ಕಲಾ ಸಾಮ್ರಾಟ್ ಎಸ್ ನಾರಾಯಣ್ ಹಾಗೂ ಅವರ ಮಗ ಪವನ್ ಮೇಲೆ ಕೇಳಿಬಂದಿದ್ದ ವರದಕ್ಷಿಣೆ ಕಿರುಕುಳ ಕೇಸ್ಗೆ ಮೆಗಾ ಟ್ವಿಸ್ಟ್ ಸಿಕ್ಕಿದೆ. ಸೊಸೆ ತರಬೇಕಿದ್ದು ಸೌಭಾಗ್ಯ ಆದ್ರೆ ಅದು ದೌರ್ಭಾಗ್ಯ ಆಗಿರೋದು ದುರಂತ. ಇಂಟರೆಸ್ಟಿಂಗ್ ಅಂದ್ರೆ ಎಸ್ ನಾರಾಯಣ್ ಸೊಸೆ ಮೇಲೆ ಸ್ವಂತ ಅವರ ತಂದೆಯೇ ದೂರು ದಾಖಲಿಸಿದ್ದಾರೆ. ಅದ್ರ ಕಂಪ್ಲೀಟ್ ಡೀಟೈಲ್ ಇಲ್ಲಿದೆ.
- ಎಸ್. ನಾರಾಯಣ್ ‘ಗಲಾಟೆ ಸೊಸೆ’ಯ ಅಸಲಿ ಕಥೆ ಗೊತ್ತಾ..?
- ಇದು ಸೊಸೆ ತಂದ ಸೌಭಾಗ್ಯ ಅಲ್ಲ.. ಸೊಸೆ ಬಂದ ದೌರ್ಭಾಗ್ಯ..!
- ಪವಿತ್ರಾ ಆಗಮನದಿಂದ ಕಲಾ ಸಾಮ್ರಾಟ್ ಮನೆ ಅ‘ಪವಿತ್ರ’..?!
- ಮಗಳ ವಿರುದ್ಧ ತಂದೆ ದೂರು.. ಇದು ಗ್ಯಾರಂಟಿ ಎಕ್ಸ್ಕ್ಲೂಸಿವ್
ನಟ, ನಿರ್ದೇಶಕ, ನಿರ್ಮಾಪಕ, ವಿತರಕ, ಸಂಗೀತ ಸಂಯೋಜಕ, ಚಿತ್ರ ಸಾಹಿತಿ ಹೀಗೆ ಚಿತ್ರರಂಗದಲ್ಲಿ ಎಸ್ ನಾರಾಯಣ್ ಟಚ್ ಮಾಡದ ವಿಭಾಗವೇ ಇಲ್ಲ. ತಮ್ಮ ಜೀವಮಾನದಲ್ಲಿ ಬರೋಬ್ಬರಿ 50 ಚಿತ್ರಗಳನ್ನ ನಿರ್ದೇಶಿಸಿದ ಟ್ರ್ಯಾಕ್ ರೆಕಾರ್ಡ್ ಇರೋ ಇವರು, ಎಂದೂ ವಿವಾದಗಳನ್ನ ಮಾಡಿಕೊಂಡವರಲ್ಲ. ಚಿತ್ರರಂಗದ ದಿಗ್ಗಜ ಕಲಾವಿದರುಗಳಾದ ಡಾ. ರಾಜ್, ಅಂಬಿ, ವಿಷ್ಣು ಸೇರಿದಂತೆ ಅಣ್ಣಾವ್ರ ಮೂರೂ ಮಂದಿ ರಾಜಕುಮಾರರಿಗೆ ಆ್ಯಕ್ಷನ್ ಕಟ್ ಹೇಳಿದ ಗರಿಮೆ ಇವರದ್ದು. ಎಲ್ಲಕ್ಕಿಂತ ಮಿಗಿಲಾಗಿ ಶಿಸ್ತಿಗೆ ಇವರು ಕೇರ್ ಆಫ್ ಅಡ್ರೆಸ್.
ಮಾತು ಎತ್ತಿದ್ರೆ ನಾನು ಸೂಸೈಡ್ ಮಾಡ್ಕೋತೀನಿ.. ನಿಮ್ಮ ಹೆಸರು ಬರೆದಿಡ್ತೀನಿ.. ಅಂತೆಲ್ಲಾ ಬ್ಲ್ಯಾಕ್ ಮೇಲ್ ಮಾಡೋ ಪವಿತ್ರಾ, ತವರು ಮನೆ ಹಾಗೂ ಮಾವನ ಮನೆ ಬಿಟ್ಟು ಗಂಡನೊಂದಿಗೆ ಪ್ರತ್ಯೇಕವಾಗಿ ವಾಸಿಸ್ತಿದ್ದರಂತೆ. ಪವಿತ್ರಾ- ಪವನ್ ದಂಪತಿಗೆ ಮೂರೂವರೆ ವರ್ಷದ ಮಗು ಕೂಡ ಇದ್ದು, ಆ ಮಗುವಿನ ಭವಿಷ್ಯದ ದೃಷ್ಠಿಯಿಂದ ಎಸ್ ನಾರಾಯಣ್ ಎಲ್ಲಾ ಅವಮಾನ, ಅಪಮಾನಗಳನ್ನು ನುಂಗಿಕೊಂಡು ಮೌನಕ್ಕೆ ಜಾರಿದ್ದರು. ಆದ್ರೀಗ ತವರು ಮನೆಯಲ್ಲೇ ಠಿಕಾಣಿ ಹೊಡೆದಿರೋ ಪವಿತ್ರಾ, ಇಲ್ಲಿ ಅತ್ತೆ ಮಾವ, ಅಲ್ಲಿ ಹೆತ್ತವರ ಮಾತಿಗೂ ಬೆಲೆ ಕೊಡದೆ ಸ್ವೇಚ್ಚಾಚಾರದಿಂದ ಬದುಕ್ತಿದ್ದಾರೆ.
ಅಂದಹಾಗೆ ಜವಾಬ್ದಾರಿಯುತ ನಿವೃತ್ತ ಹೆಡ್ ಕಾನ್ಸ್ಟೇಬಲ್ ಆಗಿದ್ದ ಶಿವಕುಮಾರ್, ಮಗಳಿಂದ ಅದಷ್ಟು ಕಿರಿಕಿರಿ ಅನುಭವಿಸಿರಬೇಡ ಅಲ್ಲವೇ? ಇತ್ತ ಎಸ್ ನಾರಾಯಣ್ ಕುಟುಂಬಕ್ಕೂ ಟಾರ್ಚರ್ ನೀಡಿ, ಬ್ಲ್ಯಾಕ್ಮೇಲ್ ಮಾಡಿರೋ ಪವಿತ್ರಾ ವಿರುದ್ಧ, ಕೋರ್ಟ್ನಲ್ಲಿ ಸಾಕಷ್ಟು ಗುಟ್ಟುಗಳನ್ನು ರಟ್ಟು ಮಾಡಲಿದೆ ಕಲಾಸಾಮ್ರಾಟ್ ಫ್ಯಾಮಿಲಿ. ಕೋರ್ಟ್ ಹಾಗೂ ಸಮಾಜದ ಮುಂದೆ ಅಸಲಿ ಮುಖವಾಡ ಕಳಚಿ ಬೀಳುವ ಮೊದಲು ಪರಸ್ಪರ ಮಾತುಕತೆ ಮೂಲಕ ರಾಜಿಯಾದರೆ ಆಕೆಗೇ ಒಂದಷ್ಟು ಮರ್ಯಾದೆ ಆದ್ರೂ ಉಳಿಯಲಿದೆ.
