ಕೋರ್ಟ್‌ಗೆ ದರ್ಶನ್ ಮತ್ತೆ ಮನವಿ.. ಫ್ಲೈಟ್ ಹತ್ತಬೇಕು ಸರ್

ದಚ್ಚು ದುಬೈ, ಯೂರೋಪ್‌ಗೆ ತೆರಳಲು ಕಾನೂನು ತೊಡಕು !

Befunky collage 2025 05 28t171036.184

ಹಂತ ಹಂತವಾಗಿ ದೇಶ ಸುತ್ತುವವರೆಗೂ ಪರ್ಮಿಷನ್ ಪಡೆದಿರೋ ಡಿಬಾಸ್ ದರ್ಶನ್, ಇದೀಗ ಏಕ್ದಮ್ ಫಾರಿನ್ ಫ್ಲೈಟ್ ಏರುವ ಮನಸ್ಸು ಮಾಡಿದ್ದಾರೆ. ಅದಕ್ಕಾಗಿ ಕೋರ್ಟ್‌ಗೆ ಮನವಿ ಕೂಡ ಸಲ್ಲಿಸಿದ್ದಾರೆ. ಕೊಲೆ ಆರೋಪಿ ದರ್ಶನ್‌ ಮನವಿಯನ್ನ ಕೋರ್ಟ್‌ ಪುರಸ್ಕರಿಸಿತಾ ಅಥ್ವಾ ತಿರಸ್ಕರಿಸಿತಾ..? ಇಷ್ಟಕ್ಕೂ ಡಿಬಾಸ್ ಹೋಗಬೇಕಿರೋದು ಎಲ್ಲಿಗೆ ಅನ್ನೋದಕ್ಕೆ ಈ ಸ್ಟೋರಿ ನೋಡಿ.

ಅಭಿಮಾನಿಗಳ ಹಾಗೂ ಪವಿತ್ರಾ ಗೌಡ ನೆಚ್ಚಿನ ದಾಸ ದರ್ಶನ್, ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದ್ರು. ಒಂದಷ್ಟು ದಿನ ಪರಪ್ಪನ ಅಗ್ರಹಾರ ಹಾಗೂ ಬಳ್ಳಾರಿ ಸೆಂಟ್ರಲ್ ಜೈಲುಗಳಲ್ಲಿದ್ದ ದರ್ಶನ್, ನಂತ್ರ ಮೆಡಿಕಲ್ ಬೇಲ್ ಮೇಲೆ ಹೊರಬಂದರು. ನಂತ್ರ ರೆಗ್ಯುಲರ್ ಬೇಲ್ ಕೂಡ ಪಡೆದುಕೊಂಡರು. ಪ್ರತಿ ತಿಂಗಳು ವಿಚಾರಣೆಗಾಗಿ ಕೋರ್ಟ್‌ಗೆ ಹಾಜರು ಕೂಡ ಆಗ್ತಿದ್ದಾರೆ.

ADVERTISEMENT
ADVERTISEMENT

ಕೆಟ್ಟ ಮೇಲೆ ಬುದ್ದಿ ಬಂದಂತೆ ಆಗಿರೋ ದರ್ಶನ್, ತಾನಾಯ್ತು ತನ್ನ ಕುಟುಂಬ, ಸಿನಿಮಾ ಅಂತ ತುಂಬಾ ರಿಜಿಡ್ ಆಗಿ ಹಾಗೂ ಫೋಕಸ್ಡ್‌‌ ಆಗಿ ಕರಿಯರ್‌‌ನ ರೀ ಬ್ಯುಲ್ಡ್ ಮಾಡ್ತಿದ್ದಾರೆ. ಆದ್ರೆ ಇಷ್ಟ ಬಂದಂತೆ ವರ್ತಿಸಲು, ಓಡಾಡಲು ಕಾನೂನಿನ ತೊಡಕಿದೆ. ಮೊದಲಿಗೆ ಬೆಂಗಳೂರು ಬಿಟ್ಟು ಎಲ್ಲೂ ಹೋಗುವಂತಿರಲಿಲ್ಲ. ಮೈಸೂರಿನಲ್ಲಿ ಚಿಕಿತ್ಸೆ ನೆಪದಲ್ಲಿ ಆಸ್ಪತ್ರೆ ಜೊತೆ ಫಾರ್ಮ್ ಹೌಸ್‌‌ವರೆಗೆ ತೆರಳಲು ಕೋರ್ಟ್‌ಗೆ ಅರ್ಜಿ ಸಲ್ಲಿಸಿ, ಅನುಮತಿ ಪಡೆದುಕೊಂಡರು.

ಶೂಟಿಂಗ್ ನೆಪದಲ್ಲಿ ಡೆವಿಲ್ ಸಿನಿಮಾದ ನಿಮಿತ್ತ ಅಂತಾರಾಜ್ಯಕ್ಕೂ ಹೋಗಿ ಬರಲು ಹೈ ಕೋರ್ಟ್‌ಗೆ ಮನವಿ ಸಲ್ಲಿಸಿ, ದೇಶವೆಲ್ಲಾ ಸುತ್ತೋಕೆ ಪರ್ಮಿಷನ್ ಪಡೆದುಕೊಂಡರು ದರ್ಶನ್. ಅದ್ರಂತೆ ರಾಜಸ್ತಾನದ ಉದಯ್‌ಪುರದಲ್ಲಿ ಡೆವಿಲ್ ಸಿನಿಮಾದ ಶೂಟಿಂಗ್‌ನ ಒಂದು ವಾರದ ಕಾಲ ಮುಗಿಸಿಕೊಂಡು ಬಂದರು. ಮಿಲನ ಪ್ರಕಾಶ್ ನಿರ್ದೇಶಿಸಿ, ನಿರ್ಮಾಣ ಮಾಡ್ತಿರೋ ಹೈ ವೋಲ್ಟೇಜ್ ಆ್ಯಕ್ಷನ್ ವೆಂಚರ್ ಡೆವಿಲ್ ಸಿನಿಮಾ ಈಗಾಗ್ಲೇ ಬಹುತೇಕ ಟಾಕಿ ಪೋರ್ಷನ್ ಕಂಪ್ಲೀಟ್ ಮಾಡಿದೆ.

ಸದ್ಯ ಹಾಡುಗಳ ಚಿತ್ರೀಕರಣಕ್ಕಾಗಿ ಫಾರಿನ್‌ ಹೋಗುವ ಯೋಜನೆಯಲ್ಲಿದೆ ಚಿತ್ರತಂಡ. ಹೌದು.. ದುಬೈ ಹಾಗೂ ಯೂರೋಪ್‌‌ನ ಸುಂದರ ತಾಣಗಳಲ್ಲಿ ಡೆವಿಲ್ ಸಾಂಗ್ಸ್ ಚಿತ್ರಿಸೋ ಪ್ಲಾನ್‌‌ನಲ್ಲಿರೋ ಚಿತ್ರತಂಡಕ್ಕೆ ಈಗ ದರ್ಶನ್‌ದೇ ದೊಡ್ಡ ತಲೆನೋವಾಗಿದೆ. ಯಾಕಂದ್ರೆ ದರ್ಶನ್ ಭಾರತ ಬಿಟ್ಟು ವಿದೇಶಕ್ಕೆ ಹೋಗುವಂತಿಲ್ಲ. ಈಗಾಗ್ಲೇ ದರ್ಶನ್ ಪಾಸ್‌‌ಪೋರ್ಟ್‌ನ ಲಾಕ್ ಮಾಡಿದೆ ಖಾಕಿ. ಅದಕ್ಕೆ ಕೋರ್ಟ್‌ ಅನುಮತಿ ನೀಡಿದ್ರೆ ಮಾತ್ರ ದೇಶ ದಾಟಬಹುದು.

ಸೋ.. ಇಂಟರ್‌ನ್ಯಾಷನಲ್ ಫ್ಲೈಟ್ ಏರಲು ದರ್ಶನ್ ಕಾತರರಾಗಿದ್ದು, ನಿರ್ಮಾಪಕರಿಗೆ ಸಹಕಾರಿಯಾಗಲು ಸದ್ಯ ತಮ್ಮ ಅಡ್ವೊಕೇಟ್ ಮೂಲಕ 57ನೇ ಸಿಸಿಹೆಚ್ ಕೋರ್ಟ್‌ಗೆ ಶೂಟಿಂಗ್ ನಿಮಿತ್ತ ವಿದೇಶಕ್ಕೆ ತೆರಳಲು ಮನವಿ ಅರ್ಜಿ ಸಲ್ಲಿಸಿದ್ದಾರೆ. ಜೂನ್ 1ರಿಂದ 25ರ ತನಕ 25 ದಿನಗಳ ಕಾಲ CRPC ಸೆಕ್ಷನ್ 439(1)(b) ಅಡಿ ಮನವಿ ಪತ್ರ ಸಲ್ಲಿಸಿದ್ದು, ಕೋರ್ಟ್‌ ಅದನ್ನ ತಿರಸ್ಕರಿಸುತ್ತಾ ಅಥ್ವಾ ಅದಕ್ಕೆ ಗ್ರೀನ್ ಸಿಗ್ನಲ್ ನೀಡುತ್ತಾ ಅನ್ನೋ ಕುತೂಹಲ ದರ್ಶನ್, ಚಿತ್ರದ ಡೈರೆಕ್ಟರ್ ಹಾಗೂ ಫ್ಯಾನ್ಸ್‌ಗೆ ಕಾಡ್ತಿತ್ತು. ಆದ್ರೀಗ ಕೋರ್ಟ್‌ನಲ್ಲಿ ದರ್ಶನ್ ಮನವಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಸ್‌ಪಿಪಿ. ಇನ್ನು ಈ ವಿಚಾರ ಮೇ 30ಕ್ಕೆ ಆದೇಶ ಕಾಯ್ದಿರಿಸಿದೆ ಕೋರ್ಟ್‌.

Exit mobile version