ಬಳ್ಳಾರಿ: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ನಟಿಸಿರುವ ಅದ್ದೂರಿ ಸಿನಿಮಾದ 13ನೇ ವರ್ಷಕ್ಕೆ ಕಾಲಿಟ್ಟಿದ್ದು ಅಭಿಮಾನಿಗಳಿಗೆ ಸಂಭ್ರಮದ ದಿನವಾಗಿದೆ. ಇದನ್ನು ಅಭಿಮಾನಿಗಳು 13ನೇ ವಾರ್ಷಿಕೋತ್ಸವೆಂದು ಅಚರಿಸಲ್ಪಡುತಿದ್ದು.
ಇದರ ಅಂಗವಾಗಿ ಜೈ ಹನುಮಾನ್ ಸರ್ಜಾ ಅಭಿಮಾನಿಗಳ ಸಂಘದ ಬಳ್ಳಾರಿ ಜಿಲ್ಲಾಧ್ಯಕ್ಷರು ಮತ್ತು ಧ್ರುವ ಆಸರೆ ಫೌಂಡೇಶನ್ ಸಂಸ್ಥಾಪಕರು ಹಾಗೂ ಅಧ್ಯಕ್ಷರಾದ ಎಂ.ಜಿ ಕನಕ ಅವರು ನಗರದಲ್ಲೆಡೆ ದೇವಸ್ಥಾನಗಳಲ್ಲಿ ವಿಷೇಶ ಪೂಜೆ ಸಲ್ಲಿಸಿದ್ದರು.
ಬಳ್ಳಾರಿ ನಗರದ ಕನಕ ದುರ್ಗಮ್ಮ ದೇವಸ್ಥಾನ , ರಾಯಲ್ ಸರ್ಕಲ್, ಮೋತಿ ಸರ್ಕಲ್, ಹೊಸ ಬಸ್ ನಿಲ್ದಾಣದಲ್ಲಿರುವ ಹಿರಿಯ ವೃದ್ಧರಿಗೆ ಹಾಗೂ ನಿರ್ಗತಿಕರಿಗೆ ಊಟದ ಪೊಟ್ಟಣ್ಣಗಳನ್ನು ಹಾಗೂ ನೀರಿನ ಬಾಟಲ್ ಗಳನ್ನು ವಿತರಿಸುವ ಮೂಲಕ ಸಂಭ್ರಮಾಚರಣೆಗೆ ಮುಂದಾಗಿದ್ದಾರೆ.
ಇದೇ ವೇಳೆ ಪತ್ರಿಕೆ ಹೇಳಿಕೆ ನೀಡಿರುವ ಎಂ. ಜಿ ಕನಕ, ಅದ್ದೂರಿ 2012ರ ಕನ್ನಡ ರೋಮ್ಯಾಂಟಿಕ್ (ಪ್ರೇಮಿಗಳ) ಚಲನಚಿತ್ರವಾಗಿದ್ದು, ಧ್ರುವ ಸರ್ಜಾ ಅವರ ಚೊಚ್ಚಲ ಸಿನಿಮಾ ಅದ್ದೂರಿ. ಅದ್ದೂರಿ ಸಿನಿಮಾ ಬಿಡುಗಡೆಯಾಗಿ ಜೂನ್ 15ಕ್ಕೆ 13 ವರ್ಷಗಳನ್ನು ಪೂರೈಸಿದೆ. ಅದ್ದೂರಿ ಸಿನಿಮಾವನ್ನು ಚಿತ್ರಮಂದಿರಗಳಿಗೆ ಹೋಗಿ ನೋಡಿ ಆಶೀರ್ವದಿಸಿದ ಎಲ್ಲಾ ಕನ್ನಡ ಕಲಾಭಿಮಾನಿಗಳಿಗೆ ನನ್ನ ಕೃತಜ್ಞತೆಯನ್ನು ತಿಳಿಸುತ್ತೇನೆ ಎಂದರು.
ಇಂದಿನ ದಿನಗಳಲ್ಲಿ ಬಡವರಿಗೆ ನಾನು ನನ್ನ ಕೈಲಾದ ಸಹಾಯ ಮಾಡುತ್ತಿದ್ದೆನೆ ಇದಕ್ಕೆ ಕಾರಣ ಶ್ರೀ ಕನಕ ದುರ್ಗಮ್ಮನ ಆಶಿರ್ವಾದ, ನನ್ನ ಆರಾಧ್ಯ ದೈವ ಧ್ರುವ ಸರ್ಜಾ ಅವರ ಹಾಗೂ ನನ್ನ ಸ್ನೇಹಿತರ ಪ್ರೋತ್ಸಾಹ ಕಾರಣವಾಗಿದೆ. ಮುಂದಿನ ದಿಗಳಲ್ಲಿಯೂ ದೇವರು ಕಣ್ ತೆರೆದರೆ ಇದಕ್ಕೆ ದೊಡ್ಡ ಮಟ್ಟದ ಸೇವೆ ಸಿದ್ದನಾಗುತ್ತೆನೆ. ನೂರಲ್ಲ ಸಾವಿರಾರು ಬಡ ಜನರ ಆಸರೆಗೆ ಮುಂದಾಗುತ್ತೆನೆ ಎಂದು ಎಂ.ಜಿ ಕನಕ ಹೇಳಿದರು.
ಈ ಸಂದರ್ಭದಲ್ಲಿ ಜೈ ಹನುಮಾನ್ ಸರ್ಜಾ ಅಭಿಮಾನಿಗಳ ಸಂಘದ ಪದಾಧಿಕಾರಿಗಳಾದ ಉಮಾರ್ ಫಾರೂಕ್, ಚೇಳ್ಳಗುರ್ಕೀ ನಾಗರಾಜ್, ಕಿರಣ್ ಕುಮಾರ್, ಬೆಳಗಲ್ ಗಣೇಶ್, ಹರಗಿನಡೊಣಿ ಗಾದಿ, ಗಂಗಾಧರ, ಮೆಹಬೂಬ್ ಬಾಷಾ, ಆರೀಫ್, ವೈಫೈ ಶಿವು ಸೇರಿದಂತೆ ಧ್ರುವ ಸರ್ಜಾ ಅವರು ಅಭಿಮಾನಿಗಳು ಹಾಜರಿದ್ದರು.