ರಾಮಾಯಣ, ಮಹಾಭಾರತ ನಡೆದದ್ದು ಹೆಣ್ಣಿಂದಲೇ. ಸದ್ಯ ಆಪರೇಷನ್ ಸಿಂದೂರ್ ಕೂಡ ಹೆಣ್ಣಿನಿಂದಲೇ ಅನ್ನೋದು ಓಪನ್ ಸೀಕ್ರೆಟ್. ಹೆಣ್ಣು ನಾರಿ.. ಮುನಿದರೆ ಮಾರಿ. ಯೆಸ್.. ನಟಿ ಕಮ್ ಬಿಜೆಪಿ ಸಂಸದೆ ಕಂಗನಾ ರಣಾವತ್ ಪಾಕ್ ವಿರುದ್ಧ ಕಿಡಿಕಾರಿದ್ದಾರೆ. ಭೂಪಟದಿಂದ ಪಾಕ್ನ ಅಳಿಸಿ ಹಾಕಬೇಕು ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.
- ಪಾಕ್ನ ಭೂಪಟದಿಂದಲೇ ಅಳಿಸಿಹಾಕಿ.. ಕಂಗನಾ ಕಂಪನ
- ಪಾಕಿಸ್ತಾನ ರಕ್ತಸಿಕ್ತ ಜಿರಳೆಗಳಿಂದ ಕೂಡಿರೋ ‘ಅಸಹ್ಯ ರಾಷ್ಟ್ರ’
ನಟಿ, ನಿರ್ದೇಶಕಿ, ನಿರ್ಮಾಪಕಿ ಕಂಗನಾ ರಣಾವತ್ ಈಗ ಚಿತ್ರರಂಗಕ್ಕಷ್ಟೇ ಸೀಮಿತ ಆಗಿಲ್ಲ. ಆಕೆ ರಾಜಕಾರಣಿಯೂ ಹೌದು. ಬಿಜೆಪಿಯಿಂದ ಸಂಸದೆ ಆಗಿ ಪಾರ್ಮಿಮೆಂಟ್ ಮೆಟ್ಟಿಲೇರಿರೋ ಕಂಗನಾ ರಣಾವತ್ ಅಪಾರ ದೇಶಭಕ್ತೆಯೂ ಹೌದು. ಮಿಗಿಲಾಗಿ ಬಹುದೊಡ್ಡ ಸನಾತನಿ. ಹಿಂದುತ್ವ ಹಾಗೂ ದೇಶದ ಪರ ಸದಾ ಧ್ವನಿ ಎತ್ತುವಂತಹ ಬಹುಮುಖ ಪ್ರತಿಭೆ.
ಪಾಕಿಸ್ತಾನವನ್ನು ಭಯೋತ್ಪಾದಕರ ನಾಡು ಎಂದು ಕರೆದಿರೋ ಬಾಲಿವುಡ್ ಕ್ವೀನ್, ಅದನ್ನ ಭೂಪಟದಿಂದಲೇ ಅಳಿಸಿ ಹಾಕಬೇಕು ಅಂತ ಅಭಿಪ್ರಾಯ ಹೊರಹಾಕಿದ್ದಾರೆ.
ನೈಜ ಘಟನೆ ಆಧಾರಿತ ಸಿನಿಮಾಗಳು, ಐತಿಹಾಸಿಕ ಚಿತ್ರಗಳು ಹಾಗೂ ಬಯೋಪಿಕ್ಗಳನ್ನ ಮಾಡೋದ್ರಲ್ಲಿ ಕಂಗನಾ ಎತ್ತಿದ ಕೈ. ಹಾಗಾಗಿ ಆಕೆಯ ಸಿನಿಮಾಗಳು ಹಾಗೂ ಪಾತ್ರಗಳಲ್ಲಿ ಒಂದು ಕಿಚ್ಚು ಇರಲಿದೆ. ಅದೇ ರೀತಿ ಒಂದೊಂದು ಸ್ಟೇಟ್ಮೆಂಟ್ ಕೂಡ ಸಂಚಲನ ಮೂಡಿಸುತ್ತವೆ. ಅದರಲ್ಲೂ ಎಂ.ಪಿ ಆದ ಬಳಿಕ ಈಕೆಯ ಮಾತುಗಳಿಗೆ ಒಂದು ತೂಕ ಬಂದಿದೆ. ಹಾಗಾಗಿ ಈಕೆ ಸದ್ಯ ನೀಡ್ತಿರೋ ಪಾಕ್ ವಿರುದ್ಧದ ಹೇಳಿಕೆಗಳು ಎಲ್ಲೆಡೆ ವೈರಲ್ ಆಗ್ತಿವೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್