ರಣ್ವೀರ್ ವಿವಾದ ಬಿಟ್ರೂ ವಿವಾದವೇ ರಣ್ವೀರ್‌‌ನ ಬಿಡ್ತಿಲ್ಲ..!!

ಸೇನಾ ರಹಸ್ಯ ಲೀಕ್..ಡೆಲ್ಲಿ ಹೈ ಕೋರ್ಟ್‌‌ನಿಂದ ಶಾಕ್..!

BeFunky collage (96)

ಸಾಕಷ್ಟು ಟೀಕೆ, ಟಿಪ್ಪಣಿಗಳ ನಡುವೆ ಇಡೀ ದೇಶವೇ ಕೊಂಡಾಡಿದ ಪೇಟ್ರಿಯಾಟಿಕ್ ಮೂವಿ ಧುರಂಧರ್‌ಗೆ ಎಲ್ಲಿಲ್ಲದ ಪ್ರಶಂಸೆಗಳು ಹರಿದು ಬಂದವು. ಸಿನಿಮಾ ಮಾಡಿದ ಹಂಗಾಮಕ್ಕೆ ಬಾಕ್ಸ್ ಆಫೀಸ್ ಕೂಡ ತುಂಬಿ ತುಳುಕಿತ್ತು. ಇದೀಗ ಫಿಲ್ಮ್ ಮೇಕರ್ಸ್ ಮೇಲೆ ಸಶಸ್ತ್ರ ಸೀಮಾ ಬಲ್‌ ಯೋಧ ಕಿಡಿಕಾರಿದ್ದಾರೆ. ಅಷ್ಟೇ ಅಲ್ಲ, ಚಿತ್ರತಂಡವನ್ನ ಡೆಲ್ಲಿ ಹೈ ಕೋರ್ಟ್‌‌‌ ಮೆಟ್ಟಿಲೇರುವಂತೆ ಮಾಡಿದ್ದಾರೆ. ಇಷ್ಟಕ್ಕೂ ಏನದು ವಿವಾದ..? ರಣ್ವೀರ್ ಸಿಂಗ್ ವಿವಾದಗಳನ್ನ ಬಿಟ್ರೂ, ವಿವಾದಗಳೇ ರಣ್ವೀರ್‌ನ ಬಿಡ್ತಿಲ್ಲವೇಕೆ ಅನ್ನೋದ್ರ ಡಿಟೈಲ್ಡ್ ರಿಪೋರ್ಟ್ ನಿಮಗಾಗಿ.

ಧುರಂಧರ್ ಹಾಗೂ ಧುರಂಧರ್-2..2025ರ ವರ್ಷಾಂತ್ಯಕ್ಕೆ ಹಾಗೂ 2026ರ ಮಾರ್ಚ್‌‌..ಮೂರ್ನಾಲ್ಕು ತಿಂಗಳ ಅಂತರದಲ್ಲಿ ತೆರೆಕಂಡ ಸಿನಿಮಾಗಳು. ಮೊದಲ ಭಾಗ 1428 ಕೋಟಿ ಗಳಿಸಿದ್ರೆ, ಎರಡನೇ ಪಾರ್ಟ್ ಬರೋಬ್ಬರಿ 1848 ಕೋಟಿಗೂ ಅಧಿಕ ಮೊತ್ತ ಗಳಿಸೋ ಮೂಲಕ ಬಾಕ್ಸ್ ಆಫೀಸ್‌‌ನ ಸುನಾಮಿ, ಸುಂಟರಗಾಳಿಯಾಗಿದ್ದು ಸುಳ್ಳಲ್ಲ. ಅದಕ್ಕೆ ಕಾರಣ ಕಥೆಯಲ್ಲಿರೋ ನೈಜತೆ, ಪಾತ್ರಗಳಲ್ಲಿರೋ ಸ್ವಾಭಾವಿಕತೆ ಹಾಗೂ ನಿಬ್ಬೆರಗಾಗಿಸೋ ಅಂತಹ ಅತ್ಯದ್ಭುತ ಮೇಕಿಂಗ್.

ಬಹುದೊಡ್ಡ ವಿವಾದದಲ್ಲಿ 1800Cr ಗಳಿಸಿದ ಧುರಂಧರ್‌

ಮೇಕರ್ಸ್ ವಿರುದ್ಧ ಸಶಸ್ತ್ರ ಸೀಮಾ ಬಲ್ ಯೋಧನ ಕಿಡಿ

ಆದಿತ್ಯ ಧಾರ್ ನಿರ್ದೇಶಿಸಿ, ನಿರ್ಮಾಣ ಮಾಡಿದ ಧುರಂಧರ್ ಸಿನಿಮಾಗಳಿಗೆ ಸಾಕಷ್ಟು ಟೀಕೆ, ಟಿಪ್ಪಣಿಗಳು ಎದುರಾದವು. ಪರ ವಿರೋಧದ ಅಲೆಗಳ ನಡುವೆಯೂ ಸಿನಿಮಾಗೆ ಅಭೂತಪೂರ್ವ ಯಶಸ್ಸು ಸಿಕ್ಕಿತು. ಇಡೀ ಭಾರತೀಯ ಚಿತ್ರರಂಗವೇ ಧುರಂಧರ್, ಅದ್ರ ಮೇಕರ್ ಆದಿತ್ಯ ಧಾರ್ ಹಾಗೂ ರಣ್ವೀರ್ ಸಿಂಗ್‌‌ನ ಹಾಡಿ ಹೊಗಳಿತು. ಸ್ಟಾರ್ ಡೈರೆಕ್ಟರ್‌‌ಗಳಿಂದ ಸೂಪರ್ ಸ್ಟಾರ್ಸ್ ತನಕ ಎಲ್ಲರೂ ಚಿತ್ರ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ರು.

ಸೇನಾ ರಹಸ್ಯ ಲೀಕ್..ಡೆಲ್ಲಿ ಹೈ ಕೋರ್ಟ್‌‌ನಿಂದ ಶಾಕ್..!

ದೇಶದ ಭದ್ರತೆಗೆ ಧಕ್ಕೆ..ಅಧಿಕೃತ ರಹಸ್ಯ ಕಾಯ್ದೆ ಉಲ್ಲಂಘನೆ

ಜನ ಧುರಂಧರ್-3ಗಾಗಿ ಕಾಯ್ತಿರೋ ಈ ಸಂದರ್ಭದಲ್ಲಿ ಚಿತ್ರತಂಡಕ್ಕೆ ಡೆಲ್ಲಿ ಹೈ ಕೋರ್ಟ್ ಬಿಗ್ ಶಾಕ್ ನೀಡಿದೆ. ಧುರಂಧರ್ ಸೀರೀಸ್‌‌ನ 3ನೇ ಸಿನಿಮಾ ಬರಲ್ಲ ಅನ್ನೋದನ್ನ ಆದಿತ್ಯ ಧಾರ್ ಈಗಾಗ್ಲೇ ಸ್ಪಷ್ಟಪಡಿಸಿದ್ದಾರೆ. ಆದ್ರೆ ಸಾವಿರಾರು ಕೋಟಿ ಗಳಿಸಿದ ಸಿನಿಮಾ ತಂಡ ಕೋರ್ಟ್ ಮೆಟ್ಟಿಲೇರುವಂತಾಗಿದೆ. ಅದಕ್ಕೆ ಕಾರಣ ಸಶಸ್ತ್ರ ಸೀಮಾ ಬಲ್‌ ಯೋಧ ದೀಪಕ್ ಕುಮಾರ್. ಹೌದು.. SSBಯಲ್ಲಿ ಹೆಡ್ ಕಾನ್ಸ್‌‌ಟೇಬಲ್ ಆಗಿರೋ ದೀಪಕ್ ದೆಹಲಿ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನ ಹೂಡಿದ್ದಾರೆ.

ಅರ್ಜಿಯ ವಿಚಾರಣೆ ನಡೆಸಿದ ಡೆಲ್ಲಿ ಹೈ ಕೋರ್ಟ್, ಈ ಕುರಿತು ಪರಿಶೀಲನೆ ನಡೆಸುವಂತೆ ಕೇಂದ್ರ ಸರ್ಕಾರ ಹಾಗೂ CBFCಗೆ ಆದೇಶ ನೀಡಿದೆ. ಅಂದಹಾಗೆ ಪಿಐಎಲ್ ಪ್ರಕರಣ ದಾಖಲಾಗಲು ಪ್ರಮುಖ ಕಾರಣ, ಸಿನಿಮಾ ಸಶಸ್ತ್ರ ಪಡೆಗಳ ಕಾರ್ಯಾಚರಣೆಯ ವಿವರಗಳನ್ನು ಬಹಿರಂಗಪಡಿಸಿದೆ. ದೇಶದ ಭದ್ರತೆ ಹಾಗೂ ಸಮಗ್ರತೆಗೆ ಅಪಾಯ ಉಂಟುಮಾಡಿದೆ ಎಂಬುದಾಗಿದೆ. ಇಲ್ಲಿ ಸೇನೆಯ ಕೆಲವು ಲೊಕೇಷನ್ಸ್ ಜೊತೆಗೆ ಸಾಕಷ್ಟು ಸೇನಾ ರಹಸ್ಯಗಳನ್ನ ಲೀಕ್ ಮಾಡಲಾಗಿದೆ. ಅಧಿಕೃತ ರಹಸ್ಯ ಕಾಯ್ದೆ ನಿಬಂಧನೆಗಳ ಉಲ್ಲಂಘನೆಯಾಗಿದೆ ಅಂತ ಆರೋಪಿಸಲಾಗಿದೆ.

ಧುರಂಧರ್ ಸಿನಿಮಾ ಕಾಲ್ಪನಿಕ ಕಥೆಯೇ ಆಗಿರಬಹುದು. ಆದ್ರೆ ಭದ್ರತಾ ಸಿಬ್ಬಂದಿ ಎತ್ತಿರುವ ಕಳವಳ, ಪ್ರಶ್ನೆಗಳನ್ನ ಉಲ್ಲಂಘಿಸಲಾಗುವುದಿಲ್ಲ ಎಂದಿದ್ದಾರೆ ಡೆಲ್ಲಿ ಹೈಕೋರ್ಟ್‌‌ನ ವಿಭಾಗೀಯ ಪೀಠದ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಹಾಗೂ ನ್ಯಾಯಮೂರ್ತಿ ತೇಜಸ್ ಕರಿಯಾ. ಅಲ್ಲದೆ ಕೇಂದ್ರ ಸರ್ಕಾರ ಹಾಗೂ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಷನ್‌ಗೆ ಈ ಬಗ್ಗೆ ತನಿಖೆ ನಡೆಸುವಂತೆ ಆದೇಶ ನೀಡಿರೋದ್ರಿಂದ ಫಿಲ್ಮ್ ಮೇಕರ್ ಆದಿತ್ಯ ಧಾರ್‌ಗೆ ಕಂಟಕ ಕಾದಿದೆ.

ಅಂದಹಾಗೆ ಧುರಂಧರ್ ಸಿನಿಮಾ ಇಂಡಿಯಾದ ಇಂಟೆಲಿಜೆನ್ಸ್ ಬ್ಯೂರೋ ಡೈರೆಕ್ಟರ್ ಅಜಿತ್ ದೋವಲ್, ಮೋಸ್ಟ್ ವಾಂಟೆಡ್ ಕ್ರಿಮಿನಲ್ ದಾವೂದ್ ಇಬ್ರಾಹಿಂ, ISI ಮೇಜರ್, ಇಂಡಿಯಾದ ಸ್ಪೈ ಏಜೆಂಟ್ ಜಸ್ಕಿರತ್ ಸಿಂಗ್ ರಂಗಿ, ಪಾಕ್‌ನ ಗ್ಯಾಂಗ್‌ಸ್ಟರ್ ರಹಮಾನ್ ಡಕಾಯಿತ್.. ಹೀಗೆ ಸಾಕಷ್ಟು ಮಂದಿ ಮೇಲೆ ಬೆಳಕು ಚೆಲ್ಲಿದೆ. ಇಂಡಿಯಾ-ಪಾಕಿಸ್ತಾನ್‌‌ ನಡುವಿನ ಜಿದ್ದಾಜಿದ್ದಿನ ಸೀಕ್ರೆಟ್ ಆಪರೇಷನ್‌‌‌ಗಳ ಮೇಲೆ ಬೆಳಕು ಚೆಲ್ಲಿರೋ ಧುರಂಧರ್ ಚಿತ್ರ ಹಣ ಮಾಡೋ ಉದ್ದೇಶದಿಂದ ದೇಶದ ಭದ್ರತೆಗೆ ಧಕ್ಕೆ ತಂದಿದೆ ಎನ್ನಲಾಗಿದೆ.

 ರಣ್ವೀರ್ ವಿವಾದ ಬಿಟ್ರೂ ವಿವಾದವೇ ರಣ್ವೀರ್‌‌ನ ಬಿಡ್ತಿಲ್ಲ..!!

ಸ್ಪಷ್ಟನೆ ನೀಡಿ, ದಂಡ ಕಟ್ಟುತ್ತಾರಾ ಡೈರೆಕ್ಟರ್ ಆದಿತ್ಯ ಧಾರ್..?

ರಣ್ವೀರ್ ಸಿಂಗ್ ವಿವಾದಗಳಿಂದ ದೂರ ಇರಲು ನೋಡಿದ್ರೂ, ವಿವಾದಗಳೇ ರಣ್ವೀರ್ ಸಿಂಗ್‌‌ನ ಬಿಡೋಕೆ ತಯಾರಿಲ್ಲ ಅನಿಸುತ್ತೆ. ಇತ್ತೀಚೆಗೆ ಕಾಂತಾರ ಚಿತ್ರದ ಚಾಮುಂಡಿ ದೈವವನ್ನ ದೆವ್ವ ಅಂತ ಅಣುಕಿಸಿ, ತೀವ್ರ ಟೀಕೆಗೆ ಗುರಿಯಾಗಿದ್ದರು ರಣ್ವೀರ್. ಕೊನೆಗೆ ಕೋರ್ಟ್‌‌ನಲ್ಲಿ ಬೇಷರತ್ ಕ್ಷಮೆ ಯಾಚಿಸಿ, ತಾಯಿ ಚಾಮುಂಡೇಶ್ವರಿ ಆಲಯಕ್ಕೂ ಭೇಟಿ ನೀಡುವುದಾಗಿ ಹೇಳಿದ್ರು. ಆ ಸಮಸ್ಯೆ ಇತ್ಯರ್ಥ ಆಗೋಕೆ ಮೊದಲೇ ಮತ್ತೆ ಧುರಂಧರ್ ಚಿತ್ರತಂಡ ಕೋರ್ಟ್ ಮೆಟ್ಟಿಲೇರುವಂತೆ ಆಗಿರೋದು ಮಾತ್ರ ವಿಪರ್ಯಾಸ.

ಸಿನಿಮಾ ರಿಲೀಸ್ ಆಗಿಬಿಟ್ಟಿದೆ. ದುಡ್ಡು ಕೂಡ ಮಾಡಿ ಆಯ್ತು. ಈಗ ಗರಿಷ್ಠ ಆ ತಂಡಕ್ಕೆ ದಂಡ ವಿಧಿಸಬಹುದು. ಒಂದು ಕ್ಷಮಾಪಣಾ ಪತ್ರ ಬರೆಸಿಕೊಳ್ಳಬಹುದು. ಇನ್ನು ಮುಂದೆ ನನ್ನ ಸಿನಿಮಾಗಳಲ್ಲಿ ದೇಶದ ಭದ್ರತೆಗೆ ಧಕ್ಕೆ ತರುವ ವಿಷಯಗಳನ್ನ ನೇರಾನೇರ ತೋರಿಸಲ್ಲ ಅಂತ ಆದಿತ್ಯ ಧಾರ್ ಲಿಖಿತ ರೂಪದಲ್ಲಿ ಭರವಸೆ ನೀಡಬಹುದು.

ಇದರ ಹೊರತಾಗಿ ಬೇರೇನು ಮಾಡಲು ಸಾಧ್ಯ ಅಲ್ಲವೇ..? ಇನ್‌‌ ಫ್ಯಾಕ್ಟ್ ಆದಿತ್ಯ ಧಾರ್ ಈ ಹಿಂದಿನ ಉರಿ: ದಿ ಸರ್ಜಿಕಲ್ ಸ್ಟ್ರೈಕ್ ಚಿತ್ರದಲ್ಲೂ ಅಂಥದ್ದೇ ಆಗಿತ್ತು. ಆದ್ರೆ ಅದನ್ನ ನೈಜ ಘಟನೆ ಆಧಾರಿತ ಚಿತ್ರ ಅಂತ ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ಈಗ ಹೇಳಿಕೊಂಡಿಲ್ಲ ಅಷ್ಟೇ. ಒಟ್ಟಾರೆ ಈ ಬಗೆಯ ಚಿತ್ರಗಳನ್ನ ಮಾಡುವಾಗ ನಿರ್ದೇಶಕರು ಬಹಳ ಜಾಗರೂಕತೆಯಿಂದ ಮಾಡಬೇಕಾಗುತ್ತೆ. ಅದ್ರಲ್ಲೂ ಸ್ಪೈ ಏಜೆಂಟ್‌ಗಳ ಸೆನ್ಸಿಟೀವ್ ಆಪರೇಷನ್ಸ್‌‌‌ ನ ಎಂದೂ ರಿವೀಲ್ ಮಾಡಬಾರದು.

 

 

Exit mobile version