ರಾಜ್ಯದಲ್ಲಿ ಹೆಚ್ಚುತ್ತಿರುವ ಡಿವೋರ್ಸ್‌: ಸರ್ಕಾರದಿಂದ ‘ಕೂಡಿ ಬಾಳೋಣ’ ಕೌನ್ಸಿಲಿಂಗ್ ಸೆಂಟರ್

Untitled design 2025 12 02T220651.725

ಬೆಂಗಳೂರು, ಡಿಸೆಂಬರ್ 02: ವಿವಾಹಿತ ಜೀವನದಲ್ಲಿ ಹೊಂದಾಣಿಕೆಯ ಸಮಸ್ಯೆಗಳು ಹೆಚ್ಚಾಗುತ್ತಿರುವುದರಿಂದ ಡಿವೋರ್ಸ್ (ವಿಚ್ಛೇದನ) ಪ್ರಕರಣಗಳು ಗಂಭೀರವಾಗಿ ಏರುತ್ತಿರುವ ಪರಿಸ್ಥಿತಿಯನ್ನು ಎದುರಿಸಲು, ಕರ್ನಾಟಕ ರಾಜ್ಯ ಸರ್ಕಾರ ‘ಕೂಡಿ ಬಾಳೋಣ’ ಎಂಬ ವಿಶೇಷ ಮಾರ್ಗದರ್ಶನ ಕೇಂದ್ರಗಳನ್ನು ಆರಂಭಿಸಲು ಕೈಗೆತ್ತಿಕೊಂಡಿದೆ. ವಿವಾಹದ ಮಹತ್ವವನ್ನು ಮನವರಿಕೆ ಮಾಡಿಕೊಡುವ ಮೂಲಕ ವಿಚ್ಛೇದನದ ಪ್ರಮಾಣವನ್ನು ಕಡಿಮೆ ಮಾಡುವುದು ಈ ಯೋಜನೆಯ ಗುರಿಯಾಗಿದೆ.

ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಮಾನವಾಗಿ ಹೆಚ್ಚುತ್ತಿರುವ ವಿಚ್ಛೇದನ ಪ್ರಕರಣಗಳು ಸಮಾಜಕ್ಕೆ ಹೊಸ ಸವಾಲಾಗಿದೆ. ಹಲವು ದಂಪತಿಗಳು ಸರಿಯಾದ ಮನೋವೈಜ್ಞಾನಿಕ ಸಲಹೆ ಮತ್ತು ಮಾರ್ಗದರ್ಶನದ ಅಭಾವದಿಂದ ತಮ್ಮ ಸಂಬಂಧವನ್ನು ಸರಿಪಡಿಸಿಕೊಳ್ಳಲು ಅಸಮರ್ಥರಾಗಿ, ಕೊನೆಗೆ ನ್ಯಾಯಾಲಯದ ಬಾಗಿಲು ಕ್ಕಟ್ಟುತ್ತಿದ್ದಾರೆ. ಸೂಕ್ತ ಕೌನ್ಸೆಲಿಂಗ್ ಇಲ್ಲದೆ ಎಷ್ಟೋ ಬಲವಾದ ಸಂಬಂಧಗಳು ಮುರಿದುಬೀಳುತ್ತಿರುವುದು ಚಿಂತೆಯ ವಿಷಯವಾಗಿದೆ.

ಈ ಸಮಸ್ಯೆಯ ಗಂಭೀರತೆಯನ್ನು ಗುರುತಿಸಿದ ರಾಷ್ಟ್ರೀಯ ಮಹಿಳಾ ಆಯೋಗವು (National Commission for Women) ರಾಜ್ಯ ಸರ್ಕಾರಕ್ಕೆ ಸೂಕ್ತ ಸಲಹೆ ನೀಡಿತ್ತು. ಈ ಸೂಚನೆಗಳ ಆಧಾರದ ಮೇಲೆ, ರಾಜ್ಯ ಮಹಿಳಾ ಆಯೋಗವು (Karnataka State Commission for Women) ವಿವರವಾದ ಪ್ರಸ್ತಾಪವನ್ನು ಸರ್ಕಾರಕ್ಕೆ ಸಲ್ಲಿಸಿತ್ತು.

ಈ ಪ್ರಸ್ತಾಪವನ್ನು ಕೂಲಂಕಷವಾಗಿ ಪರಿಶೀಲಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು (Department of Women and Child Development) ಅದಕ್ಕೆ ತನ್ನ ಅನುಮೋದನೆ ನೀಡಿದೆ. ಇಲಾಖೆಯು ಈಗ ‘ಕೂಡಿ ಬಾಳೋಣ’ ಕೌನ್ಸೆಲಿಂಗ್ ಸೆಂಟರ್‌ಗಳನ್ನು ಸ್ಥಾಪಿಸಲು ಅಧಿಕೃತ ಆದೇಶವನ್ನು ಹೊರಡಿಸಿದೆ. ಈ ಕೇಂದ್ರಗಳನ್ನು ರಾಷ್ಟ್ರೀಯ ಮಹಿಳಾ ಆಯೋಗದ ನಿರ್ದೇಶಿಕೆಗಳನ್ನು ಅನುಸರಿಸಿ, ಸರ್ಕಾರದ ಅಡಿಯಲ್ಲೇ ನಡೆಸಲಾಗುವುದು.

‘ಕೂಡಿ ಬಾಳೋಣ’ ಯೋಜನೆಯ ಮೂಲಕ ಸರ್ಕಾರ ಹಲವಾರು ಪ್ರಮುಖ ಗುರಿಗಳನ್ನು ಹೊಂದಿದೆ:

ಈ ಯೋಜನೆಯನ್ನು ಸಮಗ್ರವಾಗಿ ಕಾರ್ಯರೂಪಕ್ಕೆ ತರಲು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಈ ಕೌನ್ಸೆಲಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಯೋಜನೆ ರೂಪುಗೊಳ್ಳುತ್ತಿದೆ. ಇದು ಹೆಚ್ಚಿನ ಜನರನ್ನು ತಲುಪಲು ಸಹಾಯ ಮಾಡುತ್ತದೆ.

ಪ್ರಸ್ತುತ, ಈ ಕೇಂದ್ರಗಳು ಕಾರ್ಯನಿರ್ವಹಿಸಲು ಸೂಕ್ತ ಸ್ಥಳಗಳನ್ನು ಗುರುತಿಸುವ ಮತ್ತು ತರಬೇತಿ ಪಡೆದ ಕೌನ್ಸೆಲಿಂಗ್ ಸಿಬ್ಬಂದಿಯನ್ನು ನೇಮಿಸಿಕೊಳ್ಳುವ ಪ್ರಕ್ರಿಯೆ ಸಾಗುತ್ತಿದೆ. ಮನೋವಿಜ್ಞಾನಿಗಳು ಮತ್ತು ಸಮಾಜ ಕಾರ್ಯಕರ್ತರನ್ನು ಈ ಸಿಬ್ಬಂದಿಯಾಗಿ ಸೇರಿಸಿಕೊಳ್ಳಲು ಯೋಜನೆ ಇದೆ.

‘ಕೂಡಿ ಬಾಳೋಣ’ ಯೋಜನೆಯು ವೈಯಕ್ತಿಕ ಸಂಬಂಧಗಳಿಗೆ ಸರ್ಕಾರದ ಮಟ್ಟದಲ್ಲಿ ನೀಡಲಾಗುವ ರಚನಾತ್ಮಕ ಮತ್ತು ಪ್ರಾಯೋಗಿಕ ಪರಿಹಾರ. ವಿವಾಹಿತ ಜೀವನದ ಸವಾಲುಗಳನ್ನು ಅರ್ಥಮಾಡಿಕೊಂಡು, ಸಂವಹನದ ಅಂತರವನ್ನು ದಾಟಲು ದಂಪತಿಗಳಿಗೆ ಸಹಾಯ ಮಾಡುವ ಮೂಲಕ, ಕುಟುಂಬವನ್ನು ಸಮಾಜದ ಬಲವಾದ ಅಡಿಪಾಯವಾಗಿ ಉಳಿಸಿಕೊಳ್ಳುವ ಗುರಿ ಹೊಂದಿದೆ.

Exit mobile version