ದಳಪತಿ ವಿಜಯ್‌ನನ್ನು ನೋಡಲು ಮರದಿಂದ ಜಿಗಿದ ಹುಚ್ಚು ಅಭಿಮಾನಿ: ವಿಡಿಯೋ ವೈರಲ್

123 2025 04 27t153112.628

ಕಾಲಿವುಡ್‌ನ ಸೂಪರ್‌ಸ್ಟಾರ್ ದಳಪತಿ ವಿಜಯ್‌ನನ್ನು ಭೇಟಿಯಾಗಬೇಕೆಂಬ ಆಸೆಯಿಂದ ಅಭಿಮಾನಿಯೊಬ್ಬ ಮರದಿಂದ ಜಿಗಿದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಜಯ್ ತಮ್ಮ ರಾಜಕೀಯ ಪಕ್ಷದ ಪ್ರಚಾರದಲ್ಲಿ ತೊಡಗಿರುವ ವೇಳೆ ಈ ಘಟನೆ ನಡೆದಿದ್ದು, ಅಭಿಮಾನಿಯ ಈ ಅತಿರೇಕದ ವರ್ತನೆಯನ್ನು ನೆಟ್ಟಿಗರು ಟೀಕಿಸುತ್ತಿದ್ದಾರೆ.

ದಳಪತಿ ವಿಜಯ್ ಈಗ ಸಿನಿಮಾಗಿಂತ ರಾಜಕೀಯಕ್ಕೆ ಹೆಚ್ಚಿನ ಗಮನ ಕೊಡುತ್ತಿದ್ದಾರೆ. ತಮ್ಮ ಪಕ್ಷದ ಪ್ರಚಾರ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿರುವ ಅವರಿಗೆ ದೊಡ್ಡ ಅಭಿಮಾನಿ ಬಳಗವಿದೆ. ಹೋದಲ್ಲೆಲ್ಲ ಅವರನ್ನು ಒಂದಿಷ್ಟು ನೋಡಲು ಜನ ಗುಂಪುಗೂಡುತ್ತಾರೆ. ಈ ಸಂದರ್ಭದಲ್ಲಿ, ವಿಜಯ್‌ನನ್ನು ಹತ್ತಿರದಿಂದ ನೋಡಲು ಕೆಲವು ಹುಚ್ಚು ಅಭಿಮಾನಿಗಳು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಸಾಹಸಕ್ಕೆ ಮುಂದಾಗುತ್ತಿದ್ದಾರೆ.

ADVERTISEMENT
ADVERTISEMENT

ಏಪ್ರಿಲ್ 26, ಶನಿವಾರದಂದು ಕೊಯಮತ್ತೂರಿನಲ್ಲಿ ವಿಜಯ್ ತಮ್ಮ ಪಕ್ಷದ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ್ದರು. ವ್ಯಾನ್‌ ಮೇಲೆ ನಿಂತು ಜನರಿಗೆ ಕೈ ಬೀಸುತ್ತಿದ್ದಾಗ, ಅಭಿಮಾನಿಯೊಬ್ಬ ಮರದಿಂದ ಜಿಗಿದು ವ್ಯಾನ್‌ಗೆ ಏರಿದ್ದಾನೆ. ಈ ಆಕಸ್ಮಿಕ ವರ್ತನೆಯಿಂದ ವಿಜಯ್‌ಗೆ ಒಂದು ಕ್ಷಣ ಆಘಾತವಾಯಿತು. ಬಳಿಕ ಆತನಿಗೆ ಪಕ್ಷದ ಸ್ಕಾರ್ಫ್ ನೀಡಿ, ಸಮಾಧಾನ ಮಾಡಿ ಕಳುಹಿಸಲಾಯಿತು.

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ವಿವಿಧ ರೀತಿಯಲ್ಲಿ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಕೆಲವರಿಗೆ ಇದು ಸಂಪೂರ್ಣ ನಾಟಕವೆಂದು ಅನಿಸಿದೆ. “ಇದನ್ನು ಮೊದಲೇ ಯೋಜನೆ ಮಾಡಿಕೊಂಡು ಕಾರ್ಯರೂಪಕ್ಕೆ ತಂದಿದ್ದಾರೆ,” ಎಂದು ಒಬ್ಬ ನೆಟ್ಟಿಗ ಕಮೆಂಟ್ ಮಾಡಿದ್ದಾನೆ. “ಇದು ಕೇವಲ ಗಿಮಿಕ್,” ಎಂದು ಕೆಲವರು ಟೀಕಿಸಿದ್ದಾರೆ.

ಇನ್ನು ಕೆಲವರು ಈ ಅಭಿಮಾನಿಯ ಕೃತ್ಯವನ್ನು ಖಂಡಿಸಿದ್ದಾರೆ. “ಇದೇನಿದು ಹುಚ್ಚಾಟ? ವಿಜಯ್‌ನನ್ನು ನೋಡಲು ಮರದಿಂದ ಜಿಗಿಯುವುದೇ? ಅವರ ಅಭಿಮಾನಿಗಳಿಗೆ ಬುದ್ಧಿಯೇ ಇಲ್ಲವೇ? ಇಂತಹ ಮೂರ್ಖತನವನ್ನು ದ್ವೇಷಿಸುತ್ತೇನೆ,” ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.

ಸಿನಿಮಾ ವಿಷಯಕ್ಕೆ ಬಂದರೆ, ವಿಜಯ್‌ರ ಇತ್ತೀಚಿನ ಚಿತ್ರ ‘ಜನ ನಾಯಗನ್’ ಮೇಲೆ ಅಭಿಮಾನಿಗಳು ದೊಡ್ಡ ನಿರೀಕ್ಷೆಯನ್ನಿಟ್ಟಿದ್ದಾರೆ. ‘ಕೆವಿಎನ್ ಪ್ರೊಡಕ್ಷನ್ಸ್’ ಬಂಡವಾಳ ಹೂಡಿರುವ ಈ ಚಿತ್ರವನ್ನು ಎಚ್. ವಿನೋದ್ ನಿರ್ದೇಶಿಸುತ್ತಿದ್ದಾರೆ. ವಿಜಯ್ ಜೊತೆಗೆ ಪೂಜಾ ಹೆಗ್ಡೆ, ಬಾಬಿ ಡಿಯೋಲ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Exit mobile version