ಹಂತ ಹಂತವಾಗಿ ದೇಶ ಸುತ್ತುವವರೆಗೂ ಪರ್ಮಿಷನ್ ಪಡೆದಿರೋ ಡಿಬಾಸ್ ದರ್ಶನ್, ಇದೀಗ ಏಕ್ದಮ್ ಫಾರಿನ್ ಫ್ಲೈಟ್ ಏರುವ ಮನಸ್ಸು ಮಾಡಿದ್ದಾರೆ. ಅದಕ್ಕಾಗಿ ಕೋರ್ಟ್ಗೆ ಮನವಿ ಕೂಡ ಸಲ್ಲಿಸಿದ್ದಾರೆ. ಕೊಲೆ ಆರೋಪಿ ದರ್ಶನ್ ಮನವಿಯನ್ನ ಕೋರ್ಟ್ ಪುರಸ್ಕರಿಸಿತಾ ಅಥ್ವಾ ತಿರಸ್ಕರಿಸಿತಾ..? ಇಷ್ಟಕ್ಕೂ ಡಿಬಾಸ್ ಹೋಗಬೇಕಿರೋದು ಎಲ್ಲಿಗೆ ಅನ್ನೋದಕ್ಕೆ ಈ ಸ್ಟೋರಿ ನೋಡಿ.
- ಕೋರ್ಟ್ಗೆ ದರ್ಶನ್ ಮತ್ತೆ ಮನವಿ.. ಫ್ಲೈಟ್ ಹತ್ತಬೇಕು ಸರ್
- ದಚ್ಚು ದುಬೈ, ಯೂರೋಪ್ಗೆ ತೆರಳಲು ಕಾನೂನು ತೊಡಕು !
- ಫಾರಿನ್ನಲ್ಲಿ ಡೆವಿಲ್ ಸಾಂಗ್ ಶೂಟಿಂಗ್.. 57CCHಗೆ ಅರ್ಜಿ
- CRPC ಸೆಕ್ಷನ್ 439(1)(b) ಅಡಿ ಅರ್ಜಿ ಸಲ್ಲಿಸಿದ ಡಿಬಾಸ್
ಅಭಿಮಾನಿಗಳ ಹಾಗೂ ಪವಿತ್ರಾ ಗೌಡ ನೆಚ್ಚಿನ ದಾಸ ದರ್ಶನ್, ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದ್ರು. ಒಂದಷ್ಟು ದಿನ ಪರಪ್ಪನ ಅಗ್ರಹಾರ ಹಾಗೂ ಬಳ್ಳಾರಿ ಸೆಂಟ್ರಲ್ ಜೈಲುಗಳಲ್ಲಿದ್ದ ದರ್ಶನ್, ನಂತ್ರ ಮೆಡಿಕಲ್ ಬೇಲ್ ಮೇಲೆ ಹೊರಬಂದರು. ನಂತ್ರ ರೆಗ್ಯುಲರ್ ಬೇಲ್ ಕೂಡ ಪಡೆದುಕೊಂಡರು. ಪ್ರತಿ ತಿಂಗಳು ವಿಚಾರಣೆಗಾಗಿ ಕೋರ್ಟ್ಗೆ ಹಾಜರು ಕೂಡ ಆಗ್ತಿದ್ದಾರೆ.
ಸೋ.. ಇಂಟರ್ನ್ಯಾಷನಲ್ ಫ್ಲೈಟ್ ಏರಲು ದರ್ಶನ್ ಕಾತರರಾಗಿದ್ದು, ನಿರ್ಮಾಪಕರಿಗೆ ಸಹಕಾರಿಯಾಗಲು ಸದ್ಯ ತಮ್ಮ ಅಡ್ವೊಕೇಟ್ ಮೂಲಕ 57ನೇ ಸಿಸಿಹೆಚ್ ಕೋರ್ಟ್ಗೆ ಶೂಟಿಂಗ್ ನಿಮಿತ್ತ ವಿದೇಶಕ್ಕೆ ತೆರಳಲು ಮನವಿ ಅರ್ಜಿ ಸಲ್ಲಿಸಿದ್ದಾರೆ. ಜೂನ್ 1ರಿಂದ 25ರ ತನಕ 25 ದಿನಗಳ ಕಾಲ CRPC ಸೆಕ್ಷನ್ 439(1)(b) ಅಡಿ ಮನವಿ ಪತ್ರ ಸಲ್ಲಿಸಿದ್ದು, ಕೋರ್ಟ್ ಅದನ್ನ ತಿರಸ್ಕರಿಸುತ್ತಾ ಅಥ್ವಾ ಅದಕ್ಕೆ ಗ್ರೀನ್ ಸಿಗ್ನಲ್ ನೀಡುತ್ತಾ ಅನ್ನೋ ಕುತೂಹಲ ದರ್ಶನ್, ಚಿತ್ರದ ಡೈರೆಕ್ಟರ್ ಹಾಗೂ ಫ್ಯಾನ್ಸ್ಗೆ ಕಾಡ್ತಿತ್ತು. ಆದ್ರೀಗ ಕೋರ್ಟ್ನಲ್ಲಿ ದರ್ಶನ್ ಮನವಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಸ್ಪಿಪಿ. ಇನ್ನು ಈ ವಿಚಾರ ಮೇ 30ಕ್ಕೆ ಆದೇಶ ಕಾಯ್ದಿರಿಸಿದೆ ಕೋರ್ಟ್.