ರೇಣುಕಾಸ್ವಾಮಿ ಮರ್ಡರ್ ಕೇಸ್ನಲ್ಲಿ ಬೇಲ್ ಕ್ಯಾನ್ಸಲ್ ಆಗಿ, ನಟ ದರ್ಶನ್ ಮತ್ತೆ ಜೈಲು ಸೇರಿ ಬರೋಬ್ಬರಿ ಒಂದು ವರ್ಷ ಆಗ್ತಿದೆ. ಖುದ್ದು ಸುಪ್ರೀಂ ಕೋರ್ಟ್ ಒಂದು ವರ್ಷದೊಳಗೆ ಪ್ರಮುಖ ಸಾಕ್ಷಿಗಳ ವಿಚಾರಣೆಗೆ ಆದೇಶ ನೀಡಿದೆ. ಆದ್ರೀಗ ಸಮಸ್ತ ದರ್ಶನ್ ಅಭಿಮಾನಿಗಳಿಗೆ, ಕುಟುಂಬಸ್ಥರಿಗೆ ಹಾಗೂ ಚಿತ್ರರಂಗಕ್ಕೆ ಒಂದು ಖುಷಿಯ ವಿಚಾರ ಸಿಗೋ ಸಾಧ್ಯತೆಯಿದೆ.
ವಿನಯ್ ಕುಲಕರ್ಣಿಗೆ ಬೇಲ್.. ದರ್ಶನ್ ಕೇಸ್ ಮುನ್ನೆಲೆಗೆ
ದಚ್ಚು ಪರ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಿದ ಚರ್ಚೆ..!
2025ರ ಆಗಸ್ಟ್ 14ಕ್ಕೆ ಸುಪ್ರೀಂ ಕ್ಯಾನ್ಸಲ್ ಮಾಡಿತ್ತು ಬೇಲ್
ಸುಖದ ಸುಪ್ಪೊತ್ತಿಗೆಯಿಂದ ನಾಲ್ಕು ಗೋಡೆ ಪಂಜರದೊಳಗೆ
ಬರೋಬ್ಬರಿ 57 ಸಿನಿಮಾಗಳನ್ನ ಮಾಡಿ, ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ಆಗಿ ರಾರಾಜಿಸ್ತಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಓಟಕ್ಕೆ ಆ ವಿಧಿ ಬ್ರೇಕ್ ಹಾಕಿಬಿಡ್ತು. ರೇಣುಕಾಸ್ವಾಮಿ ರೂಪದಲ್ಲಿ ಬಂದೆರಗಿದ ಆ ಸಂಕಷ್ಟ, ಅಕ್ಷರಶಃ ದಚ್ಚುಗೆ ನರಕ ತೋರಿಸಿಬಿಟ್ಟಿದೆ. ಯೆಸ್.. ಅಭಿಮಾನಿಸೋ ಕುಟುಂಬ, ಆರಾಧಿಸೋ ಅಭಿಮಾನಿಗಳು, ಜೈಕಾರ ಹಾಕೋ ಜನ, ಸಿನಿಮಾ ಮಾಡ್ಕೊಡಿ ಸರ್ ಅಂತ ಕ್ಯೂ ನಿಲ್ತಿದ್ದ ನಿರ್ದೇಶಕ, ನಿರ್ಮಾಪಕರುಗಳು.. ಯಾರೂ ಇಲ್ಲದೆ ಒಬ್ಬಂಟಿಯಾಗಿ ಬಿಟ್ಟಿದ್ದಾರೆ ದರ್ಶನ್.
ನಟ ದರ್ಶನ್ ಬೇಲ್ ಕ್ಯಾನ್ಸಲ್ ಆಗಿ ಇದೇ ಆಗಸ್ಟ್ 14ಕ್ಕೆ ಒಂದು ವರ್ಷ ಆಗಲಿದೆ. ಅಂದಿನಿಂದ ಇಂದಿನ ತನಕ ಜೈಲು ಹಕ್ಕಿಯಾಗಿರೋ ದಾಸ, ನಾಲ್ಲು ಗೋಡೆಗಳ ಮಧ್ಯೆ ಪಂಜರದ ಪಕ್ಷಿಯಂತೆ ಹಾರಲಾಗದೆ, ಸ್ವತಂತ್ರವಿಲ್ಲದೆ, ಹಲ್ಲು ಕಿತ್ತ ಹಾವಿನಂತಾಗಿದ್ದಾರೆ. ಇದೊಂಥರಾ ಬಿಡಿಸಿಕೊಳ್ಳಲಾಗದ ಒಗಟಾಗಿದೆ. ಕೋಪದಲ್ಲಿ ತಿಳಿದೋ, ತಿಳಿಯದೆಯೋ ಮಾಡಿದ ತಪ್ಪು ಇಂದು ಈ ಪಾಟಿ ಪ್ರಪಾತಕ್ಕೆ ತಳ್ಳಿದೆ.
ಎಸಿ ಕಾರ್ಗಳಿಲ್ಲ, ಕ್ಯಾರವಾನ್ಗಳಿಲ್ಲ. ತಾನು ಇಷ್ಟ ಪಡೋ ಫಾರ್ಮ್ ಹೌಸ್ನ ಕುದುರೆ, ಹಸು, ಕುರಿ, ಮೇಕೆ, ಕೋಳಿಗಳಿಲ್ಲ. ಎತ್ತು, ಎಮ್ಮೆ, ಹಸುಗಳಿಲ್ಲ. ವಿದೇಶಿ ಪಕ್ಷಿಗಳಿಲ್ಲ. ಬಾಸ್ ಬಾಸ್ ಅಂತ ಎಲ್ಲಕ್ಕೂ ಸೈ ಅನ್ನೋ ಗಜಪಡೆ ಇಲ್ಲ. ಜೀವಕ್ಕಿಂತ ಹೆಚ್ಚಾಗಿ ಇಷ್ಟ ಪಟ್ಟಂತಹ ಪವಿತ್ರಾ ಗೌಡ ಇಲ್ಲ. ಸದ್ಯಕ್ಕೆ ಅವ್ರ ಜೊತೆಗಿರೋದು ಒಂದೇ.. ಅದು ಅವ್ರ ಕಣ್ಣೀರು. ಆಗಾಗ ಹೋಗಿ ಬರೋ ಧರ್ಮ ಪತ್ನಿ ವಿಜಯಲಜಕ್ಷ್ಮೀ, ಮಗ ವಿನೀಶ್ ಹಾಗೂ ಸಹೋದರ ಸಮಾನ ಧನ್ವೀರ್ ಗೌಡ ಅಷ್ಟೇ.
ಮೊದಲು ಮೆಡಿಕಲ್ ಬೇಲ್ ಮೇಲೆ ಹೊರಗೆ ಬಂದಿದ್ದ ನಟ ದರ್ಶನ್ಗೆ ನಂತರ ರೆಗ್ಯುಲರ್ ಬೇಲ್ ಸಿಕ್ಕಿತ್ತು. ಆದ್ರೆ 2025ರ ಆಗಸ್ಟ್ 14ರಂದು ಖುದ್ದು ಸುಪ್ರೀಂ ಕೋರ್ಟ್ ನಟ ದರ್ಶಶ್ ಬೇಲ್ ರದ್ದು ಮಾಡಿತ್ತು. ಅಂದೇ ದಾಸ ದಚ್ಚು ಸರೆಂಡರ್ ಆಗೋ ಮೂಲಕ, ಪರಪ್ಪನ ಅಗ್ರಹಾರ ಸೇರಿದ್ರು. ಸದ್ಯ ಒಂದು ವರ್ಷ ಕಳೆಯುತ್ತಿದೆ. ಇಂದಿಗೂ ದಾಸನಿಗೆ ಬೇಲ್ ಸಿಗಲೇ ಇಲ್ಲ. ಇನ್ನೂ ಒಂದು ವರ್ಷ ಸಿಗೋ ಸಾಧ್ಯತೆ ಕೂಡ ಇಲ್ಲ ಎನ್ನುವಂತಾಯ್ತು. ಹೌದು.. ಪದೇ ಪದೆ ಬೇಲ್ ಕೇಳಿಕೊಂಡು ಹೋಗ್ತಿದ್ದ ದರ್ಶನ್ಗೆ ಸದ್ಯ ಪ್ರಮುಖ ಸಾಕ್ಷಿಗಳು ಅಂತ ಪರಿಗಣಿಸಿರೋ 63 ಸಾಕ್ಷಿಗಳ ವಿಚಾರಣೆ ಒಂದು ವರ್ಷದೊಳಗೆ ಆಗಬೇಕು. ಒಂದು ವರ್ಷ ಕಳೆದ ಮೇಲೂ 63 ಸಾಕ್ಷಿಗಳ ವಿಚಾರಣೆ ಆಗದಿದ್ರೆ ಆಗ ದರ್ಶನ್ ಬೇಲ್ಗೆ ಅರ್ಹ ಎಂದಿತ್ತು.
ಸುಖದ ಸುಪ್ಪೊತ್ತಿಗೆಯಲ್ಲಿ ಜೀವನ ಸಾಗಿಸುತ್ತಿದ್ದ ನಟ ದರ್ಶನ್ಗೆ ಅವ್ರ ಅಭಿಮಾನಿ ಬಳಗವೇ ದೊಡ್ಡ ಶ್ರೀರಕ್ಷೆ ಆಗಿತ್ತು. ಆದ್ರೆ ಅದೇ ಅಭಿಮಾನಿಗಳಲ್ಲಿ ಕೆಲವರು ಮಾಡಿದ ಅತಿರೇಖದ ಕೆಲಸ, ಕಾರ್ಯಗಳು, ನಡೆಗಳು ಅವ್ರನ್ನ ಮತ್ತಷ್ಟು ಕಷ್ಟಕ್ಕೆ ದೂಡಿದ್ದು ಸುಳ್ಳಲ್ಲ. ಅದಕ್ಕೆ ರೇಣುಕಾಸ್ವಾಮಿ ಕಿಡ್ನ್ಯಾಪ್ ಆರೋಪಿಗಳಿಂದ ಹಿಡಿದು, ಸಾಕ್ಷಿನಾಶಕ್ಕೆ ಮುಂದಾದ ಪುನೀತ್ ತನಕ ಸಾಕಷ್ಟು ಮಂದಿ ಕಾರಣಕರ್ತರಾಗಿದ್ದಾರೆ.
ಇದೀಗ ನಟ ದರ್ಶನ್ ಪರ ಸೋಶಿಯಲ್ ಮೀಡಿಯಾದಲ್ಲಿ ಬಹುದೊಡ್ಡ ಅಲೆ ಎದ್ದಿದೆ. ವ್ಯಾಪಕ ಚರ್ಚೆಗಳು ಶುರುವಾಗಿವೆ. ಅದಕ್ಕೆ ಪ್ರಮುಖ ಕಾರಣ ಉದ್ಯಮಿ, ರಾಜಕಾರಣಿ ವಿನಯ್ ಕುಲಕರ್ಣಿ. ಹೌದು.. ಕೊಲೆ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ವಿನಯ್ ಕುಲಕರ್ಣಿಗೆ ಸುಮಾರು ವರ್ಷಗಳ ನಂತ್ರ ಇತ್ತೀಚೆಗೆ ಅಪರಾಧಿ ಅನ್ನೋ ಪ್ರೂವ್ ಆಗಿತ್ತು. ಮತ್ತೆ ಸರ್ವವನ್ನೂ ತೊರೆದು ಜೈಲಿಗೆ ತೆರಳಿದ್ರು ವಿನಯ್. ಆದ್ರೀಗ ಅಪರಾಧಿಯಾಗಿದ್ದ ವಿನಯ್ ಕುಲಕರ್ಣಿಗೆ ಜಾಮೀನು ಮಂಜೂರಾಗಿದೆ. ಸತ್ಯಮೇವ ಜಯತೇ ಅಂತ ಖುಷಿಯಿಂದ ಮತ್ತೆ ಮನೆ ಸೇರಿದ್ದಾರೆ ವಿನಯ್ ಕುಲಕರ್ಣಿ.
ಯಾವಾಗ ವಿನಯ್ ಕುಲಕರ್ಣಿಗೆ ಬೇಲ್ ಸಿಕ್ತೋ, ಆಗಲಿಂದಲೇ ನಟ ದರ್ಶನ್ಗೂ ಬೇಲ್ ಸಿಗಲಿದೆ ಅನ್ನೋ ದೊಡ್ಡ ಭರವಸೆ ಹುಟ್ಟಿಕೊಂಡಿದೆ. ಆ ತರಹದ ಲಕ್ಷಣಗಳು ಕೂಡ ಕಾಣ್ತಿವೆ. ಇನ್ಫ್ಯಾಕ್ಟ್ ಕಾನೂನು ತಜ್ಞರು ದರ್ಶನ್ ಹಾಗೂ ರೇಣುಕಾಸ್ವಾಮಿ ಮರ್ಡರ್ ಕೇಸ್ ಕುರಿತು, ದಚ್ಚುಗೆ ಬೇಲ್ ಸಿಗುವ ಸಾಧ್ಯತೆಗಳ ಬಗ್ಗೆ ನಮ್ಮ ಗ್ಯಾರಂಟಿ ನ್ಯೂಸ್ ಜೊತೆ ಎಕ್ಸ್ಕ್ಲೂಸಿವ್ ಆಗಿ ಮಾತನಾಡಿದ್ದಾರೆ.
ಡಿಬಾಸ್ಗೆ ಸಿಗುತ್ತಾ ಬೇಲ್? ಖತಂ ಆಗುತ್ತಾ ಸ್ವಾಮಿ ಕೇಸ್..?
ದಾಸನ ಮುಂದಿರೋ ಆಯ್ಕೆಗಳೇನು? ಏನೆಲ್ಲಾ ಆಗ್ತಿದೆ ಗೊತ್ತಾ?
ಆರ್ಟಿಕಲ್ 14 ಸುಪ್ರೀಂ ಕೋರ್ಟ್ ರೂಲ್ಸ್ ಏನು ಹೇಳುತ್ತೆ..?
ಕೋರ್ಟ್ ಅಂಗಳದಲ್ಲಿ ಈಗ ದೊಡ್ಡ ಚರ್ಚೆ ಶುರುವಾಗಿದೆ ವಿನಯ್ ಕುಲಕರ್ಣಿ ಮತ್ತು ನಟ ದರ್ಶನ್ ಇಬ್ಬರೂ ಸಮಾಜದಲ್ಲಿ ಸಖತ್ ಪಾಪ್ಯುಲರ್ ಫಿಗರ್ಸ್. ಅಷ್ಟೇ ಅಲ್ಲ, ಕಾನೂನಿನ ಚೌಕಟ್ಟಿನಲ್ಲಿ ಇಬ್ಬರೂ ಒಂದೇ ಸ್ಟೇಜ್ನಲ್ಲಿ ನಿಂತಿದ್ದಾರೆ. ಆದರೆ, ಕನ್ವಿಕ್ಷನ್ ಆಗಿರೋ ವ್ಯಕ್ತಿಗೇ ಬೇಲ್ ಸಿಕ್ಕಿರುವಾಗ, ಇನ್ನು ವಿಚಾರಣೆ ಹಂತದಲ್ಲೇ ಇರೋ ದರ್ಶನ್ ಕೇಸ್ನಲ್ಲಿ ಮುಂದೇನಾಗಲಿದೆ? ಈ ಬಗ್ಗೆ ಲಾಯರ್ ಪ್ರಸನ್ನ ಏನು ಹೇಳಿದ್ದಾರೆ ನೋಡಿ.
ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದು ಸಂವಿಧಾನದ ಆರ್ಟಿಕಲ್ 14 ಸಾರುತ್ತದೆ. ಸಾಮಾನ್ಯವಾಗಿ ೧೦ ವರ್ಷಗಳಿಂದ ಜೈಲಿನಲ್ಲಿ ಇರುವವರಿಗೆ ಸುಪ್ರೀಂ ಕೋರ್ಟ್ ಬೇಲ್ ಮಂಜೂರು ಮಾಡುವ ಉದಾಹರಣೆಗಳಿವೆ. ಆದರೆ, ವಿನಯ್ ಕುಲಕರ್ಣಿ ಮತ್ತು ದರ್ಶನ್ ಇಬ್ಬರ ಕೇಸ್ಗಳು ಕೂಡ ಇನ್ನೂ ಪೆಂಡಿಂಗ್ ಹಂತದಲ್ಲೇ ಇವೆ. ಹಾಗಿದ್ದರೂ ಈ ಬೇಲ್ ಸಿಕ್ಕಿದ್ದೇಗೆ? ಈ ಆರ್ಟಿಕಲ್ ೧೪ರ ಲೆಕ್ಕಾಚಾರದ ಬಗ್ಗೆ ಪ್ರಸನ್ನ ಏನು ಹೇಳಿದ್ದಾರೆ ನೋಡಿ
ದರ್ಶನ್ ಕೇಸ್ನಲ್ಲಿ ಸುಪ್ರೀಂ ಕೋರ್ಟ್ ರೂಲ್ಸ್ ಚರ್ಚೆ
ಡಿಬಾಸ್ ಮುಕ್ತಿಗೆ ಲಾಯರ್ ಗಣಪತಿ ಪ್ರಸನ್ನ ಹೊಸ ಲೆಕ್ಕ
ವಿನಯ್ ಕುಲಕರ್ಣಿ ವಿಚಾರದಲ್ಲಿ ಇದು ಎಂಪಿ-ಎಂಎಲ್ಎ ಸ್ಪೆಷಲ್ ಕ್ರೈಂ ಕೇಸ್ ಆಗಿದ್ದರೂ ಬೇಲ್ ಸಿಕ್ಕಿದೆ. ದರ್ಶನ್ ಕೇಸ್ ಕೂಡ ಇನ್ನು ವಿಚಾರಣೆ ಅಂದರೆ ಟ್ರಯಲ್ ಹಂತದಲ್ಲೇ ಉಳಿದುಕೊಂಡಿದೆ. ಇಂತಹ ಗಂಭೀರ ಪ್ರಕರಣಗಳ ನಡುವೆಯೂ ಬಂದಿರುವ ಈ ತೀರ್ಪು, ದರ್ಶನ್ ಲಾಯರ್ಸ್ ಟೀಮ್ಗೆ ಬಿಗ್ ಅಸ್ತ್ರವಾಗಿ ಸಿಕ್ಕಂತಾಗಿದೆ.
ಆರೋಗ್ಯ ಸಮಸ್ಯೆಯ ನೆಪದಲ್ಲಿ ಮೆಡಿಕಲ್ ಗ್ರೌಂಡ್ ಆಧಾರದ ಮೇಲೆ ದರ್ಶನ್ ಅವರಿಗೆ ಬೇಲ್ ಸಿಗುವ ಎಲ್ಲಾ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಮೆಡಿಕಲ್ ಆಸ್ಪೆಕ್ಟ್ ಇರುವುದರಿಂದ ‘ದರ್ಶನ್ ಇಸ್ ಎಂಟೈಟಲ್ಡ್ ಫಾರ್ ಬೇಲ್’ ಎಂದು ಕಾನೂನು ತಜ್ಞರು ಅಭಿಪ್ರಾಯಪಡುತ್ತಿದ್ದಾರೆ. ಈ ಮೆಡಿಕಲ್ ಗ್ರೌಂಡ್ಸ್ ಬಗ್ಗೆ ಪ್ರಸನ್ನ ಏನು ಹೇಳಿದ್ದಾರೆ ನೋಡಿ
ದರ್ಶನ್ ಜಾಮೀನು ಹೋರಾಟಕ್ಕೆ ಹೊಸ ಆಶಾಕಿರಣ
ಡಿಬಾಸ್ ಫ್ಯಾನ್ಸ್ ಕಣ್ಣು ಈಗ ನ್ಯಾಯಾಲಯದತ್ತ..!
ಕಾನೂನು ಅಂಗಳದಲ್ಲಿ ಜುಡಿಷಿಯಲ್ ಪ್ರಿನ್ಸಿಪಲ್ ಅಂದರೆ ನ್ಯಾಯಾಂಗದ ಪೂರ್ವನಿದರ್ಶನ ಎನ್ನುವ ಹೊಸ ತತ್ವ ಸಖತ್ ಸೌಂಡ್ ಮಾಡುತ್ತಿದೆ. ವಿನಯ್ ಕುಲಕರ್ಣಿಗೆ ಸಿಕ್ಕ ಬೇಲ್ ಆದೇಶವನ್ನೇ ‘ಜುಡಿಷಿಯಲ್ ಪ್ರಿನ್ಸಿಪಲ್’ ಆಗಿ ಬಳಸಿಕೊಂಡು ದರ್ಶನ್ ಅವರಿಗೆ ಜಾಮೀನು ಕೊಡಿಸಲು ಸಾಧ್ಯವೇ? ಈ ಹೊಸ ಲೀಗಲ್ ಅಸ್ತ್ರದ ಬಗ್ಗೆ ಪ್ರಸನ್ನ ಏನು ಹೇಳಿದ್ದಾರೆ..?
ಒಟ್ಟಿನಲ್ಲಿ, ವಿನಯ್ ಕುಲಕರ್ಣಿಗೆ ಸಿಕ್ಕ ಬೇಲ್ ಇದೀಗ ಜೈಲಿನಲ್ಲಿರುವ ದರ್ಶನ್ ಲಾಯರ್ಸ್ ಟೀಮ್ಗೆ ಹೊಸ ಅಸ್ತ್ರವಾಗಿ ಸಿಕ್ಕಂತಾಗಿದೆ. ಲಾಯರ್ ಗಣಪತಿ ಪ್ರಸನ್ನ ಹೇಳಿದ ಮೆಡಿಕಲ್ ಗ್ರೌಂಡ್ಸ್ ಹಾಗೂ ಜುಡಿಷಿಯಲ್ ಪ್ರಿನ್ಸಿಪಲ್ ಆಧಾರದ ಮೇಲೆ ದಾಸನಿಗೆ ಮುಕ್ತಿ ಸಿಗುತ್ತಾ, ಡಿಬಾಸ್ ಜೈಲಿನಿಂದ ಹೊರಬರ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.
