KDಗಾಗಿ KGF ಟ್ಯೂನ್ ಕದ್ರಾ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ?

ಸೋಶಿಯಲ್ ಮೀಡಿಯಾದಲ್ಲಿ KGF v/s KD ಸಂಚಲನ

11 2025 04 28t140154.952

ಇತ್ತೀಚೆಗಷ್ಟೇ ಸಂಗೀತ ಮಾಂತ್ರಿಕ ಎ.ಆರ್.ರೆಹಮಾನ್ ಟ್ಯೂನ್ ಕದ್ದ ಆರೋಪದಡಿ ಎರಡು ಕೋಟಿ ದಂಡ ಕಟ್ಟಿದ ಸುದ್ದಿ ಸಂಚಲನ ಮೂಡಿಸಿತ್ತು. ಆದ್ರೀಗ ಅವ್ರ ಕಟ್ಟಾ ಶಿಷ್ಯ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಮೇಲೆಯೂ ಅಂಥದ್ದೇ ಆರೋಪ ಕೇಳಿಬರ್ತಿದೆ. ಕೆಜಿಎಫ್‌‌ ಟ್ಯೂನ್‌ನಂತಿರೋ ಕೆಡಿ ಟ್ಯೂನ್‌‌ ಸೋಶಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸಿದೆ. ಅದ್ರ ಡಿಟೈಲ್ಡ್ ರಿಪೋರ್ಟ್‌ ನಿಮ್ಮ ಮುಂದೆ.

ADVERTISEMENT
ADVERTISEMENT

ಯಶ್ ನಟನೆಯ ಕೆಜಿಎಫ್ ಸಿನಿಮಾಗಳು ಅಷ್ಟು ದೊಡ್ಡ ಹಿಟ್ ಆಗೋದ್ರ ಹಿಂದೆ ಟೀಂ ವರ್ಕ್‌ ಇದೆ. ಅದ್ರಲ್ಲೂ ಟೆಕ್ನಿಕಲ್ ಟೀಂ ಎಫರ್ಟ್‌ ಕೊಂಚ ಜಾಸ್ತಿನೇ ಇದೆ. ಇನ್ನು ಕೆಜಿಎಫ್ ವೇಗ ಹೆಚ್ಚಿಸಿದ ಅಂಶಗಳಲ್ಲಿ ರವಿ ಬಸ್ರೂರು ಅವರ ಮ್ಯೂಸಿಕ್ ಹಾಗೂ ಬ್ಯಾಗ್ರೌಂಡ್ ಮ್ಯೂಸಿಕ್ ಕೂಡ ಪ್ರಧಾನ ಪಾತ್ರ ವಹಿಸುತ್ತವೆ. ಹೌದು.. ಕೆಜಿಎಫ್ ಆಲ್ಬಮ್ ಹಾಗೂ ಹಿನ್ನೆಲೆ ಸಂಗೀತ ಭಾರತೀಯ ಚಿತ್ರರಂಗದಲ್ಲಿ ಟಾಕ್ ಆಫ್ ದಿ ಟೌನ್ ಆಯ್ತು.

ಒಂದೊಂದು ಸಾಂಗ್ ಕೂಡ ವೆರೈಟಿ ಆಗಿವೆ. ರವಿ ಬಸ್ರೂರು ಮಾಡಿದ್ದ ಬ್ಯಾಗ್ರೌಂಡ್ ಮ್ಯೂಸಿಕ್ ಪ್ರತಿಯೊಂದು ದೃಶ್ಯದ ತೂಕ ಹೆಚ್ಚಿಸಿದೆ. ಬಿಲ್ಡಪ್, ಎಂಟ್ರಿ, ಎಮೋಷನಲ್ ಹೀಗೆ ಎಲ್ಲಾ ಬಗೆಯ ಟ್ಯೂನ್‌‌ಗಳಿಂದ ಕಂಪ್ಲೀಟ್ ಪ್ಯಾಕೇಜ್ ಅನಿಸಿತ್ತು. ಬಾಲಿವುಡ್ ಅಂಗಳದಿಂದ ಸಲ್ಮಾನ್ ಖಾನ್ ಅಂತಹ ಸೂಪರ್ ಸ್ಟಾರ್, ನಮ್ಮ ಕಂಪೋಸರ್ ರವಿ ಬಸ್ರೂರು ಅವ್ರನ್ನ ಕರೆಸಿಕೊಂಡು, ನನಗೆ ಕೆಜಿಎಫ್ ರೀತಿಯ ಬೆಸ್ಟ್ ಮ್ಯೂಸಿಕ್ ಮಾಡಿಕೊಡಿ ಅಂತ ಮಾಡಿಸಿಕೊಂಡಿದ್ದುಂಟು.

ಕೆಜಿಎಫ್ ಮೊದಲ ಭಾಗ ತೆರೆಕಂಡು ಏಳು ವರ್ಷಗಳಾಯ್ತು. ತೆಲುಗು, ಹಿಂದಿ ಸೇರಿದಂತೆ ಬಹುಭಾಷೆಗಳಲ್ಲಿ ರವಿ ಬಸ್ರೂರು ಸಖತ್ ಬ್ಯುಸಿ ಆಗಿದ್ದಾರೆ. ಇದೀಗ ಇತ್ತೀಚೆಗೆ ರಿಲೀಸ್ ಆದ ಧ್ರುವ ಸರ್ಜಾ ನಟನೆಯ ಕೆಡಿ ಸಿನಿಮಾದ ಹಾಡೊಂದರ ಒಂದು ಟ್ಯೂನ್, ಕೆಜಿಎಫ್ ಟ್ಯೂನ್‌‌ನ ಹೋಲುವಂತಿದೆ. ಇದನ್ನ ನಾವು ಹೇಳ್ತಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಅದು ವೈರಲ್ ಆಗ್ತಿದೆ.

ಹೌದು.. ಕೆಜಿಎಫ್‌‌ ಥೀಮ್ ಮ್ಯೂಸಿಕ್ ಹಾಗೂ ಸಲಾಂ ರಾಕಿಭಾಯ್ ಹಾಡಿನ ಟ್ಯೂನ್ ಬಿಟ್ ಒಂದು, ಅರ್ಜುನ್ ಜನ್ಯ ಕಂಪೋಸ್ ಮಾಡಿರೋ ಕೆಡಿ ಸಿನಿಮಾದ ಸೆಟ್ ಆಗಲ್ಲ ಹೋಗೆ ನಂಗೂ ನಿಂಗೂ ಅನ್ನೋ ಹಾಡಿಮ ಟ್ಯೂನ್‌ಗೆ ಸಾಮಥ್ಯೆಯಿದೆ. ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ನೆಟ್ಟಿಗರು ಈ ಬಗ್ಗೆ ಮಾತನಾಡ್ತಿದ್ದಾರೆ. ರವಿ ಬಸ್ರೂರು ಕಂಪೋಸ್ ಮಾಡಿದ ಕೆಜಿಎಫ್ ಟ್ಯೂನ್‌‌ನ ಕೆಡಿ ಸಿನಿಮಾಗಾಗಿ ಅರ್ಜುನ್ ಜನ್ಯ ಕಾಪಿ ಮಾಡಿದ್ರಾ ಅನ್ನೋ ಪ್ರಶ್ನೆಗಳು ಮೂಡುತ್ತಿವೆ. ಕಮೆಂಟ್‌‌ಗಳಲ್ಲಿ ನಮ್ಮವ್ರು ನಮ್ಮದನ್ನೇ ಕಾಪಿ ಮಾಡ್ತಾರೆ ಅಲ್ಲ ಗುರುವೇ..? ಅರ್ಜುನ್ ಜನ್ಯ ಮ್ಯೂಸಿಕ್ ಬರೀ ಕಾಪಿನೇ ಇರುತ್ತೆ ಅಂತೆಲ್ಲಾ ಮ್ಯಾಜಿಕಲ್ ಕಂಪೋಸರ್ ಕಾಲೆಳೆಯುತ್ತಿದ್ದಾರೆ.

ಒಟ್ಟಾರೆ ಕೃತಿಚೌರ್ಯ ಯಾರು ಮಾಡಿದ್ರೂ ತಪ್ಪೇ. ಆದ್ರೆ ಈ ಬಗ್ಗೆ ಕೆಜಿಎಫ್ ಕಂಪೋಸರ್ ಹಾಗೂ ಕೆಡಿ ಕಂಪೋಸರ್ ಇಬ್ಬರೂ ಮೌನವಾಗಿದ್ದಾರೆ. ಇದು ಪರಸ್ಪರ ಮಾತುಕತೆ ಮೂಲಕ ಬಗೆಹರಿಯುತ್ತಾ..? ಅಥ್ವಾ ಕೋರ್ಟ್‌, ಕೇಸ್ ಅಂತ ದೊಡ್ಡ ಮಟ್ಟದ ವಿವಾದಕ್ಕೆ ನಾಂದಿ ಹಾಡುತ್ತಾ ಅನ್ನೋದನ್ನ ನಿರೀಕ್ಷಿಸಬೇಕಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version