ದುನಿಯಾ ವಿಜಯ್ ಕಿರಿಮಗಳ ‘ಸಿಟಿಲೈಟ್ಸ್’ ದುನಿಯಾ

ಅಪ್ಪು-ರಮ್ಯಾರಂತೆ ವಿನಯ್-ಮೋನಿಷಾ ಎಂದ ಪುನೀತ್

ಸ್ವ (20)

ಲಾಂಗು, ಮಚ್ಚು, ಗನ್ ಹಿಡಿದು ಥಿಯೇಟರ್‌ನಲ್ಲಿ ರಕ್ತದೋಕುಳಿ ಹರಿಸಿದ್ದ ದುನಿಯಾ ವಿಜಯ್.. ಈ ಬಾರಿ ಸೈಲೆಂಟಾಗಿ ಮೆಲೋಡಿ ಲವ್ ಸ್ಟೋರಿಯನ್ನ ಕಟ್ಟಿದ್ದಾರೆ. ಹೌದು.. ಸಲಗ-ಭೀಮನ ಆರ್ಭಟದ ಬಳಿಕ ಸದ್ಯ ಸಿಟಿ ಲೈಟ್ಸ್ ಮೂಲಕ ಹೊಸ ಪ್ರೇಮಲೋಕ ತೆರೆದಿಡೋಕೆ ಸಜ್ಜಾಗಿದ್ದಾರೆ. ಚಿತ್ರದ ಕಂದಮ್ಮ ಅನ್ನೋ ನ್ಯೂ ಸಾಂಗ್ ರಿಲೀಸ್ ಆಗಿದ್ದು, ಸ್ಯಾಂಡಲ್‌ವುಡ್ ಗಲ್ಲಿ ಗಲ್ಲಿಗಳಲ್ಲಿ ಈ ಸಾಂಗ್ ಕಣ್ಮನ ತಣಿಸುತ್ತಿದೆ.

ದುನಿಯಾ ವಿಜಯ್ ಕಿರಿಮಗಳ ‘ಸಿಟಿಲೈಟ್ಸ್’ ದುನಿಯಾ

ದೊಡ್ಮನೆ ಬಂಗಾರ ವಿನಯ್ ಕಂದಮ್ಮ ಈ ಮೋನಿಷಾ..!

ಅಪ್ಪು-ರಮ್ಯಾರಂತೆ ವಿನಯ್-ಮೋನಿಷಾ ಎಂದ ಪುನೀತ್

ಜಂಕ್ ಫುಡ್.. ಮಂಗಳಮುಖಿ.. ವಿಜಯ್ ಅಂತರಾಳ..!

ಮಾಸ್ ಹೀರೋಗಳನ್ನ ರಗಡ್ ಆಗಿ ತೋರಿಸಿ ಬಾಕ್ಸ್ ಆಫೀಸ್‌‌ನಲ್ಲಿ ಧೂಳೆಬ್ಬಿಸ್ತಿದ್ದ ನಟ, ನಿರ್ದೇಶಕ ದುನಿಯಾ ವಿಜಯ್, ಈ ಬಾರಿ ಫುಲ್ ರೂಟ್ ಚೇಂಜ್ ಮಾಡಿದ್ದಾರೆ. ಸಲಗ ಹಾಗೂ ಭೀಮ ಸಿನಿಮಾಗಳಲ್ಲಿ ರೌಡಿಸಂ ಎಲಿಮೆಂಟ್ಸ್ ಜೊತೆ ಭಾವನಾತ್ಮಕ ವಿಷಯಗಳನ್ನ ತೆರೆಗೆ ತಂದಿದ್ರು. ಆದ್ರೀಗ ಸಿಟಿ ಲೈಟ್ಸ್ ಮೂಲಕ ಪಕ್ಕಾ ಹಾರ್ಟ್ ಟಚಿಂಗ್ ಲವ್ ಸ್ಟೋರಿ ಹಿಡಿದು ಬಂದಿದ್ದಾರೆ. ದೊಡ್ಮನೆ ಹುಡ್ಗ ವಿನಯ್ ರಾಜಕುಮಾರ್ ಹಾಗೂ ಕಿರಿಯ ಮಗಳು ಮೋನಿಷಾ ಅಭಿನಯಿಸಿರುವ ಈ ಚಿತ್ರಕ್ಕೆ ವಿಜಯ್ ಆ್ಯಕ್ಷನ್ ಕಟ್ ಹೇಳಿ, ಡೈರೆಕ್ಷನ್ ಜಾನರ್ ಬದಲಿಸಿದ್ದಾರೆ.

ಕಂದಮ್ಮ ಕಂದಮ್ಮ ಅನ್ನೋ ಈ ಲೇಟೆಸ್ಟ್ ಮೆಲೋಡಿ ಸಾಂಗ್ ಇತ್ತೀಚೆಗೆ ರಿವೀಲ್ ಆಗಿದ್ದು, ಯೂಟ್ಯೂಬ್‌ನಲ್ಲಿ ಧೂಳೆಬ್ಬಿಸುತ್ತಿದೆ. ಪ್ರೇಮಿಗಳ ಎದೆಯಲ್ಲಿ ಪ್ರೀತಿ, ಪ್ರೇಮದ ಕಿಚ್ಚು ಹಚ್ಚಿರೋ ಈ ಸಾಂಗ್, ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡಿಂಗ್‌ನಲ್ಲಿದೆ. ಮಗಳಿಗಾಗಿಯೇ ಈ ಸಾಂಗ್ ಮಾಡಿರೋ ವಿಜಯ್, ವಿನಯ್‌‌ನ ಬಂಗಾರ ಅಂದ್ರು. ಜಂಕ್ ಫುಡ್‌‌ ಕುರಿತ ಅವೇರ್ನೆಸ್, ಮಂಗಳಮುಖಿಯರನ್ನ ಸಮಾಜ ನೋಡುವ ಪರಿ ಈ ಚಿತ್ರದಿಂದ ಬದಲಾಗಲಿದೆ ಎಂದರು.

ಇನ್ನು ಈ ಹಾಡಿಗೆ ಮ್ಯೂಸಿಕ್ ಮಾಂತ್ರಿಕ ಚರಣ್ ರಾಜ್ ಜಾದೂ ಮಾಡಿದ್ದಾರೆ. ಅದಕ್ಕೆ ಪ್ಲಸ್ ಪಾಯಿಂಟ್ ಅಂದ್ರೆ ಸ್ಯಾಂಡಲ್‌ವುಡ್‌ನ ಸ್ಟೈಲಿಶ್ ಸಿಂಗರ್ ಸಂಜಿತ್ ಹೆಗಡೆ ಕಂಠಸಿರಿ. ಸಂಜಿತ್ ವಾಯ್ಸ್‌ನಲ್ಲಿ ‘ಕಂದಮ್ಮ.. ಕಂದಮ್ಮ..’ ಅಂತ ಕೇಳುತ್ತಿದ್ದರೆ ಪ್ರೇಕ್ಷಕರು ಫುಲ್ ಫಿದಾ ಆಗ್ತಿದ್ದಾರೆ. ನಾಗಾರ್ಜುನ ಶರ್ಮಾ ಬರೆದಿರೋ ಲಿರಿಕ್ಸ್ ಅಂತೂ ಲವರ್ಸ್‌ಗೆ ಕಿಕ್ ಕೊಡುವಂತಿದೆ. ಈಗಾಗ್ಲೇ ಚಿತ್ರದ ‘ಬಾವ ಬಾವ’ ಸಾಂಗ್ ಸೂಪರ್ ಹಿಟ್ ಆಗಿತ್ತು. ಈಗ ‘ಕಂದಮ್ಮ’ ಹಾಡು ರಿಲೀಸ್ ಆಗುತ್ತಿದ್ದಂತೆ ‘ಸಿಟಿ ಲೈಟ್ಸ್’ ಆಲ್ಬಂ ಸ್ಯಾಂಡಲ್‌ವುಡ್‌ನ ನಂಬರ್ ಒನ್ ಚಾರ್ಟ್‌ಬಸ್ಟರ್ ಲಿಸ್ಟ್‌ಗೆ ಸೇರಿಕೊಂಡಿದೆ.

ತೆರೆಮೇಲೆ ಮೋಸ್ಟ್ ವರ್ಸಟೈಲ್ ಆ್ಯಕ್ಟರ್ ವಿನಯ್ ರಾಜ್‌ಕುಮಾರ್ ಮತ್ತು ಮೋನಿಷಾ ವಿಜಯ್ ಕುಮಾರ್ ಕೆಮಿಸ್ಟ್ರಿ ಫುಲ್ ವರ್ಕೌಟ್ ಆಗಿದೆ. ವಿನಯ್ ರಾಜ್‌ಕುಮಾರ್ ಅಪ್ಪು ಅವ್ರ ಸ್ಥಾನ ತುಂಬಬಲ್ಲ ನಟನಾಗಿ ನಿಲ್ಲಲಿದ್ದಾರೆ ಹಾಗೂ ಮೋಹಕತಾರೆ ರಮ್ಯಾ ರೀತಿ ಹೆಸರು ಮಾಡ್ತಾರಂತೆ ನಟಿ ಮೋನಿಷಾ.. ಹೀಗಂತ ದುನಿಯಾ ವಿಜಯ್ ಆಪ್ತ ಗೆಳೆಯ ಕಮ್ ನಟ ಪುನೀತ್ ವೇದಿಕೆ ಮೇಲೆ ದಿ ಬೆಸ್ಟ್ ಕಾಂಪ್ಲಿಮೆಂಟ್ ನೀಡಿದ್ದಾರೆ.

ಹಳ್ಳಿಯಿಂದ ಸಿಟಿಗೆ ಬಂದ ಕ್ಯೂಟ್ ಜೋಡಿಯ ಮುಗ್ಧ ಪ್ರೇಮಕಥೆಯನ್ನ ಕ್ಯಾಮರಾಮೆನ್ ಶಿವಸೇನಾ ಸಖತ್ ಗ್ಲಾಮರಸ್ ಆಗಿ ಸೆರೆಹಿಡಿದಿದ್ದಾರೆ. ಮಾಸ್ತಿ ಪವರ್‌ಫುಲ್ ಡೈಲಾಗ್ಸ್ ಹಾಗೂ ದೀಪು ಎಸ್. ಕುಮಾರ್ ಎಡಿಟಿಂಗ್ ಚಿತ್ರದ ಮೌಲ್ಯ ಹೆಚ್ಚಿಸಿವೆ.

ದುನಿಯಾ ಟಾಕೀಸ್ ಬ್ಯಾನರ್‌ನ ಈ ಸಿನಿಮಾ, ಕೇವಲ ಮಾಸ್ ಪ್ರೇಕ್ಷಕರಿಗಷ್ಟೇ ಅಲ್ಲದೇ ಫ್ಯಾಮಿಲಿ ಆಡಿಯನ್ಸ್‌ಗೂ ಸಖತ್ ಕನೆಕ್ಟ್ ಆಗೋ ಮುನ್ಸೂಚನೆ ಸಿಕ್ಕಿದೆ. ಮಾಸ್ ಡೈರೆಕ್ಟರ್ ಕೈಯಲ್ಲಿ ಮೂಡಿಬಂದಿರೋ ಈ ಕ್ಲಾಸ್ ಮ್ಯಾಜಿಕ್ ನೋಡಲು ಸ್ಯಾಂಡಲ್‌ವುಡ್ ಸದ್ಯ ಕಾದು ಕುಳಿತಿದೆ. ಆದಷ್ಟು ಬೇಗ ರಿಲೀಸ್ ಡೇಟ್ ಕೂಡ ಅನೌನ್ಸ್ ಮಾಡಲಿದ್ದಾರೆ ದುನಿಯಾ ವಿಜಯ್.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

 

Exit mobile version