ಜೋಡೆತ್ತಿನಿಂದ ಮಹೇಶ್ ಔಟ್..ಯಾರಾಗ್ತಾರೆ ಸಾರಥಿ..?

ಅಯೋಗ್ಯ-ಜೋಡೆತ್ತು ಡೇಟ್ಸ್ ಕ್ಲ್ಯಾಶ್..ಮಹಿ ಮಹಾ ತ್ಯಾಗಿ

Untitled design 2025 11 22T140337.198

ಸ್ಯಾಂಡಲ್‌ವುಡ್ ಉಪಾಧ್ಯಕ್ಷ ಚಿಕ್ಕಣ್ಣ ಹಾಗೂ ಅಯೋಗ್ಯ ಫೇಮ್ ಮೋಸ್ಟ್ ಪ್ಯಾಷನೇಟ್ ಡೈರೆಕ್ಟರ್ ಮಹೇಶ್ ಕುಮಾರ್ ಜೋಡೆತ್ತು ಅಡ್ಡಾದಲ್ಲಿ ಸಿಕ್ಕಾಪಟ್ಟೆ ಡೆವಲಪ್‌ಮೆಂಟ್ ಆಗಿದೆ. ಟೀಸರ್ ಶೂಟ್ ಮಾಡಿದ್ದ ಮಹೇಶ್ ಕಾರಣಾಂತರಗಳಿಂದ ಜೋಡೆತ್ತು ಸೆಟ್‌‌ನಿಂದ ಹೊರಬಂದಿದ್ದಾರೆ. ಹಾಗಾದ್ರೆ ಜೋಡೆತ್ತುಗೆ ಯಾರಾಗ್ತಾರೆ ಹೊಸ ಸಾರಥಿ..? ಈ ಬಗ್ಗೆ ಪ್ರೊಡ್ಯೂಸರ್ ಸೋಮಣ್ಣ ಹೇಳೋದೇನು ಅಂತೀರಾ..? ಇಲ್ಲಿದೆ ಎಕ್ಸ್‌‌ಕ್ಲೂಸಿವ್ ಖಬರ್.

ಜೋಡೆತ್ತು.. ಉಪಾಧ್ಯಕ್ಷ, ಲಕ್ಷ್ಮೀಪುತ್ರ ಸಿನಿಮಾಗಳ ಬಳಿಕ ಸ್ಯಾಂಡಲ್‌ವುಡ್ ಉಪಾಧ್ಯಕ್ಷ ಚಿಕ್ಕಣ್ಣ ಹೀರೋ ಆಗಿ ನಟಿಸ್ತಿರೋ ಮತ್ತೊಂದು ವೆರಿ ವೆರಿ ಪ್ರಾಮಿಸಿಂಗ್ ಸಿನಿಮಾ. ರೆಟ್ರೋ ಶೈಲಿಯ ಹಳ್ಳಿ ಸೊಗಡಿನ ಸಿನಿಮಾ ಇದಾಗಲಿದ್ದು, ಈಗಾಗ್ಲೇ ಪುಷ್ಪ ಖ್ಯಾತಿಯ ಮಂಗಳಂ ಸೀನು ಸುನಿಲ್ ಜೊತೆ ಚಿಕ್ಕಣ್ಣ ಕಾಂಬೋ ಟೀಸರ್ ಗತ್ತನ್ನು ನೀವೆಲ್ಲಾ ನೋಡಿದ್ದೀರಿ. ಟೀಸರ್‌‌ನಿಂದಲೇ ಜೋಡೆತ್ತು ಸಿಕ್ಕಾಪಟ್ಟೆ ಕ್ಯೂರಿಯಾಸಿಟಿ ಮೂಡಿಸಿತ್ತು. ಇದಕ್ಕೆಲ್ಲಾ ಕಾರಣ ಒನ್ ಅಂಡ್ ಓನ್ಲಿ ಮಹೇಶ್ ಕುಮಾರ್.

ಯೆಸ್.. ಅಯೋಗ್ಯ, ಮದಗಜ ಖ್ಯಾತಿಯ ಮೋಸ್ಟ್ ಪ್ಯಾಷನೇಟ್ ಡೈರೆಕ್ಟರ್ ಮಹೇಶ್, ನಿರ್ಮಾಪಕ ಕಟ್ಟಿಗೇನಹಳ್ಳಿ ಸೋಮಶೇಖರ್ ಜೊತೆಗೂಡಿ ಈ ಸಿನಿಮಾನ ಕಿಕ್‌ಸ್ಟಾರ್ಟ್‌ ಮಾಡಿದ್ರು. ಅದಕ್ಕೆ ಸ್ಯಾಂಡಲ್‌ವುಡ್ ಅಧ್ಯಕ್ಷ ಶರಣ್ ಕೂಡ ಬಂದು ಶುಭ ಕೋರಿದ್ರು. ಆದ್ರೀಗ ಜೋಡೆತ್ತು ಚಿತ್ರದಿಂದ ಡೈರೆಕ್ಟರ್ ಮಹೇಶ್ ಕುಮಾರ್ ಹೊರಬಂದಿದ್ದಾರೆ. ಅದಕ್ಕೆ ಕಾರಣ ಅಯೋಗ್ಯ-2 ಸಿನಿಮಾ. ಹೌದು.. ಅಯೋಗ್ಯ-2 ಹಾಗೂ ಜೋಡೆತ್ತು ಚಿತ್ರದ ಡೇಟ್ಸ್ ಕ್ಲ್ಯಾಶ್ ಆಗ್ತಿವೆ. ಫ್ಲೋ…

ಅಂದುಕೊಂಡ ಡೇಟ್‌ಗೆ ಅಂದ್ರೆ 2026ರ ಫೆಬ್ರವರಿಗೆ ಅಯೋಗ್ಯ-2ನ ತೆರೆಗೆ ತರೋ ಜವಾಬ್ದಾರಿ ಹೊತ್ತಿರೋ ಮಹೇಶ್, ವಿಧಿ ಇಲ್ಲದೆ ಜೋಡೆತ್ತು ಚಿತ್ರವನ್ನ ಮತ್ತೊಬ್ಬ ಸಾರಥಿಗೆ ಬಿಟ್ಟುಕೊಟ್ಟಿದ್ದಾರೆ. ಯೆಸ್.. ಅಯೋಗ್ಯ-2 ಚಿತ್ರದ ಮೂರು ಸಾಂಗ್ಸ್ ಬಾಕಿಯಿದ್ದು, ಇತ್ತೀಚೆಗಷ್ಟೇ ಟಾಕೀ ಹಾಗೂ ಕ್ಲೈಮ್ಯಾಕ್ಸ್ ಮುಗಿಸಿದ್ದಾರೆ. ಹಾಗಾಗಿ ನೀನಾಸಂ ಸತೀಶ್-ರಚಿತಾ ನಟನೆಯ ಅಯೋಗ್ಯ-2 ಜೊತೆ ಜೋಡೆತ್ತು ಡೇಟ್ಸ್ ಕ್ಲ್ಯಾಶ್ ಆಗ್ತಿದೆ. ಈ ಮೂಲಕ ಸಿನಿಮಾನ ಬಿಟ್ಟುಕೊಟ್ಟು ಮಹಾ ತ್ಯಾಗಿ ಅನಿಸಿಕೊಳ್ತಿದ್ದಾರೆ ಮಹಿ.

ಹೌದು.. ಜೋಡೆತ್ತು ಸಿನಿಮಾ ಇದೇ ಡಿಸೆಂಬರ್ 25ರಿಂದ ಶೂಟಿಂಗ್ ಕಿಕ್‌ಸ್ಟಾರ್ಟ್‌ ಮಾಡ್ತಿದ್ದು, ನಿರ್ಮಾಪಕ ಕಟ್ಟಿಗೇನಹಳ್ಳಿ ಸೋಮಣ್ಣ ಹೊಸ ನಿರ್ದೇಶಕರನ್ನ ಫೈನಲ್ ಮಾಡಿದ್ದಾರೆ. ಮಹೇಸ್ ಜೊತೆ ಮತ್ತೊಂದು ಸಿನಿಮಾ ಮಾಡೋಕೆ ಮಾತುಕತೆ ಮಾಡಿರೋ ಸೋಮಣ್ಣ, ಸದ್ಯ ಜೋಡೆತ್ತುಗೆ ಹೊಚ್ಚ ಹೊಸ ಸಾರಥಿಯನ್ನ ತಲಾಶ್ ಮಾಡಿದ್ದಾರೆ. ಅವ್ರು ಬೇರಾರೂ ಅಲ್ಲ, ಡಿಬಾಸ್ ದರ್ಶನ್‌ ಅವ್ರ ಅಚ್ಚುಮೆಚ್ಚಿನ ಫೇವರಿಟ್ ಸಿನಿಮಾಟೋಗ್ರಾಫರ್ ಸುಧಾಕರ್ ಎಸ್ ರಾಜ್.

1997ರಿಂದ ಸ್ಟಿಲ್ ಫೋಟೋಗ್ರಾಫರ್ ಆಗಿ ನೂರಾರು ಚಿತ್ರಗಳಿಗೆ ಕೆಲಸ ಮಾಡಿದ್ದ ಸುಧಾಕರ್ ಅವ್ರು, ಯಶ್ ನಟನೆಯ ರಾಕಿ ಚಿತ್ರದಿಂದ ಸ್ವತಂತ್ರ ನಿರ್ದೇಶಕರಾದ್ರು. ಅದಾದ ಬಳಿಕ ಅವ್ರು ಮಾಡಿದ ಎಲ್ಲಾ ಚಿತ್ರಗಳು ಬ್ಲಾಕ್ ಬಸ್ಟರ್ ಹಿಟ್. ತರುಣ್ ಸುಧೀರ್, ನಂದಕಿಶೋರ್ ಹಾಗೂ ಶರಣ್‌ರ ಆಸ್ಥಾನ ತಂತ್ರಜ್ಞನಾಗಿರೋ ಸುಧಾಕರ್, ದರ್ಶನ್ ನಟನೆಯ ಚೌಕ, ರಾಬರ್ಟ್‌, ಕಾಟೇರ ಹಾಗೂ ಡೆವಿಲ್ ಚಿತ್ರಗಳಲ್ಲಿ ಕ್ಯಾಮೆರಾ ಕೈಚಳಕ ತೋರಿದ್ದಾರೆ. ಇವರೇ ಈಗ ಸಿನಿಮಾಟೋಗ್ರಫಿ ಜವಾಬ್ದಾರಿ ಜೊತೆ ಜೋಡೆತ್ತುಗೆ ಆ್ಯಕ್ಷನ್ ಕಟ್ ಹೇಳಿ ಡೈರೆಕ್ಟರ್ ಆಗಿ ಬಡ್ತಿ ಪಡೆಯುತ್ತಿದ್ದಾರೆ. ಅಂದಹಾಗೆ ಈ ಜೋಡೆತ್ತು ಚಿತ್ರ ಸುಧಾಕರ್ ಅವ್ರಿಗೆ ಸಿಗೋಕೆ ಪ್ರಮುಖ ಕಾರಣನೇ ದರ್ಶನ್ ಅನ್ನೋದು ಇಂಟರೆಸ್ಟಿಂಗ್.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

 

 

Exit mobile version