ಹಾಸನಾಂಬೆಯ ದರ್ಶನ ಪಡೆದ ನಟ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ

Untitled design 2025 10 22t093724.415

ಹಾಸನ: ಪ್ರಸಿದ್ಧ ಹಾಸನಾಂಬ ಜಾತ್ರಾ ಮಹೋತ್ಸವದ ಸಾರ್ವಜನಿಕ ದರ್ಶನಕ್ಕೆ ಇಂದು (ಅಕ್ಟೋಬರ್ 22) ಕೊನೆಯ ದಿನವಾಗಿದೆ. ಈ ಶುಭ ಸಂದರ್ಭದಲ್ಲಿ ಖ್ಯಾತ ಚಲನಚಿತ್ರ ನಟ ಧ್ರುವ ಸರ್ಜಾ ಅವರು ಕುಟುಂಬ ಸಮೇತ ಹಾಸನಾಂಬ ದೇವಿಯ ದಿವ್ಯ ದರ್ಶನ ಪಡೆದರು. ಗೋಲ್ಡ್ ಪಾಸ್ ಸರದಿಯಲ್ಲಿ ಬಂದು ದರ್ಶನ ಮಾಡಿಕೊಂಡ ಧ್ರುವ ಸರ್ಜಾ ಅವರಿಗೆ ದೇವಾಲಯ ಪ್ರಶಾಸನ ವಿಶೇಷ ವ್ಯವಸ್ಥೆ ಮಾಡಿತ್ತು.

ಇಂದು ಬೆಳಿಗ್ಗೆ 6:00 ಗಂಟೆಯಿಂದ ದಿನವಿಡೀ ಭಕ್ತರು ದೇವಿಯ ದರ್ಶನ ಪಡೆಯಲು ಅವಕಾಶವಿದೆ. ದರ್ಶನೋತ್ಸವದ ಕೊನೆಯ ದಿನವಾದ್ದರಿಂದ, ಭಕ್ತರು ದೇವಿಯ ದರ್ಶನ ಪಡೆಯಲು ಹರಿದು ಬರುತ್ತಿದ್ದಾರೆ. ಇದುವರೆಗೆ 22 ಲಕ್ಷದಿಂದ 25 ಲಕ್ಷ ಭಕ್ತರು ದೇವಿಯ ದರ್ಶನ ಪಡೆದಿರುವುದಾಗಿ ಅಂದಾಜಿಸಲಾಗಿದೆ.

ನಾಳೆ (ಅಕ್ಟೋಬರ್ 23) ಬೆಳಿಗ್ಗೆ ಜಿಲ್ಲಾಡಳಿತ ಶಾಸ್ತ್ರೋಕ್ತವಾಗಿ ದೇಗುಲದ ಗರ್ಭಗುಡಿಯ ಬಾಗಿಲನ್ನು ಹಾಕುವ ಕಾರ್ಯಕ್ರಮ ಹಾಗೂ ಸಂಬಂಧಿತ ಧಾರ್ಮಿಕ ವಿಧಿಗಳು ನಡೆಯಲಿವೆ. 

ಹಾಸನಾಂಬ ದೇವಾಲಯವು ಸುಮಾರು 12ನೇ ಶತಮಾನದಲ್ಲಿ ಹೊಯ್ಸಳರ ಕಾಲದಲ್ಲಿ ಸ್ಥಾಪಿತವಾಯಿತು . ಶ್ರೀ ಹಾಸನಾಂಬ ದೇವಿಯು ಶಕ್ತಿ ಸ್ವರೂಪಿಣಿಯಾಗಿದ್ದು, ಸಪ್ತ ಮಾತೃಕೆಯರಲ್ಲಿ ಒಬ್ಬಳೆಂದು ನಂಬಲಾಗಿದೆ. ದೇವಾಲಯವನ್ನು ವರ್ಷದಲ್ಲಿ ಕೇವಲ ಒಂದು ಸಲ ಮಾತ್ರ, ಅದು ದೀಪಾವಳಿ ಹಬ್ಬದ ಸಮಯದಲ್ಲಿ ತೆರೆಯಲಾಗುತ್ತದೆ . ಈ ಬಾರಿ ಅಕ್ಟೋಬರ್ 9ರಂದು ಜಾತ್ರೆ ಆರಂಭವಾಗಿ, ಅಕ್ಟೋಬರ್ 23ರ ವರೆಗೆ ನಡೆಯಲಿದೆ.

Exit mobile version