ಧುರಂಧರ್ ‘ಬಾಕ್ಸ್ ಆಫೀಸ್‌ ಕಾ ಬಾಪ್’ ಎಂದ ತಲೈವಾ..!

ಪ್ರತಿಯೊಬ್ಬ ಇಂಡಿಯನ್ ನೋಡ್ಲೇಬೇಕು.. ರಜನಿ ಒತ್ತಾಯ

Untitled design 2026 03 24T183149.984

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

ಧುರಂಧರ್ ಬಾಕ್ಸ್ ಆಫೀಸ್‌ ಕಾ ಬಾಪ್.. ಇದನ್ನ ನಾವು ನೀವು ಹೇಳ್ತಿರೋದಲ್ಲ. ಸೂಪರ್ ಸ್ಟಾರ್ ರಜನೀಕಾಂತ್ ಅಂತಹ ಲೆಜೆಂಡ್ ಇಂಥದ್ದೊಂದು ಸ್ಟೇಟ್ಮೆಂಟ್ ನೀಡಿದ್ದಾರೆ. ಸಿನಿಮಾ ನೋಡಿ ಫುಲ್ ಫಿದಾ ಆಗಿರೋ ತಲೈವಾ, ಹಾಡಿ ಹೊಗಳಿದ್ದಾರೆ. ಹಾಗಾದ್ರೆ ರಜನೀಕಾಂತ್ ಹೇಳಿದ್ದೇನು..? ನಾಲ್ಕೇ ದಿನಕ್ಕೆ 700 ಕೋಟಿ ಗಳಿಸಿದ್ಹೇಗೆ ಧುರಂಧರ್ ಸೀಕ್ವೆಲ್ ಅನ್ನೋದಕ್ಕೆ ಈ ಧಮಾಕೇದಾರ್ ಸ್ಟೋರಿ ನೋಡಿ.

ಧುರಂಧರ್ ‘ಬಾಕ್ಸ್ ಆಫೀಸ್‌ ಕಾ ಬಾಪ್’ ಎಂದ ತಲೈವಾ..!

ಪ್ರತಿಯೊಬ್ಬ ಇಂಡಿಯನ್ ನೋಡ್ಲೇಬೇಕು.. ರಜನಿ ಒತ್ತಾಯ

ಆದಿತ್ಯ ಧರ್ ನಿರ್ದೇಶನದಲ್ಲಿ ಮೂಡಿ ಬಂದ ಧುರಂಧರ್- ದಿ ರಿವೆಂಜ್ ಸಿನಿಮಾ ಸಾಮಾನ್ಯ ಆಕ್ಷನ್ ಚಿತ್ರವಲ್ಲ… ಇದು ದೇಶಭಕ್ತಿ, ತ್ಯಾಗ ಮತ್ತು ಪ್ರತೀಕಾರದ ಮಿಶ್ರಣ. ಕಥೆಯ ಕೇಂದ್ರಬಿಂದುವಾಗಿರುವುದು ದೇಶಕ್ಕಾಗಿ ಎಲ್ಲವನ್ನೂ ತ್ಯಜಿಸುವ ಒಬ್ಬ ಸೈನಿಕನ ಜೀವನ. ಗಡಿ ಪ್ರದೇಶದಲ್ಲಿ ನಡೆದ ದಾಳಿ, ದೇಶದ ಭದ್ರತೆಗೆ ಎದುರಾದ ಅಪಾಯ, ಅದರಿಂದ ಹುಟ್ಟಿದ ಕೋಪ.. ಇವೆಲ್ಲವೂ ಕಥೆಯ ಪ್ರಾರಂಭದಲ್ಲೇ ಪ್ರೇಕ್ಷಕರನ್ನು ಸೆಳೆದುಕೊಳ್ಳುತ್ತವೆ.

ರಣ್ವೀರ್ ಸಿಂಗ್ ಇಲ್ಲಿ ಕೇವಲ ನಟನಲ್ಲ. ಒಂದು ಎಮೋಷನ್. ದೇಶದ ಮೇಲೆ ಅಪಾರ ಪ್ರೀತಿ ಹೊಂದಿರುವ ಸ್ಪೈ ಏಜೆಂಟ್ ಆಗಿ ಕಾಣಿಸಿಕೊಂಡ ಅವರು, ತಮ್ಮ ಕುಟುಂಬವನ್ನೇ ಕಳೆದುಕೊಂಡ ನಂತರ ಪ್ರತೀಕಾರದ ಹಾದಿಯಲ್ಲಿ ನಡೆಯುತ್ತಾರೆ. ಅವರ ಪಾತ್ರದ ಒಳಗಿನ ನೋವು, ಕೋಪ, ದೇಶಪ್ರೇಮ  ಪ್ರತಿಯೊಂದು ಫ್ರೇಮ್‌ನಲ್ಲೂ ಸ್ಪಷ್ಟವಾಗಿ ಕಾಣುತ್ತದೆ. ಕ್ಲೈಮ್ಯಾಕ್ಸ್‌ನಲ್ಲಿ ಅವರ ಭಾವನಾತ್ಮಕ ಸ್ಪೋಟ ಪ್ರೇಕ್ಷಕರ ಕಣ್ಣು ನೀರಾಡಿಸುವಷ್ಟು ಪರಿಣಾಮಕಾರಿ.

4 ದಿನಕ್ಕೆ 700Cr.. ಸಾವಿರ ಕೋಟಿ ಕ್ಲಬ್‌‌ನತ್ತ ನಾಗಾಲೋಟ

ವಿಶ್ವ ಸಿನಿದುನಿಯಾದ ಮೋಸ್ಟ್ ಸೆನ್ಸೇಷನ್ ಈ ಧುರಂಧರ್..!

ವಿಶೇಷವಾಗಿ ಬಾರ್ಡರ್ ಆಕ್ಷನ್ ಸೀನ್ಸ್‌ಗಳು ಹಾಲಿವುಡ್ ಮಟ್ಟದಲ್ಲಿ ಮೂಡಿಬಂದಿವೆ. ಆಕ್ಷನ್ ಚೇಸ್ ಸೀಕ್ವೆನ್ಸ್, ಬಾಂಬ್ ಬ್ಲಾಸ್ಟ್‌, ಡ್ರೋನ್ ಅಟ್ಯಾಕ್‌ ಪ್ರತಿಯೊಂದು ದೃಶ್ಯವೂ ಥಿಯೇಟರ್‌ನಲ್ಲಿ ಪ್ರೇಕ್ಷಕರಿಗೆ ರೋಮಾಂಚನ ನೀಡುತ್ತದೆ. ಬ್ಯಾಕ್‌ಗ್ರೌಂಡ್ ಸ್ಕೋರ್ ಕೂಡ ಅದೇ ಮಟ್ಟದಲ್ಲಿ ಥ್ರಿಲ್ ಹೆಚ್ಚಿಸುತ್ತದೆ. ಇಂತಹ ಭರ್ಜರಿ ಕಂಟೆಂಟ್‌ಗೆ ಫಲವಾಗಿ ‘ಧುರಂಧರ್’ ಬಾಕ್ಸ್‌ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿದೆ. ಕೇವಲ 4 ದಿನಗಳಲ್ಲಿ 700 ಕೋಟಿ ದಾಟಿ, 761 ಕೋಟಿ ಕಲೆಕ್ಷನ್ ಮೂಲಕ ಜಾಗತಿಕ ಮಟ್ಟದಲ್ಲಿ ತನ್ನ ಶಕ್ತಿ ತೋರಿಸಿದೆ. ದೇಶೀಯ ಮಾರುಕಟ್ಟೆಯಲ್ಲಿ ಅತಿ ವೇಗವಾಗಿ 300 ಕೋಟಿ ಕ್ಲಬ್ ಸೇರಿದ ಸಿನಿಮಾಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಧುರಂಧರ್ ಚಿತ್ರ ನೋಡಿದ ಬಾಲಿವುಡ್, ಟಾಲಿವುಡ್  ಸ್ಟಾರ್ ಗಳು ಸಿನಿಮಾವನ್ನು ಹಾಡಿಹೊಗಳಿದ್ದಾರೆ. ನಿರ್ದೇಶಕ ಎಸ್‌ ಎಸ್‌ ರಾಜಮೌಳಿ,ಮಹೇಶ್ ಬಾಬು, ಅಲ್ಲು ಅರ್ಜುನ್ ಸೇರಿ ಅನೇಕ ಸೆಲೆಬ್ರೆಟಿಗಳು ಸಿನಿಮಾದ ಬಗ್ಗೆ ಮೆಚ್ಚುಗೆಯ ಮಾತನ್ನು ಆಡಿದ್ದರು. ಇದೀಗ ರಜನಿಕಾಂತ್ ಅವರು ಧುರಂಧರ್ ಸಿನಿಮಾ ನೋಡಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಈ ಯಶಸ್ಸಿಗೆ ಮತ್ತೊಂದು ದೊಡ್ಡ ಬೂಸ್ಟ್ ಸಿಕ್ಕಿದ್ದು ರಜನಿಕಾಂತ್ ಅವರ ಮೆಚ್ಚುಗೆಯಿಂದ. ಎಸ್, ಸಿನಿಮಾ ವೀಕ್ಷಿಸಿದ ಬಳಿಕ ರಜನಿಕಾಂತ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಟ್ವೀಟ್ ಸದ್ಯ ವೈರಲ್ ಆಗಿದೆ. ‘ವಾಟ್ ಎ ಫಿಲ್ಮ್.. ಆದಿತ್ಯ ಧರ್ ಇಸ್ ದಿ ರಿಯಲ್ ಬಾಕ್ಸ್ ಆಫೀಸ್ ಕಾ ಬಾಪ್’ ಪ್ರತಿ ಭಾರತೀಯನು ನೋಡಲೇಬೇಕಾದ ಸಿನಿಮಾ, ಅನ್ನೋ ಅವರ ಮಾತು ಸಿನಿಮಾ ಇಂಡಸ್ಟ್ರಿಯಲ್ಲೇ ಚರ್ಚೆ ಹುಟ್ಟಿಸಿದೆ. ಇದು ಕೇವಲ ಮೆಚ್ಚುಗೆ ಅಲ್ಲ ನಿರ್ದೇಶಕನಿಗೆ ಸಿಕ್ಕ ದೊಡ್ಡ ಗೌರವ. ಸದ್ಯ ರಜನಿ ಟ್ವೀಟ್ ಗೆ ಆದಿತ್ಯ ರೀ ಟ್ವೀಟ್ ಮಾಡಿ ಧನ್ಯವಾದ ತಿಳಿಸಿದ್ದಾರೆ.

ಟಾಲಿವುಡ್ ಸ್ಟಾರ್ಸ್ ನಂತ್ರ ಕಾಲಿವುಡ್ ಕಿಂಗ್ ರಿವ್ಯೂ

ತಲೈವಾ ಮೆಚ್ಚುಗೆಗೆ ಆದಿತ್ಯ ಧರ್ ಎಮೋಷನಲ್ ರಿಪ್ಲೈ

ಇಂಡಸ್ಟ್ರಿಯಲ್ಲಿ ರಜನಿಕಾಂತ್ ಅಭಿಪ್ರಾಯಕ್ಕೆ ಇರುವ ತೂಕವೇ ಬೇರೆ. ಅವರು ಹೊಗಳಿದ ಸಿನಿಮಾ ಎಂದರೆ ಅದರಲ್ಲಿ ಏನೋ ವಿಶೇಷ ಇದೆ ಅನ್ನೋ ವಿಶ್ವಾಸ ಜನರಲ್ಲಿ ಇರುತ್ತದೆ. ಅದೇ ಕಾರಣಕ್ಕೆ ‘ಧುರಂಧರ್’ ಸಿನಿಮಾದ ಕ್ರೇಜ್ ಒಂದು ಲೆವೆಲ್‌ನಿಂದ ಮತ್ತೊಂದು ಲೆವೆಲ್‌ಗೆ ಜಂಪ್ ಆಗಿದೆ. ಈ ಎಲ್ಲಾ ಮೆಚ್ಚುಗೆಗಳ ಮಧ್ಯೆ ಹೈಲೈಟ್ ಆಗೋದು ನಿರ್ದೇಶಕ ಆದಿತ್ಯ ಧರ್ ಕೆಲಸ. ‘ಉರಿ’ ನಂತರ ಮತ್ತೆ ದೇಶಭಕ್ತಿ ಹಾದಿಯಲ್ಲಿ ಬಂದ ಅವರು… ಈ ಬಾರಿ ಇನ್ನೂ ದೊಡ್ಡ ಕ್ಯಾನ್ವಾಸ್ ಮೇಲೆ ಕಥೆ ಹೇಳುವ ಸಾಹಸ ಮಾಡಿದ್ದಾರೆ. ಕಥೆ ಹೇಳುವ ರೀತಿಯಲ್ಲೇ ಅವರು ತಮ್ಮ ಸ್ಟೈಲ್ ಮೆರೆಯಿಸಿದ್ದಾರೆ.

ಆದಿತ್ಯ ಧರ್ ಅವರ ನಿರ್ದೇಶನದ ಸ್ಟ್ರಾಂಗ್ ನ್ಯಾರೇಟಿವ್, ರಣವೀರ್ ಸಿಂಗ್ ಅವರ ಎನರ್ಜಿಟಿಕ್ ಪರ್ಫಾರ್ಮೆನ್ಸ್, ಟೆಕ್ನಿಕಲ್ ಟೀಮ್‌ನ ಅದ್ಭುತ ಕೆಲಸ, ಈ ಮೂರೂ ಸೇರಿ ‘ಧುರಂಧರ್’ ಅನ್ನು ಗ್ಲೋಬಲ್ ಬ್ಲಾಕ್‌ಬಸ್ಟರ್ ಆಗಿ ರೂಪಿಸಿದೆ. ಆದ್ರೆ ಎಲ್ಲಾ ಪ್ರಶಂಸೆಗಳ ನಡುವೆ ವಿವಾದವೂ ಭುಗಿಲೆದ್ದಿದೆ. ಕೆಲ ವಿಮರ್ಶಕರು ಈ ಸಿನಿಮಾವನ್ನು ‘ಪ್ರೊಪಗಾಂಡ’ ಎಂದು ಟೀಕಿಸುತ್ತಿದ್ದಾರೆ.

ಇದೀಗ ಧುರಂಧರ್ 2 ಕೇವಲ ಒಂದು ಹಿಟ್ ಸಿನಿಮಾ ಅಲ್ಲ ನಿರ್ದೇಶಕ ಆದಿತ್ಯ ಧರ್ ಕ್ರಾಫ್ಟ್‌ಗೆ ಸಿಕ್ಕ ಸೀಲ್.. ರಜನೀಕಾಂತ್ ಮೆಚ್ಚುಗೆಯ ಸ್ಟ್ಯಾಂಪ್. ಟೀಕೆಗಳು ಏನೇ ಇದ್ದರೂ ಬಾಕ್ಸ್‌ಆಫೀಸ್ ಮತ್ತು ಸೂಪರ್‌ಸ್ಟಾರ್ ಮಾತು ಒಂದೇ ಹೇಳ್ತಿದೆ . ಈ ಸಿನಿಮಾ ಈಗ ನಿಜವಾದ ಗ್ಲೋಬಲ್ ಫೆನಾಮಿನಾನ್.

 

 

 

Exit mobile version