ಸರ್ಕಾರಿ ಆಸ್ಪತ್ರೆಯಲ್ಲಿ ಬಡವರ ರಕ್ತ ಹೀರುವ ಭ್ರಷ್ಟಾಚಾರ! KC ಜನರಲ್ ಆಸ್ಪತ್ರೆಯಲ್ಲಿ ದುಡ್ಡು ಕೊಟ್ರೆ ಮಾತ್ರ ಕೆಲಸ

08

ಬೆಂಗಳೂರು: ಆರೋಗ್ಯ ಸಚಿವರೇ ಈ ಸುದ್ದಿ ಮಿಸ್ ಮಾಡದಿರಿ! ಬಡವರಿಗಾಗಿ ಇರುವ ಸರ್ಕಾರಿ ಆಸ್ಪತ್ರೆಗಳಲ್ಲಿ ನಡೆಯುತ್ತಿರುವ ಅವ್ಯವಹಾರವನ್ನು ಒಮ್ಮೆ ಗಮನಿಸಿ. ಬೆಂಗಳೂರಿನ ಪ್ರತಿಷ್ಠಿತ KC ಜನರಲ್ ಆಸ್ಪತ್ರೆಯಲ್ಲಿ “ಕಾಸು ಕೊಟ್ರೆ ಕೆಲಸ, ಇಲ್ಲದಿದ್ದರೆ ನಾಳೆ ಬನ್ನಿ, ನಾಡಿದ್ದು ಬನ್ನಿ” ಎಂಬ ಧೋರಣೆಯಲ್ಲಿ ಸಿಬ್ಬಂದಿಗಳು ಲಂಚ ವಸೂಲಿ ಮಾಡುತ್ತಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಮಲ್ಲೇಶ್ವರಂನ KC ಜನರಲ್ ಆಸ್ಪತ್ರೆಯಲ್ಲಿ ಎಕ್ಸ್-ರೇ ವರದಿ ಪಡೆಯಲು ರೋಗಿಗಳಿಂದ ₹100 ಲಂಚ ಪಡೆಯುತ್ತಿರುವುದು ಎಕ್ಸ್‌ಕ್ಲೂಸಿವ್ ವಿಡಿಯೋದಲ್ಲಿ ಬಯಲಾಗಿದೆ. ಫೋನ್‌ಪೇ ಮತ್ತು ಗೂಗಲ್ ಪೇ ಮೂಲಕ ಹಣ ವಸೂಲಿ ಮಾಡುತ್ತಿರುವುದನ್ನು ರೋಗಿಗಳೇ ವಿಡಿಯೋ ರೆಕಾರ್ಡ್ ಮಾಡಿ ಗ್ಯಾರಂಟಿ ನ್ಯೂಸ್‌ಗೆ ನೀಡಿದ್ದಾರೆ. ಸಿಬ್ಬಂದಿ ತಮ್ಮ ಫೋನ್ ನಂಬರ್ ಹೇಳಿ ಹಣ ಹಾಕಿಸಿಕೊಳ್ಳುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ.

ಹಣ ಕೊಡದಿದ್ದರೆ ವರದಿ ನಾಳೆ ಅಥವಾ ನಾಡಿದ್ದು ಕೊಡುತ್ತೇವೆ ಎಂದು ವಾಪಸ್ ಕಳುಹಿಸುತ್ತಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೆಸರಿಗೆ ಮಾತ್ರ ಬಡವರ ಆಸ್ಪತ್ರೆ ಎಂದು ರೋಗಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ಆಸ್ಪತ್ರೆಯಲ್ಲಿ ಸರ್ಕಾರಿ ಉಚಿತ ಸೇವೆಗೆಂದು ಬರುವ ಬಡವರು ಮತ್ತು ಸಾಮಾನ್ಯ ಜನರು ಈ ರೀತಿಯ ಲಂಚಕ್ಕೆ ಬಲಿಯಾಗುತ್ತಿರುವುದು ಆರೋಗ್ಯ ವ್ಯವಸ್ಥೆಯಲ್ಲಿ ಗಂಭೀರ ಭ್ರಷ್ಟಾಚಾರವನ್ನು ಬಯಲು ಮಾಡುತ್ತಿದೆ.

ಈ ವಿಡಿಯೋ ವೈರಲ್ ಆಗುತ್ತಿರುವುದರಿಂದ ಆರೋಗ್ಯ ಸಚಿವರು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ರೋಗಿಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಆಗ್ರಹಿಸಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಇಂತಹ ಲಂಚಾಟ ನಡೆಯುತ್ತಿರುವುದು ಬಡವರ ಆರೋಗ್ಯದೊಂದಿಗೆ ಆಟವಾಡುವಂತೆ ಆಗಿದೆ ಎಂದು ಅವರು ಹೇಳುತ್ತಿದ್ದಾರೆ.

ಪ್ರಸ್ತುತ ಈ ವಿಷಯದ ಬಗ್ಗೆ ಆಸ್ಪತ್ರೆ ಅಧಿಕಾರಿಗಳ ಪ್ರತಿಕ್ರಿಯೆ ಲಭ್ಯವಾಗಿಲ್ಲ. ಆದರೆ ರೋಗಿಗಳು ದಾಖಲಿಸಿದ ವಿಡಿಯೋ ಪೊಲೀಸ್ ಅಥವಾ ಆರೋಗ್ಯ ಇಲಾಖೆಗೆ ಸಲ್ಲಿಸುವ ಸಾಧ್ಯತೆ ಇದೆ.

ಈ ಘಟನೆಯು ಬೆಂಗಳೂರಿನ ಸರ್ಕಾರಿ ಆಸ್ಪತ್ರೆಗಳಲ್ಲಿ ನಡೆಯುತ್ತಿರುವ ಅವ್ಯವಹಾರಗಳಿಗೆ ಮತ್ತೊಂದು ಉದಾಹರಣೆಯಾಗಿದೆ. ಬಡವರು ಎಲ್ಲಿಗೆ ಹೋಗಬೇಕು? ಎಂಬ ಪ್ರಶ್ನೆ ಇದೀಗ ಎಲ್ಲರ ಮುಂದೆಯೂ ಇದೆ.

 

Exit mobile version