ರಕ್ಷಿತ್, ರಶ್ಮಿಕಾ ಮತ್ತು ವಿಜಯ್.. ಇದೊಂಥರಾ ಟ್ರಯಾಂಗಲ್ ಲವ್ ಸ್ಟೋರಿ. ಮುಗಿಸೋಣ ಅಂದ್ರೂ ಮುಗಿಯದ ಪ್ರೇಮ ಪರ್ವ. ಯೆಸ್.. ರಕ್ಷಿತ್-ರಶ್ಮಿಕಾ ಸಂಬಂಧ ಮುರಿದು ಬೀಳಲು ಗೀತ ಗೋವಿಂದಂ ಚಿತ್ರದ ಲಿಪ್ಕಿಸ್ ಕಾರಣವಲ್ಲ, ಮನೆ ಕಟ್ಟೋ ವಿಚಾರಕ್ಕೆ ಎನ್ನಲಾಗ್ತಿದೆ. ಆತ ಮನೆ ಕಟ್ಟಲು ಸಂಬಂಧ ಕಡಿದುಕೊಂಡ್ರೆ, ಇತ್ತ ವಿಜಯ್ ಮದ್ವೆ ಆಗಿದ ಮರುದಿನವೇ ಮನೆ ಗೃಹ ಪ್ರವೇಶ ಮಾಡಿ, ತನ್ನ ಮಡದಿಯ ಮಾಜಿ ಪ್ರಿಯಕರನಿಗೆ ಬಿಗ್ ಶಾಕ್ ನೀಡಿದ್ದಾರೆ.
- ಆತ ಮನೆ ಕಟ್ಟಲು ಸಂಬಂಧ ಕಡಿದುಕೊಂಡ..ಈತ ಮನೆ ಕಟ್ಟಿ ಸಂಬಂಧ ಬೆಳೆಸಿದ
- ರಕ್ಷಿತ್, ರಶ್ಮಿಕಾ & ವಿಜಯ್.. ಟ್ರಯಾಂಗಲ್ ಪ್ರೇಮ್ ಕಹಾನಿ
- ರಶ್ಮಿಕಾ-ರಕ್ಷಿತ್ ಬ್ರೇಕಪ್ ಕಾರಣ ವಿಜಯ್ ಲಿಪ್ ಕಿಸ್ ಅಲ್ಲ
- ಮಡದಿ ಮಾಜಿ ಪ್ರಿಯಕರನಿಗೆ ದೇವರಕೊಂಡ ಕೊಟ್ರು ಶಾಕ್
ಕೆಲವೊಂದು ಪ್ರೇಮಕಥೆಗಳೇ ಹಾಗೆ.. ಮರೆಯೋಣವೆಂದ್ರೂ ಮರೆಯಲಾಗದಷ್ಟು ಆಳ ಹಾಗೂ ಅಗಲವಾಗಿರುತ್ತವೆ. ಐ ಮೀನ್ ಸಿಕ್ಕಾಪಟ್ಟೆ ಇಂಟೆನ್ಸ್ ಆಗಿರುತ್ತವೆ. ರಶ್ಮಿಕಾ ಮಂದಣ್ಣ 2017ರಲ್ಲಿ ಕಿರಿಕ್ ಪಾರ್ಟಿ ಚಿತ್ರದ ತನ್ನ ಕೋ ಸ್ಟಾರ್ ರಕ್ಷಿತ್ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡು, ನಂತ್ರ ಬ್ರೇಕಪ್ ಕೂಡ ಮಾಡಿಕೊಂಡಿದ್ರು. ಅಂದಹಾಗೆ ಅದು ಅರೇಂಜ್ ಮ್ಯಾರೇಜ್ ಅಂತೂ ಅಲ್ಲವೇ ಅಲ್ಲ. ಯಾಕಂದ್ರೆ ರಕ್ಷಿತ್-ರಶ್ಮಿಕಾ ಪರಸ್ಪರ ಪ್ರೀತಿಸಿಯೇ ಹೊಸ ಬಾಳಿಗೆ ಕಾಲಿಡಲು ಸಜ್ಜಾಗಿದ್ದರು.
ಆದ್ರೀಗ ರಶ್ಮಿಕಾ ತಮ್ಮ ಬಹುಕಾಲದ ಗೆಳೆಯ ವಿಜಯ್ ದೇವರಕೊಂಡ ಕೈ ಹಿಡಿಯೋ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 9 ವರ್ಷಗಳಾದ್ರೂ, ಮದ್ವೆ ಆಗಿ ರಿಸೆಪ್ಷನ್ ವೇದಿಕೆಗೆ ಹೋಗೋಕೆ ಸಜ್ಜಾಗಿದ್ರೂ ಸಹ, ಇಂದಿಗೂ ರಶ್ಮಿಕಾ-ರಕ್ಷಿತ್ ಲವ್ ಸ್ಟೋರಿ ಸುದ್ದಿಯಲ್ಲಿದೆ. ಅದಕ್ಕೆ ಕಾರಣ ವಿಜಯ್ ದೇವರಕೊಂಡ ಮದುವೆ ಬಳಿಕ ತನ್ನ ಮಡದಿ ಸಮೇತ ಹುಟ್ಟಿದೂರಿಗೆ ತೆರಳಿ, ಫಾರ್ಮ್ ಹೌಸ್ನಲ್ಲಿ ಕಟ್ಟಿರೋ ಮನೆಯ ಗೃಹಪ್ರವೇಶ ಮಾಡಿರೋದು.
ಯೆಸ್.. ತೆಲಂಗಾಣದ ನಾಗರ್ ಕರ್ನೂಲ್ ಜಿಲ್ಲೆಯ ಬಲ್ಮೂರ್ ಮಂಡಲ್ನ ತುಮ್ಮನ್ ಪೇಟಾ ನಟ ವಿಜಯ್ ದೇವರಕೊಂಡ ಹುಟ್ಟಿದೂರು. ಆತ ಎಷ್ಟೇ ಎತ್ತರಕ್ಕೆ ಬೆಳೆದರೂ ಸಹ, ತಮ್ಮ ಮೂಲ ಬೇರುಗಳನ್ನ ಮಾತ್ರ ಮರೆತಿಲ್ಲ. ಹೈದ್ರಾಬಾದ್ನಲ್ಲಿ 30 ಕೋಟಿ ಐಷಾರಾಮಿ ಮನೆ ಇದ್ದುಕೊಂಡು, ತುಮ್ಮನ್ ಪೇಟಾದಲ್ಲಿರೋ ತಮ್ಮ ಫಾರ್ಮ್ ನಲ್ಲಿ ಹೊಸ ಮನೆ ಕಟ್ಟಿಸಿದ್ದಾರೆ. ಅದ್ರ ಗೃಹ ಪ್ರವೇಶವನ್ನ ನೂತನ ಮಡದಿ ಜೊತೆ ಕೂತು ನೆರವೇರಿಸಿದ್ದಾರೆ. ಸತ್ಯ ನಾರಾಯಣ ಪೂಜೆ ಮಾಡಿಸಿ, ಇಡೀ ಊರಿಗೇ ಊಟ ಕೂಡ ಹಾಕಿಸಿದ್ದಾರೆ.
ಅಂದಹಾಗೆ ವಿಜಯ್ ಈ ಹೊಸ ಮನೆಗೂ ರಶ್ಮಿಕಾ-ರಕ್ಷಿತ್ ಬ್ರೇಕಪ್ಗೂ ಏನು ಕಾರಣ ಅಂತ ಹುಬ್ಬೇರಿಸಬೇಡಿ. ಯಾಕಂದ್ರೆ ಅದಕ್ಕೊಂದು ಅವಿನಾಭಾವ ಸಂಬಂಧವಿದೆ. ನಟ ರಕ್ಷಿತ್ ಶೆಟ್ಟಿ ರಶ್ಮಿಕಾನ ಮದ್ವೆ ಆಗಿ ಬೆಂಗಳೂರಿನಲ್ಲಿ ಒಂದು ಐಷಾರಾಮಿ ಬಂಗಲೆ ಕಟ್ಟುವ ಕನಸು ಕಂಡಿದ್ದರು. ಅದಕ್ಕಾಗಿ ರಶ್ಮಿಕಾ ಪೋಷಕರ ಬಳ ಹಣ ಕೂಡ ಕೇಳಿದ್ದರಂತೆ. ಆದ್ರೆ ಹಣ ನೀಡಲು ನಿರಾಕರಿಸಿದ್ರು ರಶ್ಮಿಕಾ ತಾಯಿ. ಅದೇ ಅವ್ರ ಸಂಬಂಧ ಮುರಿದು ಬೀಳಲು ಕಾರಣವಾಯ್ತು ಅನ್ನೋದು ವೆಬ್ಪೋರ್ಟಲ್ಗಳಲ್ಲಿ ಸುದ್ದಿಯಾಗಿದೆ. ಹಾಗಾಗಿ ಮಡದಿಯ ಮಾಜಿ ಪ್ರಿಯಕರ ರಕ್ಷಿತ್ಗೆ ಉರಿಸೋಕೆ ಅಂತಲೇ ವಿಜಯ್ ಹೊಸ ಮನೆಯ ಗೃಹ ಪ್ರವೇಶ ಮಾಡಿದ್ರಾ ಅನ್ನೋ ಚರ್ಚೆಗಳು ಶುರುವಾಗಿವೆ.
ವಿರೋಶ್ ವೆಡ್ಡಿಂಗ್ನ ಒಂದೊಂದೇ ವಿಡಿಯೋ ಹಾಗೂ ಫೋಟೋಗಳು ಹೊರ ಬರುತ್ತಿವೆ. ಸಂಗೀತ್ ಪಾರ್ಟಿಯಲ್ಲಿ ರಾಯಲ್ ಲುಕ್ನಲ್ಲಿ ಮಿಂಚಿದ ರಶ್ಮಿಕಾ-ವಿಜಯ್ ನ್ಯೂ ಪೋಸ್ಟ್ ಮೂಲಕ ಸಂತೋಷದ ಕ್ಷಣಗಳನ್ನ ಹಂಚಿಕೊಂಡಿದ್ರು. ನಾಳೆ ಅಂದ್ರೆ ಮಾರ್ಚ್ 4ರಂದು ಹೈದ್ರಾಬಾದ್ನಲ್ಲಿರೋ ತಾಜ್ ಕೃಷ್ಣ ಪಂಚತಾರಾ ಹೋಟೆಲ್ನಲ್ಲಿ ವಿರೋಶ್ ಆರತಕ್ಷತಾ ಮಹೋತ್ಸವ ನೆರವೇರಲಿದೆ. ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಕುಟುಂಬಕ್ಕೂ ಆರತಕ್ಷತೆಗೆ ಆಹ್ವಾನ ನೀಡಿದ್ದಾರೆ ರಶ್ಮಿಕಾ ಮಂದಣ್ಣ. ಸೋ.. ದೇಶಕ್ಕೆ ಸ್ವೀಟ್ಸ್ ಹಂಚಿ, ಅನ್ನದಾನ ಕೂಡ ಮಾಡಿರೋ ವಿರೋಶ್ ಸಿಕ್ಕಾಪಟ್ಟೆ ಖುಷಿಯಲ್ಲಿ ತೇಲುತ್ತಿದ್ದಾರೆ. ಇನ್ನೂ ನಾಳೆ ಯಾರೆಲ್ಲಾ ಇವ್ರ ರಾಯಲ್ ರಿಸೆಪ್ಷನ್ಗೆ ಸಾಕ್ಷಿ ಆಗ್ತಾರೆ ಅನ್ನೋದನ್ನ ಕಾದು ನೋಡಬೇಕು.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
