BBK 12: ವಿಲನ್‌ ಟಾಸ್ಕ್‌ನಲ್ಲಿ ಗೊಂದಲ: ಟ್ಯಾಟೂ, ಹೇರ್‌ ಕಲರ್‌ ಟಾಸ್ಕ್‌ನಲ್ಲಿ ಮನೆ ಮಂದಿ ತತ್ತರ.!

Untitled design 2025 12 11T232248.753

Bigg Boss Kannada Season 12 ಮನೆಯಲ್ಲಿ ಈ ವಾರ ವಿಲನ್‌ ಟಾಸ್ಕ್‌ಗಳ ಆಟ ಜೋರಾಗಿದೆ. ವಿಲನ್‌ ರೂಲ್ಸ್‌ ಪ್ರಕಾರ, ಸ್ಪರ್ಧಿಗಳು ಹೇಳಿದಂತೆ ಕೇಳಿ ಟಾಸ್ಕ್‌ಗಳನ್ನು ಪೂರೈಸಬೇಕು. ಈ ಹಿನ್ನೆಲೆಯಲ್ಲಿ ಬಿಗ್‌ ಬಾಸ್‌ ಹೊಸದೊಂದು ಕಠಿಣ ಟಾಸ್ಕ್‌ ನೀಡಿದ್ದು ಮನೆಯಲ್ಲಿ ಗೊಂದಲದ ವಾತವರಣ ಸೃಷ್ಟಿಯಾಗಿದೆ.

ಈ ಟಾಸ್ಕ್‌ನಲ್ಲಿ ಮನೆ ಮಂದಿಯಲ್ಲಿ ಒಬ್ಬರು ಹಚ್ಚೆ (ಟ್ಯಾಟೂ) ಹಾಕಿಸಿಕೊಳ್ಳಬೇಕು ಹಾಗೂ ಒಬ್ಬ ಮಹಿಳಾ ಸ್ಪರ್ಧಿ ಕೂದಲಿಗೆ ಬಣ್ಣ ಹಾಕಿಸಿಕೊಳ್ಳಬೇಕು ಎಂಬ ನಿಯಮವಿತ್ತು. ವಿಲನ್‌ ಆಗಿರುವ ಗಿಲ್ಲಿ ಹೇಳಿದ್ದಂತೆ ಟೀಂ ಸದಸ್ಯರು ಪಾಲಿಸಬೇಕಾದ ನಿಯಮ ಇದಾಗಿತ್ತು.

ಅಶ್ವಿನಿ ಬಣ್ಣ ಹಾಕಿದ ತಕ್ಷಣವೇ ಜಗಳ

ಕೂದಲಿಗೆ ಬಣ್ಣ ಹಾಕಿಸುವ ಕೆಲಸವನ್ನು ಕಾವ್ಯಾ ಶೈವ ಮಾಡಿಕೊಂಡಿದ್ದು, ಅಶ್ವಿನಿ ಅವರು ಅವರಿಗೆ ಹೇರ್ ಕಲರ್ ಹಚ್ಚಿದರು. ಕಾವ್ಯಾಗೆ ಇದು ಇಷ್ಟವಾಗದೆ ಇದ್ದರೂ, ಟಾಸ್ಕ್‌ಗಾಗಿ ಅವರು ಹಾಕಸಿಕೊಂಡರು. ಈ ವೇಳೆ ರಜತ್, ಸ್ಪಂದನಾ ಬಗ್ಗೆ ಗರಂ ಆಗಿ ಮಾತನಾಡಿದರು. ಟಾಸ್ಕ್‌ ಸರಿಯಾಗಿ ಮಾಡಿಲ್ಲ, ಹೇಳಿದ್ದು ಅರ್ಥ ಆಗಲ್ಲ, ಸುಮ್ಮನೆ ಮಾತುಗಳು ಎಂದು ರಜತ್ ಗರಂ ಆಗಿ ಸ್ಪಂದನಾಳನ್ನು ಟೀಕಿಸಿದರು.

ಇದಕ್ಕೆ ಸ್ಪಂದನಾ ಕೂಡ ತಕ್ಷಣ ಪ್ರತಿಕ್ರಿಯೆ ನೀಡಿದ್ದು, “ನನಗೆ ಕೊಡ್ತಿದ್ದರೂ ನೀವೇ ಹೀಗೆ ವರ್ತಿಸ್ತೀರಾ” ಎಂದು ಹೇಳುವ ಮೂಲಕ ರಜತ್‌ಗೆ ತಿರುಗೇಟು ನೀಡಿದರು.

ಹಿಂದಿನ ಸೀಸನ್‌ಗಳ ಫ್ಲ್ಯಾಶ್‌ಬ್ಯಾಕ್

ಬಿಗ್‌ ಬಾಸ್‌ ಹಿಂದಿನ ಸೀಸನ್‌ಗಳಲ್ಲಿ ಟಾಸ್ಕ್‌ಗಾಗಿ ಸ್ಪರ್ಧಿಗಳು ಕೂದಲು ತೆಗೆಸಿಕೊಂಡ ಘಟನೆಗಳು ನಡೆದಿವೆ. ಕಾರ್ತಿಕ್ ಮಹೇಶ್ ಅವರು ಗುಂಡು ಹೊಡೆಸಿಕೊಂಡಿದ್ದರು. ಈ ಬಾರಿ ಅತಂಹದ್ದೇ ಟಾಸ್ಕ್‌ಗಳು ಇವೆ. ಮಹಿಳಾ ಸ್ಪರ್ಧಿಗಳಲ್ಲಿ ರಾಶಿಕಾ ಶೆಟ್ಟಿ ಕೂದಲಿಗೆ ಬಣ್ಣ ಹಾಕಿಸಿಕೊಳ್ಳಲು ನಿರಾಕರಿಸಿದರು. ಆದರೆ ಕಾವ್ಯಾ ಶೈವ ಹೇರ್ ಕಲರ್ ಮಾಡಿಸಿಕೊಂಡರು. ಇದನ್ನು ಅನೇಕರು ಮೆಚ್ಚಿಕೊಂಡಿದ್ದಾರೆ.

ಗಿಲ್ಲಿ ವಿರುದ್ಧದ ಕಾಮೆಂಟ್‌ಗೆ ಕಾವ್ಯಾ ನೀಡಿದ ಉತ್ತರ-ಮನೆಯಲ್ಲಿ ಚರ್ಚೆ

ವಿಲನ್‌ ಟಾಸ್ಕ್‌ ಆರಂಭಕ್ಕೂ ಮುನ್ನ ಗಿಲ್ಲಿ, ಕಾವ್ಯಾ ಶೈವ ಬಗ್ಗೆ “ನೀನು ವೇಸ್ಟ್‌, ಪ್ರಿ ಪ್ರೊಡಕ್ಟ್‌, ಲಕ್ಕಿ” ಎಂಬಂತಹ ಟೀಕೆಗಳನ್ನು ಮಾಡಿದ್ದರು. ಈ ಮಾತುಗಳನ್ನು ಕೇಳಿದ ಕಾವ್ಯಾ ಬೇಸರದಿಂದ, ತಮ್ಮನ್ನು ತಾವು ಪ್ರೂವ್‌ ಮಾಡಲು ಟಾಸ್ಕ್‌ನಲ್ಲಿ ಮುಂದುವರೆದರು.

ಗಿಲ್ಲಿ ನಾಮಿನೇಷನ್‌ ಡ್ರಾಮಾ 

ಪ್ರತಿ ವಾರ ಗಿಲ್ಲಿಯನ್ನು ಕೆಲವರು ನಾಮಿನೇಟ್‌ ಮಾಡುವುದು ಸಾಮಾನ್ಯವಾಗಿದೆ. ಆದರೆ ಒಂದೇ ಕಾರಣ “ಗಿಲ್ಲಿ ಸೋಮಾರಿ, ಕಾಮಿಡಿ ಮಾಡ್ತಾನೆ” ಎಂಬ ಕಾರಣ ಕೊಟ್ಟು ನಾಮಿನೇಟ್‌ ಮಾಡುತ್ತಾರೆ. ಈ ವಿಚಾರವನ್ನು ಈ ಬಾರಿ ರಜತ್ ಬಾಯ್ಬಿಟ್ಟಾರೆ.

ವೈಲ್ಡ್ ಕಾರ್ಡ್ ಆಗಿ ಬಂದ ನಾವು 15 ದಿನದಲ್ಲಿ ಆಟ ಆಡಿ ಹೈಲೈಟ್ ಆಗುತ್ತಿದ್ದೇವೆ. 73 ದಿನ ಇದ್ದ ನೀವು ಅದೃಷ್ಟ ಬಲದಿಂದ ಇದ್ದೀರಿ ಎಂಬಂತ ಸಂದೇಶವನ್ನು ಅವರು ಪರೋಕ್ಷವಾಗಿ ನೀಡಿದ್ದಾರೆ.

ರಜತ್–ರಾಶಿಕಾ ಮಾತಿನ ಚಕಮಕಿ

ಚೈತ್ರಾ ಹೇಳುವಂತೆ, “ನಾವು 15 ದಿನದಲ್ಲಿ ಜರ್ನಿ ಮಾಡಿದಷ್ಟನ್ನು ನೀವು 73 ದಿನದಲ್ಲೂ ಮಾಡಿಲ್ಲ.” ಇದಕ್ಕೆ ತಿರುಗೇಟಾಗಿ ರಾಶಿಕಾ, “ನೀವು ನಮಗೆ ಕಣ್ಣಿಗೂ ಕಾಣಿಸಿಲ್ಲ” ಎಂದು ಟೀಕಿಸಿದರು.

ರಜತ್ ಇದಕ್ಕೆ ಪ್ರತಿಕ್ರಿಯಿಸಿ, “ರಘು ಸರ್‌ಗೂ ಇದೇ ಹೇಳಿದ್ದೇನೆ. ಗಿಲ್ಲಿ ಬಂದರೆ ಜೋಕ್ ಮಾಡಿ ಮನಸ್ಸಿಗೆ ಹಾನಿ ಮಾಡ್ತಾನೆ. ಮೂರು ವಾರದಿಂದ ಒಂದೇ ಕಾರಣ ಕೊಡ್ತಾ ಇದ್ದೀರಾ. ನಾಮಿನೇಟ್ ಮಾಡಿ ತೊಂದರೆ ಇಲ್ಲ, ಆದರೆ ಬೇರೆ ಕಾರಣ ನೀಡಿರಿ. 80% ಜನ ಒಂದೇ ಕಾರಣ ಹೇಳ್ತಾರೆ” ಎಂದು ಗಿಲ್ಲಿ ಬಗ್ಗೆ ಮಾತನಾಡಿದರು.

Exit mobile version