KDಗೆ ಕ್ಯಾತೆ ತೆಗೆದ ತಮಿಳಿಗರು.. ಪ್ರೇಮ್ ಖಡಕ್ ಉತ್ತರ

ಚೆನ್ನೈನಲ್ಲಿ ಅವಮಾನಿಸಲು ಮುಂದಾದ ತಮಿಳು ಮಂದಿ

Your paragraph text (20)

ಕನ್ನಡ ಭಾಷೆ ವಿಚಾರ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತಂದು, ಥಗ್ ಲೈಫ್ ಸಿನಿಮಾದ ಕರ್ನಾಟಕ ರಿಲೀಸ್‌ಗೆ ಸ್ವತಃ ತಾವೇ ಎಡವಟ್ ಮಾಡಿಕೊಂಡಿದ್ರು ಕಮಲ್ ಹಾಸನ್. ಇದೀಗ ಚೆನ್ನೈಗೆ ತೆರಳಿದ್ದ ಧ್ರುವ ಕೆಡಿ ಚಿತ್ರತಂಡದ ವಿರುದ್ಧ ಕ್ಯಾತೆ ತೆಗೆದ ತಮಿಳಿಗರಿಗೆ ಖಡಕ್ ಉತ್ತರ ಕೊಡುವ ಮೂಲಕ ಬಾಯಿ ಮುಚ್ಚಿಸಿದ್ದಾರೆ ಜೋಗಿ ಪ್ರೇಮ್.

ಯಾರು ರೀ ಜೋಗಿ ಪ್ರೇಮ್‌ಗೆ ಕನ್ನಡ ಬಿಟ್ಟು ಬೇರೆ ಭಾಷೆ ಬರಲ್ಲ ಅಂದಿದ್ದು..? ಕನಕಪುರದ ರೈತನ ಮಗ ಪ್ರೇಮ್‌ಗೆ ಬೇರೆ ಭಾಷೆಗಳು ಬಾರದಿದ್ದರೂ, ಅವರ ಭಾವನೆಗಳನ್ನ ಅರ್ಥೈಸಿಕೊಳ್ಳೋ ಮನಸ್ಸಿದೆ. ಸದ್ಯ ತನ್ನ ಕೆಡಿ ಸಿನಿಮಾದ ಟೀಸರ್ ಲಾಂಚ್‌ಗಾಗಿ ಮುಂಬೈ, ಹೈದ್ರಾಬಾದ್ ಮುಗಿಸಿ, ಕೊಚ್ಚಿಗೂ ಮುನ್ನ ಚೆನ್ನೈಗೆ ತೆರಳಿದ್ರು. ಅಲ್ಲಿ ಕಮಲ್ ಹಾಸನ್ ಥಗ್ ಲೈಫ್ ಸಿನಿಮಾನ ಬ್ಯಾನ್ ಮಾಡಿದ್ದ ಕನ್ನಡಿಗರ ಧೋರಣೆಯನ್ನ ತಮಿಳು ಪತ್ರಕರ್ತರು ಪ್ರಶ್ನಿಸಿದರು. ಕೆಡಿ ವಿರುದ್ಧ ಕ್ಯಾತೆ ತೆಗೆಯಲು ಮುಂದಾದ್ರು.

ಶಿಲ್ಪಾ ಶೆಟ್ಟಿಗೆ ಕೇಳಿದ ಪ್ರಶ್ನೆಗೆ ಮೈಕ್ ಪಡೆದು, ಬಹಳ ವಿನಯ ಹಾಗೂ ವಿನಮ್ರದಿಂದ ಪ್ರೀತಿ ಪೂರ್ವಕವಾಗಿ ಉತ್ತರಿಸಿದ ಜೋಗಿ ಪ್ರೇಮ್, ತಮಿಳಿಗರಿಗೆ ಅರ್ಥವಾಗುವಂತೆ ಹಾಗೂ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ಕೊಟ್ಟರು. ನಾವು ಎಲ್ಲಾ ತಮಿಳು ಸಿನಿಮಾಗಳನ್ನ ಬ್ಯಾನ್ ಮಾಡಿಲ್ಲ. ಕಮಲ್ ಹಾಸನ್ ಚಿತ್ರವನ್ನಷ್ಟೇ. ಯಾರಾದ್ರೂ ಸ್ವಂತ ತಾಯಿಯನ್ನ ಬೈದ್ರೆ ಸುಮ್ಮನೆ ಇರ್ತಾರಾ..? ಅವರು ಆ ರೀತಿ ಮಾತಾಡಿದ್ದು ನಮ್ಮ ಕನ್ನಡಿಗರಿಗೆ ನೋವು ತಂದಿತ್ತು. ಹಾಗಾಗಿ ಬ್ಯಾನ್ ಮಾಡಿದ್ರು. ನಮ್ಮದು ನಿಮ್ಮದು 300 ಕಿಮೀ ಬಾರ್ಡರ್ ಅಷ್ಟೇ ಅಂತ ಅರ್ಥೈಸಿದ್ರು.

ಪ್ರೇಮದಿಂದ ಪ್ರೇಮ್ ನೀಡಿದ ಉತ್ತರಕ್ಕೆ ತೆಪ್ಪಗಾದ ತಮಿಳು ಪತ್ರಕರ್ತರು ಇಡೀ ಇವೆಂಟ್‌ನ ಕೊನೆಯವರೆಗೂ ಕವರ್ ಮಾಡಿದ್ದಾರೆ. ಇದಲ್ಲವೇ ಪ್ರೇಮ್ ಗತ್ತು..? ಜೋಗಿ ಸಿನಿಮಾ ಬಂದ ಸಂದರ್ಭದಲ್ಲಿ ಬಾಲಿವುಡ್‌ವರೆಗೂ ಪರಭಾಷಿಗರೆಲ್ಲಾ ಸಿನಿಮಾ ಮಾಡಿಕೊಡಲು ಪ್ರೇಮ್ ಹಿಂದೆ ಬಿದ್ದಿದ್ದರು. ಆದ್ರೆ ಆತ ಕನ್ನಡ ಬಿಟ್ಟು ಹೊರಗೆ ಹೋಗಲಿಲ್ಲ. ಇಂದಿಗೂ ಕನ್ನಡದಲ್ಲೇ ಸಿನಿಮಾ ಮಾಡಿ, ಹೊರಗಿನವರನ್ನಿಲ್ಲಿಗೇ ಕರೆಸಿದ್ದಾರೆ. ಇದು ಡಿಕೆ ಗೈರತ್ತು ಅಂತ ಎಲ್ಲಾ ಕನ್ನಡಿಗರು ಪ್ರೇಮ್‌‌ಗೆ ಪ್ರಶಂಶಿಸುತ್ತಿದ್ದಾರೆ.

Exit mobile version