ಮ್ಯಾನ್ಮಾರ್‌ನಲ್ಲಿ 5.9 ತೀವ್ರತೆಯ ಭೀಕರ ಭೂಕಂಪ

Untitled design 2026 02 04T091042.214

ಮ್ಯಾನ್ಮಾರ್: ಮಂಗಳವಾರ ಮ್ಯಾನ್ಮಾರ್‌ನಲ್ಲಿ ರಿಕ್ಟರ್ ಮಾಪಕದಲ್ಲಿ 5.9 ರಷ್ಟು ತೀವ್ರತೆಯಲ್ಲಿ ಭೂಕಂಪನ ಸಂಭವಿಸಿದೆ. ಈ ಭೂಕಂಪದ ಪ್ರಭಾವವು ಭಾರತದ ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶದ ಹಲವು ನಗರಗಳಲ್ಲಿ ಭೀತಿ ಸೃಷ್ಟಿಸಿತು.

ಭೂಕಂಪದ ಕೇಂದ್ರಬಿಂದು ಮತ್ತು ಪ್ರಭಾವ

ಯುರೋಪಿಯನ್-ಮೆಡಿಟರೇನಿಯನ್ ಸೀಸ್ಮೋಲಾಜಿಕಲ್ ಸೆಂಟರ್ (EMSC) ವರದಿಯ ಪ್ರಕಾರ, ಮ್ಯಾನ್ಮಾರ್‌ನ ಪ್ರಮುಖ ನಗರವಾದ ಸಿಟ್ಟೆ (ಅಕ್ಸಾಬ್) ನಿಂದ ಸುಮಾರು 70 ಮೈಲಿ ಪೂರ್ವದಲ್ಲಿ ಈ ಭೂಕಂಪದ ಕೇಂದ್ರಬಿಂದು ದಾಖಲಾಗಿದೆ. ಭೂಮಿಯ ಆಳದಲ್ಲಿ ಈ ಚಟುವಟಿಕೆ ನಡೆದಿದ್ದರೂ, ಭೂಮಿಯ ಮೇಲ್ಮೈಗೆ ಕಂಪನಗಳು ಪ್ರಬಲವಾಗಿ ತಲುಪಿದ್ದರಿಂದ ಕಟ್ಟಡಗಳು ಅಲುಗಾಡಿವೆ.

ಭಾರತದ ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾ, ಹೌರಾ ಮತ್ತು ಉತ್ತರ 24 ಪರಗಣ ಜಿಲ್ಲೆಗಳಲ್ಲಿ ಈ ಭೂ ಕಂಪಿಸಿದೆ ಬಳಿಕ ಅಲ್ಲಿನ ಸ್ಥಳೀಯರು, ಬಹುಮಹಡಿ ಕಟ್ಟಡದಲ್ಲಿದ್ದವರು ಭಯದಿಂದ ಮನೆಯಿಮದ ಹೊರ ಓಡಿದ್ದಾರೆ.  ಕಚೇರಿಗಳಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಗಳು ಕೂಡ ಕೆಲಸ ನಿಲ್ಲಿಸಿ ಹೊರಬಂದ ಘಟನೆಗಳು ವರದಿಯಾಗಿವೆ. ಇನ್ನು ಬಾಂಗ್ಲಾದೇಶದ ಢಾಕಾದಲ್ಲೂ ಇದೇ ರೀತಿಯ ಆತಂಕದ ವಾತಾವರಣ ನೆಲೆಸಿತ್ತು.

ಮ್ಯಾನ್ಮಾರ್ ಪ್ರದೇಶದಲ್ಲಿ ಭೂಕಂಪಗಳ ಸರಣಿ ಮುಂದುವರಿಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಕಳೆದ ಕೇವಲ 72 ಗಂಟೆಗಳಲ್ಲಿ ಇದು ಮೂರನೇ ಬಾರಿಗೆ ಸಂಭವಿಸಿದ ಕಂಪನವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಭೂವೈಜ್ಞಾನಿಕ ರಚನೆ.

ಏಕೆ ಇಲ್ಲಿ ಪದೇ ಪದೇ ಭೂಕಂಪವಾಗುತ್ತದೆ ?

ಮ್ಯಾನ್ಮಾರ್ ಪ್ರದೇಶವು ಇಂಡೋ-ಆಸ್ಟ್ರೇಲಿಯನ್ ಮತ್ತು ಯುರೇಷಿಯನ್ ಎಂಬ ಎರಡು ಪ್ರಮುಖ ಟೆಕ್ಟೋನಿಕ್ ಪ್ಲೇಟ್‌ಗಳ ಸಂಧಿಸ್ಥಳದಲ್ಲಿದೆ. ಈ ಪ್ಲೇಟ್‌ಗಳ ನಡುವಿನ ಘರ್ಷಣೆ ಮತ್ತು ಒತ್ತಡದಿಂದಾಗಿ ಇಲ್ಲಿ ಸಣ್ಣ ಪ್ರಮಾಣದ ಕಂಪನಗಳು ಹಾಗೂ ಪ್ರಬಲ ಭೂಕಂಪಗಳು ಸಂಭವಿಸುತ್ತಲೇ ಇರುತ್ತವೆ ಎಂದು ಭೂವಿಜ್ಞಾನಿಗಳು ವಿವರಿಸಿದ್ದಾರೆ.

ಅದೃಷ್ಟವಶಾತ್, ಸದ್ಯದ ವರದಿಗಳ ಪ್ರಕಾರ ಮ್ಯಾನ್ಮಾರ್ ಅಥವಾ ಭಾರತದ ಯಾವುದೇ ಭಾಗದಲ್ಲಿ ಪ್ರಾಣಹಾನಿ ಅಥವಾ ಗಂಭೀರ ಆಸ್ತಿಪಾಸ್ತಿ ನಷ್ಟ ಸಂಭವಿಸಿದ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಆದರೂ, ಜನರು ಜಾಗರೂಕರಾಗಿರಲು ಸೂಚಿಸಲಾಗಿದೆ.

ಭೂಕಂಪದ ಸಮಯದಲ್ಲಿ ಏನು ಮಾಡಬೇಕು?

ಪ್ರಸ್ತುತ ಸ್ಥಳೀಯ ಆಡಳಿತ ಮತ್ತು ಹವಾಮಾನ ಇಲಾಖೆಯು ಪರಿಸ್ಥಿತಿಯ ಮೇಲೆ ನಿಗಾ ಇಟ್ಟಿದ್ದು, ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡದಂತೆ ಮನವಿ ಮಾಡಲಾಗಿದೆ.

Exit mobile version