ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
ಕಾಂತಾರ ಸಿನಿಮಾ ತೆರೆಕಂಡ ನಂತ್ರ, ಅದು ಕೇವಲ ಕಥೆಯಾಗಿ ಉಳಿದಿಲ್ಲ. ಒಂದು ಅನನ್ಯ ದೈವಿಕ ಅನುಭವವಾಗಿ ಬೆಳೆದು ನಿಂತಿದೆ. ದೈವಶಕ್ತಿ ನೆಲೆಸಿದೆ ಎನ್ನಲಾದ ಅದೇ ಭೂಮಿಗೆ ಈಗ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಕೂಡ ಹೆಜ್ಜೆ ಇಟ್ಟಿದ್ದಾರೆ. ಆನೆಗುಡ್ಡ ವರಸಿದ್ದಿ ವಿನಾಯಕನ ದರ್ಶನ ಪಡೆದ ಪವನ್ ವಿಡಿಯೋ ಸದ್ಯ ಟಾಕ್ ಆಫ್ ದಿ ಟೌನ್ ಆಗಿದೆ.
ಕಾಂತಾರ ಸೆಟ್ಟೇರಿದ್ದ, ಆನೆಗುಡ್ಡ ಆಲಯದಲ್ಲಿ DCM ಪವನ್
ಆಂಧ್ರ ಸೂಪರ್ ಸ್ಟಾರ್ನ ಅದ್ಯಾವ ಶಕ್ತಿ ಕರೆದು ತಂದಿದೆ..?!
ಕಾಂತಾರ ಸಿನಿಮಾ ದೇಶವನ್ನೇ ಕಾಡಿದ ಬಳಿಕ, ಅದರ ಆಧ್ಯಾತ್ಮ ಶಕ್ತಿ, ದೈವ ನಂಬಿಕೆ ಮತ್ತು ಕರಾವಳಿ ಸಂಸ್ಕೃತಿಯ ಮೇಲಿನ ಆಸಕ್ತಿ ಮತ್ತಷ್ಟು ಹೆಚ್ಚಾಗಿದೆ. ಇದೇ ಹಿನ್ನೆಲೆಯಲ್ಲಿ, ಕಾಂತಾರ ಸೆಟ್ಟೇರಿದ ಶಕ್ತಿಶಾಲಿ ತೀರ್ಥಕ್ಷೇತ್ರವಾದ ಆನೆಗುಡ್ಡ ವಿನಾಯಕ ದೇವಸ್ಥಾನಕ್ಕೆ ಆಂಧ್ರ DCM ಪವನ್ ಕಲ್ಯಾಣ್ ಭೇಟಿ ನೀಡಿರುವುದು ಕುತೂಹಲ ಮೂಡಿಸಿದೆ. ರಾಜಕೀಯ ಗದ್ದಲದಿಂದ ಸ್ವಲ್ಪ ದೂರ ಉಳಿದು, ಭಕ್ತನಾಗಿ ವಿನಾಯಕನ ಸನ್ನಿಧಿಯಲ್ಲಿ ಶಾಂತ ದರ್ಶನ ಪಡೆದಿರುವುದು ಈಗ ಸಿನಿರಂಗದಲ್ಲಿ ಮತ್ತು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಕರಾವಳಿ ಕರ್ನಾಟಕದ ಹೃದಯಭಾಗದಲ್ಲಿರುವ ಆನೆಗುಡ್ಡ ವರಸಿದ್ದಿ ವಿನಾಯಕ ದೇವಸ್ಥಾನ ಅಪಾರ ಮಹಿಮೆಯುಳ್ಳ ಆಲಯ. ಇಲ್ಲಿರೋ ಗಣಪನನ್ನ ಬಯಕೆಗಳನ್ನ ಈಡೇರಿಸೋ ದೈವ ಅಂತ ಭಕ್ತರು ನಂಬುತ್ತಾರೆ. ಹೊಸ ಕೆಲಸ, ಸಿನಿಮಾ ಆರಂಭ, ರಾಜಕೀಯ ತೀರ್ಮಾನಗಳ ಮುನ್ನ ಅನೇಕ ಗಣ್ಯರು ಇಲ್ಲಿ ದರ್ಶನ ಪಡೆಯುವುದು ವಿಶೇಷ. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಈ ದೇವಸ್ಥಾನದಲ್ಲಿ ಮಾಡುವ ಪ್ರಾರ್ಥನೆ ಫಲ ಕೊಡುತ್ತದೆ ಎಂಬ ನಂಬಿಕೆ. ಪವನ್ ಕಲ್ಯಾಣ್ ಭೇಟಿ ಈಗ ಸಾಕಷ್ಟು ಚರ್ಚೆ ಆಗ್ತಿದೆ. ಸಿಎಂ ರೇಸ್ನಲ್ಲಿರೋ ಡಿಸಿಎಂ ಭೇಟಿ ಪಾಸಿಟಿವ್ ವೈಬ್ಸ್ ನೀಡಿದೆ.
ಆನೆಗುಡ್ಡ ವಿನಾಯಕನ ದರ್ಶನದ ಹಿಂದಿನ ರಹಸ್ಯವೇನು..?
ಪವನ್ ಕಲ್ಯಾಣ್ ಮೌನ ಪ್ರಾರ್ಥನೆ.. ಭವಿಷ್ಯದ ಸೂಚನೆ..?!
ರಿಷಬ್ ಶೆಟ್ರ ಕಾಂತಾರ, ಕಾಂತಾರ-1 ಬಿಡುಗಡೆಯಾದ ನಂತರ ಆನೆಗುಡ್ಡ ಹಾಗೂ ಸುತ್ತಮುತ್ತಲ ಪ್ರದೇಶಗಳನ್ನು ಪವರ್ ಸೆಂಟರ್ ಎಂದೇ ಜನ ಭಾವಿಸ್ತಾರೆ. ಇದೇ ಶಕ್ತಿಯನ್ನು ಅನುಭವಿಸಲು, ಕಾಂತಾರ ತಂಡದ ಹೆಜ್ಜೆ ಗುರುತುಗಳ ಭೂಮಿಗೆ ಪವನ್ ಬಂದಿರೋದು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಪವನ್ ಬರೀ ರಾಜಕಾರಣಿ ಅಲ್ಲ, ಗಾಢ ಆಧ್ಯಾತ್ಮಿ ಕೂಡ ಹೌದು. ಹಿಂದೆ ತಿರುಪತಿ, ಕಾಶಿ, ಉಜ್ಜಯಿನಿ ಸೇರಿದಂತೆ ಹಲವು ಪವಿತ್ರ ಕ್ಷೇತ್ರಗಳಿಗೆ ಭೇಟಿ ನೀಡಿರೋ ಪವನ್ ಟೆಂಪಲ್ ರನ್ ಹಿಂದೆ ಬಹುದೊಡ್ಡ ಕಾರಣವೇ ಅಡಗಿದೆ ಎನ್ನಲಾಗ್ತಿದೆ.
