ಇಲ್ಲಿಯವರೆಗೂ ಒಂದು ಲೆಕ್ಕ.. ಇಲ್ಲಿಂದೀಚೆಗೆ ಹೊಸ ಲೆಕ್ಕ.. ಇದು ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವ್ರ ಹೊಸ ಅಧ್ಯಾಯದ ಮುನ್ಸೂಚನೆ ಆಗಿದೆ. ಜೀವದ ಗೆಳೆಯ ರಕ್ಷಿತ್ ಶೆಟ್ಟಿನ ಕೂಡ ಅನ್ಫಾಲೋ ಮಾಡೋ ಮೂಲಕ ಅಚ್ಚರಿ ಮೂಡಿಸಿದ್ದಾರೆ ಶೆಟ್ರು. ಅಷ್ಟೇ ಅಲ್ಲ, ಕಷ್ಟ ಪಟ್ಟು ಕೋಟೆ ಕಟ್ಟಿಕೊಂಡಿರೋ ರಿಷಬ್, ಸದ್ಯ ತನ್ನ ಕೋಟೆ ಕೊತ್ತಲಗಳನ್ನ ವಿಸ್ತರಿಸೋಕೆ ನಾಂದಿ ಹಾಡಿದಂತಿದೆ.
ರಿಷಬ್ ಶೆಟ್ಟಿ ಝೀರೋದಿಂದ ಹೀರೋ ಆದವ್ರು. ಅದೆಷ್ಟೋ ಮಂದಿ ಸಿನಿಮೋತ್ಸಾಹಿಗಳಿಗೆ ರೋಲ್ ಮಾಡೆಲ್. ಶ್ರದ್ಧೆ, ಭಕ್ತಿ, ಪ್ರಾಮಾಣಿಕ ಪ್ರಯತ್ನಗಳಿಂದ ಸಕ್ಸಸ್ ಪಡೆಯಬಹುದು ಅನ್ನೋದನ್ನ ತೋರಿಸಿಕೊಟ್ಟವರು. ಹೋಟೆಲ್ ಕೆಲಸ, ವಾಟರ್ ಕ್ಯಾನ್ ಹಾಕೋದ್ರಿಂದ ಹಿಡಿದು ಸಣ್ಣ ಪುಟ್ಟ ಕೆಲಸ ಮಾಡಿ ಜೀವನ ಸಾಗಿಸ್ತಿದ್ದ ರಿಷಬ್, ಇಂದು ಭಾರತೀಯ ಚಿತ್ರರಂಗದ ಸೆನ್ಸೇಷನಲ್ ಡೈರೆಕ್ಟರ್ ಕಮ್ ಆ್ಯಕ್ಟರ್.
ರಕ್ಷಿತ್ ಕೂಡ ಅನ್ಫಾಲೋ.. ರಿಷಬ್ ಶೆಟ್ಟಿ ಹೊಸ ಲೆಕ್ಕಾಚಾರ
ಅಧ್ಯಾಯ-2 ಇಲ್ಲಿಂದ ಶುರು.. ಸಾಮ್ರಾಜ್ಯ ವಿಸ್ತರಣೆಗೆ ಮುನ್ನುಡಿ
ಕಾಂತಾರ ಅನ್ನೋ ಸಿನಿಮಾದಿಂದ ನಮ್ಮ ಕರಾವಳಿ ಸಂಸ್ಕೃತಿಯನ್ನ ವಿಶ್ವಕ್ಕೆ ಪರಿಚಯಿಸಿದ ಶೆಟ್ರು, ಕಾಂತಾರ ಪ್ರೀಕ್ವೆಲ್ ಹಾಗೂ ಕಾಂತಾರ ಸಿನಿಮಾಗಳಿಂದ ಸಾವಿರಾರು ಕೋಟಿ ಬ್ಯುಸಿನೆಸ್ ಕೂಡ ಮಾಡಿದ್ರು. ಡಿವೈನ್ ಸ್ಟಾರ್ ಆಗಿ ಮಿಂಚು ಹರಿಸುತ್ತಿದ್ದಾರೆ. ಆದ್ರೆ ಇತ್ತೀಚಗೆ ಅವರು ಹೊಂಬಾಳೆ ಫಿಲಂಸ್ ಹಾಗೂ ರುಕ್ಮಿಣಿ ವಸಂತ್ರನ್ನ ತಮ್ಮ ಇನ್ಸ್ಟಾದಿಂದ ಅನ್ಫಾಲೋ ಮಾಡಿದ್ರು.
ಇದೀಗ ಜೀವದ ಗೆಳೆಯ ರಕ್ಷಿತ್ ಶೆಟ್ಟಿ, ರಾಜ್ ಬಿ ಶೆಟ್ಟಿ, ಪ್ರಮೋದ್ ಶೆಟ್ಟಿ ಸೇರಿದಂತೆ ಇಡೀ ಶೆಟ್ರ ಬಳಗವನ್ನ ಕೂಡ ಅನ್ಫಾಲೋ ಮಾಡಿದ್ದಾರೆ ರಿಷಬ್.
ರಿಷಬ್ ಅನ್ಫಾಲೋ ಮಾಡ್ತಿರೋದ್ರ ಹಿಂದೆ ಒಂದೊಳ್ಳೆ ಅರ್ಥವಿದೆ. ಆದ್ರೆ ಅಪಾರ್ಥ ಮಾಡಿಕೊಳ್ತಿದ್ದಾರೆ ಜನ. ಕಷ್ಟ ಪಟ್ಟು ಸಾಮ್ರಾಜ್ಯ ಕಟ್ಟಿರೋ ರಿಷಬ್, ಸದ್ಯ ಅದರ ಕೋಟೆ ಕೊತ್ತಲಗಳನ್ನ ಮತ್ತಷ್ಟು ಉದ್ದ ಅಗಲಕ್ಕೆ ವಿಸ್ತರಿಸೋಕೆ ಮುಂದಾಗಿದ್ದಾರೆ. ಟ್ರೆಂಡ್ನ ಫಾಲೋ ಮಾಡಿ, ಬ್ರ್ಯಾಂಡ್ ಕ್ರಿಯೇಟ್ ಮಾಡ್ತಿದ್ದಾರೆ. ಪತ್ನಿ ಪ್ರಗತಿ, ತಮ್ಮ ರಿಷಬ್ ಶೆಟ್ಟಿ ಫೌಂಡೇಷನ್ ಹಾಗೂ ಪ್ರೊಡಕ್ಷನ್ ಬ್ಯಾನರ್ ಪೇಜ್ಗಳನ್ನ ಬಿಟ್ರೆ ಶೆಟ್ರು ಮತ್ಯಾರನ್ನೂ ಫಾಲೋ ಮಾಡ್ತಿಲ್ಲ. 17 ಲಕ್ಷ ಫಾಲೋವರ್ಸ್ ಇರೋ ರಿಷಬ್ ಸದ್ಯ ಮೂರೇ ಮೂರು ಅಕೌಂಟ್ಸ್ನ ಫಾಲೋ ಮಾಡ್ತಿದ್ದಾರೆ.
ಆ ಅನ್ಫಾಲೋ ಹಿಂದಿನ ಅರ್ಥ ಆಗಬಾರದಾಗಿದೆ ಅಪಾರ್ಥ
ಶೆಟ್ರು ಬದಲಾಗಿಲ್ಲ.. ಟ್ರೆಂಡ್ಗೆ ತಕ್ಕನಾಗಿ ಬ್ರ್ಯಾಂಡ್ ಆಗ್ತಿದ್ದಾರಷ್ಟೇ
ಇತ್ತೀಚೆಗೆ ಅಧ್ಯಾಯ-2 ಇಲ್ಲಿಂದ ಶುರು ಅನ್ನೋ ಪೋಸ್ಟ್ ಹಾಕಿದ್ರು ರಿಷಬ್. ಅಫ್ ಕೋರ್ಸ್ ತಮ್ಮ ಕರಿಯರ್ನಲ್ಲಿ ಮತ್ತೊಂದು ನ್ಯೂ ಚಾಪ್ಟರ್ ಆರಂಭಿಸೋದ್ರಲ್ಲಿ ತಪ್ಪೇನಿಲ್ಲ. ಕಷ್ಟ ಪಟ್ಟು ಝೀರೋನಿಂದ ಹೀರೋ ಆಗಿರೋ ಶೆಟ್ರು, ತಮ್ಮದೇ ಪ್ರೊಡಕ್ಷನ್ ಬ್ಯಾನರ್ನಡಿ ಇಷ್ಟ ಬಂದ ಸಿನಿಮಾಗಳನ್ನ ಮಾಡ್ತಾ ಕಲಾ ಸೇವೆ ಮಾಡುವ ಮಹತ್ವದ ಹೆಜ್ಜೆ ತಪ್ಪು ಅಂತ ಹೇಳಲಾಗದು.
ಇತ್ತೀಚೆಗೆ ಜೈ ಹನುಮಾನ್ ಸಿನಿಮಾದ ಮುಹೂರ್ತ ಕೂಡ ನೆರವೇರಿದ್ದು, ತೆಲುಗು ಡೈರೆಕ್ಟರ್ ಜೊತೆ ರಾಮ ಭಂಟ ಹನುಮನಾಗಿ ರಿಷಬ್ ಮತ್ತಷ್ಟು ಭಕ್ತಿಯ ಪರಾಕಾಷ್ಟೆ ಹೆಚ್ಚಿಸಲಿದ್ದಾರೆ ಅನ್ನೋದು ಮಾತ್ರ ಸ್ಪಷ್ಟ.
