ಇಷ್ಟು ದಿನ ಕಿಚ್ಚನ ಹವಾ..ಇದೀಗ ಪಚ್ಚನ ಪರ್ವ ಶುರು

ಸ್ಯಾಂಡಲ್‌ವುಡ್‌ಗೆ ಭವಿಷ್ಯದ ಭರವಸೆ ಸ್ಟಾರ್ ಸಂಚಿತ್

BeFunky collage 2026 05 26T163423.891

ಚಿತ್ರರಂಗದಲ್ಲಿ ಇಷ್ಟು ದಿನ ಕಿಚ್ಚನ ಪರ್ವ ನೋಡಿದ್ದಾಯ್ತು. ಇಲ್ಲಿಂದೀಚೆಗೆ ಪಚ್ಚನ ಹೊಚ್ಚ ಹೊಸ ಪರ್ವ ಶುರುವಾಗ್ತಿದೆ. ಅದಕ್ಕೆ ಬಾದ್‌ಷಾ ಸುದೀಪ್ ಅವರೇ ಆತನನ್ನ ಇಂಟ್ರಡ್ಯೂಸ್ ಕೂಡ ಮಾಡ್ತಿದ್ದಾರೆ. ಇದೇ ಜೂನ್ 5ಕ್ಕೆ ಬೆಳ್ಳಿತೆರೆ ಬೆಳಗೋಕೆ ಸಜ್ಜಾಗಿರೋ ಮ್ಯಾಂಗೋ ಪಚ್ಚನ ರಕ್ತಸಿಕ್ತ ಅಧ್ಯಾಯ ಇಲ್ಲಿದೆ.

ಇದು ನಿನ್ನೆಯಷ್ಟೇ ಮೈಸೂರಿನಲ್ಲಿ ಅದ್ಧೂರಿಯಾಗಿ ಲಾಂಚ್ ಆದಂತಹ ಮ್ಯಾಂಗೋ ಪಚ್ಚ ಚಿತ್ರದ ಟ್ರೈಲರ್ ಝಲಕ್. ನೋಡೋಕೆ ಸುಕ್ಕಾ ಸೂರಿ, ದುನಿಯಾ ವಿಜಯ್ ಸಿನಿಮಾಗಳ ರೀತಿ ರಾ & ರಗಡ್ ಆಗಿರೋ ಈ ಸಿನಿಮಾಗೆ ವಿವೇಕ ಅನ್ನೋ ಪ್ರತಿಭಾವಂತ ನವ ನಿರ್ದೇಶಕ ಆ್ಯಕ್ಷನ್ ಕಟ್ ಹೇಳಿದ್ದಾರೆ. ಒಂದು ನವಿರಾದ ಪ್ರೇಮಕಥೆ, ಜೊತೆಗೆ ಫ್ಯಾಮಿಲಿ, ಫ್ರೆಂಡ್ಸ್ ಎಮೋಷನ್ಸ್ ಜೊತೆ ರಕ್ತಸಿಕ್ತ ಅಧ್ಯಾಯ ಇದಾಗಲಿದೆ.

ಇಷ್ಟು ದಿನ ಕಿಚ್ಚನ ಹವಾ..ಇದೀಗ ಪಚ್ಚನ ಪರ್ವ ಶುರು

ಸಾಮ್ರಾಜ್ಯ ಕಟ್ಟೋಕೆ ರೆಡಿ ಸುದೀಪ್ ಕುಟುಂಬದ ಕುಡಿ

ಇಷ್ಟು ದಿನ ಕಿಚ್ಚನ ಪರ್ವ ಜೋರಿತ್ತು..ಇದೀಗ ಅದೇ ಬಾದ್‌ಷಾ ಸುದೀಪ್ ಕಟುಂಬದಿಂದ ಬಂದಿರೋ ನ್ಯೂ ಟ್ಯಾಲೆಂಟ್ ಈ ಪಚ್ಚ. ಮ್ಯಾಂಗ್ ಪಚ್ಚ ಟೈಟಲ್ ರೋಲ್‌‌ನಲ್ಲಿ ಸುದೀಪ್ ಅಕ್ಕನ ಮಗ ಸಂಚಿತ್ ಸಂಜೀವ್ ನಟಿಸಿದ್ದು, ಟ್ರೈಲರ್ ವೆರಿ ವೆರಿ ಪ್ರಾಮಿಸಿಂಗ್ ಆಗಿದೆ. ಅಂದಹಾಗೆ ಸಾಂಸ್ಕೃತಿಕ ನಗರ ಮೈಸೂರಿನಲ್ಲಿ ಇಡೀ ಸಿನಿಮಾ ಚಿತ್ರೀಕರಣ ಆಗಿದ್ದು, ಇದು ಹಂಡ್ರೆಡ್ ಪರ್ಸೆಂಟ್ ಕ್ಲಾಸ್ ಸ್ಟೋರಿ ಅಲ್ಲವೇ ಅಲ್ಲ. ಮಾಸ್ ವಿತ್ ಕ್ಲಾಸ್ ಅಂದ್ರೆ ಸೂಕ್ತ ಅನಿಸುತ್ತೆ.

2006ರಲ್ಲಿ ಮೈಸೂರು ಪೊಲೀಸರು ಸುಮಾರು 300 ರಿಂದ 500 ಕೆಜಿ ಗಾಂಜಾ ವಶಪಡಿಸಿಕೊಳ್ತಾರೆ. ಅದೇ ಸಮಯದಲ್ಲಿ ಅಮ್ಮ ಪ್ರಶಾಂತ ಅಂತ ಹೆಸರಿಟ್ಟಿದ್ದ ನಾಯಕನಟ, ಪಚ್ಚ ಆಗಿ ಪಾಪ್ಯುಲರ್ ಆಗ್ತಾನೆ. ಆತನ ಹುಡುಗಿ ಸುಜಿ, ಅಮ್ಮ ಪದ್ಮ, ಶ್ಯಾಮ ಅನ್ನೋ ತಮ್ಮ. ಜೊತೆಗೆ ಒಂದಷ್ಟು ಹುಡುಗರು..ಇವರೇ ಪಚ್ಚನ ಶಕ್ತಿ & ಕುಟುಂಬ ಆಗಿರುತ್ತೆ.

ಅರಮನೆ ನಗರಿ ಮೈಸೂರಲ್ಲೊಂದು ರಕ್ತಸಿಕ್ತ ಅಧ್ಯಾಯ

ಸ್ಯಾಂಡಲ್‌ವುಡ್‌ಗೆ ಭವಿಷ್ಯದ ಭರವಸೆ ಸ್ಟಾರ್ ಸಂಚಿತ್

ಪಚ್ಚ ಓಕೆ..ಆತ ಮ್ಯಾಂಗೋ ಪಚ್ಚ ಆಗಿದ್ದೇ ರೋಚಕ. ನಿಮ್ಮ ಗತ್ತು, ದೌಲತ್ತು ಎಲ್ಲಾ ಆಚೆ ಇಟ್ಕೊಳಿ ಅಂತ ಪೊಲಿಟಿಷಿಯನ್ ಒಬ್ಬರಿಗೆ ಥಳಿಸೋ ಪಚ್ಚ, ಗುದ್ದಾಡೋಕೆ ದಂಡು ದಂಡಾಗಿ ಬರೋರಿಗೆಲ್ಲಾ ಮಣ್ಣು ಮುಕ್ಕಿಸುತ್ತಾನೆ. ಅದಾದ ಬಳಿಕ ದಸರಾ ಮುಗಿಯೋ ಅಷ್ಟರಲ್ಲಿ ಅವನ ಹುಡುಗರು & ಬ್ಯುಸಿನೆಸ್ ಎರಡೂ ಇರಬಾರದು ಅಂತ ಆತನ ಮಗ ಮಯೂರ್ ಪಟೇಲ್ ಶಪಥ ಮಾಡ್ತಾನೆ. ಮುಂದೆ ನಡೆಯೋದೇ ಮಾರಿ ಹಬ್ಬ.

ರಾಕ್ ಲೈನ್ ವೆಂಕಟೇಶ್ ಏನು ಕಟ್ಬೇಕು ಅಂದ್ಕೊಂಡಿದ್ದೀಯಾ ಅನ್ನೋ ಪ್ರಶ್ನೆಗೆ ಮ್ಯಾಂಗೋ ಪಚ್ಚ ಸಂಚಿತ್ ಕೊಡೋ ಉತ್ತರ ‘ಸಾಮ್ರಾಜ್ಯ’. ಅಭಿನಯ ಚಕ್ರವರ್ತಿ ಬಾದ್‌ಷಾ ಕಿಚ್ಚ ಸುದೀಪ್ ಈಗಾಗ್ಲೇ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ದೊಡ್ಡ ಸಾಮ್ರಾಜ್ಯ ಕಟ್ಟಿ ಆಗಿದೆ. ಅದೇ ಕುಟುಂಬದ ಕುಡಿ ಸಂಚಿತ್ ಕೂಡ ಸೋದರ ಮಾವನ ರೀತಿ ಸಾಮ್ರಾಜ್ಯ ಕಟ್ಟೋಕೆ ಶುರುವಾಗಿರೋದು ವಿಶೇಷ. ಬೆಳೆಯೋದಕ್ಕೆ ದುಡ್ಡು ಬೇಕು.. ಮರ್ಯಾದೆಯೂ ಬೇಕು ಅನ್ನೋ ಡೈಲಾಗ್ ಸಾಕಷ್ಟು ವಿಷಯಗಳನ್ನ ಹೇಳ್ತಿದೆ.

ಸಂಚಿತ್ ತುಂಬಾ ಪ್ರಾಮಿಸಿಂಗ್ ಆಗಿ ಕಾಣಿಸಿಕೊಂಡಿದ್ದು, ಟ್ರೈಲರ್‌ನ ಕಟ್ಟ ಕಡೆಯ ರಕ್ತಸಿಕ್ತ ಮುಖದಲ್ಲಿನ ಎಕ್ಸ್‌‌ಪ್ರೆಷನ್ಸ್ ಅದ್ಭುತ ಅನಿಸಿದೆ. ಅದನ್ನ ನೋಡ್ತಿದ್ರೆ, ಕಂಡಿತ ಕನ್ನಡದ ಭವಿಷ್ಯದ ಭರವಸೆಯ ಸ್ಟಾರ್ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಅಂದಹಾಗೆ ಸಂಚಿತ್ ಜೊತೆ ಉಗ್ರಂ ಮಂಜು, ಕಾಜಲ್ ಕುಂದರ್, ಪ್ರಶಾಂತ್ ಹಿರೇಮಠ್, ಮಯೂರ್ ಪಟೇಲ್, ಜೈ, ಹರಿಣಿ ಶ್ರೀಕಾಂತ್, ಹಂಸ ನಂಜುಂಡಸ್ವಾಮಿ ಸೇರಿದಂತೆ ಬಹುದೊಡ್ಡ ತಾರಾಗಣವಿದೆ. ಸುದೀಪ್ ಪತ್ನಿ ಪ್ರಿಯಾ ಸುದೀಪ್ ಅವರು ತಮ್ಮ ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋ ಮೂಲಕ ಕೆಆರ್‌ಜಿ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್ ಜೊತೆಗೂಡಿ ನಿರ್ಮಾಣ ಮಾಡಿರೋದು ಮತ್ತೊಂದು ವಿಶೇಷ.

 

 

 

Exit mobile version