ಗೆದ್ದ ದಚ್ಚು ಭಂಟ ಧನ್ವೀರ್.. ಹಯಗ್ರೀವಗೆ ಸ್ಟಾರ್ಸ್ ಬಹುಪರಾಕ್

ಭಾವುಕರಾಗಿ ಗೆದ್ದೆ ಎಂದ ಪ್ರೊಡ್ಯೂಸರ್.. ಓಟಿಟಿಗೆ ಡಿಮ್ಯಾಂಡ್..!!

Untitled design 2026 03 12T155908.984

ಯಶಸ್ವೀ 25ನೇ ದಿನದತ್ತ ಮುನ್ನುಗ್ಗುತ್ತಿರೋ ಹಯಗ್ರೀವ ಬಾಕ್ಸ್ ಆಫೀಸ್‌‌ನಲ್ಲಿ ಸಖತ್ ಸದ್ದು ಮಾಡ್ತಿದೆ. ಹೌಸ್‌ಫುಲ್ ಪ್ರದರ್ಶನದದೊಂದಿಗೆ ನಿರ್ಮಾಪಕರಿಗೂ ಖುಷಿ ತಂದಿದೆ. ಧನ್ವೀರ್ ಗೌಡ-ಸಂಜನಾ ಜೋಡಿ ಜೊತೆ ನವ ನಿರ್ದೇಶಕರ ಕ್ರಿಯೇಟಿವಿಟಿ ವರ್ಕ್‌ ಆಗಿದೆ. ಇಷ್ಟು ದಿನ ಬರೀ ಚಿತ್ರಪ್ರೇಮಿಗಳು ಭೇಷ್ ಅಂದಿದ್ರು. ಇದೀಗ ಸ್ಯಾಂಡಲ್‌ವುಡ್ ಸ್ಟಾರ್ಸ್ ಕೂಡ ಶಹಬ್ಬಾಸ್ ಅಂದಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಎಂಥದ್ದೇ ಸಿನಿಮಾ ಬಂದ್ರೂ ಮೂರು ದಿನ ಥಿಯೇಟರ್‌ನಲ್ಲಿ ನಿಲ್ಲೋದು ಕಷ್ಟವಾಗಿದೆ. ಅಂಥದ್ರಲ್ಲಿ ಧನ್ವೀರ್ ಗೌಡ ನಟನೆಯ ಹಯಗ್ರೀವ ಸಿನಿಮಾ ಎಲ್ಲೆಡೆ ಹೌಸ್‌ಫುಲ್ ಪ್ರದರ್ಶನ ಕಾಣ್ತಿದೆ. ಅದಕ್ಕೆ ಕಾರಣ ರಘು ಕುಮಾರ್ ಓಆರ್ ಅನ್ನೋ ಯುವ ನಿರ್ದೇಶಕನ ಕಥೆ, ನಿರ್ದೇಶನ ಹಾಗೂ ಹೋಮ್‌ ವರ್ಕ್‌. ಧನ್ವೀರ್ ಜೊತೆ ಸಂಜನಾ ಆನಂದ್ ನಾಯಕಿಯಾಗಿ ನಟಿಸಿದ್ದು, ಖಡಕ್ ವಿಲನ್ ಆಗಿ ಎಕ್ಸ್ ಕ್ಯೂಸ್ ಮೀ ಸುನಿಲ್ ರಾವ್ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ.

ಗೆದ್ದ ದಚ್ಚು ಭಂಟ ಧನ್ವೀರ್.. ಹಯಗ್ರೀವಗೆ ಸ್ಟಾರ್ಸ್ ಬಹುಪರಾಕ್

ಭಾವುಕರಾಗಿ ಗೆದ್ದೆ ಎಂದ ಪ್ರೊಡ್ಯೂಸರ್.. ಓಟಿಟಿಗೆ ಡಿಮ್ಯಾಂಡ್..!!

ಯಶಸ್ವೀ 25ನೇ ದಿನದತ್ತ ಮುನ್ನುಗ್ಗುತ್ತಿರೋ ಹಯಗ್ರೀವ ಸಿನಿಮಾಗೆ ಇಲ್ಲಿಯ ತನಕ ಪ್ರೇಕ್ಷಕರು ಕೈ ಹಿಡಿದಿದ್ದಾರೆ. ಆದ್ರೀಗ ಚಿತ್ರರಂಗದ ಸಾಕಷ್ಟು ಮಂದಿ ಕಲಾವಿದರು, ತಂತ್ರಜ್ಞರು ಕೂಡ ಸಿನಿಮಾ ನೋಡಿ ಭೇಷ್ ಅಂದಿದ್ದಾರೆ. ಅದ್ರಲ್ಲೂ ನಿರ್ಮಾಪಕ ಸಮೃದ್ಧಿ ಮಂಜುನಾಥ್ ಅವರು ತಮ್ಮ ರಾಜಕೀಯ ಜಂಜಾಟಗಳ ನಡುವೆ ಸಿಕ್ಕಾಪಟ್ಟೆ ಕಷ್ಟ ಪಟ್ಟು, ಇಷ್ಟ ಪಟ್ಟು ಮಾಡಿದ ಸಿನಿಮಾ ಇದಾಗಿದೆ. ಸೆನ್ಸಾರ್ ಸಮಸ್ಯೆಯಾಗಿ ಒದ್ದಾಡಿಕೊಂಡು ರಿಲೀಸ್ ಮಾಡಿದ್ರು. ಅದಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ.

ಇತ್ತೀಚಿಗೆ ಒರಾಯನ್ ಮಾಲ್‌‌ನಲ್ಲಿ ನಡೆದ ಹಯಗ್ರೀವ ಸೆಲೆಬ್ರಿಟಿ ಶೋನಲ್ಲಿ ಚಿತ್ರತಂಡದ ಜೊತೆ ನಟ ರವಿಚೇತನ್, ಶಾಸಕ ಎ ಮಂಜು, ಮಂಜು ಪಾವಗಡ, ಕಾರುಣ್ಯ ರಾಮ್, ಅಪೂರ್ವ, ನಿರ್ದೇಶಕ ಶ್ರೀನಿವಾಸ್ ರಾಜು ಹೀಗೆ ಸಾಕಷ್ಟು ಮಂದಿ ತಾರೆಯರು ಸಿನಿಮಾ ನೋಡಿ ಅಭಿಪ್ರಾಯ ವ್ಯಕ್ತಪಡಿಸಿದ್ರು.

ಡಿಬಾಸ್ ಫ್ಯಾನ್ಸ್ ಜೊತೆ ತನ್ನ ಫ್ಯಾನ್ಸ್‌ಗೆ ಧನ್ವೀರ್ ಗೌಡ ಧನ್ಯವಾದ

ಸುನಿಲ್ ರಾವ್ ಕಂಬ್ಯಾಕ್.. ಚಿತ್ರರಂಗದ ತಾರೆಯರಿಂದ ಶಹಬ್ಬಾಸ್

ಒಟ್ಟಾರೆ ವಿಭಿನ್ನ ಪ್ರಯತ್ನಗಳನ್ನ ಕನ್ನಡಿಗರು ಎಂದೂ ಕೈ ಬಿಟ್ಟಿಲ್ಲ. ಯಾಕಂದ್ರೆ ಹಯಗ್ರೀವ ನಿಮಗೆ ಸೀದಾ ಸಾದಾ ಮೂವಿ ಅಲ್ಲವೇ ಅಲ್ಲ. ಸಾಕಷ್ಟು ಸಂಶೋಧನೆ ಮಾಡಿ ಮಾಡಿರೋ ಭಿನ್ನ ಅಲೆಯ ಸಿನಿಮಾ. ಅದನ್ನ ಥಿಯೇಟರ್‌ನಲ್ಲಿ ಫೀಲ್ ಮಾಡಿದ್ರೆ ಯಾವ ಮಲಯಾಳಂ ಚಿತ್ರಕ್ಕೂ ಕಮ್ಮಿ ಇಲ್ಲ ಅಂತೀರಾ.

 

 

 

 

Exit mobile version