ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
ರಂಗಭೂಮಿಯಿಂದ ಬೆಳೆದ ಪ್ರತಿಭೆ, ಸಣ್ಣ ಪಾತ್ರಗಳಿಂದ ಹೀರೋವರೆಗೆ ಏರಿದ ಹೆಸರು ನೀನಾಸಂ ಸತೀಶ್.ಈಗ ‘ದಿ ರೈಸ್ ಆಫ್ ಅಶೋಕ’ ಮೂಲಕ ನ್ಯೂ ಎಕ್ಸ್ಪೀರಿಮೆಂಟ್ಗೆ ಕೈ ಹಾಕಿದ್ದಾರೆ. ಸತೀಶ್ ಹೊಸ ಹೆಜ್ಜೆ.. ಕನಸಿಗೆ ಚಂದನವನ ಒಗ್ಗಟ್ಟಿನ ಮಂತ್ರ ಹೇಳಿದ್ದಾರೆ.
ಸ್ಯಾಂಡಲ್ವುಡ್ನಲ್ಲಿ ರಂಗಭೂಮಿಯಿಂದ ಬೆಳೆದ ಪ್ರತಿಭೆ ಎಂದರೆ ಅದು ನೀನಾಸಂ ಸತೀಶ್. ಮಾದೇಶ ಚಿತ್ರದ ಚಿಕ್ಕ ಪಾತ್ರದಿಂದ ಆರಂಭವಾದ ಅವರ ಸಿನಿ ಪಯಣ, ಮನಸಾರೆ, ಪಂಚರಂಗಿ, ಪರಮಾತ್ಮ, ಲೈಫು ಇಷ್ಟೆನೆ, ಲೂಸಿಯಾ, ಲವ್ ಇನ್ ಮಂಡ್ಯ, ಅಯೋಗ್ಯ ಸೇರಿದಂತೆ ಹಲವು ಚಿತ್ರಗಳ ಮೂಲಕ ಗಟ್ಟಿಯಾದ ಹೆಜ್ಜೆ ಇಟ್ಟಿತು. ಕಾಮಿಡಿ, ಲವ್ ಸ್ಟೋರಿ, ಎಮೋಶನಲ್ ಡ್ರಾಮಾ ಎಲ್ಲ ಜಾನರ್ಗಳಲ್ಲಿ ತಮ್ಮದೇ ಆದ ಸ್ಟೈಲ್ನಲ್ಲಿ ಮಿಂಚಿದ ಸತೀಶ್ ಇಂದು ಹೀರೋ ಆಗಿ ಮಾತ್ರವಲ್ಲ, ನಿರ್ಮಾಪಕರಾಗಿಯೂ ಜವಾಬ್ದಾರಿಯುತ ಹೆಜ್ಜೆ ಇಟ್ಟಿರುವ ವರ್ಸಟೈಲ್ ಆಕ್ಟರ್.
ಜಾತಿ ತಾರತಮ್ಯದ ವಿರುದ್ಧ ಅಶೋಕನ ಘರ್ಜನೆ ..ಟ್ರೈಲರ್ ಬೆಂಕಿ
ಫೆಬ್ರವರಿ 27ಕ್ಕೆ ಅಶೋಕನ ಉದಯ ಥಿಯೇಟರ್ನಲ್ಲಿ ಮಾಸ್ ಮ್ಯಾಜಿಕ್ ?
ಇದೀಗ ಸತೀಶ್ ‘ದಿ ರೈಸ್ ಆಫ್ ಅಶೋಕ’ ಚಿತ್ರದ ಮೂಲಕ ಮತ್ತೊಂದು ಪವರ್ಫುಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೇಲರ್ ಲಾಂಚ್ ಕಾರ್ಯಕ್ರಮ ಭರ್ಜರಿಯಾಗಿ ನಡೆದಿದ್ದು, ಚಿತ್ರಕ್ಕಿರುವ ನಿರೀಕ್ಷೆಯನ್ನು ಇನ್ನಷ್ಟು ಎತ್ತಿಹಿಡಿದಿದೆ. ಚಿತ್ರರಂಗದಲ್ಲಿ ಹಲವು ವರ್ಷಗಳ ಕಾಲ ಕಷ್ಟಪಟ್ಟು ಬೆಳೆದ ಸತೀಶ್ ಅವರಿಗಿರುವ ಸ್ನೇಹಜಾಲವೇ ಅವರ ದೊಡ್ಡ ಸಂಪತ್ತು. ‘ದಿ ರೈಸ್ ಆಫ್ ಅಶೋಕ’ ಟ್ರೇಲರ್ ಲಾಂಚ್ ಗೆ ಸಾಕ್ಷಿಯಾಗಿದ್ದು ಕ್ರೇಜಿಸ್ಟಾರ್ ರವಿಚಂದ್ರನ್, ದುನಿಯಾ ವಿಜಯ್, ವಸಿಷ್ಠ ಸಿಂಹ, ಲೂಸ್ ಮಾದ ಯೋಗಿ, ದಿಗಂತ್, ನಾಗಭೂಷಣ್, ಶಿವರಾಜ್ ಕೆ ಆರ್ ಪೇಟೆ ಮೊದಲಾದ ಕಲಾವಿದರು ವೇದಿಕೆಯಲ್ಲಿ ಹಾಜರಾಗಿ ಸತೀಶ್ಗೆ ಸಾಥ್ ನೀಡಿದರು. ಟ್ರೈಲರ್ ಲಾಂಚ್ ಮಾಡುವ ವೇಳೆ ಸತೀಶ್ ಪುತ್ರಿ ಮನಸ್ವಿ ಭಾವುಕರಾಗಿ ಕಣ್ಣೀರು ಹಾಕಿದ್ರು. ವೇದಿಕೆಯಲ್ಲಿ ಮಾತನಾಡಿದ ಗಣ್ಯರು ಇದು ರೈಸ್ ಆಫ್ ಅಶೋಕ ಅಲ್ಲ, ರೈಸ್ ಆಫ್ ಸತೀಶ ಆಗಲಿ ಎಂದು ಶುಭನುಡಿದರು
ಇದೆ ವೇಳೆ ಮಾತನಾಡಿದ ರವಿಚಂದ್ರನ್ ಒಳ್ಳೆಯ ಸಿನಿಮಾಗಳು ಬರುತ್ತಿದ್ದರೂ ಪ್ರೇಕ್ಷಕರು ಥಿಯೇಟರ್ಗೆ ಬರದೇ, ಮೊಬೈಲ್ನಲ್ಲಿ ಸಮಯ ಕಳೆಯುತ್ತಿದ್ದಾರೆ ಎಂಬ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಸದ್ಯ ಈ ಎಮೋಷನಲ್ ಮೊಮೆಂಟ್ ನ ಎಂಟರ್ಟೈನ್ ಮಾಡಿದ್ದು ದುನಿಯಾ ವಿಜಯ್ ದಿ ರೈಸ್ ಆಫ್ ಅಶೋಕ ಚಿತ್ರದ ಟ್ರೈಲರ್ ನಲ್ಲಿ ಬರುವ ಒಂದು ಡೈಲಾಗ್ ನ ವಿಜಯ್ ಮಾಸ್ ಆಗಿ ಹೇಳಿ ಎಲ್ಲರನ್ನು ಖುಷಿ ಪಡಿಸಿದ್ರು.
‘ದಿ ರೈಸ್ ಆಫ್ ಅಶೋಕ’ಗೆ ಸ್ಯಾಂಡಲ್ವುಡ್ ತಾರೆಯರ ಸಾಥ್
ಇದು ರೈಸ್ ಆಫ್ ಅಶೋಕ ಅಲ್ಲ, ರೈಸ್ ಆಫ್ ಸತೀಶ ಆಗಲಿ
ಟ್ರೇಲರ್ ವಿಚಾರಕ್ಕೆ ಬಂದರೆ ‘ದಿ ರೈಸ್ ಆಫ್ ಅಶೋಕ’ ಪಕ್ಕಾ ಮಾಸ್ ಕಂಟೆಂಟ್ ಹೊಂದಿದ ಪ್ಯಾಕೇಜ್. ಜಾತಿ ತಾರತಮ್ಯದ ವಿರುದ್ಧ ಸಿಡಿದೇಳುವ ಅಶೋಕನಾಗಿ ಸತೀಶ್ ಭರ್ಜರಿ ಆ್ಯಕ್ಷನ್ ಮೂಡಿಸಿದ್ದಾರೆ. ಬಡ ಕುಟುಂಬದಿಂದ ಬಂದ ಹುಡುಗ, ನಗರದಲ್ಲಿ ಓದಿ, ಮತ್ತೆ ಊರಿಗೆ ಬಂದು ವ್ಯವಸ್ಥೆಯ ವಿರುದ್ಧ ಹೋರಾಡುವ ಕಥಾಹಂದರ ಇದು. ಟ್ರೇಲರ್ನಲ್ಲಿ ಹೈ-ವೋಲ್ಟೇಜ್ ಆ್ಯಕ್ಷನ್, ಎಮೋಶನ್ ಮತ್ತು ಡೈಲಾಗ್ ಪವರ್ನೊಂದಿಗೆ ಮೂಡಿಬಂದಿದೆ. ಟ್ರೇಲರ್ ಕಟ್ ಮತ್ತು ಬ್ಯಾಕ್ಗ್ರೌಂಡ್ ಸ್ಕೋರ್ ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿವೆ. ಪಾಳೇಗಾರನ ದಬ್ಬಾಳಿಕೆಗೆ ಎದುರಾಗಿ ನಿಂತಿರುವ ಅಶೋಕನ ಡೈಲಾಗ್ಗಳು, ಫೈಟ್ ಸೀಕ್ವೆನ್ಸ್ಗಳು, ಇಮೋಷನಲ್ ಬೀಟ್ಗಳು ಎಲ್ಲವೂ ಸಿನೆಮಾ ಥಿಯೇಟರ್ನಲ್ಲಿ ಸೀಟಿ ಹೊಡೆಯಿಸುವಂತಿವೆ.
ಹಾಡುಗಳೂ ಚಿತ್ರದ ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ. ಸಿದ್ದಯ್ಯ ಸ್ವಾಮಿ, ಕಲ್ಯಾಣವೇ ಗೌರಿ, ಏಳೋ ಏಳೋ ಮಾದೇವ ಹಾಡುಗಳು ಈಗಾಗಲೇ ರಿಲೀಸ್ ಆಗಿ ಮೆಚ್ಚುಗೆ ಗಳಿಸಿವೆ. ಅದ್ರಲ್ಲೂ ಸಪ್ತಮಿ ಲುಕ್, ಗ್ರಾಮೀಣ ಸೊಗಡು, ಜಾತ್ರೆ ಮೇಳದ ಕಲರ್ಫುಲ್ ವಿಸುಯಲ್ಸ್ ಮತ್ತು ಫೋಕ್ ಬೀಟ್ಗಳು ಚಿತ್ರಕ್ಕೆ ಮಣ್ಣಿನ ಟಚ್ ಕೊಟ್ಟಿದೆ. ಇನ್ನು ಸಂಪತ್, ರವಿಶಂಕರ್, ಮೊದಲಾದ ಕಲಾವಿದರು ಪಾತ್ರಗಳಿಗೆ ಜೀವ ತುಂಬಿದ್ದಾರೆ. ನಿರ್ದೇಶಕ ವಿನೋದ್ ವಿ ಧೊಂಡಾಲೆ ಅವರ ಕನಸು ಈ ಸಿನಿಮಾ. ಅವರ ನಿಧನದ ನಂತರ ಚಿತ್ರವನ್ನು ಮುಂದಕ್ಕೆ ತೆಗೆದುಕೊಂಡು ಹೋಗಿ, ನಿರ್ಮಾಪಕರಾಗಿ ಜವಾಬ್ದಾರಿ ಹೊತ್ತ ಸತೀಶ್ ಅವರ ಸಮರ್ಪಣೆ ಇಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ.
ಒಟ್ಟಾರೆ, ಫೆಬ್ರವರಿ 27ರಂದು ಕನ್ನಡ.. ತೆಲುಗು.. ತಮಿಳು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ದಿ ರೈಸ್ ಆಫ್ ಅಶೋಕ ಚಿತ್ರ ಸಾಮಾಜಿಕ ಸಂದೇಶ ಹೊತ್ತು ಬರ್ತಿದೆ. ಕಲಾವಿದರ ಬೆಂಬಲ, ಪ್ರೇಕ್ಷಕರ ನಿರೀಕ್ಷೆ, ಸತೀಶ್ ಅವರ ಪರಿಶ್ರಮ ಎಲ್ಲವೂ ಸೇರಿ ಇದು ನಿಜವಾಗಿಯೂ ‘ರೈಸ್ ಆಫ್ ಸತೀಶ್’ ಆಗುತ್ತಾ ಅನ್ನೋ ಕುತೂಹಲ ಹೆಚ್ಚಿಸಿದೆ.
