ಚಾರ್‌ಧಾಮ್ ಯಾತ್ರೆ 2026: ಬದರಿನಾಥ, ಕೇದಾರನಾಥ ಸೇರಿ 47 ದೇವಾಲಯಗಳಿಗೆ ಹಿಂದೂಯೇತರರ ಪ್ರವೇಶ ನಿಷೇಧ

Untitled design 2026 03 12T183135.938

ಬದರೀನಾಥ , ಕೇದಾರನಾಥ

ಡೆಹ್ರಾಡೂನ್: 2026ರ ಸಾಲಿನ ಪವಿತ್ರ ಚಾರ್‌ಧಾಮ್ ಯಾತ್ರೆ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇರುವ ಬೆನ್ನಲ್ಲೇ, ಉತ್ತರಾಖಂಡದ ಧಾರ್ಮಿಕ ಇತಿಹಾಸದಲ್ಲಿ ಅತ್ಯಂತ ಮಹತ್ವದ ಬದಲಾವಣೆ ಮಾಡಲಾಗಿದೆ. ವಿಶ್ವಪ್ರಸಿದ್ಧ ಬದರಿನಾಥ ಮತ್ತು ಕೇದಾರನಾಥ ಸೇರಿದಂತೆ ಒಟ್ಟು 47 ಪ್ರಮುಖ ದೇವಾಲಯಗಳಿಗೆ ಹಿಂದೂಯೇತರರ ಪ್ರವೇಶವನ್ನು ಅಧಿಕೃತವಾಗಿ ನಿಷೇಧಿಸಿ ಬದರಿನಾಥ-ಕೇದಾರನಾಥ ದೇವಾಲಯ ಸಮಿತಿ (BKTC) ಆದೇಶ ಹೊರಡಿಸಿದೆ.

ಸಮಿತಿಯ ನಿರ್ಧಾರಕ್ಕೆ ಕಾರಣವೇನು?

ಡೆಹ್ರಾಡೂನ್‌ನಲ್ಲಿರುವ ಬಿಕೆಟಿಸಿ ಶಿಬಿರ ಕಚೇರಿಯಲ್ಲಿ ನಡೆದ ವಾರ್ಷಿಕ ಬಜೆಟ್ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಈ ಕುರಿತು ಮಾಹಿತಿ ನೀಡಿದ ಸಮಿತಿಯ ಅಧ್ಯಕ್ಷರು, ದೇವಾಲಯಗಳ ಪವಿತ್ರತೆ ಮತ್ತು ಸನಾತನ ಧರ್ಮದ ಸಂಪ್ರದಾಯಗಳನ್ನು ಕಾಪಾಡುವ ನಿಟ್ಟಿನಲ್ಲಿ ಈ ಕ್ರಮ ಅನಿವಾರ್ಯವಾಗಿತ್ತು. ಹಿಂದೂಯೇತರರ ಪ್ರವೇಶವನ್ನು ನಿರ್ಬಂಧಿಸಬೇಕು ಎಂಬ ಬೇಡಿಕೆ ಭಕ್ತ ವಲಯದಿಂದ ದಶಕಗಳಿಂದ ಕೇಳಿಬರುತ್ತಿತ್ತು. ಈಗ ಅದನ್ನು ಅಧಿಕೃತವಾಗಿ ಜಾರಿಗೆ ತರಲಾಗಿದೆ ಎಂದು ತಿಳಿಸಿದ್ದಾರೆ.

ಈ ನಿಯಮದನ್ವಯ, ಸನಾತನ ಧರ್ಮವನ್ನು ಅನುಸರಿಸುವವರು ಮತ್ತು ಬದರಿ ವಿಶಾಲ್ ಅಥವಾ ಬಾಬಾ ಕೇದಾರನಾಥನ ಮೇಲೆ ಅಪಾರ ಭಕ್ತಿ ಹೊಂದಿರುವವರಿಗೆ ಮಾತ್ರ ದೇವಾಲಯದ ಆವರಣ ಹಾಗೂ ಗರ್ಭಗುಡಿಯೊಳಗೆ ಪ್ರವೇಶವಿರುತ್ತದೆ. 47 ದೇವಾಲಯಗಳ ವ್ಯಾಪ್ತಿಯಲ್ಲಿ ಇನ್ನು ಮುಂದೆ ಕಟ್ಟುನಿಟ್ಟಿನ ತಪಾಸಣೆ ನಡೆಯಲಿದೆ.

2026ರ ಯಾತ್ರೆಗೆ ಆನ್‌ಲೈನ್ ನೋಂದಣಿ ಆರಂಭ

ಮತ್ತೊಂದೆಡೆ, ಉತ್ತರಾಖಂಡ ಸರ್ಕಾರವು ಯಾತ್ರಾರ್ಥಿಗಳ ಅನುಕೂಲಕ್ಕಾಗಿ 2026ರ ಚಾರ್‌ಧಾಮ್ ಯಾತ್ರೆಯ ಆನ್‌ಲೈನ್ ನೋಂದಣಿ ಪೋರ್ಟಲ್ ಅನ್ನು ಈಗಾಗಲೇ ಮುಕ್ತಗೊಳಿಸಿದೆ. ಹಿಮಾಲಯದ ದುರ್ಗಮ ಹಾದಿಯಲ್ಲಿ ಸಾಗುವ ಈ ಯಾತ್ರೆಗೆ ಸುರಕ್ಷತೆಯ ದೃಷ್ಟಿಯಿಂದ ಪ್ರತಿಯೊಬ್ಬ ಭಕ್ತರು ಡಿಜಿಟಲ್ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಲಕ್ಷಾಂತರ ಭಕ್ತರು ಏಕಕಾಲಕ್ಕೆ ಆಗಮಿಸುವುದರಿಂದ ಜನದಟ್ಟಣೆಯನ್ನು ನಿಯಂತ್ರಿಸಲು ಈ ಕ್ರಮ ಕೈಗೊಳ್ಳಲಾಗಿದೆ.

ಯಾವಾಗಿನಿಂದ ಯಾತ್ರೆ ?

ಈ ವರ್ಷದ ಚಾರ್‌ಧಾಮ್ ಯಾತ್ರೆಯ ವೇಳಾಪಟ್ಟಿ ಹೀಗಿದೆ:

ಈ ಹೊಸ ನಿಯಮಗಳು ಮತ್ತು ಕಟ್ಟುನಿಟ್ಟಿನ ನೋಂದಣಿ ವ್ಯವಸ್ಥೆಯು ಯಾತ್ರೆಯ ಪಾವಿತ್ರ್ಯತೆಯನ್ನು ಹೆಚ್ಚಿಸುವುದಲ್ಲದೆ, ಭಕ್ತರಿಗೆ ಸುಗಮ ದರ್ಶನಕ್ಕೆ ಅನುವು ಮಾಡಿಕೊಡಲಿದೆ ಎಂದು ನಿರೀಕ್ಷಿಸಲಾಗಿದೆ.

Exit mobile version