ನಿನ್ನೆ ನಾವು ಇಲ್ಲಾ ಅಂದ್ರೆ ಬೆಂಗಳೂರಿಲ್ಲ ಅಂದೋಳು ಇಂದು ಐ ಲವ್ ಯೂ ಬೆಂಗಳೂರು ಎಂದು ಯೂಟರ್ನ್ ಹೊಡೆದಿದ್ದಾಳೆ. ಹೌದು..ಕೆಟ್ಟ ಮೇಲೆ ಬುದ್ಧಿ ಬಂತು ಅನ್ನೋ ಘಟನೆ ಸುಗಂಧ್ ಶರ್ಮಾಗೆ ಎದುರಾಗಿದೆ. ನಿನ್ನೆ ಕನ್ನಡ ಮತ್ತು ಕನ್ನಡಿಗರ ವಿಚಾರದಲ್ಲಿ ಬೆಂಗಳೂರು ಖಾಲಿ ಆಗುತ್ತೆ ಅಂದೋಳು ಇವತ್ತು ಐ ಲವ್ ಬೆಂಗಳೂರು ಎಂದು ಹೇಳುವ ಮೂಲಕ ಯೂಟರ್ನ್ ಹೊಡೆದಿದ್ದಾಳೆ.

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕನ್ನಡಿಗರು ಮತ್ತು ಬೆಂಗಳೂರಿಗರನ್ನು ಕೆಣಕುವ ಪ್ರಯತ್ನ ನಡೆಯುತ್ತಿದೆ. ಬಾಯಿಗೆ ಬಂದ ಹಾಗೆ ಕನ್ನಡಿಗರ ಬಗ್ಗೆ ಮಾತನಾಡುತ್ತಿದ್ದಾರೆ. ಅದರಲ್ಲೂ ನಾರ್ಥ್ ಇಂಡಿಯಾದವರು ವಿಚಿತ್ರವಾಗಿ ಕನ್ನಡಿಗರನ್ನು ಕೆಣಕುತ್ತಿದ್ದಾರೆ. ಅದರಂತೆಯೇ ಸುಗಂಧ್ ಶರ್ಮಾ ಎಂಬಾಕೆ ಸಾಮಾಜಿಕ ಜಾಲತಾಣದಲ್ಲಿ ಕನ್ನಡಿಗರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದು, ನಾವೇ ಇಲ್ಲ ಅಂದ್ರೆ ಸಿಟಿ ಖಾಲಿ ಆಗುತ್ತೆ ಎಂದಿದ್ದಳು.

ಬೆಂಗಳೂರು ಬಗ್ಗೆ ತುಚ್ಛವಾಗಿ ಮಾತನಾಡಿದಾಕೆ ವಿರುದ್ಧ ರ್ಯಾಪಾರ್ ಚಂದನ್ ಶೆಟ್ಟಿ, ನಟಿ ಅನುಪಮ ಗೌಡ ಇತ್ಯಾದಿ ಸೆಲೆಬ್ರಿಟಿಗಳು ಕೂಡ ಗರಂ ಆಗಿದ್ದರು. ಇವಳ ವಿಚಿತ್ರ ವರ್ತನೆ ವೈರಲ್ ಆದಂತೆ ಗ್ಯಾರಂಟಿ ನ್ಯೂಸ್ ವರದಿ ಮಾಡಿದೆ. ಆದರೀಗ ಯೂಟರ್ನ್ ಹೊಡೆಯುವ ಮೂಲಕ ಮತ್ತೊಂದು ವಿಡಿಯೋ ಹಂಚಿಕೊಂಡಿದ್ದಾಳೆ.
ಮತ್ತೊಂದು ವಿಡಿಯೋ ಹಂಚಿಕೊಂಡ ಸುಗಂಧ್ ಶರ್ಮಾ, ನಾನು ಟ್ರಾವೆಲರ್ ನಾನು ಊರೂರು ಸುತ್ತುತ್ತೇನೆ. ನನಗೆ ಬೆಂಗಳೂರು ಅಂದ್ರೆ ತುಂಬಾ ಇಷ್ಟ, ಬೆಂಗಳೂರಿನ ಬಗ್ಗೆ ಗೌರವ ಇದೆ. ನಾರ್ತ್, ಈಸ್ಟ್, ಸೌತ್ ಈ ತರಹ ಬೇಧ ಭಾವ ಇಲ್ಲ ನಾವೆಲ್ಲಾ ಭಾರತೀಯರು ಅಂತ ವಿಡಿಯೋ ಹಂಚಿಕೊಂಡಿದ್ದಾಳೆ.