ಶಿವಣ್ಣ ಸರ್ಜರಿಗೂ ಮುನ್ನ ಒಡೆಯರ್ ಮಾಡಿದ್ದೇನು ?

ಅಡ್ವಾನ್ಸ್ ಮಾಡಿ ಭಾವುಕರಾಗಿಸಿದ್ದ ಗೂಗ್ಲಿ ಡೈರೆಕ್ಟರ್..!

Untitled design 2025 04 12t184956.792

ಸ್ಯಾಂಡಲ್‌ವುಡ್‌ ಲೀಡರ್.. ಲಿವಿಂಗ್ ಲೆಜೆಂಡ್ ಶಿವರಾಜ್‌‌ಕುಮಾರ್ ಕ್ಯಾನ್ಸರ್ ಕುಲುಮೆಯಿಂದ ಹೊರಬಂದು ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಆದ್ರೆ ಅವರು ಚಿಕಿತ್ಸೆಗೆ ಅಮೆರಿಕಾಗೆ ಹೋಗೋಕೂ ಮುನ್ನ ಗೂಗ್ಲಿ ಡೈರೆಕ್ಟರ್ ಪವನ್ ಒಡೆಯರ್ ಮಾಡಿದ್ದೇನು ಅಂತ ಒಮ್ಮೆ ನೋಡಿ.

ADVERTISEMENT
ADVERTISEMENT

ಭೈರತಿ ರಣಗಲ್ ಸಿನಿಮಾದ ರಿಲೀಸ್ ವೇಳೆಗೆ ನಟ ಶಿವರಾಜ್‌ಕುಮಾರ್‌ಗೆ ಕ್ಯಾನ್ಸರ್ ಇರೋದು ಕಾತರಿ ಆಗಿರುತ್ತೆ. ಕೀಮೋ ಥೆರಪಿಯಲ್ಲಿದ್ದ ಶಿವಣ್ಣನ ಮುಂದಿನ ಸಿನಿಮಾಗಳ ಬಗ್ಗೆ ಎಲ್ಲಿಲ್ಲದ ಆತಂಕ ಎದುರಾಗುತ್ತೆ. ಚಿಕಿತ್ಸೆ ಪಡೆಯುತ್ತಿದ್ದಾಗಲೇ ನಿರ್ಮಾಪಕರ ಹಿತದೃಷ್ಠಿಯಿಂದ ಶಿವಣ್ಣ ಶೂಟಿಂಗ್‌‌ನ ಮುಗಿಸಿಯೇ ಅಮೆರಿಕಾಗೆ ತೆರಳಲು ನಿರ್ಧಾರ ಮಾಡ್ತಾರೆ. ಅದ್ರಂತೆ ರಮೇಶ್ ರೆಡ್ಡಿ ಅವರ 45 ಸಿನಿಮಾದ ಶೂಟಿಂಗ್‌ನ ಮುಗಿಸಿಕೊಡ್ತಾರೆ.

ಶಿವಣ್ಣ 131 ಸಿನಿಮಾ, ರಾಮ್ ಚರಣ್ ತೇಜಾರ ಪೆದ್ದಿ ಸಿನಿಮಾ, ಜೈಲರ್-2, A ಫಾರ್ ಆನಂದ್.. ಹೀಗೆ ಸಾಲು ಸಾಲು ಸಿನಿಮಾಗಳ ನಿರ್ದೇಶಕ, ನಿರ್ಮಾಪಕರಲ್ಲಿ ಆತಂಕ ಎದುರಾಗುತ್ತೆ. ಅಮೆರಿಕಾಗೆ ತೆರಳುವ ಮುನ್ನ ಶಿವಣ್ಣನಿಗೆ ಮತ್ತೆ ವಾಪಸ್ ಬರ್ತೀನೋ ಇಲ್ವೋ ಅನ್ನೋ ಅನುಮಾನ ಕೂಡ ಎದುರಾಗುತ್ತಂತೆ. ಅದನ್ನ ಸ್ವತಃ ಶಿವಣ್ಣ ಅವರೇ ನಮ್ಮ ಗ್ಯಾರಂಟಿ ನ್ಯೂಸ್ ಸಂದರ್ಶನದಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ.

ದೇವರ ದಯೆಯಿಂದ ಸರ್ಜರಿ ಸಕ್ಸಸ್ ಆಗಿದೆ. ಶಿವಣ್ಣನಿಗೆ ಕ್ಯಾನ್ಸರ್ ಕೂಡ ಕ್ಯೂರ್ ಆಗಿದೆ. ಮೊದಲಿಗಿಂತ ಯಂಗ್ ಅಂಡ್ ಎನರ್ಜಿಟಿಕ್ ಆಗಿ ಶಿವಣ್ಣ ಲವಲವಿಕೆಯಿಂದ ಇರೋದು ನೋಡಿ ಇಡೀ ಕರ್ನಾಟಕ ರಾಜ್ಯವೇ ಖುಷಿ ಪಡ್ತಿದೆ. ಆದ್ರೆ ಅವರು ಅಮೆರಿಕಾಗೆ ಸರ್ಜರಿಗೆ ತೆರಳುವುದಕ್ಕೆ ಮುನ್ನ, ದೇವರ ರೂಪದಲ್ಲಿ ಗೂಗ್ಲಿ ಡೈರೆಕ್ಟರ್ ಪವನ್ ಒಡೆಯರ್ ಹಾಗೂ ಅವ್ರ ಪತ್ನಿ ಅಪೇಕ್ಷಾ ಪವನ್ ಒಡೆಯರ್ ನಾಗವಾರದಲ್ಲಿರೋ ಶಿವಣ್ಣನ ಶ್ರೀಮುತ್ತು ನಿವಾಸಕ್ಕೆ ತೆರಳಿ ಶುಭ ಕೋರಿದ್ದರಂತೆ.

ಅಷ್ಟೇ ಅಲ್ಲ, ಶಿವಣ್ಣನೇ ಹೇಳೀದಂತೆ ಪವನ್ ಒಡೆಯರ್ ದೇವರ ರೂಪದಲ್ಲಿ ಬಂದು ನಂಬಿಕೆ ಕೊಟ್ಟು ಹೋದರಂತೆ. ಅದೂ ಅಡ್ವಾನ್ಸ್ ಕೊಡೋ ಮೂಲಕ ಅನ್ನೋದು ಇಂಟರೆಸ್ಟಿಂಗ್. ರೆಮ್ಯುನರೇಷನ್ ಬಗ್ಗೆ ಒಂದು ಮಾತು ಕೂಡ ಮಾತಾಡಿಲ್ಲ.. ನಾನು ಮಾಡ್ಕೊಡ್ತೀನಿ ಅಂತ ಮಾತು ಕೊಟ್ಟಿದ್ದೀನಿ. ನನ್ನ ಪಾಲಿನ ದೇವರು ಅಂತ ಭಾವುಕರಾದ್ರು ಶಿವಣ್ಣ.

ಶಿವಣ್ಣ ಅಷ್ಟೇ ಅಲ್ಲ, ಗೀತಾ ಶಿವರಾಜ್‌‌ಕುಮಾರ್ ಕೂಡ ಒಡೆಯರ್ ದಂಪತಿ ಬಗ್ಗೆ ಕೊಂಡಾಡಿದ್ರು. ಪವನ್ ಒಡೆಯರ್- ಅಪೇಕ್ಷಾರನ್ನ ನೋಡಿದ್ರೆ ಸಾಕು ಒಂದು ಪಾಸಿಟಿವ್ ವೈಬ್ ಇದೆ. ಮನೆಗೆ ಎಂಟ್ರಿ ಆಗಿ ನಮ್ಮ ಮುಂದೆ ಬಂದು ಕೋತರು.. ಅವ್ರನ್ನ ನೋಡ್ತಿದ್ರೆ ಒಂದು ಎನರ್ಜಿ ಬರ್ತಿತ್ತು. ಅವರು ಅಂದು ಆಡಿದ ಮಾತುಗಳು ನಿಜಕ್ಕೂ ತುಂಬಾ ಪಾಸಿಟಿವ್ ಅಂತ ಅಡ್ವಾನ್ಸ್ ಕೊಟ್ಟಿದನ್ನ ಸ್ಮರಿಸಿದ್ರು.

ಅಪ್ಪು ಜೊತೆ ನಟಸಾರ್ವಭೌಮ, ರಣವಿಕ್ರಮ ಸಿನಿಮಾಗಳನ್ನ ಮಾಡಿರೋ ಸಕ್ಸಸ್‌‌ಫುಲ್ ಡೈರೆಕ್ಟರ್, ನ್ಯಾಷನಲ್ ಅವಾರ್ಡ್‌ ಪ್ರೊಡ್ಯೂಸರ್‌‌ಗಳು ಕೂಡ ಆಗಿರೋ ಪವನ್ ಒಡೆಯರ್ ದಂಪತಿ ಈ ವಿಚಾರದಲ್ಲಿ ಭೇಷ್ ಅನಿಸಿಕೊಂಡಿದ್ದಾರೆ. ಒಟ್ಟಾರೆ ಶಿವಣ್ಣನಿಗೆ ಅಂಥದ್ದೊಂದು ಧೈರ್ಯ ತುಂಬಿ ಕಳಿಸಿದ ಇವರುಗಳ ಬಗ್ಗೆ ಗೌರವ ಹೆಚ್ಚಾಗಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version