ಜೈರಾಜ್-ಕೊತ್ವಾಲ್ ಭೂಗತಲೋಕದಲ್ಲಿ ಬಲರಾಮನ ದಿನಗಳು

‘ಆ ದಿನಗಳು’ ಸಾರಥಿ ಚೈತನ್ಯರ ಮತ್ತೊಂದು ರಕ್ತಸಿಕ್ತ ಅಧ್ಯಾಯ..!

BeFunky collage (71)

ಆ ದಿನಗಳು ಡೈರೆಕ್ಟರ್ ಕೆ ಎಂ ಚೈತನ್ಯ ಬತ್ತಳಿಕೆಯಲ್ಲಿ ಮತ್ತೊಂದು ಅಂಥದ್ದೇ ಭೂಗತಲೋಕದ ರಕ್ತಸಿಕ್ತ ಅಧ್ಯಾಯ ಹೊರಬರ್ತಿದೆ. ಅದೇ ಬಲರಾಮನ ದಿನಗಳು. ಜಯರಾಜ್-ಕೊತ್ವಾಲ್ ಕಾಲಘಟ್ಟದ ಬೆಂಗಳೂರಿನ ಅಂಡರ್‌‌ವರ್ಲ್ಡ್‌‌ನ ಕೈಗನ್ನಡಿಯಂತಿರೋ ಈ ಚಿತ್ರದ ಟೀಸರ್ ಸದ್ಯ ಎಲ್ಲರ ಹುಬ್ಬೇರಿಸಿದೆ. ಇಷ್ಟಕ್ಕೂ ಟೀಸರ್ ಹೇಗಿದೆ..? ವಿನೋದ್ ಪ್ರಭಾಕರ್ ಜೊತೆ ಯಾರೆಲ್ಲಾ ಫೀಲ್ಡ್‌‌ಗೆ ಇಳಿದಿದ್ದಾರೆ ಅನ್ನೋದನ್ನ ನಾವು ಹೇಳೋದಕ್ಕಿಂತ ನೀವೇ ಒಮ್ಮೆ ಕಣ್ತುಂಬಿಕೊಳ್ಳಿ.

ಇದು ಬಲರಾಮನ ದಿನಗಳು ಚಿತ್ರದ ಟೀಸರ್ ಝಲಕ್. ಎರಡು ಹಾಡುಗಳಿಂದ ಗಮನ ಸೆಳೆದಿದ್ದ ಈ ಚಿತ್ರದ ಟೀಸರ್, ಉದ್ಯಮದಲ್ಲಿ ಹಾಗೂ ಪ್ರೇಕ್ಷಕರಲ್ಲಿ ಹೊಸ ಕುತೂಹಲ ಹುಟ್ಟಿಸಿದೆ. ಹೌದು.. ಮಾದೇವ ಚಿತ್ರದ ಬಳಿಕ ವಿನೋದ್ ಪ್ರಭಾಕರ್ ಹೊಸ ಇಮೇಜ್ ಪಡೆದುಕೊಂಡಿದ್ದಾರೆ. ಆ್ಯಕ್ಷನ್ ಚಿತ್ರಗಳಿಗೆ ಮಾತ್ರ ಸೀಮಿತವಾಗಿದ್ದ ವಿನೋದ್, ಪ್ರಯೋಗಾತ್ಮಕ ವಸ್ತುಗಳಲ್ಲಿಯೂ ಕಮರ್ಷಿಯಲ್ ತಾಕತ್ ಏನು ಅನ್ನೋದನ್ನ ತೋರಿಸಿ ಕೊಡುತ್ತಿದ್ದಾರೆ. ಅದಕ್ಕೆ ಎಕ್ಸಾಂಪಲ್ ಈ ಬಲರಾಮನ ದಿನಗಳು. ಟೀಸರ್‌‌‌ನಲ್ಲಿ ವಿನೋದ್ ಪ್ರಭಾಕರ್ ಲುಕ್ ಮತ್ತು ಡಾನ್ಸ್ ಎಲ್ಲರ ಮೆಚ್ಚುಗೆ ಪಡೆಯುತ್ತಿದೆ. ಅದ್ಧೂರಿಯಾಗಿ ನಡೆದ ಟೀಸರ್ ಬಿಡುಗಡೆ ಸಮಾರಂಭದಲ್ಲಿ ವಿನೋದ್ ಪ್ರಭಾಕರ್ ತಮ್ಮ ಖುಷಿಯನ್ನ ಹಂಚಿಕೊಂಡರು.

ಜೈರಾಜ್-ಕೊತ್ವಾಲ್ ಭೂಗತಲೋಕದಲ್ಲಿ ಬಲರಾಮನ ದಿನಗಳು

‘ಆ ದಿನಗಳು’ ಸಾರಥಿ ಚೈತನ್ಯರ ಮತ್ತೊಂದು ರಕ್ತಸಿಕ್ತ ಅಧ್ಯಾಯ..!

ಚಿತ್ರದ ನಿರ್ಮಾಪಕಿ ಪದ್ಮಾವತಿ ಖುದ್ದಾಗಿ ವೇದಿಕೆಯೇರಿ ಟೀಸರ್ ಬಿಡುಗಡೆಗೊಳಿಸಿದರು. ಚಿತ್ರದಲ್ಲಿ ತೊಡಗಿಕೊಳ್ಳಲು ತಮ್ಮ ಮಕ್ಕಳು ನೀಡಿದ ಸಹಕಾರದ ಬಗ್ಗೆ ಖುಷಿಯಿಂದ ಹೇಳಿಕೊಂಡರು. ಪುತ್ರ ಶ್ರೇಯಸ್ ಮತ್ತು ಆತನಿಗೆ ಸಹಕಾರಿಯಾಗಿ ನಿಂತ ನವವಧು ಸೊಸೆ ಲೇಖಾಚಂದ್ರ ಬಗ್ಗೆಯೂ ಮೆಚ್ಚುಗೆಯ ಮಾತನಾಡಿದರು. ವಿನೋದ್ ಪ್ರಭಾಕರ್ ಮತ್ತು ನಿರ್ದೇಶಕ ಕೆ.ಎಂ ಚೈತನ್ಯ ತಮ್ಮ ಚಿತ್ರಕ್ಕೆ ಶಕ್ತಿಯಾಗಿರುವುದಾಗಿ ಹೇಳಿದರು. ಪದ್ಮಾವತಿಯವರು ನಿರ್ಮಾಣದ ಜತೆಗೆ ಚಿತ್ರದಲ್ಲೊಂದು ಸಣ್ಣ ಪಾತ್ರವನ್ನು ಕೂಡ ಮಾಡಿರುವುದು ವಿಶೇಷ.

ಹೀರೋ ವಿನೋದ್ ಪ್ರಭಾಕರ್, ನಿರ್ಮಾಪಕರ ಪುತ್ರನಿಗೆ ಈ ಸಂದರ್ಭದಲ್ಲಿ ಒಂದು ಕಿವಿ ಮಾತು ಕೂಡ ಹೇಳಿದ್ರು. ಒಂದು ಸಿನಿಮಾದ ಮೂಲಕ ಪಡೆಯುವುದು ಅನುಭವವೇ ಅಲ್ಲ. ನನ್ನ ತಂದೆ ನೂರಾರು ಸಿನಿಮಾಗಳಲ್ಲಿ ನಟಿಸಿದರು. ನಿರ್ಮಿಸಿ, ನಿರ್ದೇಶನವನ್ನೂ ಮಾಡಿದವರು. ಆದರು ಕೂಡ ಸಿನಿಮಾ ಏನು ಎಂದು ಅರ್ಥವಾಗಿಲ್ಲ ಎಂದೇ ಹೇಳುತ್ತಿದ್ದರು. ಹೀಗಾಗಿ ಈ ಚಿತ್ರದಲ್ಲಿ ಸಿಕ್ಕ ಅನುಭವವೇ ಅಂತಿಮ ಎಂದು ಹೇಳಲಾಗದು. ನಾವೆಲ್ಲರೂ ಸಿನಿಮಾ ವಿದ್ಯಾರ್ಥಿಗಳು. ಆದರೂ ಮಾದೇವ ಚಿತ್ರಕ್ಕೆ ಸಿಕ್ಕ ಯಶಸ್ಸು ಕಂಡ ಬಳಿಕ ಈ ಚಿತ್ರ ಅದರ ಎರಡು ಪಟ್ಟು ಗೆಲುವು ಕಾಣುವ ನಿರೀಕ್ಷೆ ಮೂಡಿಸಿದೆ ಎಂದರು.

ಕಲ್ಟ್ ಮೂವಿ.. ಕ್ಲಾಸಿಕ್ ಮೇಕಿಂಗ್.. ಸಖತ್ ಎಲಿವೇಷನ್ಸ್ ಗುರು

ಮಾದೇವ ಬಳಿಕ ವಿನೋದ್ ಪ್ರಭಾಕರ್‌‌ ನ್ಯೂ ಎಕ್ಸ್‌ಪೆರಿಮೆಂಟ್..!

ಇದು 80ರ ದಶಕದ ಕಥೆಯನ್ನ ಹೇಳುವ ಚಿತ್ರವಾಗಿದ್ದು, ಟೀಸರ್ ಗಮನಿಸಿದಾಗ ಆ ದಿನಗಳು ಸಿನಿಮಾದೊಂದಿಗೆ ಸಂಬಂಧ ಇರುವುದು ಗೋಚರಿಸುತ್ತದೆ. ಬೆಂಗಳೂರನ್ನ ಆಳಿದ ಅಂಡರ್‌‌ವರ್ಲ್ಡ್ ಡಾನ್‌ಗಳಾದ ಜಯರಾಜ್, ಕೊತ್ವಾಲ್ ರಾಮಚಂದ್ರ, ಆಯಿಲ್ ಕುಮಾರ್ ಸೇರಿದಂತೆ ಸಾಕಷ್ಟು ಡಾನ್‌‌ಗಳ ಚಿತ್ರಣ ಇಲ್ಲಿ ಕಾಣಸಿಗಲಿದೆ.

ಆ ದಿನಗಳು ಅಂತಹ ಕಲ್ಟ್ ಸಿನಿಮಾನ ಡೈರೆಕ್ಟ್ ಮಾಡಿದ್ದ ಅದೇ ನಿರ್ದೇಶಕ ಕೆ. ಎಮ್. ಚೈತನ್ಯ ತಮ್ಮೊಂದಿಗೆ ಕೈ ಜೋಡಿಸಿದ ಸಹಾಯಕ ನಿರ್ದೇಶಕರ ತಂಡವನ್ನು ವೇದಿಕೆಗೆ ಕರೆದು ಪರಿಚಯಿಸಿದರು. ಚಿತ್ರಕ್ಕಾಗಿ ತಂಡ ಸಮರ್ಪಣಾಭಾವದಿಂದ ಕೆಲಸ ಮಾಡಿರುವುದನ್ನು ಖುಷಿಯಿಂದ ಹೇಳಿಕೊಂಡರು.

ನಟ ರಮೇಶ್ ಇಂದಿರಾ ನಿರ್ದೇಶಕ ಚೈತನ್ಯರನ್ನ ‘ಸ್ವೀಟ್’ ಎಂದು ಕರೆದರು. ತಾವು ಚಿತ್ರದಲ್ಲಿ ಮೋನಪ್ಪ ರೈ ಎನ್ನುವ ಪಾತ್ರ ಮಾಡುತ್ತಿದ್ದು, ತುಳು ಮಾತನಾಡಿದ್ದೇನೆ ಎಂದರು. ಬಿಗ್ ಬಾಸ್ ಮೂಲಕ ಖ್ಯಾತಿ‌ ಪಡೆದ ನಟ ವಿನಯ್ ಗೌಡ ತಮ್ಮದು ಚಿತ್ರದಲ್ಲಿ ‘ಕತ್ತಿ’ ಹೆಸರಿನ ರೌಡಿಯ ಪಾತ್ರ ಎಂದರು. ಮತ್ತೋರ್ವ ಬಿಗ್ ಬಾಸ್ ಸ್ಪರ್ಧಿ ರಜತ್ ಕೂಡ ಈ ಚಿತ್ರದಲ್ಲಿ ನಟಿಸುತ್ತಿರುವುದು ವಿಶೇಷ. ಚಿಕ್ಕ ಪಾತ್ರವಾದರೂ ಸಾಹಸ ಸನ್ನಿವೇಶದಲ್ಲಿ ಕಾಣಿಸಿಕೊಂಡಿದ್ದೇನೆ ಎಂದು ನಟ ಡ್ರ್ಯಾಗನ್ ಮಂಜು ಹೇಳಿದರು.

ಚಿತ್ರಕ್ಕೆ ಹಾಡುಗಳನ್ನು ಬರೆದಿರುವ ಕವಿರಾಜ್, ನಾಗಾರ್ಜುನ ಶರ್ಮಾ ಹಾಗೂ ಪ್ರಮೋದ್ ಮರವಂತೆ ತಮ್ಮ ಅನುಭವಗಳ ಹಂಚಿಕೊಂಡರು. ಪೊಲೀಸ್ ಪಾತ್ರಗಳನ್ನು ಮಾಡಿರುವ ಪ್ರತಾಪ್ ನಾರಾಯಣ್ ಮತ್ತು ಅಶ್ವಿನ್ ಹಾಸನ್ ಇದು ಈ ಹಿಂದಿನ‌ ಚಿತ್ರಗಳಿಗಿಂತ ವಿಭಿನ್ನ ಎಂದರು.

ಚಿತ್ರದಲ್ಲಿ ‘ಸಿಂಗ್ಲಿ ಗ್ಯಾಂಗ್’ ಮೂಲಕ  ನಿರ್ಮಾಪಕರ ಪುತ್ರ ತೇಜಸ್ ಕೂಡ ನಟಿಸಿದ್ದಾರೆ. ಸಿಂಗ್ಲಿ ಪಾತ್ರಧಾರಿ ಆದಿತ್ಯ ಕೂಡ ತಮ್ಮ ಪಾತ್ರದ ಬಗ್ಗೆ ಖುಷಿ ವ್ಯಕ್ತಪಡಿಸಿದರು. ಆಶೀಷ್ ವಿದ್ಯಾರ್ಥಿ, ಅತುಲ್ ಕುಲಕರ್ಣಿ, ಶರತ್ ಲೋಹಿತಾಶ್ವ ಮೊದಲಾದವರ ನಟನೆ ಈ ಚಿತ್ರದಲ್ಲಿದೆ. ವಿನೋದ್ ಪ್ರಭಾಕರ್‌ಗೆ ಜೋಡಿಯಾಗಿ ಅಪ್ಪು ರಾಜಕುಮಾರ ಫೇಮ್ ನಟಿ ಪ್ರಿಯಾ ಆನಂದ್ ಬಣ್ಣ ಹಚ್ಚಿರೋದು ಮತ್ತೊಂದು ಹೈಲೈಟ್.

 

Exit mobile version