50ನೇ ವಸಂತಕ್ಕೆ ಕಾಲಿಟ್ಟಿರೋ ತಮಿಳಿನ ಸೂಪರ್ ಸ್ಟಾರ್ ಸೂರ್ಯ, ನ್ಯಾಯಕ್ಕಾಗಿ ಮತ್ತೊಮ್ಮೆ ಕರಿಕೋಟು ಧರಿಸಿದ್ದಾರೆ. ಮಾತಿನಲ್ಲಿ ಹೇಳೋಕೆ ಕರಿಕೋಟು, ದಂಡಂ ದಶಗುಣಂ ಮೂಲಕ ಅರ್ಥೈಸೋಕೆ ಕರುಪ್ಪು ಅವತಾರ ತಾಳಿರೋ ಸೂರ್ಯ ಕುರಿತ ಸ್ಪೆಷಲ್ ಬರ್ತ್ ಡೇ ಖಬರ್ ನಿಮ್ಮ ಮುಂದೆ.
- ಸೂರ್ಯ ಕರುಪ್ಪು ಖದರ್.. ಮತ್ತೆ ಮೈಮೇಲೆ ಕರಿಕೋಟು
- ಅಂದು ಜೈ ಭೀಮ್.. ಇಂದು ಕರುಪ್ಪು.. ಅದೇ ಅನ್ಯಾಯ
- 50 ವರ್ಷ.. 45 ಸಿನಿಮಾ.. ಸೂರ್ಯ ಸಾರ್ಥಕ ಸಿನಿಯಾನ
- ಬರ್ತ್ ಡೇ ಸ್ಪೆಷಲ್ ಫ್ಯಾನ್ಸ್ಗೆ ಮಾಸ್ ಟೀಸರ್ ಉಡುಗೊರೆ
ಇದು ತಮಿಳಿನ ಕರುಪ್ಪು ಚಿತ್ರದ ಟೀಸರ್ ಝಲಕ್. ಅಬ್ಬಬ್ಬಾ.. ಸೂರ್ಯ ಮಾಸ್ ಖದರ್ ಈ ಸಿನಿಮಾದಲ್ಲಿ ಯಾವ ರೇಂಜ್ಗೆ ಇರಲಿದೆ ಅನ್ನೋದನ್ನ ಇದೊಂದು ಟೀಸರ್ ಪರಿಚಯಿಸ್ತಿದೆ ನೋಡಿ. ನಟ, ನಿರ್ದೇಶಕ ಆರ್.ಜೆ. ಬಾಲಾಜಿ ಆ್ಯಕ್ಷನ್ ಕಟ್ ಹೇಳಿರೋ ಕರುಪ್ಪು, ಟೈಟಲ್ಗೆ ತಕ್ಕನಾಗಿ ಮಾಸ್ಗೆ ಕೇರ್ ಆಫ್ ಅಡ್ರೆಸ್ನಂತಿದೆ.
ಔಟ್ ಅಂಡ್ ಔಟ್ ಆ್ಯಕ್ಷನ್ ಡ್ರಾಮಾ ಆಗಿರೋ ಕರುಪ್ಪುದಲ್ಲಿ ನಟ ಸೂರ್ಯ ಡಿಫರೆಂಟ್ ಶೇಡ್ಗಳಲ್ಲಿ ಕಾಣಸಿಗಲಿದ್ದಾರೆ. ಸರವಣನ್ ಅನ್ನೋ ವಕೀಲನ ಪಾತ್ರದಲ್ಲಿ ಅಭಿನಯಿಸಿರೋ ಸೂರ್ಯ, ಅನ್ಯಾಯದ ಪರ ಹೋರಾಡುವ ದಿಟ್ಟ ಲಾಯರ್ ಆಗಿ ಮಿಂಚಲಿದ್ದಾರೆ. ಅಂದಹಾಗೆ ಜೈ ಭೀಮ್ ಸಿನಿಮಾದಲ್ಲೂ ಇವರು ಲಾಯರ್ ರೋಲ್ ಮಾಡಿದ್ರು. ಅದಾದ ಬಳಿಕ ಇದೀಗ ಮತ್ತೊಮ್ಮೆ ನ್ಯಾಯಕ್ಕಾಗಿ ಧ್ವನಿ ಎತ್ತುವ ವಕೀಲನಾಗಿ ಕರಿಕೋಟು ಧರಿಸಿದ್ದಾರೆ.
ಇಲ್ಲಿ ಮಾತಿನಲ್ಲಿ ವಾದಿಸೋಕೆ ಕೋರ್ಟ್ ಲಾಯರ್, ಅದು ವರ್ಕ್ ಆಗಲಿಲ್ಲ ಅಂದಾಗ ದಂಡಂ ದಶಗುಣಂ ಅಂತ ಹೊಡೆದು ಬಡಿದು ಅರ್ಥೈಸೋಕೆ ಕರುಪ್ಪು ಅವತಾರ ತಾಳುವ ಸೂರ್ಯ ನಿಗಿ ನಿಗಿ ಕಾದ ಕೆಂಡದಂತಿದ್ದಾರೆ. ಅಂದಹಾಗೆ ಸೂರ್ಯಗೆ ಇಂದು ಬರ್ತ್ ಡೇ ಸಂಭ್ರಮ. 50ನೇ ವಸಂತಕ್ಕೆ ಕಾಲಿಟ್ಟಿರೋ ಸೂರ್ಯ, ತನ್ನ ಫ್ಯಾನ್ಸ್ಗೆ 45ನೇ ಸಿನಿಮಾ ಕರುಪ್ಪು ಮಾಸ್ ಟೀಸರ್ನ ಗಿಫ್ಟ್ ಆಗಿ ನೀಡಿದ್ದಾರೆ.
ನಟ, ನಿರ್ಮಾಪಕರಾಗಿ ಗುರ್ತಿಸಿಕೊಂಡಿರೋ ನಟ ಸೂರ್ಯ ಅವ್ರ ಕಂಪ್ಲೀಟ್ ಕುಟುಂಬ ಕಲಾ ಸೇವೆಯಲ್ಲಿ ನಿರತವಾಗಿದೆ. ಪತ್ನಿ ಜ್ಯೋತಿಕಾ, ಸಹೋದರ ಕಾರ್ತಿ ಹೀಗೆ ಎಲ್ಲರೂ ಕಲಾವಿದರೇ. ಅಲ್ಲದೆ ಹೊಸ ಸಿನಿಮೋತ್ಸಾಹಿ ಪ್ರತಿಭೆಗಳಿಗೆ ಸದಭಿರುಚಿಯ ಚಿತ್ರಗಳನ್ನ ನಿರ್ಮಿಸೋ ಮೂಲಕ ಪ್ರೇಕ್ಷಕರ ಹೃದಯ ಗೆದ್ದಿದ್ದಾರೆ. ಒಂದಷ್ಟು ಸಾಮಾಜಿಕ ಕಾರ್ಯಗಳನ್ನ ಕೂಡ ತಮ್ಮದೇ ಫೌಂಡೇಷನ್ ಮೂಲಕ ಮಾಡ್ತಿರೋ ಸೂರ್ಯ, ಅದೆಷ್ಟೋ ಮಂದಿ ಅಸಹಾಯಕರ ಬಾಳಿಗೆ ಬೆಳಕಾಗಿದ್ದಾರೆ. ಸೋ.. ಸೂರ್ಯ ಅವರಿಗೆ ನಮ್ಮಿಂದಲೂ ಹ್ಯಾಪಿ ಬರ್ತ್ ಡೇ ಹೇಳೋಣ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್