ರಾಮನ ರಾಜ ವೈಭವ..335ಗ್ರಾಂ ದಿವ್ಯ ನೆಕ್ಲೆಸ್ ಸೀಕ್ರೆಟ್

18 ತಿಂಗಳಲ್ಲಿ ರೆಡಿ ರಣ್‌ಬೀರ್ ಹ್ಯಾಂಡ್ ಮೇಡ್‌ ನೆಕ್ಲೆಸ್‌‌

ಹೆಂಡ್ತಿಯರ (6)

ಭಾರತೀಯ ಸಿನಿಮಾ ಇತಿಹಾಸದಲ್ಲೇ ಹಿಂದೆಂದೂ ಕಾಣದ ದೃಶ್ಯವೈಭವಕ್ಕೆ ಸಾಕ್ಷಿಯಾಗ್ತಿದೆ ರಾಮಾಯಣ ಚಿತ್ರ. ಯಶ್-ರಣ್‌ಬೀರ್ ಚಿತ್ರದ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಸದ್ಯ ರಾಮ ರಣ್‌ಬೀರ್ ಕಪೂರ್ ಧರಿಸಿರೋ ಆಭರಣದ ಸೀಕ್ರೆಟ್ ಬಯಲಾಗಿದೆ. ಅದನ್ನ ನೋಡಿದ್ರೆ ಓ ಮೈ ಗಾಡ್ ಅಂತ ನೀವು ಹುಬ್ಬೇರಿಸೋದು ಗ್ಯಾರಂಟಿ.

ಭಾರತೀಯ ಚಿತ್ರರಂಗದ ಅತಿ ದುಬಾರಿ ಸಿನಿಮಾ ರಾಮಾಯಣ ಪ್ರತೀ ದಿನ ಒಂದಿಲ್ಲೊಂದು ಕಾರಣಕ್ಕೆ ಸುದ್ದಿ ಆಗ್ತಿದೆ. ಯಶ್, ರಣ್‌ಬೀರ್ ಕಪೂರ್ ಹಾಗೂ ಸಾಯಿಪಲ್ಲವಿ ನಟನೆಯ ಈ ಚಿತ್ರ 3500-4000 ಕೋಟಿ ವೆಚ್ಚದಲ್ಲಿ ಎರಡು ಭಾಗಗಳಲ್ಲಿ ತಯಾರಾಗ್ತಿದ್ದು, ಮೊದಲ ಬಾಗ ಇದೇ ದೀಪವಾಳಿಗೆ ವಿಶ್ವದಾದ್ಯಂತ ತೆರೆಗೆ ಬರ್ತಿದೆ. ಈ ಮಹಾಕಾವ್ಯದಲ್ಲಿ ಶ್ರೀರಾಮನ ಪಾತ್ರಕ್ಕಾಗಿ ಅತ್ಯಂತ ಭವ್ಯವಾದ ಹಾಗೂ ದಿವ್ಯವಾದ ಆಭರಣವನ್ನು ಧರಿಸಿದ್ದಾರೆ ನಟ ರಣ್‌ಬೀರ್ ಕಪೂರ್.

ಯೆಸ್.. ಚಿತ್ರದಲ್ಲಿ ರಾಮನ ಕೊರಳಲ್ಲಿರೋ ಕರಕುಶಲತೆಯಿಂದ ಕೂಡಿದ ಈ ವಿಶೇಷ ನೆಕ್ಲೆಸ್ ಬರೋಬ್ಬರಿ 335ಗ್ರಾಂ ತೂಕವನ್ನು ಹೊಂದಿದೆಯಂತೆ. ಇದರ ವಿನ್ಯಾಸವನ್ನು ಭಗವಾನ್ ಶ್ರೀರಾಮನ ದಿವ್ಯ ಧನಸ್ಸಾದ ಕೋದಂಡದಿಂದ ಪ್ರೇರಿತರಾಗಿ ಸಿದ್ಧಪಡಿಸಲಾಗಿದೆಯಂತೆ. ಅತ್ಯಂತ ನಿಖರತೆ ಹಾಗೂ ನೈಪುಣ್ಯತೆಯೊಂದಿಗೆ ಈ ಅಪೂರ್ವ ಆಭರಣವನ್ನು ಯಾವುದೇ ಮಿಷನರಿಗಳನ್ನ ಬಳಸದೆ, ಸಂಪೂರ್ಣವಾಗಿ ಕೈಯಿಂದಲೇ ತಯಾರಿಸಲು ಚಿತ್ರತಂಡಕ್ಕೆ ಬರೋಬ್ಬರಿ 18 ತಿಂಗಳ ಸುದೀರ್ಘ ಕಾಲಾವಕಾಶ ಬೇಕಾಗಿದೆ. ಇದು ಕೇವಲ ರಾಜ ಪೋಷಾಕಿನ ಭಾಗವಲ್ಲದೆ ಧೈರ್ಯ, ಧರ್ಮ ಮತ್ತು ಸದಾಚಾರದ ಸಂಕೇತವಾಗಿ ಬೆಳ್ಳಿಪರದೆಯ ಮೇಲೆ ಮೂಡಿಬರಲಿದೆಯಂತೆ.

​ಭಾರತೀಯ ಚಿತ್ರರಂಗದ ದೈತ್ಯ ಪ್ರತಿಭೆಗಳೆಲ್ಲಾ ಈ ಸಿನಿಮಾಗಾಗಿ ಒಂದಾಗಿದ್ದು, ಶ್ರೀರಾಮನಾಗಿ ರಣಬೀರ್ ಕಪೂರ್, ಇತ್ತ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಮೂಲಕ ಚಿತ್ರದ ನಿರ್ಮಾಣದಲ್ಲೂ ಕೈಜೋಡಿಸಿರುವ ರಾಕಿಂಗ್ ಸ್ಟಾರ್ ಯಶ್ ಲಂಕಾಧೀಶ ರಾವಣನ ಪಾತ್ರಕ್ಕೆ ಬಣ್ಣ ಹಚ್ಚಿದ್ದು, ಜಾನಕಿಯಾಗಿ ಸಾಯಿ ಪಲ್ಲವಿ ಬಣ್ಣ ಹಚ್ಚಿದ್ದಾರೆ. ಹನುಮನಾಗಿ ಸನ್ನಿ ಡಿಯೋಲ್, ಲಕ್ಷ್ಮಣನಾಗಿ ರವಿ ದುಬೆ ಹಾಗೂ ದಶರಥ ಮಹಾರಾಜನಾಗಿ ಅರುಣ್ ಗೋವಿಲ್ ನಟಿಸುತ್ತಿರುವುದು ಚಿತ್ರದ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸಿದೆ.

ಚಿತ್ರದ ಬಿಡುಗಡೆಗೂ ಮುನ್ನವೇ ಪ್ರೇಕ್ಷಕರಲ್ಲಿ ರೋಮಾಂಚನ ಉಂಟುಮಾಡಿರೋ ಟೀಂ, ಇತ್ತೀಚೆಗಷ್ಟೇ ಬಿಡುಗಡೆ ಮಾಡಿದ್ದ ಫಸ್ಟ್ ಲುಕ್ ಗ್ಲಿಂಪ್ಸ್ ಮತ್ತು ಟೀಸರ್ ನೋಡುಗರ ನಾಡಿಮಿಡಿತ ಹೆಚ್ಚಿಸಿದೆ. ಅಯೋಧ್ಯೆಗೆ ಶ್ರೀರಾಮನ ಭವ್ಯ ಎಂಟ್ರಿ, ವನವಾಸದ ದೃಶ್ಯಗಳು ಮತ್ತು ಕೊನೆಯಲ್ಲಿ ರಾವಣನಾಗಿ ಕತ್ತಲ ಕೋಣೆಯಿಂದ ಹೊರಬರುವ ಯಶ್ ಅವರ ರೌದ್ರಾವತಾರದ ಝಲಕ್ ಅಭಿಮಾನಿಗಳಿಗೆ ಹುಚ್ಚು ಹಿಡಿಸಿವೆ. ಚಿತ್ರಕ್ಕೆ ಹಾಲಿವುಡ್‌ನ ಪ್ರಸಿದ್ಧ ತಂತ್ರಜ್ಞರು ವಿಎಫ್‌ಎಕ್ಸ್  ಕೆಲಸ ಮಾಡುತ್ತಿದ್ದು, ಈ ದೃಶ್ಯ ವೈಭವವು ಜಾಗತಿಕ ಮಟ್ಟದಲ್ಲಿ ಗ್ಲೋಬಲ್ ಸಿನಿಮಾಗಳಿಗೆ ಪೈಪೋಟಿ ನೀಡುವಂತೆ ಇರಲಿದೆ ಅನ್ನೋದು ಮಾತ್ರ ಪಕ್ಕಾ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

Exit mobile version