ಪ್ರಧಾನಿ ಮೋದಿಗೆ ಪತ್ರ ಬರೆದ ಕಿಚ್ಚ ಸುದೀಪ್‌‌: ಆಪರೇಷನ್‌ ಸಿಂದೂರ ವಿಜಯಕ್ಕೆ ಧನ್ಯವಾದ ಹೇಳಿದ ನಟ

Untitled design 2025 05 10t153249.235
ADVERTISEMENT
ADVERTISEMENT

ನಟ ಕಿಚ್ಚ ಸುದೀಪ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸುದೀರ್ಘ ಪತ್ರ ಬರೆದಿದ್ದಾರೆ. “ಆಪರೇಷನ್ ಸಿಂದೂರ”ದ ಯಶಸ್ಸಿಗೆ ಕೃತಜ್ಞತೆ ಸೂಚಿಸಿದ ಅವರು, ತಾಯಿ ಸರೋಜಾ ಅವರ ನಿಧನಕ್ಕೆ ಮೋದಿ ಕಳುಹಿಸಿದ ಸಂತಾಪಕ್ಕೂ ಧನ್ಯವಾದ ತಿಳಿಸಿದ್ದಾರೆ. “ಇದು ಕೇವಲ ಪ್ರತಿಕ್ರಿಯೆಯಲ್ಲ, ಭಾರತ ಹಿಂದೆ ಸರಿಯದು ಎಂಬ ಧೈರ್ಯದ ಸಂದೇಶ” ಎಂದು ಸುದೀಪ್‌ ಬರೆದಿದ್ದಾರೆ.

ಪಹಲ್ಗಾಮ್‌ ದುರಂತ ಮತ್ತು ಭಾರತದ ಪ್ರತೀಕಾರ
ಏಪ್ರಿಲ್ 22, 2025ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಇಬ್ಬರು ಕನ್ನಡಿಗರು ಸೇರಿ 26 ಹಿಂದೂಗಳನ್ನು ಧರ್ಮ ಕೇಳಿ ಕೊಲೆಗೈದ ಘಟನೆಗೆ ಪ್ರತೀಕಾರವಾಗಿ, ಮೇ 7, 2025ರಂದು “ಆಪರೇಷನ್ ಸಿಂದೂರ” ನಡೆಯಿತು. ಪಾಕಿಸ್ತಾನದ 9 ಉಗ್ರ ತಾಣಗಳನ್ನು ನಾಶಪಡಿಸಿದ ಭಾರತ, ನಾಗರಿಕರಿಗೆ ಹಾನಿಯಾಗದಂತೆ ನಿಖರ ದಾಳಿ ನಡೆಸಿತ್ತು. ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಮತ್ತು ಕರ್ನಲ್ ಸೋಫಿಯಾ ಕುರೇಶಿ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆ, ಭಾರತೀಯ ನಾರಿಯರ ಶಕ್ತಿಯನ್ನು ವಿಶ್ವಕ್ಕೆ ತೋರಿಸಿತ್ತು.

ಎಸ್‌-400: ಭಾರತದ ರಕ್ಷಾ ಕವಚ
ಭಾರತ ರಷ್ಯಾದ ಎಸ್‌-400 ಏರ್‌ ಡಿಫೆನ್ಸ್‌ ಸಿಸ್ಟಮ್‌, ಪಾಕಿಸ್ತಾನದ ಕ್ಷಿಪಣಿ ಮತ್ತು ಡ್ರೋನ್‌ ದಾಳಿಗಳನ್ನು 400 ಕಿ.ಮೀ. ದೂರದಿಂದಲೇ ತಡೆಯಿತು. ‘ಸುದರ್ಶನ ಚಕ್ರ’ ಎಂದು ಕರೆಯಲ್ಪಡುವ ಈ ವ್ಯವಸ್ಥೆ, ಜಮ್ಮು, ಪಂಜಾಬ್‌, ರಾಜಸ್ಥಾನ, ಗುಜರಾತ್‌ನಲ್ಲಿ ರಕ್ಷಣೆಗೆ ನಿಯೋಜಿತವಾಗಿದೆ. ಇದು ಪಾಕಿಸ್ತಾನಕ್ಕೆ ಮುಖಭಂಗವನ್ನುಂಟುಮಾಡಿ, ಭಾರತದ ಶಕ್ತಿಯನ್ನು ಒತ್ತಿಹೇಳಿತು.

ಕಿಚ್ಚ ಸುದೀಪ್‌ರ ಟ್ವೀಟ್‌
ಮೇ 7ರಂದು ಸುದೀಪ್‌ ಟ್ವೀಟ್‌ ಮಾಡಿ, “ಆಪರೇಷನ್ ಸಿಂದೂರ ಒಂದು ಮಿಷನ್‌ ಅಲ್ಲ, ಪವಿತ್ರ ಪ್ರತಿಜ್ಞೆ. ನಮ್ಮ ಸೈನಿಕರು ಭಾರತದ ಸಿಂದೂರದ ಗೌರವವನ್ನು ಮರಳಿ ಸ್ಥಾಪಿಸಿದ್ದಾರೆ” ಎಂದಿದ್ದರು. ಅವರ ಪತ್ರ ಮತ್ತು ಟ್ವೀಟ್‌, ರಾಷ್ಟ್ರಭಕ್ತಿಯ ಧ್ವನಿಯಾಗಿ ಮಾರ್ದನಿಸಿವೆ.

ಆಪರೇಷನ್ ಸಿಂದೂರ ಕೇವಲ ಸೈನಿಕ ಕಾರ್ಯಾಚರಣೆಯಲ್ಲ. ಇದು ಭಾರತದ ಏಕತೆ, ಧೈರ್ಯ, ಮತ್ತು ನಿರ್ಭೀತಿಯ ಸಂಕೇತ. “ನಾವು ಒಂದೇ ಜನ, ಒಂದೇ ಧ್ವನಿ, ಒಂದೇ ರಾಷ್ಟ್ರ” ಎಂಬ ಸಂದೇಶ ಜೈ ಹಿಂದ್‌, ಜೈ ಕರ್ನಾಟಕ, ಜೈ ಭಾರತ ಎಂದು ಮೊಳಗುತ್ತದೆ. ಎಂದು ಬರೆದಿದ್ದಾರೆ.

Exit mobile version