ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲಂಸ್ ನಡುವೆ ಬಿರುಕು ಮೂಡಿದೆ. ಅಂಥದ್ದೊಂದು ಗಾಸಿಪ್ಗೆ ಖುದ್ದು ಶೆಟ್ರೇ ಮುನ್ನುಡಿ ಬರೆದಿದ್ದಾರೆ. ಅರೇ ಮೊನ್ನೆಯಷ್ಟೇ ಕಾಂತಾರ ಚಾಪ್ಟರ್-1 ಟೀಂ ಎಲ್ಲಾ ಸೇರಿ ಸಕ್ಸಸ್ನ ಸಂಭ್ರಮಿಸಿದ್ರಲ್ಲಾ..? ಅಷ್ಟರಲ್ಲೇ ಅಂಥದ್ದೇನಾಯ್ತು ಅಂತ ಹುಬ್ಬೇರಿಸೋಕೂ ಮುನ್ನ ಈ ಸ್ಟೋರಿ ಒಮ್ಮೆ ನೋಡಿ.
ಕಾಂತಾರ ಆಯ್ತು ಕಾಂತಾರ ಚಾಪ್ಟರ್-1 ಕೂಡ ಆಯ್ತು.. ಎರಡೂ ಬ್ಲಾಕ್ ಬಸ್ಟರ್ ಹಿಟ್ಗಳೇ. ಸದ್ಯ ಎಲ್ಲರ ಚಿತ್ತ ಕಾಂತಾರ ಚಾಪ್ಟರ್-2 ಮೇಲೆ ನೆಟ್ಟಿದೆ. ಆದ್ರೆ ಇದೀಗ ಕಾಂತಾರ ಕ್ರಿಯೇಟರ್ ರಿಷಬ್ ಶೆಟ್ಟಿ ಹಾಗೂ ನಿರ್ಮಾಣ ಸಂಸ್ಥೆ ಹೊಂಬಾಳೆ ನಡುವೆ ಮನಸ್ತಾಪ ಏರ್ಪಟ್ಟಿದೆ.
ಹೊಂಬಾಳೆ-ರಿಷಬ್ ನಡುವೆ ಬಿರುಕು.. ಏನಾಗಿದೆ ಗೊತ್ತಾ..?
ಇನ್ಸ್ಟಾದಲ್ಲಿ ಶೆಟ್ರಿಂದ ಹೊಂಬಾಳೆ ಪೇಜ್ ಅನ್ಫಾಲೋ..!
ಈ ಅಂತೆ ಕಂತೆಗಳಿಗೆ ಪುಷ್ಟಿ ನೀಡುವಂತೆ ರಿಷಬ್ ಶೆಟ್ರು ಹೊಂಬಾಳೆ ಫಿಲಂಸ್ ಅಫಿಶಿಯಲ್ ಇನ್ಸ್ಟಾ ಪೇಜ್ ಹಾಗೂ ಕಾಂತಾರ ಅಫಿಶಿಯಲ್ ಪೇಜ್ಗಳನ್ನ ಅನ್ಫಾಲೋ ಮಾಡಿದ್ದಾರೆ. ಯಾವಾಗ ಅನ್ಫಾಲೋ ಮಾಡಿದ್ರೋ ಆಗ ಇಬ್ಬರ ನಡುವೆ ಬಿರುಕುಂಟಾಗಿದೆ ಅನ್ನೋದು ಸ್ಪಷ್ಟವಾಗ್ತಿದೆ. ಯಾಕಂದ್ರೆ ಇತ್ತೀಚೆಗೆ ತೆಲುಗಿನ ಬ್ಯಾನರ್ ಜೊತೆ ರಿಷಬ್ ಜೈ ಹನುಮಾನ್ ಸಿನಿಮಾದ ಮುಹೂರ್ತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು. ಇದೀಗ ಈ ತರಹದ ಸುದ್ದಿ ಭುಗಿಲೆದ್ದಿರೋದು ಇಡೀ ಕರುನಾಡಿನ ಮಂದಿಗೆ ಅಚ್ಚರಿ ತಂದಿದೆ.
ಕಾಂತಾರ ಸಿನಿಮಾ 450 ಕೋಟಿ, ಕಾಂತಾರ ಚಾಪ್ಟರ್-1 ಸಿನಿಮಾ 900 ಕೋಟಿ ಗಳಿಸೋ ಮೂಲಕ ವಿಶ್ವದ ಗಮನ ಸೆಳೆದಿದ್ದವು. ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ್ದ ಈ ಸಿನಿಮಾಗಳಿಗಾಗಿ ಬೆವರಿನ ಜೊತೆ ರಕ್ತ ಹರಿಸಿ, ಸಾವಿನ ಜೊತೆಗೂ ಸರಸ ಆಡಿದ್ರು. ಅದ್ಭುತ ಮೂವಿ. ಅತ್ಯದ್ಭುತ ಮೇಕಿಂಗ್. ಮನಮೋಹನಕ ನಟನೆ ಅಂತ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು ಶೆಟ್ರು. ಇನ್ನೂ ಕಾಂತಾರ ಚಾಪ್ಟರ್-1ರ ನಟನೆ & ನಿರ್ದೇಶನಕ್ಕಾಗಿ 25 ಕೋಟಿ ಸಂಭಾವನೆ ಹಾಗೂ ಬರುವ ಲಾಭದಲ್ಲಿ 20 % ಶೇರ್ ಕೂಡ ಪಡೆದಿದ್ದಾರಂತೆ ರಿಷಬ್ ಶೆಟ್ರು. ಹಾಗಾದ್ರೆ ಇಲ್ಲಿ ರೆಮ್ಯುನರೇಷನ್ ಕೂಡ ಮನಸ್ತಾಪಕ್ಕೆ ಕಾರಣವಾಗಿಲ್ಲ ಅನ್ನೋದು ಸ್ಪಷ್ಟ.
25 ಕೋಟಿ & ಪ್ರಾಫಿಟ್ನಲ್ಲಿ 20% ಶೇರ್ ಪಡೆದಿದ್ದ ರಿಷಬ್
ಗ್ಯಾರಂಟಿ ನ್ಯೂಸ್ನಲ್ಲಿ ಮನಸ್ತಾಪದ ಎಕ್ಸ್ಕ್ಲೂಸಿವ್ ಸ್ಟೋರಿ
ಇಷ್ಟೆಲ್ಲಾ ಆದ್ಮೇಲೆ ಬೇರೆ ಏನು ಕಾರಣ ಆಗಿರಬಹುದು ಅಂತ ನೋಡಿದ್ರೆ.. ರಿಷಬ್ ಶೆಟ್ಟಿ ಇಲ್ಲಿ ಹೊಂಬಾಳೆ ಫಿಲಂಸ್ಗೆ ಕೊಟ್ಟ ಮಾತನ್ನು ತಪ್ಪಿದ್ದಾರೆ ಎನ್ನಲಾಗ್ತಿದೆ. ಅದೇನಪ್ಪಾ ಅಂದ್ರೆ ಕಾಂತಾರ ಚಾಪ್ಟರ್-2 ತನಕ ಬೇರೆ ಯಾವ ಸಿನಿಮಾಗೂ ಕಮಿಟ್ ಆಗಲ್ಲ ಅಂದಿದ್ರಂತೆ ಶೆಟ್ರು. ಆದ್ರೀಗ ಕಾಂತಾರ-1 ಮುಗೀತಾ ಇದ್ದಂತೆ ಸಡನ್ ಆಗಿ ಜೈ ಹನುಮಾನ್ಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಇದು ಕಾಂತಾರ ನಿರ್ಮಾಣ ಸಂಸ್ಥೆ ಹೊಂಬಾಳೆಗೆ ಅಸಮಾಧಾನ ತಂದಿದೆ. ಕೊಟ್ಟ ಮಾತನ್ನ ತಪ್ಪಿದ್ದೇಕೆ ಶೆಟ್ರು ಅಂತ ಬೇಸರಗೊಂಡಿದ್ದಾರೆ. ಅದೇ ಕಾರಣಕ್ಕೆ ಹೊಂಬಾಳೆ ಹಾಗೂ ರಿಷಬ್ ನಡುವೆ ಸಣ್ಣ ಕೋಳಿ ಜಗಳ ಅನ್ನೋದು ಬಲ್ಲ ಮೂಲಗಳ ಮಾಹಿತಿ.
ಇದು ತುಂಬಾ ತಲೆಕೆಡಿಸಿಕೊಳ್ಳುವ ಮ್ಯಾಟರ್ ಅಲ್ಲವೇ ಅಲ್ಲ. ಯಾಕಂದ್ರೆ ರಿಷಬ್ ಶೆಟ್ಟಿ ಜಗ ಮೆಚ್ಚಿದ ನಿರ್ದೇಶಕ ಕಮ್ ನಟ. ಇತ್ತ ಹೊಂಬಾಳೆ ಫಿಲಂಸ್ ಕೂಡ ಕನ್ನಡ ಚಿತ್ರರಂಗದತ್ತ ಇಡೀ ವಿಶ್ವವನ್ನೇ ತಿರುಗಿ ನೋಡುವಂತೆ ಮಾಡಿದ ಬಿಗ್ಗೆಸ್ಟ್ ಪ್ರೊಡಕ್ಷನ್ ಹೌಸ್. ನಮ್ಮ ನಾಡು, ನುಡಿ, ಸಂಸ್ಕೃತಿಯನ್ನ ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಹೊಂಬಾಳೆಯ ಪಾತ್ರ ಮಹತ್ವದ್ದು. ಹೀಗಾಗಿ ಇದನ್ನ ಬಹಳ ಮೆಚೂರ್ಡ್ ಆಗಿ ಅತ್ಯರ್ಥ ಮಾಡಿಕೊಳ್ತಾರೆ ಅನ್ನೋ ಭರವಸೆಯಿದೆ. ಹಾಗಾಗಿ ಈ ಕುರಿತು ಸದ್ಯದಲ್ಲೇ ಗುಡ್ ನ್ಯೂಸ್ ಹೊರಬರುವ ನಿರೀಕ್ಷೆ ಇದೆ.
