ನಟ, ನಿರ್ದೇಶಕ ಯಶವಂತ ಸರದೇಶಪಾಂಡೆ ನಿಧನ

Untitled design 2025 09 29t122752.901

ಕನ್ನಡ ಚಿತ್ರರಂಗದ ಖ್ಯಾತ ನಟ, ನಿರ್ದೇಶಕ, ಮತ್ತು ಬಹುಮುಖ ಕಲಾವಿದ ಯಶವಂತ್ ದೇಶಪಾಂಡೆ (55) ಅವರು  ಹೃದಯಾಘಾತದಿಂದ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯಲ್ಲಿ ನಿಧನರಾದರು. ಈ ಸುದ್ದಿ ಕನ್ನಡ ಚಿತ್ರರಂಗದಲ್ಲಿ ಆಘಾತ ಮೂಡಿಸಿದೆ.

ಯಶವಂತ ಸರದೇಶಪಾಂಡೆಯವರು 1965ರ ಜೂನ್ 13ರಂದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಉಕ್ಕಲಿ ಗ್ರಾಮದಲ್ಲಿ ಜನಿಸಿದರು. ತಂದೆ ಶ್ರೀಧರರಾವ್ ಗೋಪಾಲರಾವ್ ಸರದೇಶಪಾಂಡೆ ಮತ್ತು ತಾಯಿ ಕಲ್ಪನಾದೇವಿಯವರ ಮಗನಾಗಿ ಬೆಳೆದ ಯಶವಂತ, ತಮ್ಮ ಪ್ರತಿಭೆಯಿಂದ ಕನ್ನಡ ರಂಗಭೂಮಿಯಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದರು. ಇವರ ಪತ್ನಿ ಮಾಲತಿ ಸರದೇಶಪಾಂಡೆ ಕೂಡ ರಂಗಭೂಮಿ ಮತ್ತು ಕಿರುತೆರೆಯ ಜನಪ್ರಿಯ ಕಲಾವಿದೆಯಾಗಿದ್ದಾರೆ.

ಯಶವಂತ ಸರದೇಶಪಾಂಡೆಯವರಿಗೆ ‘ಆಲ್ ದಿ ಬೆಸ್ಟ್’ ಎಂಬ ನಾಟಕದಿಂದ ಅಪಾರ ಜನಪ್ರಿಯತೆ ದೊರಕಿತು. ಇವರು ಈ ನಾಟಕವನ್ನು ನಟಿಸಿ, ನಿರ್ದೇಶಿಸಿದ್ದು ಕನ್ನಡ ರಂಗಭೂಮಿಯಲ್ಲಿ ಒಂದು ಮೈಲಿಗಲ್ಲು ಎನಿಸಿತು. ಈ ನಾಟಕದ ಹಾಸ್ಯ, ಸಂಭಾಷಣೆ, ಮತ್ತು ಸಾಮಾಜಿಕ ಸಂದೇಶಗಳು ಪ್ರೇಕ್ಷಕರ ಮನಗೆದ್ದವು.

Exit mobile version