ನಗರದಲ್ಲಿ ಹೆಚ್ಚಾದ ಪಟಾಕಿ ಅಪಘಾತ: 40ಕ್ಕೂ ಹೆಚ್ಚು ಜನಕ್ಕೆ ಗಾಯ..!

Untitled design 2025 10 21t234911.543

ಬೆಂಗಳೂರು: ದೀಪಾವಳಿ ಹಬ್ಬದ ಸಂಭ್ರಮದ ನಡುವೆಯೇ, ಪಟಾಕಿ ಸಿಡಿತದಿಂದ ಸಂಭವಿಸಿದ ಅಪಘಾತಗಳು ನಗರದಲ್ಲಿ ಆತಂಕ ಮೂಡಿಸಿವೆ. ಇದುವರೆಗೆ ನಗರದಲ್ಲಿ 40 ಕ್ಕೂ ಹೆಚ್ಚು ಜನರು ಪಟಾಕಿ ಅಪಘಾತಕ್ಕೀಡಾಗಿದ್ದು, ಅದರಲ್ಲಿ ಬಹುಪಾಲು ಪ್ರಕರಣಗಳು ಕಣ್ಣಿನ ಗಾಯಗಳಾಗಿವೆ.

ಬೆಂಗಳೂರಿನ ನೇತ್ರ ವೈದ್ಯಕೀಯಕ್ಕೆ ಹೆಸರುವಾಸಿಯಾದ ಮಿಂಟೋ ಆಯುರ್ವೇದ ಆಸ್ಪತ್ರೆಯು ಈ ಅಪಘಾತಗಳ ಮುಖ್ಯ ಚಿಕಿತ್ಸಾ ಕೇಂದ್ರವಾಗಿ ಮಾರ್ಪಟ್ಟಿದೆ. ಆಸ್ಪತ್ರೆಯ ಆಡಳಿತದಿಂದಲೇ ದಾಖಲಾಗಿರುವ ಮಾಹಿತಿಯ ಪ್ರಕಾರ, ಈ ವರೆಗೆ ಆಸ್ಪತ್ರೆಗೆ ದಾಖಲಾಗಿರುವ ಗಾಯಗೊಂಡವರ ಸಂಖ್ಯೆ 17 ಕ್ಕೇರಿದೆ. ಇಂದು ಮಾತ್ರವೇ ಹೊಸದಾಗಿ ನಾಲ್ಕು ಜನ ರೋಗಿಗಳು ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿರುವುದು ಗಂಭೀರ ಸ್ಥಿತಿಯನ್ನು ಸೂಚಿಸುತ್ತದೆ. ಈ ನಾಲ್ಕು ಹೊಸ ರೋಗಿಗಳಲ್ಲಿ ಮೂವರು ಮಕ್ಕಳು ಮತ್ತು ಒಬ್ಬ ಯುವಕ ಮತ್ತು ಯುವತಿ ಸೇರಿದ್ದಾರೆ. ಪಟಾಕಿ ಸಿಡಿತದಿಂದ ಕಣ್ಣಿಗೆ ತೀವ್ರ ಮಟ್ಟದ ಗಾಯಗಳಾಗಿವೆ.

ನಗರದ ಇನ್ನೊಂದು ಪ್ರಮುಖ ನೇತ್ರ ಆಸ್ಪತ್ರೆಯಾದ ನಾರಾಯಣ ನೇತ್ರಾಲಯದಲ್ಲೂ ಈಗಾಗಲೇ 23 ಮಂದಿ ರೋಗಿಗಳು ಪಟಾಕಿ ಅಪಘಾತದಿಂದ ಕಣ್ಣಿನ ಗಾಯಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಮಾತ್ರವೇ ನಾರಾಯಣ ನೇತ್ರಾಲಯಕ್ಕೆ ಮೂರು ಹೊಸ ಪ್ರಕರಣಗಳು ದಾಖಲಾಗಿವೆ.

ಆಸ್ಪತ್ರೆಯ ವೈದ್ಯರು ಹಬ್ಬದ ಸಂಭ್ರಮದ ನಡುವೆ ಸುರಕ್ಷತೆಯನ್ನು ಮರೆಯಬಾರದು ಎಂದು ಸಾರಿ ಹೇಳಿದ್ದಾರೆ. “ಪಟಾಕಿ ಸಿಡಿಸುವಾಗ ಕಣ್ಣುಗಳಿಗೆ ಸಂರಕ್ಷಣಾ ಕವಚ ಧರಿಸುವುದು ಅತ್ಯಗತ್ಯ. ಮಕ್ಕಳು ಪಟಾಕಿ ಸಿಡಿಸುವಾಗ ಪೂರ್ಣವಾಗಿ ವಯಸ್ಕರ ಮೇಲ್ವಿಚಾರಣೆಯಲ್ಲಿ ಇರಬೇಕು. ಯಾವುದೇ ಪಟಾಕಿ ಸರಿಯಾಗಿ ಸಿಡಿಯದೇ ಇದ್ದರೆ, ಅದರ ಹತ್ತಿರ ಹೋಗಬಾರದು. ಅದನ್ನು ನೀರಿನಲ್ಲಿ ನೆನೆಸಿ ನಾಶಮಾಡಬೇಕು ಎಂದು ಒಬ್ಬ ವೈದ್ಯರು ಸೂಚನೆ ನೀಡಿದ್ದಾರೆ.

Exit mobile version