ಬೆಂಗಳೂರು, ಅಕ್ಟೋಬರ್ 2, 2025: ಕನ್ನಡ ಬಿಗ್ ಬಾಸ್ನ ಈ ಸೀಸನ್ 12 ಗ್ರ್ಯಾಂಡ್ ಆಗಿ ಆರಂಭವಾದಾಗಿನಿಂದಲೂ ಉತ್ತರ ಕರ್ನಾಟಕದ ಮಲ್ಲಮ್ಮ ತಮ್ಮ ಚಾಣಾಕ್ಷತೆಯಿಂದ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಬಿಗ್ ಬಾಸ್ನ ಪ್ರಶ್ನೆಗಳಿಗೆ ಮಲ್ಲಮ್ಮನ ಸರಳವಾಗಿ, ಚತುರತೆಯ ಉತ್ತರಗಳು ಶಾಕ್ ಮೇಲೆ ಶಾಕ್ ಕೊಡುತ್ತಿವೆ.
ಇಂಗ್ಲಿಷ್ನಲ್ಲಿ ಕೇಳಿದರೂ, ಕನ್ನಡದಲ್ಲಿ ಬಿಡಿಬಿಡಿಯಾಗಿ ಹೇಳಿದರೂ, ಮಲ್ಲಮ್ಮನ ಉತ್ತರಗಳು ಬಿಗ್ ಬಾಸ್ಗೆ ತಲೆಕೆಡಿಸುವಂತೆ ಮಾಡಿವೆ. ಈ ಗ್ರಾಮೀಣ ಮಹಿಳೆಯ ಸರಳತೆ ಮತ್ತು ಬುದ್ಧಿವಂತಿಕೆಯಿಂದ ಹೌಸ್ನ ಜಂಟಿಗಳೂ ಆಕರ್ಷಿತರಾಗಿದ್ದಾರೆ.
ಬಿಗ್ ಬಾಸ್ ಹೌಸ್ನಲ್ಲಿ ಮಲ್ಲಮ್ಮನ ಒಂದು ಘಟನೆ ಎಲ್ಲರ ಗಮನ ಸೆಳೆಯಿತು. ಬಿಗ್ ಬಾಸ್ ಮಲ್ಲಮ್ಮನನ್ನು ಕಾನ್ಫರೆನ್ಸ್ ರೂಮ್ಗೆ ಕರೆಸಿಕೊಂಡರು. ಒಳಗೆ ಕಾಲಿಟ್ಟ ಮಲ್ಲಮ್ಮ, ಕೈಮುಗಿದು “ನಮಸ್ತೆ ಸರ್” ಎಂದು ಹೇಳಿ, ದೊಡ್ಡ ಸೋಫಾದ ಮೇಲೆ ನೇರವಾಗಿ ಕುಳಿತರು. ಕುಳಿತ ಕೂಡಲೇ ಕಣ್ಣು ಮುಚ್ಚಿ, ದೇವರಿಗೆ ಕೈಮುಗಿದರು. ಇದನ್ನು ಗಮನಿಸಿದ ಬಿಗ್ ಬಾಸ್, “ಮಲ್ಲಮ್ಮ…” ಎಂದು ಕರೆದರು. ಆದರೆ ಮಲ್ಲಮ್ಮಗೆ ಏನು ಹೇಳಬೇಕೆಂದು ಗೊತ್ತಾಗದೆ, “ಹೂರೀ ಸರ್… ಓಕೆ ಸರ್” ಎಂದು ಎರಡೂ ಒಟ್ಟಿಗೆ ಹೇಳಿಬಿಟ್ಟರು.
ಬಿಗ್ ಬಾಸ್, “ಏನಾದರೂ ಮಾತನಾಡಿ” ಎಂದಾಗ, ಮಲ್ಲಮ್ಮ ಚಾಣಾಕ್ಷವಾಗಿ, “ಬಿಳಿ ಹೊಲ, ಕರಿ ಬೀಜ ಬಿತ್ತವ ಬಲು ಜಾಣ” ಎಂದು ಒಡಗತಿಯಂತೆ ಉತ್ತರಿಸಿದರು. ಇದಕ್ಕೆ ಬಿಗ್ ಬಾಸ್ ಹತ್ತಿ ಎಂದು ಉತ್ತರ ಕೊಟ್ಟರೆ, ಮಲ್ಲಮ್ಮ ತಕ್ಷಣ ಉತ್ತರ ಸರಿ ಇಲ್ಲ ಎಂದು ಹೇಳಿ ಬಿಗ್ ಬಾಸ್ಗೆ ಆಶ್ಚರ್ಯವನ್ನುಂಟು ಮಾಡಿದರು. ಈ ಘಟನೆಯು ಹೌಸ್ನಲ್ಲಿ ಭಾರೀ ಚರ್ಚೆಗೆ ಕಾರಣವಾಯಿತು. ಮಲ್ಲಮ್ಮನ ಈ ಸರಳ ಆದರೆ ಚತುರ ಉತ್ತರಗಳು ಜಂಟಿಗಳಿಗೆ ಮಾತ್ರವಲ್ಲ, ಪ್ರೇಕ್ಷಕರಿಗೂ ಮನರಂಜನೆಯನ್ನು ನೀಡಿವೆ.
ಬಿಗ್ ಬಾಸ್ ಹೌಸ್ನಲ್ಲಿ ಈಗಾಗಲೇ ಜಗಳದ ವಾತಾವರಣ ಶುರುವಾಗಿದೆ. ಜಂಟಿಗಳು ಹಗ್ಗ ಕಟ್ಟಿಕೊಂಡು ಇರದಿದ್ದಕ್ಕೆ ಒಂಟಿಗಳಿಗೆ ಬಿಗ್ ಬಾಸ್ ಶಿಕ್ಷೆ ವಿಧಿಸಿದ್ದಾರೆ. ಆದರೆ, ಮಲ್ಲಮ್ಮನ ಚಾಣಾಕ್ಷತೆಯು ಈ ಜಗಳದ ನಡುವೆಯೂ ಎಲ್ಲರ ಗಮನ ಸೆಳೆಯುತ್ತಿದೆ. ಉತ್ತರ ಕರ್ನಾಟಕದ ಗ್ರಾಮೀಣ ಸಂಸ್ಕೃತಿಯನ್ನು ಪ್ರತಿನಿಧಿಸುವ ಮಲ್ಲಮ್ಮ, ತಮ್ಮ ಸರಳತೆ, ಭಕ್ತಿ, ಮತ್ತು ಬುದ್ಧಿವಂತಿಕೆಯಿಂದ ಹೌಸ್ನಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ #MallammaBigBoss ಟ್ರೆಂಡ್ ಆಗುತ್ತಿದ್ದು, ಪ್ರೇಕ್ಷಕರು ಮಲ್ಲಮ್ಮನ ಚಾಣಾಕ್ಷ ಉತ್ತರಗಳನ್ನು ಕೊಂಡಾಡುತ್ತಿದ್ದಾರೆ. “ಮಲ್ಲಮ್ಮ ಬಿಗ್ ಬಾಸ್ಗೆ ತಲೆಕೆಡಿಸಿದ್ದಾರೆ” ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಈ ಸೀಸನ್ನಲ್ಲಿ ಮಲ್ಲಮ್ಮನಂತಹ ಕಾಂಟೆಸ್ಟೆಂಟ್ಗಳು ಬಿಗ್ ಬಾಸ್ಗೆ ರೋಚಕತೆಯನ್ನು ತಂದಿದ್ದಾರೆ. ಇವರ ಉತ್ತರಗಳು ಮತ್ತು ನಡವಳಿಕೆಯು ಎಂಟರ್ಟೈನ್ಮೆಂಟ್ಗೆ ಹೊಸ ಆಯಾಮವನ್ನು ನೀಡಿವೆ.
