ದರ್ಶನ್ ಫ್ಯಾನ್ಸ್ ವಿರುದ್ಧ ಸುನಾಮಿಯಂತೆ ಸಿಡಿದೆದ್ದ ರಮ್ಯಾ

ದೋಸ್ತ್ ದಚ್ಚು ವಿರುದ್ಧ ಮಾತಾಡಿದ್ದಕ್ಕೆ ರಕ್ಷಿತಾ ಸುಂಟರಗಾಳಿ

Untitled design 2025 07 28t182518.699

ಇಲ್ಲಿಯವರೆಗೂ ರಮ್ಯಾ ಮತ್ತು ದರ್ಶನ್ ಫ್ಯಾನ್ಸ್ ನಡುವೆ ನಡೆಯುತ್ತಿದ್ದ ಫೈಟ್, ಇದೀಗ ರಮ್ಯಾ-ರಕ್ಷಿತಾ ವಾರ್ ಆಗಿ ಪರಿಣಮಿಸಿದೆ. ಮತ್ತೊಂದ್ಕಡೆ ಗಂಡನ ಬಗ್ಗೆ ಮಾತಾಡಿದ್ದಕ್ಕೆ ವಿಜಯಲಕ್ಷ್ಮೀ ದರ್ಶನ್ ಕೂಡ ರೊಚ್ಚಿಗೆದ್ದಿದ್ದಾರೆ. ಡಿಬಾಸ್ ನಡೆ ಮತ್ತು ಆತನ ಒಂದಷ್ಟು ಪುಂಡ ಅಭಿಮಾನಿಗಳು ಮಾಡುವ ಎಡವಟ್‌‌ನಿಂದ ಸ್ಯಾಂಡಲ್‌ವುಡ್ ಧಗ ಧಗ ಹೊತ್ತಿ ಉರಿಯುತ್ತಿದೆ. ಈ ಕುರಿತ ಕಂಪ್ಲೀಟ್ ಕಹಾನಿಯನ್ನ ಎಳೆ ಎಳೆಯಾಗಿ ಬಿಚ್ಚಿಡ್ತೀವಿ ನೋಡಿ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಡಿ ಗ್ಯಾಂಗ್‌ಗೆ ಹೈಕೋರ್ಟ್‌ ಜಾಮೀನು ನೀಡಿದ್ದು, ಈ ವಿಷಯ ಪೊಲೀಸರು ಚಕಾರ ಎತ್ತಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು. ಹೈ ಕೋರ್ಟ್‌ ಜಾಮೀನು ನೀಡಿರೋದಕ್ಕೆ ಸುಪ್ರೀಂ ಕೂಡ ಅಸಮಾಧಾನ ವ್ಯಕ್ತಪಡಿಸಿತ್ತು. ಪ್ರಮುಖ ಆರೋಪಿಗಳಾದ ದರ್ಶನ್ ಹಾಗೂ ಪವಿತ್ರಾ ಗೌಡ ವಕೀಲರಿಗೆ ಸಾಕಷ್ಟು ಪ್ರಶ್ನೆಗಳನ್ನ ಕೇಳುವ ಮೂಲಕ ಕೋರ್ಟ್‌ ಶಾಕ್ ನೀಡಿತ್ತು. ಆ ಕುರಿತ ವರದಿಯೊಂದನ್ನ ತಮ್ಮ ಸಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ರಮ್ಯಾ, ರೇಣುಕಾಸ್ವಾಮಿ ಕುಟುಂಬದ ಪರ ಮಾತನಾಡಿದ್ದರು.

ಇಲ್ಲಿಯವರೆಗೂ ರಮ್ಯಾ ಮತ್ತು ದರ್ಶನ್ ಫ್ಯಾನ್ಸ್ ನಡುವೆ ನಡೆಯುತ್ತಿದ್ದ ಫೈಟ್, ಇದೀಗ ರಮ್ಯಾ-ರಕ್ಷಿತಾ ವಾರ್ ಆಗಿ ಪರಿಣಮಿಸಿದೆ. ಮತ್ತೊಂದ್ಕಡೆ ಗಂಡನ ಬಗ್ಗೆ ಮಾತಾಡಿದ್ದಕ್ಕೆ ವಿಜಯಲಕ್ಷ್ಮೀ ದರ್ಶನ್ ಕೂಡ ರೊಚ್ಚಿಗೆದ್ದಿದ್ದಾರೆ. ಡಿಬಾಸ್ ನಡೆ ಮತ್ತು ಆತನ ಒಂದಷ್ಟು ಪುಂಡ ಅಭಿಮಾನಿಗಳು ಮಾಡುವ ಎಡವಟ್‌‌ನಿಂದ ಸ್ಯಾಂಡಲ್‌ವುಡ್ ಧಗ ಧಗ ಹೊತ್ತಿ ಉರಿಯುತ್ತಿದೆ. ಈ ಕುರಿತ ಕಂಪ್ಲೀಟ್ ಕಹಾನಿಯನ್ನ ಎಳೆ ಎಳೆಯಾಗಿ ಬಿಚ್ಚಿಡ್ತೀವಿ ನೋಡಿ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಡಿ ಗ್ಯಾಂಗ್‌ಗೆ ಹೈಕೋರ್ಟ್‌ ಜಾಮೀನು ನೀಡಿದ್ದು, ಈ ವಿಷಯ ಪೊಲೀಸರು ಚಕಾರ ಎತ್ತಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು. ಹೈ ಕೋರ್ಟ್‌ ಜಾಮೀನು ನೀಡಿರೋದಕ್ಕೆ ಸುಪ್ರೀಂ ಕೂಡ ಅಸಮಾಧಾನ ವ್ಯಕ್ತಪಡಿಸಿತ್ತು. ಪ್ರಮುಖ ಆರೋಪಿಗಳಾದ ದರ್ಶನ್ ಹಾಗೂ ಪವಿತ್ರಾ ಗೌಡ ವಕೀಲರಿಗೆ ಸಾಕಷ್ಟು ಪ್ರಶ್ನೆಗಳನ್ನ ಕೇಳುವ ಮೂಲಕ ಕೋರ್ಟ್‌ ಶಾಕ್ ನೀಡಿತ್ತು. ಆ ಕುರಿತ ವರದಿಯೊಂದನ್ನ ತಮ್ಮ ಸಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ರಮ್ಯಾ, ರೇಣುಕಾಸ್ವಾಮಿ ಕುಟುಂಬದ ಪರ ಮಾತನಾಡಿದ್ದರು.

  • Categories: ಸಿನಿಮಾ
  • Tags:
  • Exit mobile version