದಾಂಪತ್ಯ ಅಂತ್ಯ

‘ದಳಪತಿ’ಗೆ ಪತ್ನಿ ನ್ಯೂ ಶಾಕ್.. ಆ ಮನೆಯಲ್ಲಿ ನಂಗೂ ಹಕ್ಕಿದೆ..!!

ಚಂಗಲ್‌ಪಟ್ಟು ಫ್ಯಾಮಿಲಿ ಕೋರ್ಟ್‌‌ ಮೆಟ್ಟಿಲೇರಿರುವ ಪತ್ನಿ ಸಂಗೀತಾ, ನಟ ವಿಜಯ್‌ರಿಂದ ವಿಚ್ಚೇದನ ಪಡೆಯಲು ಮುಂದಾಗಿದ್ದಾರೆ. ರಾಜಕಾರಣದಲ್ಲಿನ ಪಾಲಿಟಿಕ್ಸ್‌ ನೋಡಿಯೇ ಸಿಕ್ಕಾಪಟ್ಟೆ ಬೇಸತ್ತಿದ್ದ ವಿಜಯ್‌‌ಗೀಗ ಪತ್ನಿ ಸಂಗೀತಾ ಕೂಡ ಬೆಂಬಿಡದೆ ಕಾಡ್ತಿದ್ದಾರೆ. ಸುಮಾರು 27 ವರ್ಷದ ಇವರ ವೈವಾಹಿಕ ಜೀವನಕ್ಕೆ ಫುಲ್ ಸ್ಟಾಪ್ ಇಡಲು ಇಬ್ಬರೂ ನಿರ್ಧರಿಸಿದ್ದಾರೆ.

 

ಒಬ್ಬ ಮಗ ಹಾಗೂ ಮಗಳು ವಿಜಯ್-ಸಂಗೀತಾ ದಾಂಪತ್ಯ ಜೀವನಕ್ಕೆ ಸಾಕ್ಷಿಯಾಗಿದ್ದು, ಮಕ್ಕಳಿಗಾಗಿ ಆದ್ರೂ ಒಟ್ಟಿಗೆ ಬದುಕುವ ನಿರ್ಧಾರದಿಂದ ದೂರ ಸರಿದಿದ್ದಾರೆ ಸತಿ-ಪತಿ. ಅಂದಹಾಗೆ 2021ರಿಂದಲೇ ವಿಜಯ್-ಸಂಗೀತಾ ಜೊತೆ ಎಲ್ಲವೂ ಸರಿ ಇರಲಿಲ್ಲ. ಅದಕ್ಕೆ ಕಾರಣ ವಿಜಯ್‌‌ಗೆ ಮತ್ತೊಬ್ಬ ನಟಿಯೊಂದಿಗೆ ಅಂದ್ರೆ ತ್ರಿಶಾ ಜೊತೆ ಅಕ್ರಮ ಸಂಬಂಧವಿದೆ ಎಂದು ಆರೋಪಿಸಿರೋ ಸಂಗೀತಾ ದೂರು ಕಾರಣೀಭೂತವಾಗಿದೆ. ಐದು ವರ್ಷಗಳ ಹಿಂದೆಯೇ ನನ್ನ ಗಮನಕ್ಕೆ ಬಂದಾಗ, ಸರಿ ತಿದ್ದಿಕೊಳ್ಳಲು ಅವಕಾಶ ನೀಡಿದೆ. ಆದ್ರೆ ಅವರು ಸರಿಪಡಿಸಿಕೊಳ್ಳಲಿಲ್ಲ. ಹೀಗಾಗಿ ಡಿವೋರ್ಸ್‌‌ಗೆ ಅಪ್ಲೈ ಮಾಡಿದ್ದೇನೆ ಎಂದಿದ್ದಾರೆ ವಿಜಯ್ ಪತ್ನಿ ಸಂಗೀತಾ.

 

ಕೋರ್ಟ್ ಮೆಟ್ಟಿಲೇರದೆ ಹೊರಗಡೆ ಸೆಟಲ್ಮೆಂಟ್ ಮಾಡಿಕೊಳ್ಳಲು ಬರೋಬ್ಬರಿ 250 ಕೋಟಿ ಆಫರ್ ನೀಡಿರೋ ವಿಜಯ್ ಆಫರ್‌ನ ತಿರಸ್ಕರಿಸಿದ್ದಾರಂತೆ ಸಂಗೀತಾ. ಅಲ್ಲದೆ, ಎರಡನೇ ರೆಸ್ಪಾಂಡೆಂಟ್ ಆಗಿ ತ್ರಿಶಾ ಹೆಸರು ಕೂಡ ಸೇರಿರುವ ಯೋಜನೆಯಲ್ಲಿದ್ದಾರಂತೆ ವಿಜಯ್ ಪತ್ನಿ ಸಂಗೀತಾ. ಅಲ್ಲದೆ ನಿನ್ನೆ ಮತ್ತೊಂದು ಹೊಚ್ಚ ಹೊಸ ಪಿಟಿಷನ್ ದಾಖಲಿಸಿದ್ದು, ನಮಗೆ ವಿಚ್ಚೇದನ ಸಿಗೋವರೆಗೆ ನಾನು ವಿಜಯ್ ವಾಸವಿರೋ ಅದೇ ಮನೆಯಲ್ಲಿ ಇರುತ್ತೇನೆ. ಅದಕ್ಕೆ ಕೋರ್ಟ್ ಅನುವು ಮಾಡಿಕೊಡಬೇಕು. ಯಾಕಂದ್ರೆ ಆ ಮನೆಯಲ್ಲಿ ನನಗೂ ಸಮಾನ ಹಕ್ಕಿದೆ ಎಂದಿದ್ದಾರೆ.

ತಂದೆ ನಡೆಗೆ ಜೇಸನ್ ಕಿಡಿ.. ಇನ್ಸ್‌ಟಾದಲ್ಲಿ ಅನ್‌ಫಾಲೋ

ತಾಯಿ ಪರ ವಿಜಯ್ ಮಗ.. ಟೀಕೆ, ಟಿಪ್ಪಣಿಗಳ ಸುರಿಮಳೆ

ಸಿನಿಮಾ ಡೈರೆಕ್ಷನ್‌ಗೆ ಕೈ ಹಾಕಿರೋ ವಿಜಯ್ ಪುತ್ರ ಜೇಸನ್ ಸಂಜಯ್ ಈ ಎಲ್ಲಾ ಬೆಳವಣಿಗೆಗಳನ್ನ ಕಂಡು ಇನ್ಸ್‌ಟಾದಲ್ಲಿ ಸಾರ್ವಜನಿಕವಾಗಿಯೇ ತಮ್ಮ ತಂದೆ ದಳಪತಿಯನ್ನ ಅನ್‌ಫಾಲೋ ಮಾಡಿದ್ದಾರೆ. ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಬೆಳೆದು ನಿಂತ ಮಗ ಕೂಡ ತಂದೆ ಪರ ಇಲ್ಲ ಅನ್ನೋದು ಸ್ಪಷ್ಟವಾಗಿದೆ. ಈ ವಯಸ್ಸಲ್ಲಿ ನಮ್ಮ ತಂದೆಗೆ ನಿಜಕ್ಕೂ ಇದೆಲ್ಲಾ ಬೇಕಿತ್ತಾ ಅನ್ನೋ ಪ್ರಶ್ನೆ ಬರೀ ವಿಜಯ್ ಮಗ ಜೇಸನ್‌ಗಷ್ಟೇ ಅಲ್ಲ, ಅವ್ರ ಅಸಂಖ್ಯಾತ ಅಭಿಮಾನಿಗಳಲ್ಲೂ ಮೂಡಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆ, ಟಿಪ್ಪಣಿಗಳ ನಡುವೆಯೇ ವಿಜಯ್ ಎಲೆಕ್ಷನ್ ಕ್ಯಾಂಪೇನ್‌ಗಳು ಭರದಿಂದ ಸಾಗ್ತಿವೆ. ಮನೆಯಲ್ಲಿರೋ ಮಡದಿಗೆ ಮೋಸ ಮಾಡುತ್ತಲೇ, ರಾಜ್ಯದ ಹೆಣ್ಣು ಮಕ್ಕಳ ಪಾಲಿಗೆ ದೇವರಾಗಲು ಹೊರಟಿದ್ದಾರೆ ದಳಪತಿ ವಿಜಯ್.

 

 

 

 

 

 

 

Exit mobile version