ಬಿಗ್ಬಾಸ್ ಕನ್ನಡ 11ನೇ ಸೀಸನ್ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಇದೇ ತಿಂಗಳು ಸೆಪ್ಟೆಂಬರ್ 29ನೇ ತಾರೀಕಿನಿಂದ ಈ ರಿಯಾಲಿಟಿ ಶೋ ಆರಂಭವಾಗಲಿದೆ. ಈ ಸಲ ಬಿಗ್ ಬಾಸ್ನಿಂದ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಮಾಡುತ್ತಿದ್ದಾರೆ. 11ನೇ ಸೀಸನ್ಗೆ ಹೊಸ ಲೆಕ್ಕ ಎಂಬ ಟ್ಯಾಗ್ಲೈನ್ ಕೂಡ ನೀಡಲಾಗಿದೆ. ಇದರ ಮಧ್ಯೆ ನಟ ಸುದೀಪ್ ಸುದ್ದಿಗೋಷ್ಠಿ ನಡೆಸಿ ಮಾತಾಡಿದ್ದಾರೆ.
ಬಿಗ್ಬಾಸ್ ಸಹವಾಸ ಸಾಕು ಅನಿಸಿದ್ದು ನಿಜ. ಅದಕ್ಕೆ ಬೇರೆಯದ್ದೇ ಕಾರಣಗಳು ಇದ್ದವು. ನಮ್ಮಗಳ ಮಧ್ಯೆ ಯಾವುದೇ ಮಸನಸ್ತಾಪ ಇರಲಿಲ್ಲ. ಇದರ ಬದಲಿಗೆ ಸಿನಿಮಾ ಕಡೆ ಒಂದಷ್ಟು ಗಮನ ನೀಡೋಣ ಎಂದಿದ್ದೆ. ಕೊನೆಗೆ ಬಿಗ್ಬಾಸ್ ಟೀಮ್ ನನ್ನ ಮನೆಗೆ ಭೇಟಿ ನೀಡಿ ಒಪ್ಪಿಸಿದ್ರು ಎಂದರು ಸುದೀಪ್.
ಬಿಗ್ಬಾಸ್ ನನ್ನ ಜೀವನದ ಭಾಗ ಆಗಿದೆ. ಕಳೆದ 10 ವರ್ಷಗಳಿಂದ ಬಿಗ್ಬಾಸ್ ನಡೆಸಿಕೊಂಡು ಬಂದಿದ್ದೇನೆ. ಮನೆಗೆ ಬಂದ ಬಿಗ್ಬಾಸ್ ಟೀಮ್ ಎಲ್ಲವೂ ವಿವರಿಸಿದ್ರು. ಬಿಗ್ಬಾಸ್ಗೆ ನನಗೆ ಏನೋ ಒಂದು ರೀತಿ ಸಂಬಂಧ. ಹಾಗಾಗಿ ಬಿಗ್ಬಾಸ್ ಒಪ್ಪಿಕೊಂಡೆ ಎಂದರು.
ಈ ಹಿಂದೆ ಸುದೀಪ್ ಬಿಗ್ಬಾಸ್ ಶೋನಿಂದ ಹಿಂದೆ ಸರಿಯಲಿದ್ದಾರೆ ಎಂದು ಹೇಳಲಾಗಿತ್ತು. ಈ ಸಲ ಬಿಗ್ಬಾಸ್ ಆ್ಯಂಕರ್ ಯಾರಾಗಲಿದ್ದಾರೆ? ಅನ್ನೋ ಚರ್ಚೆ ಬಹಳ ಜೋರಾಗಿತ್ತು. ರಮೇಶ್ ಅರವಿಂದ್, ರಿಷಬ್ ಶೆಟ್ಟಿ, ಗಣೇಶ್, ಶಿವಣ್ಣ ಯಾರಾದ್ರೂ ಒಬ್ಬರು ಬಿಗ್ಬಾಸ್ ಶೋ ನಡೆಸಿಕೊಡಲಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿತ್ತು. ಈಗ ಎಲ್ಲಾ ವದಂತಿಗೂ ನಟ ಸುದೀಪ್ ಫುಲ್ ಸ್ಟಾಪ್ ಇಟ್ಟಿದ್ದಾರೆ.