ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
ಕೆಡಿ ಚಿತ್ರದ ಟ್ರೈಲರ್ ನಲ್ಲಿ ಬಾದ್ಷಾ ಕಿಚ್ಚ ಸುದೀಪ್ ಸರ್ಪ್ರೈಸ್ ಎಂಟ್ರಿ ಕೊಟ್ಟಿದ್ದಾರೆ. ಇದರ ಜೊತೆಗೆ ಧ್ರುವ ಸರ್ಜಾ ಮಂಡ್ಯ ಸ್ಲ್ಯಾಂಗ್ ಡೈಲಾಗ್ಗಳ ಹಿಂದಿರೋ ಮಾಸ್ಟರ್ಮೈಂಡ್ ಕ್ರಾಂತಿ, 18 ವರ್ಷಗಳ ನಂತರ ಶಿಲ್ಪಾ ಶೆಟ್ಟಿ ಕಂಬ್ಯಾಕ್ ಝಲಕ್ ಹೇಗಿದೆ..? ಕಾಳಿದಾಸ ಮತ್ತು ಕಾಲಭೈರವನ ಈ ಮಹಾಯುದ್ಧ ಹೇಗಿರಲಿದೆ..? ಇಲ್ಲಿದೆ ನೋಡಿ.
- ಟ್ರೈಲರ್ನಲ್ಲಿ ‘ಕಾಲಭೈರವ’ನಾಗಿ ಸುದೀಪ್ ಸುಂಟರಗಾಳಿ
- ಅಪ್ಪು ಐಕಾನಿಕ್ ಡೈಲಾಗ್ಗೆ ಧ್ರುವ ಸರ್ಜಾ ಮಾಸ್ ಟಚ್..!
- ಕ್ರಾಂತಿ ಲೇಖನಿಯ ರಕ್ತ ಚರಿತ್ರೆ.. KD ಸಾಮ್ರಾಜ್ಯದ ವಜ್ರಾಯುಧ
- ಏಪ್ರಿಲ್ 30ಕ್ಕೆ ವಿಶ್ವದಾದ್ಯಂತ ಕಾಳಿದಾಸನ ಶಿಕಾರಿ ಶುಭಾರಂಭ..!
ಟ್ರೈಲರ್ನ ಕೊನೆಯ ಕ್ಷಣದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅನಿರೀಕ್ಷಿತ ಎಂಟ್ರಿ ಸುದೀಪಿಯನ್ಸ್ ಗೆ ಕಿಕ್ ಕೊಟ್ಟಿದೆ. ಚಿತ್ರದಲ್ಲಿ ಸುದೀಪ್ ‘ಕಾಲಭೈರವ’ನಾಗಿ ಕಾಣಿಸಿಕೊಂಡಿದ್ದಾರೆ. ವೈಯಕ್ತಿಕ ಕಾರಣಗಳಿಂದ ಸುದ್ದಿಗೋಷ್ಠಿಗೆ ಹಾಜರಾಗಲು ಸಾಧ್ಯವಾಗದಿದ್ದರೂ, ಸುದೀಪ್ ವಿಶೇಷ ವೀಡಿಯೋ ಸಂದೇಶದ ಮೂಲಕ ಚಿತ್ರತಂಡಕ್ಕೆ ಬೆಂಬಲ ಸೂಚಿಸಿದ್ದಾರೆ. ಧ್ರುವ ಸರ್ಜಾ ರಗಡ್ ಆ್ಯಕ್ಷನ್ ಜೊತೆಗೆ ಕಿಚ್ಚನ ‘ಕಾಲಭೈರವ’ನ ಅವತಾರವು ಚಿತ್ರದ ತೂಕವನ್ನು ಮತ್ತೊಂದು ಲೆವೆಲ್ಗೆ ಕೊಂಡೊಯ್ದಿದೆ. ಬೆಳ್ಳಿತೆರೆಯ ಮೇಲೆ ಕಾಳಿದಾಸ ಮತ್ತು ಕಾಲಭೈರವನ ಮುಖಾಮುಖಿ ನೋಡಲು ಪ್ರೇಕ್ಷಕರು ಈಗ ಕಾತರದಿಂದ ಕಾಯ್ತಿರೋದು ಸುಳ್ಳಲ್ಲ.
ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವ ಕಾಲ ಬಂದಿದೆ ಎಂದು ಕೆಡಿ ಚಿತ್ರತಂಡಕ್ಕೆ ಬೆಂಬಲ ಸೂಚಿಸುತ್ತಿದ್ದಾರೆ. ಸಂಗೀತ ಮಾಂತ್ರಿಕ ಅರ್ಜುನ್ ಜನ್ಯ ಅವರ ಬ್ಯಾಗ್ರೌಂಡ್ ಸ್ಕೋರ್ ಟ್ರೈಲರ್ನ ಜೀವನಾಡಿ. ಪ್ರತಿಯೊಂದು ಫ್ರೇಮ್ನಲ್ಲೂ ಎಕ್ಸೈಟ್ಮೆಂಟ್ ನೀಡುವ ಸಂಗೀತ ಮತ್ತು ವಿಲಿಯಂ ಡೇವಿಡ್ ಅವರ ಅದ್ಭುತ ಛಾಯಾಗ್ರಹಣ ಸಿನಿಮಾವನ್ನು ಹಾಲಿವುಡ್ ಮಟ್ಟಕ್ಕೆ ಕೊಂಡೊಯ್ದಿದೆ.
ಇನ್ನು ಕೆಡಿ ಚಿತ್ರದ ಸಂಭಾಷಣೆಗಳ ಹಿಂದೆ ಇರೋ ಅಸಲಿ ಶಕ್ತಿ ಅಂದ್ರೆ ಡೈಲಾಗ್ ರೈಟರ್ ಕ್ರಾಂತಿ. ಈ ಚಿತ್ರದ ಪ್ರತಿ ಡೈಲಾಗ್ ಕೂಡ ಬೆಂಕಿಯ ಉಂಡೆಯಂತಿರಲು ಕ್ರಾಂತಿ ಅವರ ಮಂಡ್ಯ ಸೊಗಡಿನ ಬರವಣಿಗೆಯೇ ಕಾರಣ. ಟ್ರೈಲರ್ನಲ್ಲಿ ಬರುವ ‘ಅಪ್ಪಿ ತಪ್ಪಿ ಕೈಕಾಲು ಹೋಗಿ ಜೀವಂತವಾಗಿ ಉಳ್ಕೊಂಡ್ ಬಿಟ್ರೆ.. ನಿಮ್ಮ ಹೆತ್ತವ್ಳಿಗೆ ತೆಪ್ಪಾಯ್ತು ಅಂಡ್ಬಿಡ್ರಣಾ’, ‘ಹಾಕಿಸ್ಲಾ ಬೆಂಕಿ..?’ ಮತ್ತು ಸಂಜಯ್ ದತ್ ಅವರ ಪಾತ್ರಕ್ಕೆ ಕೊಟ್ಟಿರುವ ಖಡಕ್ ಮಾತುಗಳು ಕ್ರಾಂತಿ ಲೇಖನಿಯ ತಾಕತ್ತನ್ನ ತೋರಿಸ್ತಿದೆ. ರೆಟ್ರೋ ಕಾಲಘಟ್ಟದ ಈ ಕಥೆಗೆ ತಕ್ಕಂತೆ ಅಪ್ಪಟ ದೇಸಿ ಶೈಲಿಯ ಮಾಸ್ ಮಸಾಲೆಯನ್ನೇ ಬೆರೆಸಿ, ಧ್ರುವ ಸರ್ಜಾ ಅವರ ಇಮೇಜ್ಗೆ ಒಪ್ಪುವಂತಹ ಪವರ್ಫುಲ್ ಸಾಲುಗಳನ್ನು ಪೋಣಿಸಿದ್ದಾರೆ ಕ್ರಾಂತಿ. ಈ ಚಿತ್ರದ ಮೂಲಕ ಸ್ಯಾಂಡಲ್ವುಡ್ನಲ್ಲಿ ಭರವಸೆಯ ಸ್ಟಾರ್ ಸಂಭಾಷಣೆಕಾರನಾಗಿ ಸದ್ದು ಮಾಡ್ತಿರೋದು ವಿಶೇಷ.
18 ವರ್ಷಗಳ ನಂತರ ಕನ್ನಡ ಚಿತ್ರರಂಗಕ್ಕೆ ಮರಳಿರುವ ಶಿಲ್ಪಾ ಶೆಟ್ಟಿ ‘ಸತ್ಯವತಿ’ ಪವರ್ಫುಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಧ್ರುವ ಸರ್ಜಾ ರಗಡ್ ಅವತಾರದ ನಡುವೆ ಶಿಲ್ಪಾ ಅವರ ಈ ರಾಜಮಾತೆಯಂತಹ ಗತ್ತು ಹಾಗೂ ಅವರ ಡೈಲಾಗ್ ಡೆಲಿವರಿ ಸಿನಿರಸಿಕರಿಗೆ ಸಖತ್ ಇಷ್ಟವಾಗಿದೆ. ಇನ್ನು ಸಂಜಯ್ ದತ್ ರೆಟ್ರೋ ಸ್ಟೈಲ್ನಲ್ಲಿ, ಕೈಯಲ್ಲಿ ಸಿಗಾರ್ ಹಿಡಿದು ಎದುರಾಳಿಗಳನ್ನು ಸದೆಬಡಿಯುವ ಪರಿ ಅವ್ರ ಆ ಹಳೆಯ ಖಳನಾಯಕ್ ದಿನಗಳನ್ನು ನೆನಪಿಸುತ್ತದೆ. ಅವರ ಗಂಭೀರ ನೋಟ ಮತ್ತು ಸ್ಕ್ರೀನ್ ಪ್ರೆಸೆನ್ಸ್ ಸಿನಿಮಾದ ತೂಕವನ್ನು ಡಬಲ್ ಮಾಡಿದೆ. ಕೆಜಿಎಫ್ ಅಧೀರನ ನಂತರ ಕನ್ನಡದಲ್ಲಿ ಮತ್ತೊಮ್ಮೆ ಧಕ್ ಧೀರನಾಗಿ ಸಂಜಯ್ ದತ್ ಅಬ್ಬರಿಸುತ್ತಿದ್ದು, ಧ್ರುವ ಮತ್ತು ಸಂಜು ಬಾಬಾ ನಡುವಿನ ಮುಖಾಮುಖಿ ಕಣ್ತುಂಬಿಕೊಳ್ಳು ಕೋಟ್ಯಂತರ ಕನ್ನುಗಳು ಕಾಯ್ತಿವೆ.
ಅಂದಹಾಗೆ ಜೋಗಿ ಪ್ರೇಮ್ ಸಿನಿಮಾ ಅಂದ್ಮೇಲೆ ಅಲ್ಲಿ ರಕ್ತಸಿಕ್ತತೆ, ಲಾಂಗು-ಮಚ್ಚುಗಳ ಘರ್ಜನೆ ಇರಲೇಬೇಕು. ಅದು ಅವರ ಸಿನಿಮೀಯ ಟ್ರೇಡ್ ಮಾರ್ಕ್. ಅಂದು ಜೋಗಿ ಚಿತ್ರದಲ್ಲಿ ಶಿವಣ್ಣನ ಕೈಗೆ ಮಚ್ಚು ಕೊಟ್ಟು, ಹೊಸ ಟ್ರೆಂಡ್ ಸೃಷ್ಠಿಸಿದ್ರು ಪ್ರೇಮ್. ಬಳಿಕ ‘ರಾಜ್ ದಿ ಶೋ ಮ್ಯಾನ್’ನಲ್ಲಿ ಪುನೀತ್ ರಾಜ್ಕುಮಾರ್ ಕೈಲಿ ಹೇಳಿಸಿದ್ದ ಅದೇ ಅಪ್ಪಿ ತಪ್ಪಿ ಡೈಲಾಗ್ನ ಧ್ರುವ ಕೈಲಿ ಹೇಳಿಸಿ, ಅಭಿಮಾನಿಗಳ ಎದೆಯಲ್ಲಿ ಕಿಚ್ಚು ಹಚ್ಚಿದ್ದಾರೆ. ಈಗ ಅದೇ ಐಕಾನಿಕ್ ಡೈಲಾಗ್ಗೆ ಧ್ರುವ ಸರ್ಜಾ ‘ಕೆಡಿ’ ನಲ್ಲಿ ಮಂಡ್ಯ ಸ್ಲ್ಯಾಂಗ್ನಲ್ಲಿ ರಗಡ್ ಟಚ್ ಕೊಟ್ಟಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ‘ಕೆಡಿ: ದಿ ಡೆವಿಲ್’ ಕೇವಲ ಒಂದು ಸಿನಿಮಾ ಅಲ್ಲ. ಇದು ಸ್ಯಾಂಡಲ್ವುಡ್ ಇತಿಹಾಸದಲ್ಲಿ ಹೊಸ ದಾಖಲೆ ಬರೆಯಲು ಸಜ್ಜಾಗಿರೋ ರಕ್ತ ಚರಿತ್ರೆ. ಜೋಗಿ ಪ್ರೇಮ್ ಅವ್ರ ಅದ್ಭುತ ಮೇಕಿಂಗ್, ಧ್ರುವ ಸರ್ಜಾ ಅವರ ರಗಡ್ ಆ್ಯಕ್ಷನ್ ಮತ್ತು ಬಾಲಿವುಡ್-ಸ್ಯಾಂಡಲ್ವುಡ್ ದಿಗ್ಗಜರ ಸಮಾಗಮ ಈ ಚಿತ್ರವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅಜೇಯವಾಗಿಸಿದೆ. 3 ವರ್ಷಗಳ ಸುದೀರ್ಘ ಕಾಯುವಿಕೆ ಮತ್ತು ಸೆನ್ಸಾರ್ ಅಡೆತಡೆಗಳ ನಂತರ ಮೂಡಿಬಂದಿರುವ ಈ ಟ್ರೈಲರ್, ಕಾಳಿದಾಸ ಮತ್ತು ಕಾಲಭೈರವನ ಅಬ್ಬರ ಹೇಗಿರಲಿದೆ ಎಂಬುದಕ್ಕೆ ಮುನ್ನುಡಿ ಬರೆದಿದೆ.
ಏಪ್ರಿಲ್ 30ರಂದು ಚಿತ್ರಮಂದಿರಗಳಲ್ಲಿ ಕೆಡಿ ಆರ್ಭಟ ಶುರುವಾಗಲಿದ್ದು, ಗಾಂಧಿನಗರದ ಗಲ್ಲಿಯಿಂದ ಬಾಲಿವುಡ್ ಅಂಗಳದವರೆಗೆ ಕೆಡಿ ಹವಾ ಹೇಗಿರಲಿದೆ ಅನ್ನೋದು ಕಾದು ನೋಡೋಣ. ಅಂದಹಾಗೆ ಸದ್ಯ ಸೆನ್ಸಾರ್ ತಿಕ್ಕಾಟದಿಂದಾಗಿ ಬರೀ ಕನ್ನಡ ವರ್ಷನ್ ವರ್ಲ್ಡ್ ವೈಡ್ ತೆರೆಗಪ್ಪಳಿಸುತ್ತಿದೆ. ಒಂದು ವಾರ ಬಿಟ್ಟು ಉಳಿದ ಪ್ಯಾನ್ ಇಂಡಿಯಾ ಭಾಷೆಗಳಲ್ಲಿ ಬೆಳ್ಳಿತೆರೆ ಬೆಳಗಲಿದೆ ಎನ್ನಲಾಗ್ತಿದೆ.
| Reported by: ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್
