ಟಾಲಿವುಡ್ನ ಆ ಲವ್ಲಿ ಕಪಲ್ ಸ್ಯಾಮ್ ಅಂಡ್ ಚೈ ನೆನಪಿದ್ದಾರಾ? ಸಮಂತಾ ಮತ್ತು ನಾಗಚೈತನ್ಯ ಜೋಡಿ ಸದ್ಯಕ್ಕೆ ತಮ್ಮ ತಮ್ಮ ಹಳೆಯ ಜೀವನವನ್ನು ಮರೆತು ಹೊಸ ಬಾಳಿಗೆ ಕಾಲಿಟ್ಟು ಸುಖವಾಗಿದ್ದಾರೆ. ಆದರೆ, ಇವರಿಬ್ಬರು ದೂರಾಗಿ ವರ್ಷಗಳೇ ಕಳೆದರೂ ಕೆಲ ಕಿಡಿಗೇಡಿಗಳು ಮಾತ್ರ ಇವರ ಮುಗಿದು ಹೋದ ಅಧ್ಯಾಯವನ್ನು ಕೆದಕುತ್ತಲೇ ಇದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ನಾಗಚೈತನ್ಯ ವಿರುದ್ಧ ಸಿಕ್ಕಾಪಟ್ಟೆ ಅಪಪ್ರಚಾರ ಮಾಡಲಾಗುತ್ತಿದೆ. ಸದ್ಯ ಈ ವಿಚಾರಕ್ಕೆ ಸಂಬಂಧಿಸಿದಂತೆ ನಾಗಚೈತನ್ಯ ರೊಚ್ಚಿಗೆದ್ದಿದ್ದು, ಇಂತಹ ಕಿಡಿಗೇಡಿಗಳ ವಿರುದ್ಧ ರಣಕಹಳೆ ಊದಿದ್ದಾರೆ. ಹಾಗಾದ್ರೆ ಸಮಂತಾಗೆ ಮೋಸ ಮಾಡಿದ್ರಿ ಎಂದವರ ವಿರುದ್ಧ ಚೈ ಸಾರಿದ ಸಮರ ಎಂಥದ್ದು? ಇದರ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ…
- ಸಮಂತಾಗೆ ಮೋಸ ಮಾಡಿದ್ರಾ ಚೈ..?ಮುಗಿದು ಹೋದ ಕಥೆಗೆ ಮರುಜೀವ
- ಸಮಂತಾ ಡಿವೋರ್ಸ್ ವಿವಾದಕ್ಕೆ ಹೊಸ ಟ್ವಿಸ್ಟ್, ಕೋರ್ಟ್ನಲ್ಲಿ ಫೈಟ್..!
- ನಾಗಚೈತನ್ಯ ವಿರುದ್ಧ ಎಐ ಅಟ್ಯಾಕ್..ಕಿಡಿಗೇಡಿಗಳಿಗೆ ಚೈ ವಾರ್ನಿಂಗ್..!
- ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಚೈ, ಟ್ರೋಲರ್ಸ್ಗೆ ಕಾನೂನು ಚಾಟಿ..!
ಟಾಲಿವೇಲ್ನ ಕ್ಯೂಟ್ ಜೋಡಿಯಾಗಿದ್ದ ನಾಗಚೈತನ್ಯ ಮತ್ತು ಸಮಂತಾ ಡಿವೋರ್ಸ್ ಪಡೆದು ದೂರ ದೂರವಾಗಿ ಈಗ ಸಾಕಷ್ಟು ದಿನಗಳೇ ಕಳೆದಿವೆ. ಇಬ್ಬರೂ ತಮ್ಮ ಲೈಫ್ ಪಾರ್ಟನರ್ ಜೊತೆ ಹೊಸ ಜೀವನದ ಇನಿಂಗ್ಸ್ ಆರಂಭಿಸಿ ಆರಾಮಾಗಿದ್ದಾರೆ. ಆದರೆ, ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಕೆಲವರು ಇನ್ನೂ ಆ ಹಳೆಯ ಗಾಯವನ್ನು ಕೆದಕುತ್ತಲೇ ಇದ್ದಾರೆ. ವಿಚ್ಛೇದನದ ನಂತರವೂ ನಾಗಚೈತನ್ಯ ವಿರುದ್ಧ ವ್ಯಾಪಕವಾಗಿ ಟೀಕೆಗಳು, ಹಸಿಬಿಸಿ ಆರೋಪಗಳು ಕೇಳಿ ಬರುತ್ತಲೇ ಇವೆ. ಸಮಂತಾ ಲೈಫ್ ಹಾಳಾಗಲು ಚೈತನ್ಯ ಅವರೇ ಕಾರಣ ಎನ್ನುವ ರೀತಿ ಸುಳ್ಳು ಕಥೆಗಳನ್ನು ಕಟ್ಟಿ ತೇಲಿಬಿಡಲಾಗುತ್ತಿದೆ.
ಕೆಲವು ಯೂಟ್ಯೂಬ್ ಚಾನೆಲ್ಗಳು ಹಾಗೂ ಸಾಮಾಜಿಕ ಜಾಲತಾಣದಲ್ಲಿ ಕೇವಲ ವೀವ್ಸ್ ಮತ್ತು ಆರ್ಥಿಕ ಲಾಭಕ್ಕಾಗಿ ನಾಗಚೈತನ್ಯ ಹೆಸರನ್ನು ಅಕ್ಷರಶಃ ದುರುಪಯೋಗ ಮಾಡಿಕೊಳ್ಳುತ್ತಿವೆ. ನಾಗಚೈತನ್ಯ ಅವರು ಸಮಂತಾಗೆ ವಂಚಿಸಿದ್ದಾರೆ, ಅವರ ಕೆರಿಯರ್ ಅನ್ನೇ ಬಲಿ ಪಡೆದಿದ್ದಾರೆ ಎನ್ನುವ ತರಹೇವಾರಿ ಆಕ್ಷೇಪಾರ್ಹ ಟರ್ಮ್ಗಳನ್ನು ಬಳಸಿ ವಿಡಿಯೋಗಳನ್ನು ಸೃಷ್ಟಿಸಲಾಗುತ್ತಿದೆ. ಇದರಿಂದಾಗಿ ಅಕ್ಕಿನೇನಿ ಕುಟುಂಬದ ಘನತೆ ಹಾಗೂ ಸಮಾಜದಲ್ಲಿ ಅವರಿಗಿರುವ ಗೌರವಕ್ಕೆ ಭಾರಿ ದೊಡ್ಡ ಧಕ್ಕೆಯುಂಟಾಗುತ್ತಿದೆ ಎಂಬುದು ನಾಗಚೈತನ್ಯ ಅಭಿಪ್ರಾಯವಾಗಿದೆ.
ಈ ಇಡೀ ವಿವಾದಕ್ಕೆ ಮತ್ತಷ್ಟು ತುಪ್ಪ ಸುರಿದಿರುವುದು ಇತ್ತೀಚಿನ ಅತ್ಯಾಧುನಿಕ ತಂತ್ರಜ್ಞಾನಗಳು!. ಹೌದು, ನಾಗಚೈತನ್ಯ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲು ಕಿಡಿಗೇಡಿಗಳು ಎಐ ಹಾಗೂ ಡೀಪ್ಫೇಕ್ ತಂತ್ರಜ್ಞಾನವನ್ನು ಅಸ್ತ್ರವನ್ನಾಗಿ ಮಾಡಿಕೊಂಡಿದ್ದಾರೆ. ಸತ್ಯಕ್ಕೆ ದೂರವಾದ ವಿಡಿಯೋ.. ಫೋಟೋಗಳನ್ನ ಸೃಷ್ಟಿಸಿ, ನಿಜಕ್ಕೂ ಅದು ಚೈತನ್ಯ ಅವರೇ ಮಾಡಿದ್ದು ಎನ್ನುವಂತೆ ಬಿಂಬಿಸಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಲಾಗುತ್ತಿದೆ. ಈ ಡಿಜಿಟಲ್ ವಂಚನೆಯನ್ನು ಕಂಡು ನಾಗಚೈತನ್ಯ ಕಂಗಾಲಾಗಿದ್ದಾರೆ.
ಇನ್ನು ಸುಮ್ಮನಿದ್ದರೆ ಆಗಲ್ಲ ಎಂದು ಅರಿತ ನಾಗಚೈತನ್ಯ, ಈ ಕಿಡಿಗೇಡಿಗಳ ವಿರುದ್ಧ ನೇರವಾಗಿ ಕಾನೂನು ಸಮರ ಸಾರಿದ್ದಾರೆ. ಚೈತನ್ಯ ಪರ ಹಿರಿಯ ವಕೀಲರಾದ ವೈಭವ್ ಗಗ್ಗರ್ ಅವರು ದೇಶದ ಅತ್ಯುನ್ನತ ದೆಹಲಿ ಹೈಕೋರ್ಟ್ನಲ್ಲಿ ದೂರು ದಾಖಲಿಸಿದ್ದಾರೆ. ಯೂಟ್ಯೂಬ್ ಹಾಗೂ ವೆಬ್ಸೈಟ್ಗಳ ಈ ಕರಾಳ ಮುಖವನ್ನು ನ್ಯಾಯಾಲಯದ ಗಮನಕ್ಕೆ ತಂದಿರುವ ವಕೀಲರು, ನಾಗಚೈತನ್ಯ ಅವರ ಹೆಸರಿಗೆ ಮಸಿ ಬಳಿಯುವ ಇಂತಹ ವಿಡಿಯೋಗಳಿಗೆ ತಕ್ಷಣವೇ ತಡೆ ನೀಡುವಂತೆ “ಡೈನಾಮಿಕ್ ಇಂಜೆಕ್ಷನ್” ಕೋರಿ ನ್ಯಾಯಾಲಯಕ್ಕೆ ಬಲವಾದ ಮನವಿ ಮಾಡಿದ್ದಾರೆ.
ಒಟ್ಟಿನಲ್ಲಿ, ಸಮಂತಾ-ನಾಗಚೈತನ್ಯ ಅವರ ವೈಯಕ್ತಿಕ ಜೀವನದ ಕಥೆ ಮುಗಿದಿದ್ದರೂ, ಅದರ ಸುತ್ತಲಿನ ವಿವಾದದ ಕಿಡಿ ಮಾತ್ರ ಇನ್ನೂ ತಣ್ಣಗಾಗಿಲ್ಲ. ನಾಗಚೈತನ್ಯ ಹಾಕಿರುವ ಈ ಕಾನೂನು ಬಾಣಕ್ಕೆ ಡಿಜಿಟಲ್ ಲೋಕದ ಸುಳ್ಳು ಸುದ್ದಿ ವೀರರು ಬೆದರಿ ಹೋಗಿದ್ದಾರೆ. ಸದ್ಯ ಈ ಹೈ ಪ್ರೊಫೈಲ್ ಪ್ರಕರಣದ ವಿಚಾರಣೆಯನ್ನು ದೆಹಲಿ ಹೈಕೋರ್ಟ್ನ ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರು ಸೆಪ್ಟೆಂಬರ್ 30ಕ್ಕೆ ಮುಂದೂಡಿದ್ದಾರೆ. ಅಂದು ಕೋರ್ಟ್ ಈ ಸುಳ್ಳು ಸುದ್ದಿಗಳಿಗೆ ಹೇಗೆ ಬ್ರೇಕ್ ಹಾಕಲಿದೆ ಮತ್ತು ಚೈತನ್ಯಗೆ ಹೇಗೆ ನ್ಯಾಯ ಸಿಗಲಿದೆ ಎಂಬುದನ್ನು ಇಡೀ ಚಿತ್ರರಂಗವೇ ಕಾದು ನೋಡುತ್ತಿದೆ.
