ಮತ್ತೆ ಶುರುವಾಯ್ತು ಯುದ್ಧ: ದೊಡ್ಡಣನ ಮಾತಿಗೂ ಕ್ಯಾರೆ ಎನ್ನದ ಇಸ್ರೇಲ್‌ಗೆ ಮತ್ತೆ ತಟ್ಟಲಿದೆಯೇ ಆರ್ಥಿಕ ಬಿಸಿ?

Untitled design 2026 06 09T113822.501

ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಕಾರ್ಮೋಡ ಇಡೀ ಜಗತ್ತನ್ನು ಮತ್ತೆ ಆತಂಕಕ್ಕೆ ತಳ್ಳಿದೆ. ಕಳೆದ ಬಾರಿ ನಡೆದ ಸಂಘರ್ಷದಿಂದಾಗಿ ಭಾರತ ಸೇರಿದಂತೆ ವಿಶ್ವದಾದ್ಯಂತ ತೈಲ ಮತ್ತು ಗ್ಯಾಸ್ ಬೆಲೆಗಳು ದಿಢೀರ್ ಏರಿಕೆಯಾಗಿ ಜಾಗತಿಕ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿತ್ತು. ಜನಸಾಮಾನ್ಯರು ಬೆಲೆ ಏರಿಕೆಯ ಬಿಸಿಗೆ ಬಳಲಿ ಬೆಂಡಾಗಿದ್ದರು. ಇದೀಗ ಸುಮಾರು 100 ದಿನಗಳ ಕದನ ವಿರಾಮಕ್ಕೆ ಬ್ರೇಕ್ ಬಿದ್ದಿದ್ದು, “ಮುಂದೇನು ಕಾದಿದೆಯೋ?” ಎಂಬ ಭಯ ಜಗತ್ತಿನ ಜನರನ್ನು ಕಾಡತೊಡಗಿದೆ.

100 ದಿನಗಳ ಕದನ ವಿರಾಮಕ್ಕೆ ಬ್ರೇಕ್ ಹಾಕಿದ ಇಸ್ರೇಲ್

ಕಳೆದ ಬಾರಿ ಯುದ್ಧ ನಡೆದಾಗ ಇರಾನ್, ಇಸ್ರೇಲ್ ಅಥವಾ ಅಮೆರಿಕಕ್ಕಿಂತಲೂ ಹೆಚ್ಚು ಆರ್ಥಿಕ ಹೊಡೆತ ತಿಂದಿದ್ದು ಭಾರತ, ಶ್ರೀಲಂಕಾ ಸೇರಿದಂತೆ ಅಭಿವೃದ್ಧಿಶೀಲ ರಾಷ್ಟ್ರಗಳು. ಕಚ್ಚಾತೈಲ, ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಬೆಲೆಗಳು ಗಗನಕ್ಕೇರಿದ್ದರಿಂದ ಜಾಗತಿಕ ಮಾರುಕಟ್ಟೆ ತಲ್ಲಣಗೊಂಡಿತ್ತು. ಸಾಮಾನ್ಯ ಜನರು ದಿನಬಳಕೆಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಯಾವುದಕ್ಕೆ ಹಣ ಇಡಬೇಕು, ಹೇಗೆ ಸಂಸಾರ ನಿಭಾಯಿಸಬೇಕು ತಿಳಿಯದೇ ಪರದಾಡುವಂತಾಗಿತ್ತು. ಈಗ ಕದನ ವಿರಾಮ ಅಂತ್ಯಗೊಂಡಿರುವುದು ಆ ಕಹಿ ನೆನಪನ್ನು ಮತ್ತೆ ಮರುಕಳಿಸುವಂತೆ ಮಾಡಿದೆ.

ಅಮೆರಿಕದ ಮಾತಿಗೂ ಬಗ್ಗದ ಇಸ್ರೇಲ್! ಭಿನ್ನಾಭಿಪ್ರಾಯ ಸ್ಫೋಟ?

ವಿಶ್ವದ ದೊಡ್ಡಣ್ಣ ಎಂದೇ ಕರೆಸಿಕೊಳ್ಳುವ ಅಮೆರಿಕದ ಸಂಪೂರ್ಣ ಸಹಾಯ ಹಸ್ತದೊಂದಿಗೆ ಕಳೆದ ಬಾರಿ ಯುದ್ಧ ಮಾಡಿದ್ದ ಇಸ್ರೇಲ್, ಈ ಬಾರಿ ಅಮೆರಿಕದ ಮಾತನ್ನೇ ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ. ಅಮೆರಿಕ ನೀಡಿದ ಕದನ ವಿರಾಮದ ಸಲಹೆಯನ್ನೂ ಧಿಕ್ಕರಿಸಿ ಇಸ್ರೇಲ್ ದಾಳಿಗೆ ಮುಂದಾಗಿರುವುದು ಜಗತ್ತಿಗೆ ಆಶ್ಚರ್ಯ ಮೂಡಿಸಿದೆ.

ಹಿನ್ನೆಲೆ

ಕಳೆದ ಬಾರಿಯ ಯುದ್ಧದ ಸಂದರ್ಭದಲ್ಲೇ ಅಮೆರಿಕಾ ಮತ್ತು ಇಸ್ರೇಲ್ ನಡುವೆ ಆಂತರಿಕ ಭಿನ್ನಾಭಿಪ್ರಾಯಗಳು ಎದ್ದಿದ್ದವು. ಇರಾನ್ ಜೊತೆಗಿನ ಸಂಘರ್ಷಕ್ಕೆ ಇಸ್ರೇಲ್‌ನ ಪ್ರಚೋದನೆಯೇ ಕಾರಣ ಎಂಬುದು ಹಲವು ರಾಜತಾಂತ್ರಿಕ ತಜ್ಞರ ಗಮನಕ್ಕೆ ಬಂದಿತ್ತು. ಆದರೂ ತನ್ನ ಪರಮಾಪ್ತ ಮಿತ್ರ ರಾಷ್ಟ್ರ ಎಂಬ ಕಾರಣಕ್ಕೆ ಅಮೆರಿಕಾ, ಇಸ್ರೇಲ್‌ಗೆ ಯುದ್ಧದ ವಿಷಯದಲ್ಲಿ ನಿರಂತರವಾಗಿ ಶಸ್ತ್ರಾಸ್ತ್ರಗಳ ಸಹಾಯ ಮಾಡುತ್ತಲೇ ಇತ್ತು. ಪರಿಣಾಮವಾಗಿ, ಅಮೆರಿಕಾ ವರ್ಷಗಳಿಂದ ಸಂಗ್ರಹಿಸಿಟ್ಟಿದ್ದ ಶಸ್ತ್ರಾಸ್ತ್ರಗಳ ಭಂಡಾರವೇ ಖಾಲಿಯಾಗುವ ಹಂತಕ್ಕೆ ತಲುಪಿತ್ತು.

ಇರಾನ್ ಕೆಂಗಣ್ಣಿಗೆ ಕಾರಣವಾದ ಇಸ್ರೇಲ್ ನಡೆ

ಇರಾನ್ ಹೊಂದಿದ್ದ ಪ್ರಬಲ ಕ್ಷಿಪಣಿ ತಂತ್ರಜ್ಞಾನ ಮತ್ತು ವಾಯು ರಕ್ಷಣಾ ವ್ಯವಸ್ಥೆಯನ್ನು ಇಸ್ರೇಲ್ ಈ ಹಿಂದೆ ಗುರಿಯಾಗಿಸಿ ನಾಶಪಡಿಸಿತ್ತು. ಇದು ಇರಾನ್, ಇಸ್ರೇಲ್ ಮೇಲೆ ಕೆಂಗಣ್ಣು ಬೀರುವಂತೆ ಮಾಡಿದೆ ಮತ್ತು ಪ್ರತೀಕಾರದ ಜ್ವಾಲೆಯನ್ನು ಹೆಚ್ಚಿಸಿದೆ. ಈ ಭೀಕರ ಸಂಘರ್ಷದ ಹಿನ್ನೆಲೆಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ದರಗಳು ಮತ್ತಷ್ಟು ಏರಿಕೆಯಾಗಲಿವೆ ಎಂಬ ಆತಂಕ ಸೃಷ್ಟಿಯಾಗಿರುವುದಂತೂ ಅಕ್ಷರಶಃ ಸತ್ಯ.

Exit mobile version