ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
ಬಾಲಿವುಡ್ ಅಂಗಳದಲ್ಲಿ ಈಗ ‘ಧುರಂಧರ್ 2’ ಸಕ್ಸಸ್ನದ್ದೇ ಸದ್ದು. ಒಂದು ಕಡೆ ಬಾಕ್ಸ್ ಆಫೀಸ್ನಲ್ಲಿ ರಣವೀರ್ ಸಿಂಗ್ ಅಬ್ಬರಿಸುತ್ತಿದ್ದರೆ, ಮತ್ತೊಂದೆಡೆ ಪಾರ್ಟಿಯೊಂದರಲ್ಲಿ ನಡೆದ ಘಟನೆ ಈಗ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಹಿಂದಿ ಚಿತ್ರರಂಗದ ಕಿಂಗ್ ಖಾನ್ ಶಾರುಖ್ ಅವರನ್ನು ರಣವೀರ್ ಕಡೆಗಣಿಸಿದರೇ? ಅಥವಾ ಯಶಸ್ಸಿನ ಅಮಲಿನಲ್ಲಿ ರಣವೀರ್ಗೆ ಬಾದ್ಶಾ ಕಾಣಿಸಲಿಲ್ಲವೇ? ಅಂಬಾನಿ ಮನೆಯ ಸಂಭ್ರಮದಲ್ಲಿ ನಡೆದ ಆ ಒಂದು ‘ಮಿಸ್ಸಿಂಗ್ ಮೊಮೆಂಟ್’ ಏನು..?ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ.
- ಕಿಂಗ್ ಖಾನ್ ಗೆ ಕ್ಯಾರೆ ಅನ್ನದ ರಣವೀರ್ ಸಿಂಗ್
- ರಣವೀರ್ ತಲೆಗೇರಿತೇ ‘ಧುರಂಧರ್ 2’ ಯಶಸ್ಸು..?
- ಬಾಲಿವುಡ್ನಲ್ಲಿ ಇಗೋ ಬ್ಯಾಟಲ್ ಶುರುವಾಯ್ತಾ..?
- ಕೆನ್ನೆ ಸವರಿದ ಶಾರುಖ್…ರಣವೀರ್ ನೋ ರೆಸ್ಪಾನ್ಸ್..!
ಅನಂತ್ ಅಂಬಾನಿ ಅವರ ಜನ್ಮದಿನದ ಪ್ರಯುಕ್ತ ಗುಜರಾತ್ನ ಜಾಮ್ನಗರದಲ್ಲಿ ಆಯೋಜಿಸಿದ್ದ ಅದ್ದೂರಿ ಪಾರ್ಟಿಯಲ್ಲಿ ಬಾಲಿವುಡ್ನ ತಾರೆಯರು ಭಾಗಿಯಾಗಿದ್ದರು. ಆದರೆ ಎಲ್ಲರ ಕಣ್ಣು ನೆಟ್ಟಿದ್ದು ಮಾತ್ರ ‘ಧುರಂಧರ್ 2’ ಚಿತ್ರದ ಅಭೂತಪೂರ್ವ ಯಶಸ್ಸಿನ ಸಂಭ್ರಮದಲ್ಲಿದ್ದ ರಣವೀರ್ ಸಿಂಗ್ ಮೇಲೆ. ಚಿತ್ರರಂಗದ ಹಿನ್ನೆಲೆ ಇದ್ದರೂ ಸಾಕಷ್ಟು ಏರಿಳಿತ ಕಂಡಿದ್ದ ರಣವೀರ್, ಈಗ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾ ನೀಡಿ ಎಲ್ಲರ ಗಮನ ಸೆಳೆದಿದ್ದಾರೆ. ಪಾರ್ಟಿಯಲ್ಲಿ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಜೊತೆ ಹರಟೆ ಹೊಡೆಯುತ್ತಿದ್ದ ರಣವೀರ್ ಸುತ್ತ ಅತಿಥಿಗಳ ದಂಡೇ ಇತ್ತು. ಈ ಯಶಸ್ಸಿನ ನಗು ರಣವೀರ್ ಮುಖದಲ್ಲಿ ಎದ್ದು ಕಾಣುತ್ತಿತ್ತು.
ಇದೇ ಸಮಾರಂಭದ ವಿಡಿಯೋವೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ರಣವೀರ್ ಸಿಂಗ್ ಸಂಭಾಷಣೆಯಲ್ಲಿ ಬ್ಯುಸಿಯಾಗಿದ್ದಾಗ ಅಲ್ಲಿಗೆ ಬಂದ ಶಾರುಖ್ ಖಾನ್, ಅತ್ಯಂತ ಆತ್ಮೀಯವಾಗಿ ರಣವೀರ್ ಹೆಗಲ ಮೇಲೆ ಕೈಹಾಕಿ, ಪ್ರೀತಿಯಿಂದ ಕೆನ್ನೆ ಸವರಿದ್ದಾರೆ. ಶಾರುಖ್ ಮ್ಯಾನೇಜರ್ ಪೂಜಾ ದದ್ಲಾನಿ ಕೂಡ ರಣವೀರ್ಗೆ ಶುಭ ಹಾರೈಸಿದ್ದಾರೆ. ಆದರೆ, ಶಾರುಖ್ ಇಷ್ಟೊಂದು ಪ್ರೀತಿ ತೋರಿಸಿದರೂ ರಣವೀರ್ ಮಾತ್ರ ಅದನ್ನು ಗಮನಿಸದಂತೆ ಮುಂದೆ ಸಾಗಿದ್ದು ಈಗ ಚರ್ಚೆಗೆ ಕಾರಣವಾಗಿದೆ. ಕಿಂಗ್ ಖಾನ್ ಅವರನ್ನೇ ರಣವೀರ್ ನಿರ್ಲಕ್ಷಿಸಿದರಾ ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ.
‘ಧುರಂಧರ್ 2’ ಚಿತ್ರದ ಭರ್ಜರಿ ಯಶಸ್ಸಿನ ಬಗ್ಗೆ ಶಾರುಖ್ ಖಾನ್ ಈವರೆಗೆ ಯಾವುದೇ ಸಾರ್ವಜನಿಕ ಪ್ರತಿಕ್ರಿಯೆ ನೀಡಿಲ್ಲ. ಇದರಿಂದಾಗಿ ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಮಾತುಗಳು ಕೇಳಿಬರುತ್ತಿದ್ದವು. ಈಗ ಪಾರ್ಟಿಯಲ್ಲಿ ನಡೆದ ಈ ಘಟನೆ ಆ ವದಂತಿಗೆ ತುಪ್ಪ ಸುರಿದಂತಾಗಿದೆ. “ಗೆಲುವು ರಣವೀರ್ ತಲೆಗೇರಿದೆ, ಅದಕ್ಕೇ ಶಾರುಖ್ ನ ಮಾತನಾಡಿಸಲಿಲ್ಲ” ಎಂದು ಕೆಲವರು ಟೀಕಿಸುತ್ತಿದ್ದರೆ, “ಅವರು ಮಾತಿನಲ್ಲಿ ಮಗ್ನರಾಗಿದ್ದರಿಂದ ಗಮನಿಸಿಲ್ಲ, ಒಂದು ಸಣ್ಣ ಕ್ಲಿಪ್ ನೋಡಿ ನಿರ್ಧರಿಸಬೇಡಿ” ಎಂದು ಅಭಿಮಾನಿಗಳು ರಣವೀರ್ ಬೆನ್ನಿಗೆ ನಿಂತಿದ್ದಾರೆ. ಇಬ್ಬರು ಸ್ಟಾರ್ಗಳ ನಡುವಿನ ಈ ‘ಕೆನ್ನೆ ಸವರುವ’ ಮತ್ತು ‘ನಿರ್ಲಕ್ಷಿಸುವ’ ಆಟ ಈಗ ಬಾಲಿವುಡ್ನ ದೊಡ್ಡ ಗಾಸಿಪ್ ಆಗಿದೆ.
ಕೇವಲ ಅಂಬಾನಿ ಪಾರ್ಟಿ ಮಾತ್ರವಲ್ಲ, ಉದ್ಯಮಿ ಮೋಹಿತ್ ಕಂಬೋಜ್ ಅವರ ಪುತ್ರಿ ಮಿಷ್ಕಾ ಅವರ 16ನೇ ಜನ್ಮದಿನದ ಸಂಭ್ರಮದಲ್ಲೂ ಈ ತಾರೆಗಳು ಮಿಂಚಿದ್ದಾರೆ. ಎಲ್ಲೇ ಹೋದರೂ ರಣವೀರ್ ಮತ್ತು ಶಾರುಖ್ ನಡುವಿನ ಕೆಮಿಸ್ಟ್ರಿ ಈಗ ಸೋಷಿಯಲ್ ಮೀಡಿಯಾದಲ್ಲಿ ಹಾಟ್ ಟಾಪಿಕ್. ‘ಧುರಂಧರ್’ ಸರಣಿಯ ಮೂಲಕ ಬಾಲಿವುಡ್ನ ಹೊಸ ಸುಲ್ತಾನನಂತೆ ಹೊರಹೊಮ್ಮುತ್ತಿರುವ ರಣವೀರ್, ಹಿರಿಯ ನಟರ ಜೊತೆ ನಡೆದುಕೊಳ್ಳುವ ರೀತಿ ಸರಿಯಿದೆಯೇ ಎಂಬ ವಿಶ್ಲೇಷಣೆಗಳು ನಡೆಯುತ್ತಿವೆ.
ಚಿತ್ರರಂಗದಲ್ಲಿ ಯಶಸ್ಸು ಮತ್ತು ವಿವಾದಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ರಣವೀರ್ ಸಿಂಗ್ ಅವರ ‘ಧುರಂಧರ್ 2’ ಗೆಲುವು ದೊಡ್ಡದಿದ್ದರೂ, ಶಾರುಖ್ ಖಾನ್ ಅಂತಹ ದಿಗ್ಗಜರ ಜೊತೆಗಿನ ಇವರ ಈ ನಡವಳಿಕೆ ಸದ್ಯಕ್ಕೆ ನಿಗೂಢವಾಗಿದೆ. ಇದು ಕೇವಲ ಕಾಕತಾಳಿಯವೋ ಅಥವಾ ನಿಜಕ್ಕೂ ಬಾಲಿವುಡ್ನ ಇಬ್ಬರು ಧುರಂಧರರ ನಡುವೆ ಬಿರುಕು ಮೂಡಿದೆಯೇ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ.
