ಅಪ್ಪುವಿನಂತೆಯೇ ಕಣ್ಮುಚ್ಚಿದ ಕಾಮಿಡಿ ಕಿಲಾಡಿ ರಾಕೇಶ್

ಅದೇ ರೀತಿ ಡ್ಯಾನ್ಸ್.. ಹೃದಯಬೇನೆ.. ಹಾರ್ಟ್‌ ಮೇಲೆ ಕೈ

Untitled design 2025 05 12t144221.241

ಕಾಮಿಡಿ ಕಿಲಾಡಿ ರಾಕೇಶ್ ಪೂಜಾರಿ ನಗುವನ್ನಷ್ಟೇ ನಿಲ್ಲಿಸಿಲ್ಲ, ಬಾರದೂರಿಗೆ ಪಯಣ ಬೆಳೆಸಿ, ತನ್ನ ಉಸಿರನ್ನೇ ಚೆಲ್ಲಿದ್ದಾರೆ. ಇಷ್ಟಕ್ಕೂ ರಾಕೇಶ್‌‌ಗೆ ಏನಾಗಿತ್ತು..? ಪಂಜುರ್ಲಿ ದೈವದ ಮುನಿಸಿನಿಂದಲೇ ಜೀವ ಕಳೆದುಕೊಂಡ್ರಾ..? ನಿಜಕ್ಕೂ ನಿನ್ನೆ ಕಾಂತಾರ ಶೂಟಿಂಗ್ ಮುಗಿಸಿಯೇ ಮದುವೆಗೆ ತೆರಳಿದ್ರಾ..? ಈ ಕುರಿತು ಹೊಂಬಾಳೆ ಫಿಲಂಸ್ ಕೊಟ್ಟ ಸ್ಪಷ್ಟನೆ ಏನು ಅನ್ನೋದ್ರ ಪಿನ್ ಟು ಪಿನ್ ಡಿಟೇಲ್ಸ್ ಇಲ್ಲಿದೆ. ನೋಡ್ಕೊಂಡ್ ಬನ್ನಿ.

ಕಾಮಿಡಿ ಕಿಲಾಡಿಗಳು ಅನ್ನೋ ವೇದಿಕೆ ಅದೆಷ್ಟೋ ಮಂದಿಗೆ ಬದುಕು ಕಟ್ಟಿಕೊಟ್ಟಿದೆ. ಹೌದು.. ಇಲ್ಲಿಯವರೆಗೂ ನಾಲ್ಕು ಸೀಸನ್‌ಗಳು ಕಂಪ್ಲೀಟ್ ಆಗಿದ್ದು, ಪ್ರತೀ ಸೀಸನ್‌‌ನಲ್ಲಿ ಹತ್ತಾರು ಅಪ್ರತಿಮ ಕಲಾವಿದರು ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ. ಶಿವರಾಜ್‌‌ ಕೆ ಆರ್ ಪೇಟೆ, ನಯನಾ, ಜಿಜಿ ಗೋವಿಂದೇಗೌಡ, ತುಕಾಲಿ ಸಂತು, ಮಡೆನೂರು ಮನು, ಲೋಕಿ, ದಿವ್ಯ, ಹರೀಶ್ ಹಿರಿಯೂರು ಹೀಗೆ ಸಾಲು ಸಾಲು ಕಾಮಿಡಿ ಕಿಲಾಡಿ ಕಲಾವಿದರು ಕಿರುತೆರೆ & ಬೆಳ್ಳಿತೆರೆ ಎರಡರಲ್ಲೂ ಬ್ಯುಸಿ ಆಗಿದ್ದಾರೆ.

ತಮ್ಮ ವೈಯಕ್ತಿಕ ಜೀವನದಲ್ಲಿ ಎಷ್ಟೇ ನೋವಿದ್ದರೂ ಸಹ, ಅದನ್ನ ಹೊರ ಜಗತ್ತಿಗೆ ತೋರಿಸಿಕೊಳ್ಳದ ಇವರುಗಳು, ನಗುತ್ತಲೇ, ನಗಿಸುತ್ತಾ ಜೀವನ ಸಾಗಿಸ್ತಾರೆ. ಆ ಸಾಲಿನಲ್ಲಿ ರಾಕೇಶ್ ಪೂಜಾರಿ ಕೂಡ ಒಬ್ಬರು. 33 ವರ್ಷದ ರಾಕೇಶ್ ಪೂಜಾರಿ, ಕಾಮಿಡಿ ಕಿಲಾಡಿಗಳು ಸೀಸನ್ ಮೂರರ ವಿನ್ನರ್ ಕೂಡ ಹೌದು. ಉಡುಪಿ ಮೂಲದ ಈತ ಸದಾ ನಗು ಮುಖದಿಂದಲೇ ಇರುತ್ತಿದ್ದರು. ಜೊತೆಗಿದ್ದವರನ್ನ ಸಹ ನಗಿಸುತ್ತಲೇ ಇದ್ದ ಜೀವ, ಇದೀಗ ನಗು ಜೊತೆ ಉಸಿರು ಕೂಡ ನಿಲ್ಲಿಸಿದೆ.

ಹೌದು.. ರಾಕೇಶ್ ಪೂಜಾರಿ ಇನ್ನು ನೆನಪು ಮಾತ್ರ. ಕಾಮಿಡಿ ಕಿಲಾಡಿಯಾಗಿ ಬೆಳಕಿಗೆ ಬಂದ ಈ ಪ್ರತಿಭೆ, ಇತ್ತೀಚೆಗಚಷ್ಟೇ ಸಿನಿಮಾ ಹಾಗೂ ಸೀರಿಯಲ್‌‌ಗಳಲ್ಲಿ ಬದುಕು ಕಟ್ಟಿಕೊಳ್ತಿದ್ರು. 33 ವರ್ಷಗಳಾದ್ರೂ ಮದ್ವೆ ಆಗದೆ, ಲೈಫ್‌‌ನಲ್ಲಿ ಮೊದಲು ಸೆಟಲ್ ಆಗೋಣ. ನಂತ್ರ ಮದ್ವೆ ಆದ್ರೆ ಆಯ್ತು ಅಂತ ಜೀವನ ಹಾಗೂ ಕರಿಯರ್ ಬಗ್ಗೆ ಬಹುದೊಡ್ಡ ಕನಸು ಕಂಡಿದ್ರು. ಆದ್ರೆ ಆ ಕನಸುಗಳಿಗೆ ತಣ್ಣೀರು ಎರಚಿದೆ ವಿಧಿ. ಹೃದಯಾಘಾತದಿಂದ ನಟ ರಾಕೇಶ್ ಪೂಜಾರಿ ಮೃತ ಪಟ್ಟಿದ್ದಾರೆ.

ನಿನ್ನೆ ಉಡುಪಿಯ ಕಾರ್ಕಳದ ನಿಟ್ಟೆ ಸಮೀಪ ಗೆಳೆಯನ ಮದುವೆಯ ನಿಮಿತ್ತ ನಡೆಯುತ್ತಿದ್ದ ಮೆಹಂದಿ ಹಾಗೂ ಸಂಗೀತ್ ಫಂಕ್ಷನ್‌‌ನಲ್ಲಿ ಭಾಗಿಯಾಗಿದ್ದರಂತೆ ರಾಕೇಶ್ ಪೂಜಾರಿ. ಅಲ್ಲಿ ಖುಷ್ ಖುಷಿಯಿಂದ ಹಾಡಿ, ಕುಣಿದು ಕುಪ್ಪಳಿಸಿದ್ದಾರೆ ರಾಕೇಶ್. ಲೋ ಬಿಪಿ ಆಗಿ, ಹೃದಯ ಬೇನೆ ಬಂದಿದೆ. ಆದರ ಅರಿವೇ ಇಲ್ಲದಂತೆ ಎದೆಯ ಮೇಲೆಯೇ ಕೈ ಇಟ್ಕೊಂಡೇ, ಹೃದಯವನ್ನು ಸಮಾಧಾನಗೊಳಿಸುತ್ತಲೇ ಕುಣಿದಿದ್ದಾರೆ ರಾಕೇಶ್.

ಹಾಗೆ ಮಧ್ಯೆರಾತ್ರಿ ಒಂದು ಗಂಟೆ ತನಕ ಕುಣಿಯುತ್ತಾ ಕುಣಿಯುತ್ತಾ ದಿಢೀರ್ ಅಂತ ಕುಸಿದು ಬಿದ್ದಿದ್ದಾರೆ. ಕೂಡಲೇ ಸ್ನೇಹಿತರೆಲ್ಲಾ ಹತ್ತಿರದ ಆಸ್ಪತ್ರೆಗೆ ರಾಕೇಶ್‌‌ನ ಕರೆದೊಯ್ದಿದ್ದಾರೆ. ಆದ್ರೆ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ. ಇದು ನಿಜಕ್ಕೂ ಅವ್ರ ಗೆಳೆಯರಿಗೆ, ಕುಟುಂಬಸ್ಥರಿಗೆ ಹಾಗೂ ಚಿತ್ರರಂಗಕ್ಕೆ ದೊಡ್ಡ ಆಘಾತ ತಂದಿದೆ. ಒಬ್ಬ ಅದ್ಭುತ ಹಾಸ್ಯ ಕಲಾವಿದನನ್ನ ಚಿತ್ರರಂಗ ಕಳೆದುಕೊಂಡಿದೆ.

ಧೂಮಪಾನ ಹಾಗೂ ಮದ್ಯಪಾನ ಕೂಡ ಮಾಡದ ರಾಕೇಶ್ ವ್ಯಕ್ತಿತ್ವದಿಂದಲೇ ಎಲ್ಲರ ದಿಲ್ ದೋಚಿದ್ದರು. ಅವರಲ್ಲಿದ್ದ ಹಾಸ್ಯಪ್ರಜ್ಞೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಆದ್ರೆ ಜವರಾಯ ದರ್ಪ ಮೆರೆದಿದ್ದು, ಉಸಿರು ಕಸಿದುಕೊಂಡಿದ್ದಾರೆ. ಅಂದಹಾಗೆ ರಾಕೇಶ್ ಪೂಜಾರಿ ಹೃದಯಾಘಾತ ಸೇಮ್ ಟು ಸೇಮ್ ರಾಜರತ್ನ ಅಪ್ಪುರಂತೆ ಆಗಿರೋದು ಕಾಕತಾಳೀಯ. ಹೌದು.. ಶಿವಣ್ಣನ ಭಜರಂಗಿ 2 ಚಿತ್ರದ ಪ್ರೀ ರಿಲೀಸ್ ಇವೆಂಟ್‌‌ನಲ್ಲಿ ಭಾಗಿಯಾಗಿದ್ದ ಅಪ್ಪು, ಯಶ್ ಹಾಗೂ ಶಿವಣ್ಣ ಜೊತೆ ವೇದಿಕೆಯಲ್ಲಿ ಸ್ಟೆಪ್ ಹಾಕಿದ್ರು. ಅಪ್ಪು ಕೂಡ ಸೇಮ್ ರಾಕೇಶ್ ಪೂಜಾರಿ ರೀತಿ ಹೃದಯಬೇನೆಯಿಂದ ಆಗಾಗ ಹಾರ್ಟ್‌ ಮೇಲೆ ಕೈ ಇಟ್ಟಿದ್ರು.

ಭಜರಂಗಿ 2 ಇವೆಂಟ್ ಬಳಿಕ ನೇರವಾಗಿ ಗುರುಕಿರಣ್ ಮನೆಗೆ ತೆರಳಿದ್ದ ಪುನೀತ್ ರಾಜ್‌‌ಕುಮಾರ್, ಅಲ್ಲಿ ಚಿತ್ರರಂಗದ ಗೆಳೆಯರ ಜೊತೆ ಗೆಟ್ ಟುಗೆದರ್‌‌ನಲ್ಲಿ ಭಾಗಿಯಾಗಿದ್ರು. ಮರು ದಿನ ಬೆಳಗ್ಗೆ ಮನೆಯಲ್ಲಿ ಕುಸಿದು ಬಿದ್ದಿದ್ದ ಪುನೀತ್ ರಾಜ್‌ಕುಮಾರ್, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಉಸಿರು ಚೆಲ್ಲಿದ್ದರು. ಇದೀಗ ಅಪ್ಪು ರೀತಿಯಲ್ಲೇ ರಾಕೇಶ್ ಪೂಜಾರಿ ಕೂಡ ಸಾವನ್ನಪ್ಪಿರೋದು ದುಃಖಕರ ಸಂಗತಿ ಅನಿಸಿದೆ.

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿರೋ ಕಾಂತಾರ ಚಿತ್ರದ ಪ್ರೀಕ್ವೆಲ್ ಸಿನಿಮಾದ ಶೂಟಿಂಗ್‌‌ನಲ್ಲಿ ತೊಡಗಿಸಿಕೊಂಡಿದ್ದ ರಾಕೇಶ್ ಪೂಜಾರಿ, ನಿನ್ನೆ ಇಡಿ ದಿನ ಶೂಟಿಂಗ್‌ ಮುಗಿಸಿ, ನಂತರ ಗೆಳೆಯನ ಮದುವೆಗೆ ತೆರಳಿದ್ದರು. ಆಗ ಹೃದಯಾಘಾತ ಸಂಭವಿಸಿದೆ ಅಂತ ಎಲ್ಲೆಡೆ ಸುದ್ದಿ ಆಗ್ತಿದೆ. ಆದ್ರೆ ಅಸಲಿ ಸತ್ಯ ಬೇರೇನೇ ಇದೆ. ನಿನ್ನೆ ರಾಕೇಶ್ ಕಾಂತಾರ ಚಿತ್ರದ ಶೂಟಿಂಗ್‌ನಲ್ಲಿ ಭಾಗಿಯಾಗಿರಲಿಲ್ಲ.

ಕಾಮಿಡಿ ಕಿಲಾಡಿ ರಾಕೇಶ್ ಪೂಜಾರಿ ನಗುವನ್ನಷ್ಟೇ ನಿಲ್ಲಿಸಿಲ್ಲ, ಬಾರದೂರಿಗೆ ಪಯಣ ಬೆಳೆಸಿ, ತನ್ನ ಉಸಿರನ್ನೇ ಚೆಲ್ಲಿದ್ದಾರೆ. ಇಷ್ಟಕ್ಕೂ ರಾಕೇಶ್‌‌ಗೆ ಏನಾಗಿತ್ತು..? ಪಂಜುರ್ಲಿ ದೈವದ ಮುನಿಸಿನಿಂದಲೇ ಜೀವ ಕಳೆದುಕೊಂಡ್ರಾ..? ನಿಜಕ್ಕೂ ನಿನ್ನೆ ಕಾಂತಾರ ಶೂಟಿಂಗ್ ಮುಗಿಸಿಯೇ ಮದುವೆಗೆ ತೆರಳಿದ್ರಾ..? ಈ ಕುರಿತು ಹೊಂಬಾಳೆ ಫಿಲಂಸ್ ಕೊಟ್ಟ ಸ್ಪಷ್ಟನೆ ಏನು ಅನ್ನೋದ್ರ ಪಿನ್ ಟು ಪಿನ್ ಡಿಟೇಲ್ಸ್ ಇಲ್ಲಿದೆ. ನೋಡ್ಕೊಂಡ್ ಬನ್ನಿ.

ಕಾಮಿಡಿ ಕಿಲಾಡಿಗಳು ಅನ್ನೋ ವೇದಿಕೆ ಅದೆಷ್ಟೋ ಮಂದಿಗೆ ಬದುಕು ಕಟ್ಟಿಕೊಟ್ಟಿದೆ. ಹೌದು.. ಇಲ್ಲಿಯವರೆಗೂ ನಾಲ್ಕು ಸೀಸನ್‌ಗಳು ಕಂಪ್ಲೀಟ್ ಆಗಿದ್ದು, ಪ್ರತೀ ಸೀಸನ್‌‌ನಲ್ಲಿ ಹತ್ತಾರು ಅಪ್ರತಿಮ ಕಲಾವಿದರು ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ. ಶಿವರಾಜ್‌‌ ಕೆ ಆರ್ ಪೇಟೆ, ನಯನಾ, ಜಿಜಿ ಗೋವಿಂದೇಗೌಡ, ತುಕಾಲಿ ಸಂತು, ಮಡೆನೂರು ಮನು, ಲೋಕಿ, ದಿವ್ಯ, ಹರೀಶ್ ಹಿರಿಯೂರು ಹೀಗೆ ಸಾಲು ಸಾಲು ಕಾಮಿಡಿ ಕಿಲಾಡಿ ಕಲಾವಿದರು ಕಿರುತೆರೆ & ಬೆಳ್ಳಿತೆರೆ ಎರಡರಲ್ಲೂ ಬ್ಯುಸಿ ಆಗಿದ್ದಾರೆ.

ತಮ್ಮ ವೈಯಕ್ತಿಕ ಜೀವನದಲ್ಲಿ ಎಷ್ಟೇ ನೋವಿದ್ದರೂ ಸಹ, ಅದನ್ನ ಹೊರ ಜಗತ್ತಿಗೆ ತೋರಿಸಿಕೊಳ್ಳದ ಇವರುಗಳು, ನಗುತ್ತಲೇ, ನಗಿಸುತ್ತಾ ಜೀವನ ಸಾಗಿಸ್ತಾರೆ. ಆ ಸಾಲಿನಲ್ಲಿ ರಾಕೇಶ್ ಪೂಜಾರಿ ಕೂಡ ಒಬ್ಬರು. 33 ವರ್ಷದ ರಾಕೇಶ್ ಪೂಜಾರಿ, ಕಾಮಿಡಿ ಕಿಲಾಡಿಗಳು ಸೀಸನ್ ಮೂರರ ವಿನ್ನರ್ ಕೂಡ ಹೌದು. ಉಡುಪಿ ಮೂಲದ ಈತ ಸದಾ ನಗು ಮುಖದಿಂದಲೇ ಇರುತ್ತಿದ್ದರು. ಜೊತೆಗಿದ್ದವರನ್ನ ಸಹ ನಗಿಸುತ್ತಲೇ ಇದ್ದ ಜೀವ, ಇದೀಗ ನಗು ಜೊತೆ ಉಸಿರು ಕೂಡ ನಿಲ್ಲಿಸಿದೆ.

ಹೌದು.. ರಾಕೇಶ್ ಪೂಜಾರಿ ಇನ್ನು ನೆನಪು ಮಾತ್ರ. ಕಾಮಿಡಿ ಕಿಲಾಡಿಯಾಗಿ ಬೆಳಕಿಗೆ ಬಂದ ಈ ಪ್ರತಿಭೆ, ಇತ್ತೀಚೆಗಚಷ್ಟೇ ಸಿನಿಮಾ ಹಾಗೂ ಸೀರಿಯಲ್‌‌ಗಳಲ್ಲಿ ಬದುಕು ಕಟ್ಟಿಕೊಳ್ತಿದ್ರು. 33 ವರ್ಷಗಳಾದ್ರೂ ಮದ್ವೆ ಆಗದೆ, ಲೈಫ್‌‌ನಲ್ಲಿ ಮೊದಲು ಸೆಟಲ್ ಆಗೋಣ. ನಂತ್ರ ಮದ್ವೆ ಆದ್ರೆ ಆಯ್ತು ಅಂತ ಜೀವನ ಹಾಗೂ ಕರಿಯರ್ ಬಗ್ಗೆ ಬಹುದೊಡ್ಡ ಕನಸು ಕಂಡಿದ್ರು. ಆದ್ರೆ ಆ ಕನಸುಗಳಿಗೆ ತಣ್ಣೀರು ಎರಚಿದೆ ವಿಧಿ. ಹೃದಯಾಘಾತದಿಂದ ನಟ ರಾಕೇಶ್ ಪೂಜಾರಿ ಮೃತ ಪಟ್ಟಿದ್ದಾರೆ.

ನಿನ್ನೆ ಉಡುಪಿಯ ಕಾರ್ಕಳದ ನಿಟ್ಟೆ ಸಮೀಪ ಗೆಳೆಯನ ಮದುವೆಯ ನಿಮಿತ್ತ ನಡೆಯುತ್ತಿದ್ದ ಮೆಹಂದಿ ಹಾಗೂ ಸಂಗೀತ್ ಫಂಕ್ಷನ್‌‌ನಲ್ಲಿ ಭಾಗಿಯಾಗಿದ್ದರಂತೆ ರಾಕೇಶ್ ಪೂಜಾರಿ. ಅಲ್ಲಿ ಖುಷ್ ಖುಷಿಯಿಂದ ಹಾಡಿ, ಕುಣಿದು ಕುಪ್ಪಳಿಸಿದ್ದಾರೆ ರಾಕೇಶ್. ಲೋ ಬಿಪಿ ಆಗಿ, ಹೃದಯ ಬೇನೆ ಬಂದಿದೆ. ಆದರ ಅರಿವೇ ಇಲ್ಲದಂತೆ ಎದೆಯ ಮೇಲೆಯೇ ಕೈ ಇಟ್ಕೊಂಡೇ, ಹೃದಯವನ್ನು ಸಮಾಧಾನಗೊಳಿಸುತ್ತಲೇ ಕುಣಿದಿದ್ದಾರೆ ರಾಕೇಶ್.

ಹಾಗೆ ಮಧ್ಯೆರಾತ್ರಿ ಒಂದು ಗಂಟೆ ತನಕ ಕುಣಿಯುತ್ತಾ ಕುಣಿಯುತ್ತಾ ದಿಢೀರ್ ಅಂತ ಕುಸಿದು ಬಿದ್ದಿದ್ದಾರೆ. ಕೂಡಲೇ ಸ್ನೇಹಿತರೆಲ್ಲಾ ಹತ್ತಿರದ ಆಸ್ಪತ್ರೆಗೆ ರಾಕೇಶ್‌‌ನ ಕರೆದೊಯ್ದಿದ್ದಾರೆ. ಆದ್ರೆ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ. ಇದು ನಿಜಕ್ಕೂ ಅವ್ರ ಗೆಳೆಯರಿಗೆ, ಕುಟುಂಬಸ್ಥರಿಗೆ ಹಾಗೂ ಚಿತ್ರರಂಗಕ್ಕೆ ದೊಡ್ಡ ಆಘಾತ ತಂದಿದೆ. ಒಬ್ಬ ಅದ್ಭುತ ಹಾಸ್ಯ ಕಲಾವಿದನನ್ನ ಚಿತ್ರರಂಗ ಕಳೆದುಕೊಂಡಿದೆ.

ಧೂಮಪಾನ ಹಾಗೂ ಮದ್ಯಪಾನ ಕೂಡ ಮಾಡದ ರಾಕೇಶ್ ವ್ಯಕ್ತಿತ್ವದಿಂದಲೇ ಎಲ್ಲರ ದಿಲ್ ದೋಚಿದ್ದರು. ಅವರಲ್ಲಿದ್ದ ಹಾಸ್ಯಪ್ರಜ್ಞೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಆದ್ರೆ ಜವರಾಯ ದರ್ಪ ಮೆರೆದಿದ್ದು, ಉಸಿರು ಕಸಿದುಕೊಂಡಿದ್ದಾರೆ. ಅಂದಹಾಗೆ ರಾಕೇಶ್ ಪೂಜಾರಿ ಹೃದಯಾಘಾತ ಸೇಮ್ ಟು ಸೇಮ್ ರಾಜರತ್ನ ಅಪ್ಪುರಂತೆ ಆಗಿರೋದು ಕಾಕತಾಳೀಯ. ಹೌದು.. ಶಿವಣ್ಣನ ಭಜರಂಗಿ 2 ಚಿತ್ರದ ಪ್ರೀ ರಿಲೀಸ್ ಇವೆಂಟ್‌‌ನಲ್ಲಿ ಭಾಗಿಯಾಗಿದ್ದ ಅಪ್ಪು, ಯಶ್ ಹಾಗೂ ಶಿವಣ್ಣ ಜೊತೆ ವೇದಿಕೆಯಲ್ಲಿ ಸ್ಟೆಪ್ ಹಾಕಿದ್ರು. ಅಪ್ಪು ಕೂಡ ಸೇಮ್ ರಾಕೇಶ್ ಪೂಜಾರಿ ರೀತಿ ಹೃದಯಬೇನೆಯಿಂದ ಆಗಾಗ ಹಾರ್ಟ್‌ ಮೇಲೆ ಕೈ ಇಟ್ಟಿದ್ರು.

ಭಜರಂಗಿ 2 ಇವೆಂಟ್ ಬಳಿಕ ನೇರವಾಗಿ ಗುರುಕಿರಣ್ ಮನೆಗೆ ತೆರಳಿದ್ದ ಪುನೀತ್ ರಾಜ್‌‌ಕುಮಾರ್, ಅಲ್ಲಿ ಚಿತ್ರರಂಗದ ಗೆಳೆಯರ ಜೊತೆ ಗೆಟ್ ಟುಗೆದರ್‌‌ನಲ್ಲಿ ಭಾಗಿಯಾಗಿದ್ರು. ಮರು ದಿನ ಬೆಳಗ್ಗೆ ಮನೆಯಲ್ಲಿ ಕುಸಿದು ಬಿದ್ದಿದ್ದ ಪುನೀತ್ ರಾಜ್‌ಕುಮಾರ್, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಉಸಿರು ಚೆಲ್ಲಿದ್ದರು. ಇದೀಗ ಅಪ್ಪು ರೀತಿಯಲ್ಲೇ ರಾಕೇಶ್ ಪೂಜಾರಿ ಕೂಡ ಸಾವನ್ನಪ್ಪಿರೋದು ದುಃಖಕರ ಸಂಗತಿ ಅನಿಸಿದೆ.

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿರೋ ಕಾಂತಾರ ಚಿತ್ರದ ಪ್ರೀಕ್ವೆಲ್ ಸಿನಿಮಾದ ಶೂಟಿಂಗ್‌‌ನಲ್ಲಿ ತೊಡಗಿಸಿಕೊಂಡಿದ್ದ ರಾಕೇಶ್ ಪೂಜಾರಿ, ನಿನ್ನೆ ಇಡಿ ದಿನ ಶೂಟಿಂಗ್‌ ಮುಗಿಸಿ, ನಂತರ ಗೆಳೆಯನ ಮದುವೆಗೆ ತೆರಳಿದ್ದರು. ಆಗ ಹೃದಯಾಘಾತ ಸಂಭವಿಸಿದೆ ಅಂತ ಎಲ್ಲೆಡೆ ಸುದ್ದಿ ಆಗ್ತಿದೆ. ಆದ್ರೆ ಅಸಲಿ ಸತ್ಯ ಬೇರೇನೇ ಇದೆ. ನಿನ್ನೆ ರಾಕೇಶ್ ಕಾಂತಾರ ಚಿತ್ರದ ಶೂಟಿಂಗ್‌ನಲ್ಲಿ ಭಾಗಿಯಾಗಿರಲಿಲ್ಲ.

  • Categories: ಸಿನಿಮಾ
  • Tags:
  • Exit mobile version