ನಟ ಮಡೆನೂರ್ ಮನು ರಿಲೀಸ್! ಪಕ್ಕಾ ಫ್ರೀ ಪ್ಯಾನ್ ಮಾಡಿ ನನ್ನ ಮುಗಿಸಿದ್ರು

Web 2025 06 07t132823.277

ಕಾಮಿಡಿ ಕಿಲಾಡಿಗಳ ಖ್ಯಾತಿಯ ಹಾಸ್ಯನಟ ಮಡೆನೂರು ಮನು ಅವರು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿದ್ದ ಮನು, ಬಿಡುಗಡೆಯಾದ ಬಳಿಕ ಮಾಧ್ಯಮಗಳಿಗೆ ತಮ್ಮ ಮೊದಲ ಹೇಳಿಕೆಯನ್ನು ನೀಡಿದ್ದಾರೆ. ತಮ್ಮ ವಿರುದ್ಧ ಪಕ್ಕಾ ಯೋಜನೆಯಿಂದ ಷಡ್ಯಂತ್ರ ನಡೆದಿದೆ ಎಂದು ಆರೋಪಿಸಿರುವ ಮನು, ತಮ್ಮ ಮೂರು ವರ್ಷಗಳ ಶ್ರಮ ವ್ಯರ್ಥವಾಯಿತು ಎಂದು ದೂರಿದ್ದಾರೆ.

ಜೈಲಿನಿಂದ ಬಿಡುಗಡೆಯಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮಡೆನೂರು ಮನು, ಶಿವರಾಜಕುಮಾರ್, ದರ್ಶನ್, ಮತ್ತು ಧ್ರುವ ಸರ್ಜಾ ಬಗ್ಗೆ ತಾನು ಯಾವುದೇ ಆಡಿಯೋದಲ್ಲಿ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. “ನಾನು ಶಿವಣ್ಣನವರನ್ನು ಭೇಟಿಯಾಗಿ ಸತ್ಯವನ್ನು ವಿವರಿಸಿ ಕ್ಷಮೆ ಕೇಳುತ್ತೇನೆ. ಐದಾರು ಮಂದಿ ಪಕ್ಕಾ ಯೋಜನೆಯಿಂದ ನನ್ನನ್ನು ಮುಗಿಸಿದ್ದಾರೆ. ನನ್ನ ಮೂರು ವರ್ಷಗಳ ಶ್ರಮ ಹಾಳಾಯಿತು,” ಎಂದು ಆರೋಪಿಸಿದ್ದಾರೆ.

ADVERTISEMENT
ADVERTISEMENT

“ಪಕ್ಕಾ ಪ್ಲಾನ್ ಮಾಡಿ ನನ್ನ ಮುಗಿಸಿದ್ರು. ಸಾಕಷ್ಟು ಅಡೆತಡೆಗಳ ನಡುವೆ ಸಿನಿಮಾ ರಿಲೀಸ್ ಆಗಿದೆ. ಪ್ರತಿ ಹಂತದಲ್ಲೂ ನನ್ನ ವಿರುದ್ಧ ಷಡ್ಯಂತ್ರ ನಡೆಯಿತು.”

ಮನು ತಮ್ಮ ವಿರುದ್ಧ ನಡೆದ ಷಡ್ಯಂತ್ರದ ಬಗ್ಗೆ ವಿವರಿಸಿದ್ದಾರೆ. “ಸಿನಿಮಾ ರಿಲೀಸ್‌ಗೂ ಮೊದಲು ಕುಣಿಗಲ್ ಬಳಿ ನನ್ನ ಮೇಲೆ ಮೊಟ್ಟೆ ಎಸೆದರು, ಹಲ್ಲೆ ನಡೆಸಿ ಬಟ್ಟೆಗಳನ್ನು ಹರಿದರು. ಕೊನೆಗೆ ನನ್ನ ಜೊತೆಯಲ್ಲಿದ್ದವರೇ ಕೇಸ್ ಮಾಡಿಸಿದ್ದಾರೆ. 50 ಸಾವಿರ ಖರ್ಚು ಮಾಡಿ ಆಡಿಯೋ ರೆಡಿ ಮಾಡಿ, ನನ್ನ ಕಥೆ ಮುಗಿಸುವುದಾಗಿ ಧಮ್ಕಿ ಹಾಕಿದ್ದರು,” ಎಂದು ಆರೋಪಿಸಿದ್ದಾರೆ.

ಮಡೆನೂರು ಮನು ತಾವು ನ್ಯಾಯಾಲಯದ ಮೇಲೆ ನಂಬಿಕೆ ಇದೆ ಎಂದು ತಿಳಿಸಿದ್ದಾರೆ. “ಅತ್ಯಾಚಾರ ಕೇಸ್ ವಿಚಾರದಲ್ಲಿ ಕಾನೂನು ಹೋರಾಟ ಮಾಡುತ್ತೇನೆ. ನಾನು ಬಡವನಾದ್ದರಿಂದ ಆಡಿಯೋ ನನ್ನದಲ್ಲ ಎಂದು ಚಾಲೆಂಜ್ ಮಾಡಲು ಆಗಿಲ್ಲ. ಆದರೆ, ಕಲೆ ತಾಯಿ ಶಾರದೆ ಕೈ ಬಿಡುವುದಿಲ್ಲ,” ಎಂದು ಭಾವುಕವಾಗಿ ಹೇಳಿದ್ದಾರೆ.

“ಸಾಮಾನ್ಯ ಹಳ್ಳಿಹೈದನಾಗಿ ಮೂರು ವರ್ಷ ಹಗಲಿರುಳು ಕಷ್ಟಪಟ್ಟಿದ್ದೆ. ಆದರೆ, ಎಲ್ಲವನ್ನೂ ಮುಗಿಸಿದರು. ಆದರೂ ಕಲೆ ತಾಯಿ ಶಾರದೆ ಕೈ ಬಿಡುವುದಿಲ್ಲ.”

ಕಾಮಿಡಿ ಕಿಲಾಡಿಗಳ ಮೂಲಕ ಖ್ಯಾತಿಗಳಿಸಿದ ಮಡೆನೂರು ಮನು, ತಮ್ಮ ಸಿನಿಮಾ ವೃತ್ತಿಜೀವನದಲ್ಲಿ ಸಾಕಷ್ಟು ಅಡೆತಡೆಗಳನ್ನು ಎದುರಿಸಿದ್ದಾರೆ. ಅತ್ಯಾಚಾರ ಆರೋಪದಡಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೆಲಕಾಲ ಕಳೆದ ಅವರು, ಈಗ ಬಿಡುಗಡೆಯಾಗಿದ್ದಾರೆ. ಆದರೆ, ತಮ್ಮ ವಿರುದ್ಧ ನಡೆದ ಷಡ್ಯಂತ್ರದಿಂದಾಗಿ ಸಿನಿಮಾ ರಿಲೀಸ್ ಮತ್ತು ವೃತ್ತಿಜೀವನದಲ್ಲಿ ತೀವ್ರ ನಷ್ಟ ಅನುಭವಿಸಿದ್ದಾರೆ ಎಂದು ಆರೋಪಿಸಿದ್ದಾರೆ.

Exit mobile version