ಗೋದ್ರಾ ಹತ್ಯಾಕಾಂಡ ನೆನಪಿಸಿದ್ದೇಕೆ ಮೋಹನ್ ಲಾಲ್ ಎಂಪುರಾನ್ ಸಿನಿಮಾ..?

ಎಂಪುರಾನ್ ಪ್ರೊಪಗಾಂಡ ಸಿನಿಮಾನಾ..? ಬಾಯ್ಕಾಟ್ ಅಭಿಯಾನ ಶುರುವಾಗಿದ್ದೇಕೆ..?

Untitled design 2025 03 28t165134.360

ಅಬ್ಬರಿಸಿ ಬೊಬ್ಬಿರಿದು ಅದ್ಭುತ ಓಪನಿಂಗ್ ಪಡೆದುಕೊಂಡಿದ್ದ ಎಂಪುರಾನ್ ಚಿತ್ರ ಈಗ ವಿವಾದಕ್ಕೆ ಸಿಲುಕಿದೆ. ಇದು ಕಥೆ ಆಧರಿಸಿದ ಸಿನಿಮಾ ಅಲ್ಲ, ಪ್ರೊಪಗಾಂಡ ಚಿತ್ರ ಎಂಬ ಆರೋಪ ಕೇಳಿ ಬಂದಿದೆ. ಬಹುಶಃ ಮೋಹನ್ ಲಾಲ್ ಅಭಿನಯದ ಚಿತ್ರವೊಂದು ಇಷ್ಟು ದೊಡ್ಡ ಓಪನಿಂಗ್ ಪಡೆದಿದ್ದು ಇದೇ ಮೊದಲು. ಧರ್ಮದ ವಿವಾದಕ್ಕೆ ಸಿಲುಕಿದ್ದೂ ಕೂಡಾ ಇದೇ ಮೊದಲು. ಹಾಗಾದರೆ ಚಿತ್ರ ವಿವಾದಕ್ಕೆ ಸಿಲುಕಿರೋದು ಯಾಕೆ..?

ADVERTISEMENT
ADVERTISEMENT

ಎಂಪುರಾನ್ ಚಿತ್ರದ ಒನ್ ಲೈನ್ ಸ್ಟೋರಿ ಏನೆಂದರೆ, ಕೇರಳ ರಾಜ್ಯವನ್ನ ಧರ್ಮದ ಆಧಾರದಲ್ಲಿ ಡಿವೈಡ್ ಮಾಡೋಕೆ ತಂತ್ರ ನಡೆಯುತ್ತೆ. ಹಿಂದೂ ಬಾಬಾ ಒಬ್ಬ ಮುಸ್ಲಿಮರನ್ನು ಕೊಂದು ರಾಜಕೀಯವಾಗಿ ಬೆಳೆಯುವ ತಂತ್ರ ಹೆಣೆಯುತ್ತಾನೆ. ಆ ಕುತಂತ್ರ ತಪ್ಪಿಸಲು ಮೋಹನ್ ಲಾಲ್ ಮತ್ತೊಮ್ಮೆ ಎಂಟ್ರಿ ಕೊಟ್ಟು ಗೆಲ್ಲೋದು ಚಿತ್ರದ ಕಥೆ.

ಆದರೆ ಈ ಕಥೆಯಲ್ಲಿ ರೈಲೊಂದಕ್ಕೆ ಬೆಂಕಿ ಬಿದ್ದು ಆಕಸ್ಮಿಕವಾಗಿ ಯಾತ್ರಿಗಳು ಸಾಯ್ತಾರೆ. ಆಕಸ್ಮಿಕ ದುರ್ಘಟನೆಯನ್ನ ಮುಸ್ಲಿಮರ ವಿರುದ್ಧ ಎತ್ತಿ ಕಟ್ಟುವ ತಂತ್ರ ನಡೆಯುತ್ತೆ. ಅದು ಗೋದ್ರಾ ರೈಲು ದುರಂತಕ್ಕೆ ಹೋಲುತ್ತದೆ. ಇದು ನೇರವಾಗಿ ಗೋದ್ರಾ ರೈಲು ಹತ್ಯಾಕಾಂಡ, ಆಕಸ್ಮಿಕ ಎಂದು ಬಿಂಬಿಸುವ ಪ್ರಯತ್ನ ಎನ್ನುವ ಆರೋಪ ಕೇಳಿ ಬಂದಿದೆ.

ಇತ್ತೀಚೆಗೆ ಗೋದ್ರಾ ಹತ್ಯಾಕಾಂಡ ಸಬರಮತಿ ಚಿತ್ರ ಬಂದಿತ್ತು. ಅದು ಸಬರಮತಿ ತನಿಖಾ ವರದಿ ಆಧರಿಸಿದ್ದ ಸಿನಿಮಾ. ಸಬರಮತಿ ಚಿತ್ರ ಟೇಕಾಫ್ ಆದ ಸಮಯಕ್ಕೇ, ಸೆಟ್ಟೇರಿದ್ದು ಮೋಹನ್ ಲಾಲ್ ನಾಯಕತ್ವದಲ್ಲಿ ಲೂಸಿಫರ್ ಚಿತ್ರದ ಸೀಕ್ವೆಲ್ ಎಂಪುರಾನ್. ಇದು ಪ್ರೊಪಗಾಂಡ ಸಿನಿಮಾ ಎಂದು ಇದೀಗ ವಿವಾದಕ್ಕೆ ಕಾರಣವಾಗಿದೆ.

ಹೀಗಾಗಿ ಚಿತ್ರವನ್ನು ಬಾಯ್ಕಾಟ್ ಮಾಡಿ ಎಂಬ ಅಭಿಯಾನ ಶುರುವಾಗಿದೆ. ಅಷ್ಟೇ ಅಲ್ಲದೆ ಹಿಂದೂಗಳನ್ನು ಗಲಾಟೆ ಮಾಡುವವರು, ದ್ರೋಹಿಗಳು, ಅತ್ಯಾಚಾರಿಗಳು ಎಂದು ಬಿಂಬಿಸುವ ದೃಶ್ಯಗಳಿವೆ. ಇದೆಲ್ಲವೂ ಎಂಪುರಾನ್ ಚಿತ್ರಕ್ಕೆ ರಿವರ್ಸ್ ಆಗಿದೆ.ಆದರೆ.. ಅದೇ ವೇಳೆ ಮೋಹನ್ ಲಾಲ್, ಪೃಥ್ವಿರಾಜ್ ಸುಕುಮಾರನ್ ಸತ್ಯವನ್ನೇ ಹೇಳಿದ್ದಾರೆ. ಗೋದ್ರಾ ರೈಲು ದುರಂತ, ಆಕಸ್ಮಿಕವೇ ಹೊರತು ಸಂಚಿನ ಕೃತ್ಯವಲ್ಲ. ಅವರು ಸತ್ಯವನ್ನೇ ಹೇಳಿದ್ದಾರೆ ಎಂಬ ವಾದಗಳೂ ಇವೆ.

ಅಲ್ಲದೆ ಚಿತ್ರದಲ್ಲಿ ತೋರಿಸಿರುವ ಪಾತ್ರಧಾರಿಗಳ ಬಾಡಿಲಾಂಗ್ವೇಜ್ ಕೆಲವು ರಾಷ್ಟ್ರೀಯ ನಾಯಕರನ್ನು ಹೋಲುವಂತಿದೆ.
ಗೋದ್ರಾ ರೈಲು ದುರಂತ ಆಕಸ್ಮಿಕ ಅಲ್ಲ. ಅದೊಂದು ಪ್ರೀ-ಪ್ಲಾನ್ಡ್ ಮರ್ಡರ್ ಎಂದು ದಾಖಲೆಗಳನ್ನು ಮುಂದಿಟ್ಟು ಚಿತ್ರದ ವಿರುದ್ಧ ಬಾಯ್ಕಾಟ್ ಅಭಿಯಾನ ಶುರುವಾಗಿದೆ. ಇದೆಲ್ಲದರ ನಡುವೆಯೂ ಎಂಪುರಾನ್ ಸಿನಿಮಾಗೆ ಪ್ರೇಕ್ಷಕರಿಂದ ಭರ್ಜರಿ ಓಪನಿಂಗ್ ಸಿಕ್ಕಿದೆ. ಮೋಹನ್ ಲಾಲ್ ವೃತ್ತಿ ಜೀವನದಲ್ಲೇ ಫಸ್ಟ್ ಡೇ 50 ಕೋಟಿ ಕಲೆಕ್ಷನ್ ಮಾಡಿದ ಸಿನಿಮಾ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ.

Exit mobile version