ಚಾಮುಂಡಿ ತಾಯಿ ಬಳಿ ದರ್ಶನ್ ಶಪಥ..! ಹೊಸ ಲೈಫ್ ಶುಭಾರಂಭ..!

‘ಡೆವಿಲ್’ ಶೂಟಿಂಗ್ ಸೆಟ್ ಮೇಲೆ ಹದ್ದಿನ ಕಣ್ಣು..! ಸೆಕ್ಯೂರಿಟಿ ಫುಲ್ ಟೈಟ್..!

111 (13)

ಒಂದೇ ಒಂದು ಇನ್ಸಿಡೆಂಟ್ ಒಬ್ಬರ ಲೈಫ್ ಮೇಲೆ ಎಷ್ಟು ಇಂಪ್ಯಾಕ್ಟ್ ಮಾಡುತ್ತೆ ಅನ್ನೋದಕ್ಕೆ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಜೈಲಿಗೆ ಹೋಗಿ ಬಂದದ್ದು ಬೆಸ್ಟ್ ಎಕ್ಸಾಂಪಲ್ ಆಗಲಿದೆ. ಅವರು ತಪ್ಪು ಮಾಡಿದ್ದಾರೋ ಇಲ್ವೋ ಗೊತ್ತಿಲ್ಲ. ಅದಕ್ಕೆಲ್ಲಾ ಕೋರ್ಟ್, ಕಾನೂನಿದೆ. ಆದ್ರೆ ಆ ಘಟನೆಯಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಲೈಫ್ ನಲ್ಲಿ ಸಾಕಷ್ಟು ಬದಲಾವಣೆಗಳೇ ಆಗೋಗಿದೆ. ಅಧಿಕೃತ ಮೂಲಗಳ ಪ್ರಕಾರ ದರ್ಶನ್ ತುಂಬಾ ಬದಲಾಗಿದ್ದಾರೆ. ತನ್ನ ಸುತ್ತಲೂ ಇದ್ದ 200ಕ್ಕೂ ಅಧಿಕ ಮಂದಿಯ ಆಪ್ತ ಬಳದಲ್ಲಿ ಸುಮಾರು 159 ಮಂದಿಯನ್ನ ಆಲ್ಟ್ ಕಂಟ್ರೋಲ್ ಡಿಲೀಟ್ ಮಾಡಿದ್ದಾರೆ ಎನ್ನಲಾಗ್ತಿದೆ. ಕೇವಲ 41 ಮಂದಿ ನಂಬಿಕಸ್ಥರನ್ನಷ್ಟೇ ದರ್ಶನ್ ಅವರ ಆಪ್ತ ವಲಯದಲ್ಲಿ ಇರಿಸಿಕೊಳ್ಳಲಾಗಿದೆಯಂತೆ.

ಎಲ್ಲಕ್ಕಿಂತ ಹೆಚ್ಚಾಗಿ ದರ್ಶನ್ ಈಗ ಸಿಕ್ಕಾಪಟ್ಟೆ ಬದಲಾಗಿದ್ದಾರೆ. ಇನ್ಮೇಲೆ ಹೇಗಿರಬೇಕು..? ಯಾರೊಟ್ಟಿಗೆ ಇರಬೇಕು..? ಎಂತಹ ಸಿನಿಮಾಗಳನ್ನ ಮಾಡ್ಬೇಕು..? ಯಾವ ಕಾರ್ಯಕ್ರಮಗಳನ್ನ ಅಟೆಂಡ್ ಮಾಡ್ಬೇಕು ಅನ್ನೋ ವಿಚಾರಗಳಲ್ಲಿ ಸಖತ್ ಚ್ಯೂಸಿ ಆಗಿದ್ದಾರೆ. ಡೆವಿಲ್ ಸಿನಿಮಾ ಆರಂಭದಲ್ಲೇ ರೇಣುಕಾಸ್ವಾಮಿ ಪ್ರಕರಣ ನಡೆದ ಹಿನ್ನೆಲೆ ಅದು ಅಲ್ಲಿಗೇನೇ ನಿಂತು ಹೋಗಿತ್ತು. ಈ ಹಿಂದೆ ತಾರಕ್ ಸಿನಿಮಾನ ದರ್ಶನ್ ಗೆ ನಿರ್ದೇಶಿಸಿದ್ದ ಪ್ರಕಾಶ್ ವೀರ್ ಈಗಲೂ ಡೆವಿಲ್ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ.

ADVERTISEMENT
ADVERTISEMENT

ಬೆನ್ನು ನೋವು ಕಮ್ಮಿ ಆಗಲಿ, ಚಿತ್ರೀಕರಣ ಶುರು ಮಾಡೋಣ ಅಂತ ಕಾಯ್ತಿದ್ದ ದರ್ಶನ್, ಕೊನೆಗೂ ಮಾನಸಿಕವಾಗಿ, ದೈಹಿಕವಾಗಿ ಕೂಡ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ. ಇಂದಿನಿಂದಲೇ ಡೆವಿಲ್ ದಿ ಹೀರೋ ಚಿತ್ರದ ಶೂಟಿಂಗ್ ಮೈಸೂರಿನಲ್ಲಿ ಕಿಕ್ ಸ್ಟಾರ್ಟ್ ಆಗಿದೆ. ಅದಕ್ಕೂ ಮುನ್ನ ಇಂದು ಮುಂಜಾನೆ ಚಾಮುಂಡಿ ಬೆಟ್ಟಕ್ಕೆ ತೆರಳಿ, ತಾಯಿ ಚಾಮುಂಡೇಶ್ವರಿ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದ್ದಾರೆ ದರ್ಶನ್. ಹೌದು.. ಬರೀ ಪೂಜೆಯಷ್ಟೇ ಅಲ್ಲ, ತಾನು ಆರಾಧಿಸೋ ಆ ಚಾಮುಂಡಿ ತಾಯಿ ಬಳಿ ಶಪಥ ಕೂಡ ಮಾಡಿದ್ದಾರಂತೆ. ಇಲ್ಲಿಯವರೆಗೂ ಒಂದು ಲೆಕ್ಕ, ಇನ್ಮೇಲೆ ಒಂದು ಲೆಕ್ಕ ಅಂತ ಫಿಕ್ಸ್ ಆಗಿದ್ದಾರೆ ನಟ ದರ್ಶನ್.

ತಪ್ಪು, ಒಪ್ಪುಗಳನ್ನ ತಾಯಿಗೆ ಒಪ್ಪಿಸಿ ಇನ್ಮೇಲೆ ತಾವಾಯ್ತು, ತಮ್ಮ ಕೆಲಸ ಆಯ್ತು ಅಂತ ಬರೀ ಕೆಲಸದ ಬಗ್ಗೆ ಫೋಕಸ್ ಮಾಡೋ ಮನಸ್ಸು ಮಾಡಿದ್ದಾರೆ ದಾಸ ದರ್ಶನ್. ಯಾವ ಮೈಸೂರಿನಲ್ಲಿ ಶೂಟಿಂಗ್ ನಿಂತಿತ್ತೋ, ಅದೇ ಮೈಸೂರಿನಲ್ಲಿ ಇಂದು ಶೂಟಿಂಗ್ ಶುರು ಮಾಡಿದೆ ಟೀಂ. ಅಂದಹಾಗೆ ಯಾವ ಪರಿ ಸ್ಕ್ರಿಕ್ಟ್ ಮಾಡಿದೆ ಸೆಕ್ಯೂರಿಟಿ ಅಂತ ನೋಡಿದ್ರೆ ನೀವು ಶಾಕ್ ಆಗ್ತೀರಿ. ಮೈಸೂರಿನ ಸರ್ಕಾರಿ ಅತಿಥಿ ಗೃಹದ ಬಳಿ ಬೌನ್ಸರ್ ಗಳನ್ನ ನಿಯೋಜಿಸಿದ್ದು, ಸಾರ್ವಜನಿಕರಾರೂ ಒಳ ಹೋಗದಂತೆ ಭದ್ರತೆ ಕಲ್ಪಿಸಲಾಗಿದೆ. ನಜರ್ ಬಾದ್ ನಲ್ಲಿರೋ ಸರ್ಕಾರಿ ಅತಿಥಿ ಗೆಸ್ಟ್ ಹೌಸ್ ನಲ್ಲಿ ಶೂಟಿಂಗ್ ನಡೆಯುತ್ತಿದ್ದು, ಬರೀ ಚಿತ್ರತಂಡ ಹಾಗೂ ಶೂಟಿಂಗ್ ನಲ್ಲಿ ಭಾಗಿಯಾಗುವವರಿಗೆ ಮಾತ್ರ ಗೃಹಕ್ಕೆ ಅವಕಾಶ ಕಲ್ಪಿಸಲಾಗಿದೆ. ಅದಕ್ಕೆ ಒಟ್ಟು 3 ದ್ವಾರಗಳಿದ್ದು, ಎಲ್ಲೆಡೆ ಸೆಕ್ಯೂರಿಟಿ ಟೈಟ್ ಮಾಡಲಾಗಿದೆ.

ರೇಂಜ್ ರೋವರ್ ಕಾರ್ ನಲ್ಲಿ ಗವರ್ನಮೆಂಟ್ ಗೆಸ್ಟ್ ಹೌಸ್ ಗೆ ಆಗಮಿಸಿದ ನಟ ದರ್ಶನ್, ಇಂದಿನಿಂದ ಅಫಿಶಿಯಲಿ ತಮ್ಮ ಸಿನಿಯಾನದ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಇದನ್ನೆಲ್ಲಾ ನೋಡ್ತಿದ್ರೆ ಇನ್ಮೇಲೆ ದಾಸನ ಹೊಸ ದುನಿಯಾ ಸಖತ್ ಸರ್ ಪ್ರೈಸಿಂಗ್ ಆಗಿರಲಿದೆ ಅನ್ನೋದ್ರಲ್ಲಿ ಯಾವುದೇ ಡೌಟ್ ಇಲ್ಲ.

– ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
Exit mobile version