ದೊಡ್ಮನೆ ಸೊಸೆ ಅಶ್ವಿನಿ ಕಾಲ್ಗುಣ..ಒಂದಲ್ಲ ಎರಡಲ್ಲ RCBಗೆ 4 ಕಪ್

ಆಡಿಕೊಳ್ಳೋರ ಬಾಯಿ ಮುಚ್ಚಿಸಿದ PRK ಒಡತಿ ಅಶ್ವಿನಿ ಪುನೀತ್

Untitled design 2026 06 09T164608.653

ದೊಡ್ಮನೆ ಸೊಸೆ.. ಪಿಆರ್‌ಕೆ ಒಡತಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಜೆರ್ಸಿ ಲಾಂಚ್ ಮಾಡಿದ್ದು ಮಾಡಿದ್ದೇ, ಸಾಲು ಸಾಲು ಟ್ರೋಫಿಗಳು ನಮ್ಮ RCB ಪಾಲಾಗ್ತಿವೆ. ಆಗ ಆಕೆ ವಿಧವೆ.. ಇನ್ಮೇಲೆ ಕಪ್ ಗೆಲ್ಲೋದು ಕನಸು ಮಾತ್ರ ಅಂತೆಲ್ಲಾ ಆಡಿಕೊಂಡಿದ್ದವ್ರಿಗೆ ದೊಡ್ಮನೆ ದೇವತೆಯ ಕಾಲ್ಗುಣ ಎಂಥದ್ದು ಅನ್ನೋದ್ರ ಅರಿವಾಗಿದೆ. ಆಡಿಕೊಳ್ಳೋರೆಲ್ಲಾ ಕೈ ಕಟ್ಟಿ, ಬಾಯಿ ಮುಚ್ಚುವಂತಾಗಿದೆ. ಈ ಕುರಿತ ಒಂದು ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ..

ಆರ್‌‌ಸಿಬಿ.. ಇದು ಬರೀ ಇಂಡಿಯನ್ ಪ್ರೀಮಿಯರ್ ಲೀಗ್‌‌ನಲ್ಲಿರೋ ಫ್ರಾಂಚೈಸ್ ಮಾತ್ರವಲ್ಲ. ನಮ್ಮ ಕನ್ನಡಿಗರ ಎಮೋಷನ್ ಕೂಡ ಹೌದು. ವಿರಾಟ್ ಕೊಹ್ಲಿ ಖಾಯಂ ಆಗಿರೋ ನಮ್ಮ ರಾಯಲ್ ಚಾಲೆಂಜರ್ಸ್ ಟೀಂಗೆ ನಾವು ಕನ್ನಡಿಗರು ಎಷ್ಟು ಲಾಯಲ್ ಆಗಿದ್ದೀವೋ, ಸ್ಮೃತಿ ಮಂದಾನ ಲೀಡ್ ಮಾಡ್ತಿರೋ ಮಹಿಳಾ ಆರ್‌ಸಿಬಿ ಟೀಂಗೂ ಅಷ್ಟೇ ಫ್ಯಾನ್ಸ್ ಫಾಲೋಯಿಂಗ್ ಇದೆ.

ಅದೇ ರೀತಿ ನಮ್ಮ ಸ್ಯಾಂಡಲ್‌‌ವುಡ್‌ನ ನಗುಮುಖದ ಒಡೆಯ, ಕರ್ನಾಟಕರತ್ನ, ರಾಜರತ್ನ ಡಾ ಪುನೀತ್ ರಾಜ್‌ಕುಮಾರ್ ಕೂಡ ಬರೀ ನಟರಷ್ಟೇ ಅಲ್ಲ. ಅಪ್ಪು ತಮ್ಮ ವ್ಯಕ್ತಿತ್ವದಿಂದ ಕನ್ನಡಿಗರ ಹೃದಯ ಸಿಂಹಾಸನದ ಒಡೆಯ. ಅಪ್ಪು ಅಂದ್ರೇ ಆಪ್ಯಾಯತೆ. ಎಮೋಷನ್. ಮನೆ ಮಗನಂತೆ ಪ್ರೀತಿಸೋ, ಇಷ್ಟ ಪಡೋ ಕನ್ನಡಿಗರು ಅವ್ರನ್ನ ಕಳೆದುಕೊಂಡೆವು. ಆದ್ರೆ ಅಪ್ಪುನ ಕಳೆದುಕೊಂಡು ಒಂಟಿಯಾಗಿದ್ದ ಅಶ್ವಿನಿ ಪುನೀತ್ ರಾಜ್‌ಕುಮಾರ್ ಕೈಯಿಂದ 2024ರಲ್ಲಿ ಆರ್‌ಸಿಬಿ ಜೆರ್ಸಿ ಲಾಂಚ್ ಮಾಡಿಸಿತ್ತು ರಾಯಲ್ ಚಾಲೆಂಜರ್ಸ್ ಟೀಂ.

ಅಪ್ಪು ನೆಚ್ಚಿನ ಮಡದಿ.. ಪಿಆರ್‌ಕೆ ಒಡತಿ.. ದೊಡ್ಮನೆಯ ಸೊಸೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಆರ್‌ಸಿಬಿ ಜೆರ್ಸಿ ಲಾಂಚ್ ಮಾಡಿದಾದ ಆಕೆ ವಿಧವೆ. ಗಂಡ ಇಲ್ಲದವರು. ಹಾಗಾಗಿ ಅದು ನಮ್ಮ ಆರ್‌ಸಿಬಿಗೆ ಅಶುಭ ಅಂತೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ಆಕೆಯನ್ನ ನಿಂದಿಸಿ, ಆಡಿಕೊಂಡಿದ್ರು. ಆದ್ರೆ ಹಾಗೆ ಆಡಿಕೊಂಡಂತಹ ಎಲ್ಲಾ ವಿಕೃತ ಮನಸ್ಸುಗಳಿಗೆ ತಕ್ಕ ಉತ್ತರ ಕೊಡುವಂತೆ ಅದೇ ವರ್ಷ ಅಂದ್ರೆ 2024ರಲ್ಲೇ ಆರ್‌ಸಿಬಿ ಮಹಿಳಾ ಟೀಂ ಟ್ರೋಫಿ ಗೆದ್ದು, ಚಾಂಪಿಯನ್ಸ್ ಅನಿಸಿಕೊಂಡರು. ಈ ವರ್ಷ ಕೂಡ ಒನ್ಸ್ ಅಗೈನ್ ಆರ್‌ಸಿಬಿ ವುಮೆನ್ ಟೀಂ ಗೆದ್ದು ಬೀಗಿದ್ರು.

ಅಷ್ಟೇ ಅಲ್ಲ.. ನಮ್ಮ ಆರ್‌ಸಿಬಿ ಪುರುಷರ ಟೀಂ, 17 ವರ್ಷಗಳಲ್ಲಿ ಸಾಧಿಸಲಾಗದ್ದನ್ನ ಕಳೆದ ವರ್ಷ 18ನೇ ವರ್ಷದಲ್ಲಿ ಟ್ರೋಫಿ ಗೆಲ್ಲೋ ಮೂಲಕ ಚಾಂಪಿಯನ್ಸ್ ಅನಿಸಿಕೊಂಡರು. ಕಳೆದ ವರ್ಷ ಅಷ್ಟೇ ಅಲ್ಲ, ರಜತ್ ಪಟೀದಾರ್ ನಾಯಕತ್ವದಲ್ಲಿ ಈ ವರ್ಷ ಕೂಡ ಎರಡನೇ ಬಾರಿ ಚಾಂಪಿಯನ್ಸ್ ಪಟ್ಟಕ್ಕೇರಿದ್ರು. ಇದಲ್ಲವೇ ದೊಡ್ಮನೆ ದೇವತೆಯ ಕಾಲ್ಗುಣ.. ಇದಲ್ಲವೇ ಅಪ್ಪು ಮನದನ್ನೆಯ ಅದೃಷ್ಟದಾಟ. ಇವರೇ ಅಲ್ಲವೇ.. ನಮ್ಮ ಆರ್‌ಸಿಬಿ ಪಾಲಿನ ಅದೃಷ್ಟ ದೇವತೆ..? ಈಗ ಬಂದು ಮಾತಾಡಲಿ ಅಂದು ಆಡಿಕೊಂಡವರೆಲ್ಲಾ.

ಹೆಣ್ಣನ್ನ ನಿಂದಿಸೋಕೆ ಮುನ್ನ ಎಚ್ಚರ ಇರಲಿ. ಹೆಣ್ಣು ನಾರಿ. ಮಾತೃಶ್ರೀ. ಹೆಣ್ಣು ಇದ್ದ ಕಡೆ ದೇವತೆ ನೆಲೆಸಿರುತ್ತಾಳೆ ಅನ್ನೋ ಮಾತು ಸುಳ್ಳಲ್ಲ. ಅಶ್ವುನಿ ಪುನೀತ್ ರಾಜ್‌‌ಕುಮಾರ್ ಸದ್ಯ ಆರ್‌ಸಿಬಿ ಫ್ರಾಂಚೈಸ್ ಪಾಲಿಗೆ ಲಕ್ಕಿ ಚಾರ್ಮ್. ಈ ಚಾಂಪಿಯನ್ಸ್ ಪಟ್ಟ ಹೀಗೆಯೇ ಮುಂದುವರೆಯಲಿ.. ಮುಂದುವರೆಯಲಿದೆ ಅನ್ನೋದು ಅಸಂಖ್ಯಾತ ಅಪ್ಪು ಹಾಗೂ ಆರ್‌ಸಿಬಿ ಅಭಿಮಾನಿಗಳ ಆಶಯವಾಗಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version