ರಿವೀಲ್ ಆಯ್ತು ರಾಜ್ ‘ಲ್ಯಾಂಡ್‌‌ಲಾರ್ಡ್‌’ ದುನಿಯಾ

ಇದು ‘ಆಳಿದವರ ಕಥೆಯಲ್ಲ’.. ‘ಅಳಿದು ಉಳಿದವರ ಕಥೆ’..!

Untitled design 2025 12 08T161617.124

ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಬೆಂಚ್‌‌ಮಾರ್ಕ್‌ ಸಿನಿಮಾ ಆಗೋ ಮುನ್ಸೂಚನೆ ನೀಡಿದೆ ಲ್ಯಾಂಡ್‌‌ಲಾರ್ಡ್‌. ದುನಿಯಾ ವಿಜಯ್- ರಾಜ್ ಬಿ ಶೆಟ್ಟಿಯ ಜುಗಲ್ಬಂದಿ ಜೋರಿರಲಿದ್ದು, ದಿ ರೂಲರ್ ಟೀಸರ್ ಅದಕ್ಕೆ ಮತ್ತಷ್ಟು ವೇಗ ತಂದುಕೊಟ್ಟಿದೆ. ಹಾಗಾದ್ರೆ ಚಿತ್ರರಂಗದ ಸೆನ್ಸೇಷನಲ್ ಸ್ಟಾರ್‌‌ಗಳ ಲ್ಯಾಂಡ್‌‌ಲಾರ್ಡ್‌ ದುನಿಯಾ ಹೇಗಿದೆ ಅಂತೀರಾ..? ಈ ಸ್ಟೋರಿ ನೋಡಿ.

ಇದು 2026ರ ಹೊಸ ವರ್ಷದಲ್ಲಿ.. ಅಂದ್ರೆ ಜನವರಿ 23ಕ್ಕೆ ಪ್ರೇಕ್ಷಕರನ್ನ ರಂಜಿಸೋಕೆ ಬರ್ತಿರೋ ಕನ್ನಡದ ಬಹುನಿರೀಕ್ಷಿತ ಸಿನಿಮಾ ಲ್ಯಾಂಡ್‌ಲಾರ್ಡ್‌ನ ಹೊಚ್ಚ ಹೊಸ ಟೀಸರ್ ಝಲಕ್. ದಿ ರೂಲರ್ ಟೀಸರ್ ಇದಾಗಿದ್ದು, ಲ್ಯಾಂಡ್‌‌ಲಾರ್ಡ್‌ ಚಿತ್ರದ ಖಡಕ್ ಖಳನಾಯಕ ರಾಜ್ ಬಿ ಶೆಟ್ಟಿ ಅವರ ಖದರ್ ತೋರುವ ದೃಶ್ಯಗುಚ್ಚವಾಗಿದೆ. ಚಿತ್ರಪ್ರೇಮಿಗಳು ಹಿಂದೆಂದೂ ನೋಡಿರದಂತಹ ಪಾತ್ರಕ್ಕೆ ಜೀವ ತುಂಬಿರೋ ರಾಜ್ ಬಿ ಶೆಟ್ಟಿ, ತಮ್ಮ ವರ್ಸಟಾಲಿಟಿಯನ್ನ ಮತ್ತೊಮ್ಮೆ ಕಲಾ ಬಂಧುಗಳಿಗೆ ಪರಿಚಯಿಸಿದ್ದಾರೆ.

ರಿವೀಲ್ ಆಯ್ತು ರಾಜ್ ‘ಲ್ಯಾಂಡ್‌‌ಲಾರ್ಡ್‌’ ದುನಿಯಾ

ದಿ ರೂಲರ್ ಆಗಿ ಖದರ್ ತೋರಿದ ವರ್ಸಟೈಲ್ ಆ್ಯಕ್ಟರ್

ದುನಿಯಾ ವಿಜಯ್ ಹಾಗೂ ರಚಿತಾ ರಾಮ್ ಲೀಡ್‌‌ನಲ್ಲಿ ನಟಿಸಿರೋ ಈ ಚಿತ್ರದಲ್ಲಿ ನಟ, ನಿರ್ದೇಶಕ, ನಿರ್ಮಾಪಕ ರಾಜ್‌ ಬಿ ಶೆಟ್ಟಿ ಇಂಥದ್ದೊಂದು ಪಾತ್ರ ಮಾಡಿರೋದು ನಿಜಕ್ಕೂ ಗ್ರೇಟ್. ಅದ್ರಲ್ಲೂ ಆ ರೆಟ್ರೋ ಹಳ್ಳಿ ಜಮೀನ್ದಾರನ ಪಾತ್ರದಲ್ಲಿ ಅವ್ರ ಪವರ್ ಜೊತೆ ಖದರ್ ಕೂಡ ಮಸ್ತ್ ಕಿಕ್ ಕೊಡ್ತಿದೆ. ಬಾಳೆ ತೋಟದ ಮಧ್ಯೆ ಕೈ ಬಳೆಯನ್ನ ತೆಗೆದು, ಎದುರಾಳಿಗಳಿಗೆ ಪಂಚ್ ಕೊಡೋ ಮೂಲಕ ಕೆಸರು ಗದ್ದೆಯಲ್ಲಿ ಹೊಡೆದಾಡುವ ದೃಶ್ಯ ರೋಮಾಂಚಕವಾಗಿದೆ.

ಈ ಹಿಂದೆ ಆಳಿದವರ ನಡುವೆ ಅಳಿಯದೆ ಉಳಿದು, ಚರಿತ್ರೆ ಸೃಷ್ಠಿಸೋಕೆ ತಯಾರಾದ ನಾಯಕನಟನ ಝಲಕ್ ರಿವೀಲ್ ಮಾಡಲಾಗಿತ್ತು. ನಂತ್ರ ರಚಿತಾ ರಾಮ್ ಮಚ್ಚು ಹಿಡಿದು ಬರೋ ಟೀಸರ್ ಬಿಡಲಾಗಿತ್ತು. ಇದೀಗ ದಿ ರೂಲರ್‌‌‌‌ ಅವರೆಡಕ್ಕಿಂತ ಒಂದು ಪಟ್ಟು ಜಾಸ್ತಿನೇ ಮಜಾ ಕೊಡ್ತಿದೆ. ಅದ್ರಲ್ಲಿರೋ ಡೈಲಾಗ್ಸ್ ನೋಡುಗರ ಮಸ್ತಕಕ್ಕೂ ಕೆಲಸ ಕೊಡ್ತಿದೆ. ಅಜನೀಶ್ ಹಿನ್ನೆಲೆ ಸಂಗೀತ, ಸ್ವಾಮಿ ಸಿನಿಮಾಟೋಗ್ರಫಿ, ಕೆ ಎಂ ಪ್ರಕಾಶ್ ಸಂಕಲನ ಚಿತ್ರಕ್ಕೆ ಪೂರಕವಾಗಿದೆ. ಜಡೇಶ್ ಕೆ ಹಂಪಿ ನಿರ್ದೇಶನ & ಮಾಸ್ತಿ ಅವರ ಮಾಸ್ ಡೈಲಾಗ್‌ಗಳ ಬರವಣಿಗೆ ಚಿತ್ರದ ವೇಗ ಹೆಚ್ಚಿಸಿವೆ. ಸಾರಥಿ ಬಳಿಕ ಸತ್ಯ ಪ್ರಕಾಶ್- ಹೇಮಂತ್ ಸಾರಥಿ ಫಿಲಂಸ್ ಬ್ಯಾನರ್‌‌ನಡಿ ಈ ಚಿತ್ರವನ್ನ ನಿರ್ಮಾಣ ಮಾಡ್ತಿದ್ದಾರೆ.

ವಿಜಿ v/s ರಾಜ್.. ಲ್ಯಾಂಡ್ ಯಾರದು ಲಾರ್ಡ್‌ ಯಾರು..?

ಇದು ‘ಆಳಿದವರ ಕಥೆಯಲ್ಲ’.. ‘ಅಳಿದು ಉಳಿದವರ ಕಥೆ’..!

ಎರಡೇ ಎರಡು ಟೊಮ್ಯಾಟೋ ಹಣ್ಣು ಹಿಡ್ಕೊಂಡು ಚಿತ್ರರಂಗಕ್ಕೆ ಬಂದವನು ನಾನು.. ಅದೇ ರೀತಿ ಒಂದು ಮೊಟ್ಟೆಯನ್ನ ಹಿಟ್ಕೊಂಡು ಇಂಡಸ್ಟ್ರಿಗೆ ಬಂದವರು ರಾಜ್ ಬಿ ಶೆಟ್ಟಿ. ನಮ್ಮಿಬ್ಬರನ್ನ ಇವರೂ ಹೀರೋಗಳಾ ಅಂತ ಜನ ಆಡಿಕೊಂಡಿದ್ದುಂಟು. ಆದ್ರೀಗ ನಾವೇನು ಅನ್ನೋದನ್ನ ತೋರಿಸ್ತೀವಿ ಅಂತ ನಾಯಕನಟ ದುನಿಯಾ ವಿಜಯ್ ಜರ್ನಿ ಮೆಲುಕು ಹಾಕಿದ್ರು. ಪಾತ್ರ ಚೆನ್ನಾಗಿದ್ರೆ ವಿಲನ್ ಆದ್ರೂ ಓಕೆ.. ಹೀರೋ ಆದ್ರೂ ಓಕೆ ಎಂದ ರಾಜ್ ಬಿ ಶೆಟ್ಟಿ, ನನಗೆ ಕೂದಲು ಇಲ್ಲದೇ ಇದ್ದಿದ್ದೇ ಒಳ್ಳೆಯದಾಯ್ತು.

ಅದ್ರಿಂದ ಇಂಡಸ್ಟ್ರಿಗೆ ಬಂದೆ ಎಂದರು. ಒಟ್ಟಾರೆ ಲ್ಯಾಂಡ್‌‌ಲಾರ್ಡ್‌ ಕನ್ನಡ ಚಿತ್ರರಂಗದ ಪಾಥ್ ಬ್ರೇಕಿಂಗ್ ಮೂವಿ ಆಗುವ ಎಲ್ಲಾ ಲಕ್ಷಣಗಳನ್ನ ತೋರಿದೆ.

 

 

 

 

 

Exit mobile version