ಮೈಸೂರಿನಲ್ಲಿ ಹೀಲಿಯಂ ಗ್ಯಾಸ್‌ ಬಲೂನ್‌ ನಿಷೇಧ..! ಸೀಮಾ ಲಾಟ್ಕರ್ ಮಹತ್ವದ ಆದೇಶ

Untitled design 2026 02 19T121401.789

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇತ್ತೀಚೆಗೆ ನಡೆದ ಹೀಲಿಯಂ ಅನಿಲ ದುರಂತವು ಸಾರ್ವಜನಿಕರಲ್ಲಿ ಆತಂಕ ಮೂಡಿಸಿತ್ತು. ಅರಮನೆಯಂತಹ ಪ್ರಮುಖ ಪ್ರವಾಸಿ ತಾಣದ ಮುಂಭಾಗದಲ್ಲೇ ಸ್ಫೋಟ ಸಂಭವಿಸಿದ್ದು, ಜನರ ಜೀವಕ್ಕೆ ಕಂಟಕ ಎದುರಾಗಿತ್ತು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ನಗರ ಪೊಲೀಸ್‌ ಆಯುಕ್ತರಾದ ಸೀಮಾ ಲಾಟ್ಕರ್ ಅವರು, ಮೈಸೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಹೀಲಿಯಂ ಅನಿಲದ ಬಳಕೆ ಮತ್ತು ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಅಧಿಕೃತ ಆದೇಶ ಹೊರಡಿಸಿದ್ದಾರೆ.

ಹೀಲಿಯಂ ಅನಿಲವನ್ನು ಬಲೂನ್‌ಗಳಿಗೆ ತುಂಬುವ ಸಮಯದಲ್ಲಿ ಸಿಲಿಂಡರ್‌ಗಳು ಅಜಾಗರೂಕತೆಯಿಂದ ಸ್ಫೋಟಗೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಇಂತಹ ಅನಿಲವನ್ನು ಅತ್ಯಧಿಕ ಒತ್ತಡದಲ್ಲಿ ಸಿಲಿಂಡರ್‌ಗಳಲ್ಲಿ ಸಂಗ್ರಹಿಸಲಾಗುತ್ತದೆ. ಸ್ಫೋಟ ಸಂಭವಿಸಿದಾಗ ಅದು ಕೇವಲ ಆಸ್ತಿಗೆ ಮಾತ್ರವಲ್ಲದೆ, ಜನರ ಜೀವಕ್ಕೂ ಅಪಾಯ ತಂದೊಡ್ಡುತ್ತದೆ. ಮೈಸೂರು ಅರಮನೆ ಮುಂಭಾಗ ಸಂಭವಿಸಿದ ಘಟನೆಯು ಸಾರ್ವಜನಿಕ ಶಾಂತಿ ಮತ್ತು ಸುರಕ್ಷತೆಗೆ ಭಂಗ ತಂದಿರುವುದನ್ನು ಮನಗಂಡ ಆಯುಕ್ತರು ಈ ಆದೇಶ ಘೊಷಿಸಿದ್ದಾರೆ.

ಪೊಲೀಸ್ ಕಮಿಷನರ್ ಅವರ ಆದೇಶದಂತೆ ಮೈಸೂರು ನಗರದ ಕೆಳಕಂಡ ಸ್ಥಳಗಳಲ್ಲಿ ಹೀಲಿಯಂ ಅನಿಲ ಬಳಸಿ ಬಲೂನ್ ಹಾರಿಸುವುದು ಅಥವಾ ಮಾರಾಟ ಮಾಡುವುದನ್ನು ನಿರ್ಬಂಧಿಸಲಾಗಿದೆ:

ಅಪಾಯದ ತೀವ್ರತೆ

ಹೀಲಿಯಂ ಅನಿಲವು ಸ್ಫೋಟಗೊಳ್ಳುವ ಗುಣ ಹೊಂದಿದ್ದು, ಬೆಂಕಿ ಅವಘಡಗಳಿಗೆ ಕಾರಣವಾಗಬಹುದು. ಅಲ್ಲದೆ, ಮುಚ್ಚಿದ ಜಾಗಗಳಲ್ಲಿ ಇದು ಉಸಿರುಗಟ್ಟುವಿಕೆಗೆ (Suffocation) ಕಾರಣವಾಗುವ ಸಾಧ್ಯತೆ ಇರುತ್ತದೆ. ಸಣ್ಣ ಮಕ್ಕಳ ಆಟಿಕೆಯಾದ ಬಲೂನ್‌ಗಳಲ್ಲಿ ಇಂತಹ ಅಪಾಯಕಾರಿ ಅನಿಲದ ಬಳಕೆಯು ಪೋಷಕರಲ್ಲಿ ಭಯ ಹುಟ್ಟಿಸಿತ್ತು. ಸಾರ್ವಜನಿಕ ಜೀವನಕ್ಕೆ ರಕ್ಷಣೆ ನೀಡಲು ಈ ಕ್ರಮ ಅನಿವಾರ್ಯವೆಂದು ಪೊಲೀಸ್ ಇಲಾಖೆ ತಿಳಿಸಿದೆ.

ಮೈಸೂರು ಪೊಲೀಸರ ಈ ನಿರ್ಧಾರವು ಸ್ವಾಗತಾರ್ಹವಾಗಿದ್ದು, ಪ್ರವಾಸಿಗರ ಮತ್ತು ಸ್ಥಳೀಯ ನಿವಾಸಿಗಳ ಸುರಕ್ಷತೆಯನ್ನು ಖಚಿತಪಡಿಸಲಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಸೀಮಾ ಲಾಟ್ಕರ್ ಅವರು ಎಚ್ಚರಿಸಿದ್ದಾರೆ.

Exit mobile version