ಗೃಹಲಕ್ಷ್ಮಿ ಹೊಸ ನೋಂದಣಿ ಆರಂಭಕ್ಕೆ ಸಿದ್ಧತೆ: 2-3 ದಿನಗಳಲ್ಲಿ ಸರ್ಕಾರದ ಮಾರ್ಗಸೂಚಿ ಪ್ರಕಟ

Web Photo Editor (29)

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಯ ದುರುಪಯೋಗ ತಡೆಗೆ ಸರ್ಕಾರ ಮುಂದಾಗಿದ್ದು, ಹೊಸದಾಗಿ ಅರ್ಜಿ ಸಲ್ಲಿಸಲು ಮತ್ತು ಹಳೆಯ ಫಲಾನುಭವಿಗಳ ಪರಿಶೀಲನೆಗೆ ಬಿರುಸಿನ ಸಿದ್ಧತೆ ನಡೆಸುತ್ತಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಇನ್ನು 2-3 ದಿನಗಳಲ್ಲಿ ಅಧಿಕೃತ ಮಾರ್ಗಸೂಚಿಯನ್ನು ಅಂತಿಮಗೊಳಿಸಲಿದ್ದು, ಆ ಬಳಿಕ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು.

ದುರುಪಯೋಗ ತಡೆಗೆ ಕಠಿಣ ಕ್ರಮ

ಯೋಜನೆಯಲ್ಲಿ ಆಗುತ್ತಿರುವ ಅಕ್ರಮಗಳನ್ನು ತಡೆದು, ಕೇವಲ ಅರ್ಹರಿಗೆ ಮಾತ್ರ ಯೋಜನೆಯ ಫಲ ತಲುಪಿಸುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ. ಮೃತಪಟ್ಟವರ ಹೆಸರಿನಲ್ಲಿ ಹಣ ಪಡೆಯುತ್ತಿರುವುದು ಹಾಗೂ ಐಟಿ (ಆದಾಯ ತೆರಿಗೆ) ಮತ್ತು ಜಿಎಸ್ಟಿ ಪಾವತಿದಾರರಿಗೂ ಹಣ ಸಂದಾಯವಾಗುತ್ತಿರುವುದನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ ವ್ಯವಸ್ಥೆಯನ್ನು ಸರಿಪಡಿಸಲು ಕೊನೆಯ ಹಂತದ ಸಿದ್ಧತೆಗಳು ನಡೆಯುತ್ತಿವೆ.

ಮನೆ ಬಾಗಿಲಿಗೇ ಸಹಾಯಕಿಯರು

ಅರ್ಜಿ ಸಲ್ಲಿಸಲು ತಾಂತ್ರಿಕ ತೊಂದರೆ ಎದುರಿಸುವ ಅಥವಾ ಅನಕ್ಷರಸ್ಥ ಮತ್ತು ಬಡ ಗೃಹಲಕ್ಷ್ಮಿಯರ ನೆರವಿಗಾಗಿ ಸರ್ಕಾರ ಈ ಬಾರಿ ವಿಶೇಷ ವ್ಯವಸ್ಥೆ ಮಾಡಿದೆ. ಅಂಗನವಾಡಿ ಕಾರ್ಯಕರ್ತೆಯರನ್ನು ಸಹಾಯಕರಾಗಿ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಅವರ ಮೊಬೈಲ್ ಫೋನ್ ಗಳಿಗೆ ವಿಶೇಷ ಆ್ಯಪ್ ಅಳವಡಿಸಲಾಗುತ್ತಿದ್ದು, ಈ ಆ್ಯಪ್ ಮೂಲಕ ಅವರು ಅರ್ಹ ಮಹಿಳೆಯರ ಮನೆಗೆ ತೆರಳಿ ಅರ್ಜಿ ಸಲ್ಲಿಸಲು ಸಹಕರಿಸಲಿದ್ದಾರೆ.

ಅರ್ಜಿ ಸಲ್ಲಿಕೆ ವಿಧಾನ

ಎಂದಿನಂತೆ ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ ಒನ್ ಮತ್ತು ಅಧಿಕೃತ ಬ್ರೌಸಿಂಗ್ ಸೆಂಟರ್ ಗಳಲ್ಲೂ ಅರ್ಜಿ ಸಲ್ಲಿಸಲು ಮುಕ್ತ ಅವಕಾಶವಿರಲಿದೆ. ಈ ಬಾರಿಯ ಮರು ಅರ್ಜಿಯಲ್ಲಿ ದುರುಪಯೋಗ ತಡೆಯಲು ಬಯೋಮೆಟ್ರಿಕ್ ಅಥವಾ ಗುರುತಿಸುವಿಕೆ (ಮುಖ ಗುರುತಿಸುವಿಕೆ) ತಂತ್ರಜ್ಞಾನವನ್ನು ಅಳವಡಿಸಲು ಪ್ರಯತ್ನಿಸಲಾಗುತ್ತಿದೆ. ಆದರೆ, ಅಂಗನವಾಡಿ ಕಾರ್ಯಕರ್ತೆಯರ ಫೋನ್ ನಲ್ಲಿ ಥಂಬ್ ಮೆಷಿನ್ ವ್ಯವಸ್ಥೆ ಇರುವುದಿಲ್ಲ.

ಅರ್ಜಿಗೆ ಬೇಕಾದ ಮಾಹಿತಿ

ಮರು ಅರ್ಜಿಯಲ್ಲಿ ಈ ಹಿಂದಿನ ಅರ್ಜಿಯ ಅಂಶಗಳ ಜೊತೆಗೆ:

ಅರ್ಜಿ ಸಲ್ಲಿಸಲು ಅರ್ಹರು

ಅರ್ಜಿ ಸಲ್ಲಿಸಲು ಅವಕಾಶವಿಲ್ಲದವರು

Exit mobile version